ಅಂಕಣಗಳು

ನೂಪುರ ಪತ್ರಿಕೆ

ಐದನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ  ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ ೨೦೧೧)

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಕಲಾ ಜಗತ್ತಿನ ಸಾರ್ವಭೌಮರನ್ನು, ಅಸಾಧಾರಣ ಕೊಡುಗೆಗಳನ್ನಿತ್ತ, ಅವಿಸ್ಮರಣಿಯರೆನಿಸಿದ ಮಹಾನ್ ವ್ಯಕ್ತಿತ್ವಗಳನ್ನು, ನೆನಪು ಮಾಡಿಕೊಳ್ಳುವ ಅಂಕಣ. ಆ ಮೂಲಕ ನಮ್ಮ ಹಿಂದಿನ ಹೆಜ್ಜೆಗಳನ್ನು ಮತ್ತೊಮ್ಮೆ, ಮಗದೊಮ್ಮೆ ಹಿಂತಿರುಗಿ ನೋಡಿ ಅವಲೋಕಿಸುವ, ನಮ್ಮನ್ನು ನಾವು ನೋಡಿಕೊಳ್ಳುವ, ಅರಿಯುವ ಪ್ರಯತ್ನ. ಹಾಗಾಗಿಯೇ ಇದು ದರ್ಪಣ.

ಕಲಾ ಜಗತ್ತಿನ ಕಥೆಗಳಿದ್ದರೆ ನಮಗೆ ಬರೆದು ಕಳಿಸಿ. ನೀವು ಕಂಡುಕೊಂಡ ಆಯಾಮಗಳನ್ನು ಕುಳಿತು ಮೆಲುಕು ಹಾಕೋಣ. ನಿಮ್ಮ ಸಾಲುಗಳು ನೂಪುರದ ನೆನಪಿಗೆ ತೋರಣವಾಗಲಿ.

ನೃತ್ಯರಂಗದ ಅನಭಿಷಿಕ್ತ ರಾಣಿ : ರುಕ್ಮಿಣಿ ( ಹೆಜ್ಜೆ : 13 )

Monday, August 15th, 2011
ನೃತ್ಯರಂಗದ ಅನಭಿಷಿಕ್ತ ರಾಣಿ : ರುಕ್ಮಿಣಿ  ( ಹೆಜ್ಜೆ : 13 )

೧೭೧೮ರಲ್ಲಿ ತಿರುನಲ್ವೇಲಿಯ ಕುಟ್ರಾಲಂ ಗ್ರಾಮದ ತಿರಿಕ್ಕುಡ ರಾಸಪ್ಪ ಕವಿರಾಯರ್ ತಿರುಕೂಡನಾಥ ದೇವರ ಬಗ್ಗೆ ಬರೆದ ದೇವದಾಸಿಯರಷ್ಟೇ ಮಾಡುತ್ತಿದ್ದ ಏಕವ್ಯಕ್ತಿ ಅಭಿನಯದ ಕುಟ್ರಾಲ ಕೊರವಂಜಿಗೆ ಹೊಸ ಸ್ಪರ್ಶವನ್ನಿತ್ತದ್ದು ಅವರು ತೋರಿದ ಕೈಮರ. ತಮಿಳ್ನಾಡಿನ ೧೮ನೇ ಶತಮಾನದ ಸಂಗೀತ ಪದ್ಧತಿ ಇದಾಗಿದ್ದರೂ ಮೊದಲೆಲ್ಲಾ ಕುಟ್ರಾಲಂನ ದೇವಸ್ಥಾನಗಳಲ್ಲಿ, ಬೃಹದೀಶ್ವರ ದೇವಾಲಯದ ನವರಾತ್ರಿ ಉತ್ಸವದಲ್ಲಿ ಕೊರವಂಜಿಯನ್ನು ಪ್ರದರ್ಶಿಸಲಾಗುತ್ತಿದ್ದರೂ, ದೇವದಾಸಿ ಕಾಯ್ದೆ ಬಂದ ನಂತರ ಕುಂಠಿತವಾಯಿತು. ಪುನಃ ಕೊರವಂಜಿಯನ್ನು ಪುರುಜ್ಜೀವನಗೊಳಿಸಿದ್ದು ರುಕ್ಮಿಣೀ ೧೯೪೪ರಲ್ಲಿ. ‘ಕೊರವಂಜಿಯನ್ನು ಅಷ್ಟಾಗಿ ಯಾರು ಗಮನಿಸದಿದ್ದ ಕಾಲಕ್ಕೆ ; ಗೌರವದಿಂದ ನೋಡುವಂತೆ [...]

ನೃತ್ಯರಂಗದ ಅನಭಿಷಿಕ್ತ ರಾಣಿ : ರುಕ್ಮಿಣಿ ( ಹೆಜ್ಜೆ : ೧೩ )

Wednesday, June 15th, 2011

ಕ್ಷೇತ್ರವೆಂದರೆ ದೈವಿಕವಾದ ಜಾಗ. ಮಾನವ ಸಹಜ ಭಾವಗಳಿಂದ ದೈವೀಕ ಅನುಭೂತಿಯ ಹತ್ತಿರ ಕೊಂಡೊಯ್ಯುವ ಸ್ಥಳ. ಯಾತ್ರೆಗೆ ಭಕ್ತರು ಆಯ್ದುಕೊಳ್ಳುವುದೇ ವಿವಿಧ ಧಾರ್ಮಿಕ ಕ್ಷೇತ್ರಗಳನ್ನು. ಅಂತೆಯೇ ನೃತ್ಯಕ್ಕೊಂದು ಕ್ಷೇತ್ರ ನಿರ್ಮಾಣ ಮಾಡುವ ಗುರಿ ರುಕ್ಮಿಣಿಯವರದ್ದಾಗಿತ್ತು. ‘ರಸೋ ವೈ ಸಃ’- ರಸಾಸ್ವಾದನವೆಂಬ ಅಮೂರ್ತ ಅನುಭವಕ್ಕೆ ಕೊಂಡೊಯ್ಯುವ ಕಲೆಗಳ ದೇವಸ್ಥಾನವೇ ಕಲಾಕ್ಷೇತ್ರವಾಗಿರಬೇಕು ಎಂಬುದು ಅವರ ಇಚ್ಛೆ.
ಆರ್ಥಿಕ ಅನನುಕೂಲತೆಗಳಿದ್ದವು. ಆ ಕಾಲಕ್ಕೆ ಅವರ ಜೊತೆ ಕೆಲಸ ಮಾಡುತ್ತಿದ್ದವರಿಗೆ ೭೫೦ ರೂ ಸಂಬಳ. ಸಂಭಾವನೆ ಕಡಿಮೆಯೆನಿಸಿದರೂ ಅವರೊಂದಿಗೆ ಕೆಲಸ ಮಾಡುವ ಮುದದ ಮುಂದೆ ಹಣವೊಂದು [...]

ನೃತ್ಯರಂಗದ ಅನಭಿಷಿಕ್ತ ರಾಣಿ : ರುಕ್ಮಿಣಿ ( ಭಾಗ ೧೫)

Thursday, April 14th, 2011

ಬಾಲಾ ಸರಸ್ವತಿ ಮತ್ತು ರುಕ್ಮಿಣಿ ಅವರ ನಡುವಿನಲ್ಲಿ ಸಾಕಷ್ಟು ಬೌದ್ಧಿಕ ಸಂಘರ್ಷಗಳಿತ್ತು ಎಂಬುದು ಜನಜನಿತ ಅನಿಸಿಕೆ. ಆದರೆ ರುಕ್ಮಿಣೀ ಎಂದಿಗೂ ಬಾಲಸರಸ್ವತಿ ಅವರನ್ನು ತೆಗಳುವ ಗೋಜಿಗೆ ಹೋಗಲೇ ಇಲ್ಲ. ಬದಲಾಗಿ ಅವರ ಮಾರ್ಗವನ್ನು ಪ್ರಶಂಸಿಸುತ್ತಲೇ ತಮಗೆ ಆ ಶೈಲಿ ಒಗ್ಗುವುದಿಲ್ಲ ಎಂದು ಒಪ್ಪಿಕೊಂಡಿದ್ದರು.
ರಂಗದ ಮೇಲೆ ಮತ್ತು ಜೀವನದಲ್ಲಿ ಪುರುಷ ಮತ್ತು ಸ್ತ್ರೀಯರು ಧರಿಸುವ ಬಟ್ಟೆಗಳಿಂದಲೇ ಅವರ ಕಲಾದೃಷ್ಟಿ, ಅಭಿರುಚಿಯನ್ನು ಅಳೆಯಬಹುದು ಎನ್ನುತ್ತಿದ್ದ ರುಕ್ಮಿಣಿಯವರ ಸರಳ ನಡೆನುಡಿಯ ದ್ಯೋತಕವಾಗಿ ಕಲಾಕ್ಷೇತ್ರ ಸೀರೆಗಳು ಅಭಿರುಚಿಯನ್ನು ವೃದ್ಧಿಸಿತು. ರೇಶ್ಮೆ ಮತ್ತು ಹತ್ತಿಯ [...]

ನೃತ್ಯರಂಗದ ಅನಭಿಷಿಕ್ತ ರಾಣಿ : ರುಕ್ಮಿಣಿ (ಭಾಗ : ೧೪)

Monday, February 14th, 2011
ನೃತ್ಯರಂಗದ ಅನಭಿಷಿಕ್ತ ರಾಣಿ : ರುಕ್ಮಿಣಿ (ಭಾಗ : ೧೪)

ಕೆಲವರು ಕಾರಣಪುರುಷರು. ಅದಕ್ಕಾಗಿಯೇ ಎಂಬಂತೆ ಹುಟ್ಟಿ ಬಂದವರು. ಆಗಿನ ಕಾಲಕ್ಕೆ ರುಕ್ಮಿಣಿಯಂತೆ ಖಾಲಿಜಾಗವನ್ನು ತುಂಬಿ ನಿಂತವರು ಯಾರೂ ಇಲ್ಲ. ಹೇಗೆ ಅವರು ಇತಿಹಾಸವೋ, ಅಂತೆಯೇ ಇತಿಹಾಸವನ್ನೂ ಬರೆದವರು. ಬದುಕಿನುದ್ದಕ್ಕೂ ಶಿಕ್ಷಣವಾಗಿ ನೃತ್ಯವನ್ನು ಹೊಸೆದೆವರು, ಹೆಣೆದವರು. ಆವರೆಗೆ ಇದ್ದ ಹಿತ್ತಾಳೆಯ ಗೋಪುರ ಅವಳಿಗೆ ಬೇಡವಾಗಿತ್ತು. ಈಗ ಕಲೆಯ ಬಗೆ ಸಾಮಾಜಿಕ ಜಾಗೃತಿ ಹಬ್ಬಿಸುವುದು ಅವಶ್ಯವಿತ್ತು.
‘ಜಗತ್ತಿನ ಪ್ರತಿಯೊಂದು ಕಣಕ್ಕೂ ಅದರದ್ದೇ ಆದ ಲಯವಿರುತ್ತದೆ. ಪ್ರತಿಯೊಂದರ ಬೆಳವಣಿಗೆ ಮತ್ತು ಪತನವೂ ಆ ಅನೂಹ್ಯವಾದ ಲಯಶಕ್ತಿಯನ್ನು ಆಧರಿಸಿರುತ್ತದೆ’ ಎಂದು ನಂಬಿದ್ದರು ರುಕ್ಮಿಣಿ. ಆದರೆ [...]

ನೃತ್ಯ ರಂಗದ ಅನಭಿಷಿಕ್ತ ರಾಣಿ : ರುಕ್ಮಿಣೀ( ಭಾಗ ೧೩)

Wednesday, December 15th, 2010
ನೃತ್ಯ ರಂಗದ ಅನಭಿಷಿಕ್ತ ರಾಣಿ : ರುಕ್ಮಿಣೀ( ಭಾಗ ೧೩)

ನೃತ್ಯ ರಂಗದ ಅನಭಿಷಿಕ್ತ ರಾಣಿ : ರುಕ್ಮಿಣೀ
ಕಾಳಿದಾಸನ ಕುಮಾರಸಂಭವಂ ರೂಪಕವಾಗಿ ಮೊದಲು ಪ್ರದರ್ಶನ ಕಂಡದ್ದು ೧೯೪೭ರ ಸೆಪ್ಟೆಂಬರ್ ೩೦ರಂದು ಜರುಗಿದ ಬೆಸೆಂಟ್ ಶತಮಾನೋತ್ಸವ ಆಚರಣೆಯಲ್ಲಿ. ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾಗಿ ನೇತೃತ್ವ ವಹಿಸಿದ್ದವರು ಸ್ವತಃ ರುಕ್ಮಿಣಿ. ಅಂದಿನ ಸಂಭ್ರಮಕ್ಕೆ ಮಹಾತ್ಮಾ ಗಾಂಧಿ ಮೊದಲಾದವರಿಂದ ಹೃತ್ಪೂರ್ವಕ ಸಂದೇಶ ರುಕ್ಮಿಣೀ ಪಾಲಿಗಿತ್ತು.
ಕಾಳಿದಾಸನ ಸಮೃದ್ಧ ಸಾಹಿತ್ಯದಲ್ಲಿ ಯಾವುದನ್ನು ಆರಿಸಬೇಕು, ಯಾವುದು ಬಿಡಬೇಕು ಎಂಬುದು ಎಲ್ಲರಿಗೂ ಗೋಜಲು. ಆಗ ರುಕ್ಮಿಣಿ ಅವರಿಗೆ ಆಪ್ತರಾಗಿದ್ದ ಶಂಕರ್ ಮೆನನ್ ಪ್ರವಾಸಕ್ಕೆಂದು ವಿದೇಶಕ್ಕೆ ಹೋದವರು ಅಸ್ವಸ್ಥರಾಗಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಚಿಕಿತ್ಸೆ [...]

ನೃತ್ಯ ರಂಗದ ಅನಭಿಷಿಕ್ತ ರಾಣಿ : ರುಕ್ಮಿಣೀ( ಭಾಗ : 12)

Friday, October 15th, 2010
ನೃತ್ಯ ರಂಗದ ಅನಭಿಷಿಕ್ತ ರಾಣಿ : ರುಕ್ಮಿಣೀ( ಭಾಗ : 12)

ಸಾದಿರ್ ನೃತ್ಯಗಾತಿಯರು, ನಟ್ಟುವನ್ನಾರ್ ಮತ್ತು ಹಿನ್ನಲೆ ವಾದ್ಯಗಾರರು. ನರ್ತಕಿಯರ ಹಿಂದೆ ನಿಂತು ನಟುವಾಂಗ ಮಾಡುವ ಕ್ರಮ
ಕುಟ್ರಾಲ ಕೊರವಂಜಿಯ ಅದ್ಭುತ ಯಶಸ್ಸಿನ ನಂತರದ ಅವರ ನೋಟ ಕಾಳಿದಾಸನ ಕುಮಾರಸಂಭವಂ. ಅದರಲ್ಲಿ ಸ್ವತಃ ರುಕ್ಮಿಣೀಯವರದ್ದೇ ನಾಯಕಿ ಪಾತ್ರ ! ಕಾಳಿದಾಸನ ಕಾವ್ಯಕ್ಕೆ ಸಂಗೀತದ ಸ್ಪರ್ಶವನ್ನಿತ್ತವರು ಟೈಗರ್ ವರದಾಚಾರ್ಯರು. ಆಗ ಅವರು ಕಲಾಕ್ಷೇತ್ರದ ಪ್ರಾಚಾರ್ಯರಾಗಿದ್ದರು. ೧೯೪೭ರಲ್ಲಿ ಸಂಯೋಜಿಸಲ್ಪಟ್ಟ ಈ ರೂಪಕದಲ್ಲಿ ಅಭಿನಯಿಸುವ ಹೊತ್ತಿಗೇ ಅವರಿಗೆ ೪೩ ವರ್ಷ ವಯಸ್ಸಾಗಿತ್ತು.
ರುಕ್ಮಿಣೀಯವರ ಮಿತ್ರ ಕೆ. ಚಂದ್ರಶೇಖರ್ ಅನಿಸಿಕೆಯಂತೆ [...]

ರುಕ್ಮಿಣೀದೇವಿ- ಭಾಗ 11

Sunday, August 15th, 2010
ರುಕ್ಮಿಣೀದೇವಿ- ಭಾಗ 11

ಕಳೆದ ಸಂಚಿಕೆಯಲ್ಲಿ..
(ರುಕ್ಮಿಣೀ ತಾವು ಕಲಿತಿದ್ದನ್ನು ಸಮಯ, ಸಂದರ್ಭವರಿತು ಸಂಸ್ಕೃತಿಗೆ ಏನು ಅಗತ್ಯವೋ ಅದನ್ನು ಪರಂಪರೆಯ ಅಡಿಪಾಯದಲ್ಲಿ ಹೊಸತಾಗಿ ಪುನರ್ ರೂಪಿಸುತ್ತಿದ್ದರು. ಅದರಲ್ಲೂ ವಿದೇಶಿ ತಂತ್ರಜ್ಞರಿಗೆ ಭಾರತೀಯ ರಂಗದ ಪರಿಜ್ಞಾನ ಅಷ್ಟಾಗಿ ಇರಲಿಲ್ಲವಾದದ್ದರಿಂದ ಅವರ ಸಹಕಾರವಿದ್ದರೂ, ರುಕ್ಮಿಣೀ ಅವರ ಮಾರ್ಗದರ್ಶನವಿಲ್ಲದೇ ಅಗುತ್ತಿರಲಿಲ್ಲ. ಪರಂಪರೆಯ ಆತ್ಮವನ್ನು ಒಯ್ಯುವಲ್ಲಿ ಮತ್ತು ಕಾಣಿಸುವಲ್ಲಿ ನಿಚ್ಚಳವಾಗಿ ಅವರ ಸಂಯೋಜನೆಗಳ ಪ್ರಭಾವ ತುಂಬಾ ದೊಡ್ಡದು. ಕೊರವಂಜಿಯ ಮುಖ್ಯ ಪ್ರದರ್ಶನಗಳಲ್ಲಿ ಕುಟ್ರಾಲಂ ದೇವಸ್ಥಾನದಲ್ಲಿ ಜರುಗಿದ್ದು ಅತೀ ಆಪ್ತವಾದದ್ದು ಎನ್ನುವುದು ರುಕ್ಮಿಣೀ ಅವರ ಅನಿಸಿಕೆ. ರುಕ್ಮಿಣೀ ಎಂದಿಗೂ [...]

ನೃತ್ಯ ರಂಗದ ಅನಭಿಷಿಕ್ತ ರಾಣಿ : ರುಕ್ಮಿಣಿ (ಭಾಗ- ೧೬)

Thursday, June 17th, 2010

ಜೇಮ್ಸ್ ಕಸಿನ್ ಒಂದೆಡೆ ಹೀಗೆ ಬರೆಯುತ್ತಾರೆ.‘research as to costumes, jewels, and hair dressings ; in the adaptation of the text to stage purposes ; in the synchronizing of words and music, and of these with the rhythms, postures, gestures, groupings and finger-signs(mudras)…” and observed that all these evolved out of the knowledge, experience and imagination of [...]

ನೃತ್ಯ ರಂಗದ ಅನಭಿಷಿಕ್ತ ರಾಣಿ : ರುಕ್ಮಿಣಿ ( ಮಾರ್ಚ್- ಏಪ್ರಿಲ್ ೨೦೧೦)

Thursday, April 15th, 2010

ರುಕ್ಮಿಣೀದೇವಿ ಅರುಂಡೇಲ್ ಅವರು ಸಂಯೋಜಿಸಿದ ನೃತ್ಯರೂಪಕ ಮತ್ತು ಅವುಗಳ ನಿರ್ಮಿತಿ ಕಾಲಗಳೆಡೆಗೆ
ಈ ಬಾರಿ ಒಮ್ಮೆ ದೃಷ್ಟಿ ಹಾಯಿಸೋಣವೇ?
ವಾಲ್ಮೀಕೀ ರಾಮಾಯಣ ( ಒಟ್ಟು ೬ ಭಾಗಗಳಲ್ಲಿ )
ಸೀತಾ ಸ್ವಯಂವರಂ      ೧೯೫೪
ಶ್ರೀ ರಾಮವನಾಗಮನಂ  ೧೯೬೦
ಪಾದುಕಾ ಪಟ್ಟಾಭಿಷೇಕಂ  ೧೯೬೦
ಶಬರಿ ಮೋಕ್ಷಂ   ೧೯೬೫
ಚೂಡಾಮಣಿಪ್ರದಾನಂ     ೧೯೬೮
ಮಹಾ ಪಟ್ಟಾಭಿಷೇಕಂ     ೧೯೭೦
ಭಾಗವತ ಮೇಳ
ಉಷಾ ಪರಿಣಯಂ೧೯೫೯
ರುಕ್ಮಾಂಗದ ಚರಿತ್ರಂ      ೧೯೫೯
ರುಕ್ಮಿಣೀ ಕಲ್ಯಾಣಂ        ೧೯೬೪
ಧ್ರುವ ಚರಿತ್ರಂ    ೧೯೭೧
ಕೊರವಂಜಿ
ಕುಟ್ರಾಲ ಕೊರವಂಜಿ೧೯೪೪
ಕಣ್ಣಪ್ಪರ್ ಕೊರವಂಜಿ      ೧೯೬೨
ಕೃಷ್ಣಮರಿ ಕೊರವಂಜಿ      ೧೯೭೧
ಇತರೆ ಸಂಯೋಜನೆಗಳು
ಕಾಳಿದಾಸನ ಕುಮಾರ ಸಂಭವಂ   ೧೯೪೭
ಜಯದೇವನ ಗೀತಗೋವಿಂದ       ೧೯೫೯
ರವೀಂದ್ರನಾಥ ಟಾಗೋರರ ಶ್ಯಾಮ         ೧೯೬೧
ಅಂಡಾಳ್ ಚರಿತ್ರಂ        ೧೯೬೧
ಕಾಳಿದಾಸನ ಅಭಿಜ್ಞಾನ [...]

ಅನಭಿಷಿಕ್ತ ರಾಣಿ : ರುಕ್ಮಿಣೀ ದೇವಿ ( ಹೇಮಂತ ಋತು ಗಾನ ೨೦೦೯)

Tuesday, December 15th, 2009
ಅನಭಿಷಿಕ್ತ ರಾಣಿ : ರುಕ್ಮಿಣೀ ದೇವಿ ( ಹೇಮಂತ ಋತು ಗಾನ ೨೦೦೯)

ಆಲದ ಮರ ಬೆಳೆಯಲು ನಿಧಾನಗತಿ ಅನುಸರಿಸಿದರೂ ತಳವೂರಿ ಅಗಾಧವಾಗಿ ಹರಡುತ್ತದೆ. ಅಂತೆಯೇ ಗುರುಕುಲ ಪದ್ಧತಿಯ ಬೇರುಗಳೂ ಕೂಡಾ ! ಅದಕ್ಕೆ ರೂಪಕವೋ ಎಂಬಂತೆ ಹೆಚ್ಚಿನ ಪಾಠಗಳು ಅಡ್ಯಾರ್‌ನ ದೈತ್ಯ ಆಲದ ಮರಗಳ ನೆರಳಿನಲ್ಲಿಯೆ ನಡೆಯುತ್ತಿದ್ದವು. ರುಕ್ಮಿಣೀದೇವಿ ಸ್ವತಃ ತಾವೇ ನೃತ್ಯ ಪಾಠ ಮಾಡುತ್ತಿದ್ದರು. ಅದೇ ಆವರಣದಲ್ಲಿ ವಿದ್ಯಾರ್ಥಿಗಳ ಪ್ರೌಢ ಶಿಕ್ಷಣಕ್ಕೆ ಅನುಕೂಲವಾಗಲು ಬೆಸೆಂಟ್ ಥಿಯೋಸೋಫಿಕಲ್ ಹೈಸ್ಕೂಲ್ ಕೂಡಾ ಇತ್ತು. ಇದರ ಮುಖ್ಯೋಪಾಧ್ಯಾಯರಾದ ಶಂಕರ ಮೆನನ್ ಹಿಂದೂ ತತ್ವಜ್ಞಾನದ ಪಾಠಗಳನ್ನು ಮಾಡುತ್ತಿದ್ದರು. [...]