ಅಂಕಣಗಳು

ನೂಪುರ ಪತ್ರಿಕೆ

ಐದನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ  ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ ೨೦೧೧)

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಪತ್ರಿಕೆ ವಿಚಾರಮಂಥನಕ್ಕೆ, ಅನುಭವಗಳ ಹೊಳಹಿಗೆ, ಹೊಳಪಿಗೆ ವೇದಿಕೆಯಾಗಿ ರೂಪುಗೊಳ್ಳಬೇಕು. ಪ್ರಯೋಗಶೀಲವಾಗಿರಬೇಕು. ಈ ನಿಟ್ಟಿನಲ್ಲಿ ಜ್ಞಾನವೃದ್ಧರ ಪರಿಚಯ, ಅವರ ಅನುಭವದ ನುಡಿಗಳು ನೃತ್ಯ ಕ್ಷೇತ್ರದ ಚಿಂತನೆಗೆ ಚಾವಡಿಯಾಬೇಕು.. ಅವರನ್ನು ದರ್ಶನ ಭ್ರಮರಿಯ ಅಂಗಣಕ್ಕೆ ಕರೆತನ್ನಿ, ನಾವೆಲ್ಲರೂ ಸಂ-ದರ್ಶಿಸೋಣ. ಚರ್ಚೆಗಳು ಚೆಂದಗೆ ಮೂಡಿ ಬರಲಿ… ತಿಳಿವಳಿಕೆಯ ಮಂಥನಕ್ಕೆ ಇದು ವೇದಿಕೆ.

ನಮ್ಮ ನೃತ್ಯ ಪರಂಪರೆಗಳ ಪುನರುಜ್ಜೀವನವು ಶಿಸ್ತು, ಒಗ್ಗಟ್ಟಿನಿಂದಷ್ಟೇ ಸಾಧ್ಯ : ಲಲಿತಾ ಶ್ರೀನಿವಾಸನ್

Friday, December 16th, 2011
ನಮ್ಮ ನೃತ್ಯ ಪರಂಪರೆಗಳ ಪುನರುಜ್ಜೀವನವು ಶಿಸ್ತು, ಒಗ್ಗಟ್ಟಿನಿಂದಷ್ಟೇ ಸಾಧ್ಯ : ಲಲಿತಾ ಶ್ರೀನಿವಾಸನ್

ಮೈಸೂರು ಶೈಲಿಯ ಹಿರಿಯ ನೃತ್ಯ ಗುರು ಡಾ.ವೆಂಕಟಲಕ್ಷ್ಮಮ್ಮ ಅವರ ಪ್ರೀತಿಪಾತ್ರ ಶಿಷ್ಯೆ ಲಲಿತಾ ಶ್ರೀನಿವಾಸನ್ ಅವರದ್ದು ಕಲಾರಂಗಕ್ಕೆ ಸುಮಾರು ೪೦ ದಶಕಗಳಿಗೂ ಮೀರಿದ ನೃತ್ಯಸೇವೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ತಮ್ಮದೇ ‘ನೂಪುರ’ ಕಲಾಸಂಸ್ಥೆಯನ್ನು ಸ್ಥಾಪಿಸಿ ಕಲಾಶ್ರಿತರಿಗೆ ಪ್ರೋತ್ಸಾಹವನ್ನೀಯುತ್ತಾ ಬಂದಿರುವ ಸುಸ್ಪಷ್ಟ ನೇರ ನುಡಿಯ ಸಜ್ಜನ ಕಲಾವಿದೆ. ಇವರು ಆರಂಭಿಸಿದ ‘ನಿತ್ಯನೃತ್ಯ’ ಉತ್ಸವ ಕರ್ನಾಟಕದ ಕಲೋತ್ಸವಗಳ ಸಾಲಿನಲ್ಲಿ ಮೊದಲನೆಯ ಮೈಲಿಗಲ್ಲು. ೧೯೮೦ರ ದಶಕದಲ್ಲಿ ಸೂಳಾದಿ ಪ್ರಬಂಧಗಳ ಪುನರ್ ರಚನೆಗಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಫೆಲೋಶಿಪ್ ಪಡೆದ ಲಲಿತಾ ಶ್ರೀನಿವಾಸನ್ [...]

ದೂಷಣೆಯಲ್ಲಿ ಅರ್ಥವಿಲ್ಲ. ಜಾಗೃತ ಮನಸ್ಸುಗಳ ಅಗತ್ಯವಿದೆ: ವೈಜಯಂತಿ ಕಾಶಿ

Saturday, October 15th, 2011
ದೂಷಣೆಯಲ್ಲಿ ಅರ್ಥವಿಲ್ಲ. ಜಾಗೃತ ಮನಸ್ಸುಗಳ ಅಗತ್ಯವಿದೆ: ವೈಜಯಂತಿ ಕಾಶಿ

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಹೆಸರಾಂತ ಕೂಚಿಪುಡಿ ಕಲಾವಿದೆ, ಶಾಂಭವಿ ನೃತ್ಯ ಸಂಸ್ಥೆಯ ನಿರ್ದೇಶಕಿ, ಡ್ಯಾನ್ಸ್ ಜಾತ್ರೆಯ ರೂವಾರಿ, ಕೇಂದ್ರ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ವೈಜಯಂತಿ ಕಾಶಿ ಆಯ್ಕೆಯಾಗಿದ್ದಾರೆ. ಗುರುತರವಾದ ಜವಾಬ್ದಾರಿಗಳೆಡೆಯಲ್ಲಿ ಹೊಸತಾದ ಯೋಚನೆಗಳೊಂದಿಗೆ ವೈಜಯಂತಿ ಕಾಶಿ ನೂಪುರ ಭ್ರಮರಿಯೊಂದಿಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾ ಮಾತಿಗಿಳಿದಿದ್ದಾರೆ. ಬನ್ನಿ. ಅವರನ್ನು ಆಲಿಸೋಣ.

· ಅಭಿನಂದನೆಗಳು. ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೀರಿ. ಅಧ್ಯಕ್ಷರಾಗಿ ನಿಮ್ಮ ಮುಂದಿನ ಗುರಿ?
ಕಲಾವಿದೆಯಾಗಿ ನಾನು ವಸ್ತುತಃ ಎದುರಿಸುತ್ತಿರುವ ಸವಾಲೇ ಪ್ರೇಕ್ಷಕರ ಸ್ಥಿತ್ಯಂತರ ಮನಸ್ಥಿತಿ [...]

ಪರಕಾಯ ಪ್ರವೇಶ ಈ ಸ್ತ್ರೀವೇಷ…! -6 ಮಂದಿ ಹೆಸರಾಂತ ಯಕ್ಷಗಾನ ಸ್ತ್ರೀ ವೇಷ ಕಲಾವಿದರ ಸಂದರ್ಶನ

Tuesday, February 15th, 2011
ಪರಕಾಯ ಪ್ರವೇಶ ಈ ಸ್ತ್ರೀವೇಷ…! -6 ಮಂದಿ ಹೆಸರಾಂತ ಯಕ್ಷಗಾನ ಸ್ತ್ರೀ ವೇಷ ಕಲಾವಿದರ ಸಂದರ್ಶನ

ಸ್ತ್ರೀ ವೇಷಗಳ ಆಯಾಮ, ದಿಕ್ಕು, ಅವಕಾಶ, ಅನುಕೂಲದ ಸವಿಸ್ತಾರವಾದ ಅನುಭವಗಳನ್ನು ಕಟ್ಟಿಕೊಡುತ್ತಾ ಪ್ರತಿಯೋರ್ವ ಕಲಾವಿದರು ತಮ್ಮದೇ ಆದ ನೋಟಗಳನ್ನು ಚೆಲ್ಲುತ್ತಾ ಈ ಬಾರಿ ನಿಮಗೆ ಯಕ್ಷಗಾನದ ಸ್ತ್ರೀವೇಷಗಳ ಸಮಗ್ರ ದರ್ಶನ ಮಾಡಿಸಲಿದ್ದಾರೆ. ಲೇಖನವೊಂದಕ್ಕೆ ಸೀಮಿತವಾಗಬಹುದಾಗಿದ್ದ ವಿಷಯವನ್ನು ಪ್ರಧಾನವಾಗಿಸಿ ಕಲಾವಿದರ ಸಂದರ್ಶನದಲ್ಲಿ ಹಿಗ್ಗಿಸಿ, ವೈವಿಧ್ಯಮಯ ಮತ್ತು ಪೂರಕವಾದ ಅಭಿಪ್ರಾಯಗಳನ್ನು ದಾಖಲಿಸುವುದರೊಂದಿಗೆ ತಿಟ್ಟುಗಳ ಹೊಂದಾಣಿಕೆಯಲ್ಲ್ಲಿ ಮತ್ತು ಪರಂಪರೆ- ಪ್ರಯೋಗಗಳೆರಡರ ನೆಲೆಯಲ್ಲಿ ಪಾರಮ್ಯ ಮತ್ತು ಸಮನ್ವಯ ಸಾಧಿಸಲು ಸ್ತ್ರೀಪಾತ್ರಧಾರಿಗಳಾಗಿ ದುಡಿದ, ದುಡಿಯುತ್ತಿರುವ ಅನುಭವಿ ಜನಪ್ರಿಯ ಕಲಾವಿದರ ಪೈಕಿ ಕೆಲವರನ್ನು ಆರಿಸಿಕೊಂಡು ಅವರ [...]

ಕರ್ನಾಟಕ ಕಲಾ ತಿಲಕ ನಾಟ್ಯಮೋಹನ ಉಳ್ಳಾಲ ಮೋಹನ್ ಕುಮಾರ್

Monday, August 16th, 2010
ಕರ್ನಾಟಕ ಕಲಾ ತಿಲಕ ನಾಟ್ಯಮೋಹನ ಉಳ್ಳಾಲ ಮೋಹನ್ ಕುಮಾರ್

ಕರ್ನಾಟಕ ಕಲಾತಿಲಕ ಶ್ರೀಯುತ ಉಳ್ಳಾಲ ಮೋಹನ್ ಕುಮಾರ್ ಅವರ ಹೆಸರನ್ನು ಕೇಳದವರು ಯಾರು? ದಕ್ಷಿಣ ಕರಾವಳಿಯ ಭರತನಾಟ್ಯ ಪರಂಪರೆಯಲ್ಲಿ ಅವರ ಹೆಸರಿಲ್ಲದಿದ್ದರೆ ಅದು ಅಪೂರ್ಣವೆನಿಸುವಷ್ಟರ ಮಟ್ಟಿಗೆ ನೃತ್ಯ ಕ್ಷೇತ್ರದ ನಾಡಿಮಿಡಿತವಾಗಿದ್ದಾರೆ. ಇಂದಿಗೆ ದಕ್ಷಿಣ ಕನ್ನಡದಲ್ಲಷ್ಟೇ ಅಲ್ಲದೆ ಕರ್ನಾಟಕ, ಹೊರರಾಜ್ಯಗಳಲ್ಲಿ ಖ್ಯಾತರಾಗಿರುವ ಸುಮಾರು ೧೦೦ಕ್ಕೂ ಮಿಗಿಲು ನೃತ್ಯ ಶಿಕ್ಷಕರು-ಗುರುಗಳು ಉಳ್ಳಾಲ ಮೋಹನ್ ಕುಮಾರ್ ಅವರ ಗರಡಿಯಲ್ಲಿ ಪಳಗಿ ದೊಡ್ಡವರಾದವರೇ ಹೌದು. ಮಂಗಳೂರಿನ ಉಳ್ಳಾಲದ ಕೋಲ್ಯ ಕೋಟೆಕಾರ್‌ನಲ್ಲಿ ನೆಲೆಸಿರುವ ಶ್ರೀಯುತರು ; ತಮ್ಮ ಸಂಸ್ಥೆ ನಾಟ್ಯನಿಕೇತನದ ಮೂಲಕವಾಗಿ ಅದೆಷ್ಟೋ ನೃತ್ಯಾಸಕ್ತ [...]

ಕನ್ನಡತಿಯಾಗಿ ಕರಾವಳಿಯಲ್ಲಿ ನೆಲೆಸಿದ ನೃತ್ಯಸರಸ್ವತಿ : ಶ್ರೀಮತಿ ಜಯಲಕ್ಷ್ಮಿ ಆಳ್ವ

Sunday, February 28th, 2010
ಕನ್ನಡತಿಯಾಗಿ ಕರಾವಳಿಯಲ್ಲಿ ನೆಲೆಸಿದ ನೃತ್ಯಸರಸ್ವತಿ : ಶ್ರೀಮತಿ ಜಯಲಕ್ಷ್ಮಿ ಆಳ್ವ

ಸ್ವತಃ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರಿಂದಲೇ ‘ನೃತ್ಯ ಸರಸ್ವತಿ’ ಎಂದು ಹೊಗಳಿಸಿಕೊಂಡು ಗೌರವಕ್ಕೆ ಪಾತ್ರರಾದವರು ಶ್ರೀಮತಿ ಜಯಲಕ್ಷ್ಮಿ ಆಳ್ವ.. ಅವರಿಗೀಗ ೭೭ರ ಹರೆಯ. ತವರೂರು ಕುಂಭಕೋಣಂ. ೧೯೩೩ರಲ್ಲಿ ಜನನ. ಭರತನಾಟ್ಯದ ಪಂದನಲ್ಲೂರು ಪದ್ಧತಿಯ ಮೇರು ಗುರುಗಳಾದ ಕಲಾಕ್ಷೇತ್ರದಲ್ಲಿ ಅರುಂಡೇಲ್ ಅವರೊಂದಿಗೆ ಸೇವೆ ಸಲ್ಲಿಸಿದ ಗುರು ಕೆ.ಎನ್. ದಂಡಾಯುಧ ಪಾಣಿ ಪಿಳ್ಳೈ ಅವರ ಪಟ್ಟ ಶಿಷ್ಯೆ. ಹಿರಿಯ ನೃತ್ಯದಿಗ್ಗಜರಾದ ಸ್ವರ್ಣಂ ಸರಸ್ವತಿ, ಗೌರಿ ಅಮ್ಮಾಳ್, ಕರುಣಾಕರ್ ಪಣಿಕ್ಕರ್ ಅವರಲ್ಲಿ ಅಭಿನಯ [...]

ಮಂಟಪ ಪ್ರಭಾಕರ ಉಪಾಧ್ಯಾಯ

Sunday, February 15th, 2009
ಮಂಟಪ ಪ್ರಭಾಕರ ಉಪಾಧ್ಯಾಯ

ಯಕ್ಷಗಾನಕ್ಕೆ ಅನನ್ಯ ಸೇವೆ ಸಲ್ಲಿಸುವುದರೊಂದಿಗೆ, ಹೊಸ ಹುಟ್ಟು, ಹೊಸ ಪ್ರಯೋಗಗಳಿಗೆ ಕಾರಣಕರ್ತರಾದ ಮಂಟಪರು ರಸಿಕರ ಕಣ್ಮಣಿಯಾಗಿ, ಯಕ್ಷಗಾನ ಸ್ತ್ರೀ ವೇಷದ ಆಳ-ಅಗಲ-ವ್ಯಾಪ್ತಿ ವಿಸ್ತಾರವನ್ನು ಮತ್ತಷ್ಟು ಹಿರಿದುಗೊಳಿಸಿದವರು. ರಸಾನುಭೂತಿಗೆ ತಮ್ಮನ್ನು ತಾವು ಹೊಸ ಹೊಸ ರೀತಿಗಳಲ್ಲಿ ದುಡಿಸಿಕೊಳ್ಳುತ್ತಾ, ಸ್ತ್ರೀ ವೇಷದ ವಯಸ್ಸನ್ನೂ ಮೀರಿ ಬೆಳೆಯುತ್ತಲಿದ್ದಾರೆ. ಸ್ವತಃ ಗಂಡಸರೂ ಮಾರು ಹೋಗಿ ಆಕರ್ಷಿತರಾಗುವ ಮಟ್ಟಿಗೆ ಪರಿಣಾಮ ಬೀರುವ ಅವರ ಗಾಢವಾದ ಅಭಿನಯ ಅವರಲ್ಲಡಗಿದ ಕಲೆಗೆ ಸಾಕ್ಷಿ.
ಮೂರನೇ ವರ್ಷದ ಈ ಸಂಭ್ರಮಕ್ಕೆ ನಮ್ಮ ನೂಪುರ ಅವರ ನೂಪುರಗಳ ದನಿಯನ್ನು ದರ್ಶನ-ಸಂದರ್ಶನ [...]

ವಿದುಷಿ ಬಿ. ಕೆ. ವಸಂತಲಕ್ಷ್ಮಿ

Thursday, November 6th, 2008
ವಿದುಷಿ ಬಿ. ಕೆ. ವಸಂತಲಕ್ಷ್ಮಿ

ಸಾದಿರ್ ಪದ್ಧತಿಯ ನೃತ್ಯಕ್ಕೆ ಭರತನಾಟ್ಯವೆಂಬ ಶುದ್ಧ ರೂಪವನ್ನು ಕೊಟ್ಟ ತಮಿಳ್ನಾಡಿನ ಕಲಾಕ್ಷೇತ್ರದ ಗುರು ರುಕ್ಮಿಣೀದೇವಿ ಅರುಂಡೇಲ್ ಮತ್ತು ಮೈಸೂರು ಶೈಲಿಯ ಅಗ್ರ ಗುರು ವೆಂಕಟಲಕ್ಷ್ಮಮ್ಮ ಅವರ ಶಿಷ್ಯರುಗಳಲ್ಲಿ ಬಿ. ಕೆ. ವಸಂತಲಕ್ಷ್ಮಿ ಅವರದ್ದು ಮೊದಲ್ಪಂಕ್ತಿಯ ಹೆಸರು. ಭರತನಾಟ್ಯದ ಹಿರಿಯ ಗುರು ಕೇಶವ ನೃತ್ಯಶಾಲಾದ ದಿವಂಗತ ಎಚ್. [...]

ವಿದ್ವಾನ್ ಶ್ರೀಧರ್

Thursday, November 6th, 2008
ವಿದ್ವಾನ್ ಶ್ರೀಧರ್

ಶ್ರೀಧರ್ ಅವರನ್ನು ಯಾರಿಗೆ ತಾನೇ ತಿಳಿದಿಲ್ಲ? ಚಲನಚಿತ್ರ ಕಲಾವಿದರಾಗಿ, ಹೆಸರಾಂತ ಭರತನಾಟ್ಯ ಪಟುವಾಗಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಜನಜನಿತ. ಪತ್ನಿ ಅನುರಾಧಾ ಶ್ರೀಧರ್ ಅವರ ಜೊತೆಗೂಡಿ ಅವರು ನಡೆಸಿಕೊಟ್ಟ ಕಾರ್ಯಕ್ರಮಗಳು, ನೃತ್ಯ ವೈವಿಧ್ಯಗಳು, ಉಪನ್ಯಾಸ-ಕಾರ್ಯಗಾರಗಳು ಸುಮಾರು ೨೦೦೦ ಕ್ಕಿಂತಲೂ ಹೆಚ್ಚು. ಬೆಂಗಳೂರಿನಲ್ಲಿ ಖೇಚರ ಅಕಾಡೆಮಿ ಆಫ್ [...]

ವಿದುಷಿ ರೂಪಾ ಶ್ರೀಕೃಷ್ಣ ಉಪಾಧ್ಯ

Thursday, November 6th, 2008
ವಿದುಷಿ ರೂಪಾ ಶ್ರೀಕೃಷ್ಣ ಉಪಾಧ್ಯ

ಯುವ ಭರತನಾಟ್ಯ ಗುರು ಮತ್ತು ಪ್ರಬುದ್ಧ ಕಲಾವಿದೆ. ಸಾಗರದ ವಿದ್ವಾನ್ ಜಿ. ಬಿ. ಜನಾರ್ಧನ್, ಬೆಂಗಳೂರಿನ ವಿದುಷಿ ಬಿ. ಕೆ. ವಸಂತಲಕ್ಷ್ಮೀ ಇವರ ಗರಡಿಯಲ್ಲಿ ಪಳಗಿದ ರೂಪಾ ಉಪಾಧ್ಯ ಭರತನಾಟ್ಯ ವಿದ್ವತ್ ಮತ್ತು ಎಂ.ಎ ರ್‍ಯಾಂಕ್ ವಿಜೇತೆ. ನಾಡಿನಾದ್ಯಂತ ಹಲವಾರು ಕಾರ್‍ಯಕ್ರಮಗಳನ್ನು ನೀಡುತ್ತಾ ಬಂದಿರುವ ರೂಪಾ, ಹಲವು ಸನ್ಮಾನ, [...]

ನಾಟ್ಯಾಚಾರ್ಯ ಮುರಳೀಧರರಾವ್

Thursday, November 6th, 2008

ಪಂದನಲ್ಲೂರು ಭರತನಾಟ್ಯ ಶೈಲಿಯ ಹಿರಿಯ ಗುರು. ೧೯೨೪ ರಲ್ಲಿ ಕಾಸರಗೋಡಿನಲ್ಲಿ ಜನಿಸಿದ ಇವರು, ೧೯೫೮ರಲ್ಲಿ ಕಥಕ್ಕಳಿ ನೃತ್ಯ ಕಲಿತರಾದರೂ ಕ್ರಮೇಣ ಅವರ ಆಸಕ್ತಿ ಚಾಚಿಕೊಂಡದ್ದು ಭರತನಾಟ್ಯದೆಡೆಗೆ. ಪಂದನಲ್ಲೂರು ಚೊಕ್ಕಲಿಂಗಮ್, ಎಂ.ಆರ್. ರಾಜರತ್ನಂ ಪಿಳ್ಳೈ ಅವರಲ್ಲಿ ಅಧ್ಯಯನ. ಹಾಗಾಗಿ ಅವರು ಜ್ಞಾನವೃದ್ಧರೂ ಹೌದು, ವಯೋವೃದ್ಧರೂ ಹೌದು. ಕಲೆಯನ್ನೇ ವರಿಸಿದ [...]