ಅಂಕಣಗಳು

ನೂಪುರ ಪತ್ರಿಕೆ

‘ಮುದ್ರಾರ್ಣವ’ದ ಮೋಹಕ ಮೇಘಮಲ್ಹಾರ… : ಅನಾವರಣದಲ್ಲರಳಿದ ಅಲೆಗಳು

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಪತ್ರಿಕೆ ವಿಚಾರಮಂಥನಕ್ಕೆ, ಅನುಭವಗಳ ಹೊಳಹಿಗೆ, ಹೊಳಪಿಗೆ ವೇದಿಕೆಯಾಗಿ ರೂಪುಗೊಳ್ಳಬೇಕು. ಪ್ರಯೋಗಶೀಲವಾಗಿರಬೇಕು. ಈ ನಿಟ್ಟಿನಲ್ಲಿ ಜ್ಞಾನವೃದ್ಧರ ಪರಿಚಯ, ಅವರ ಅನುಭವದ ನುಡಿಗಳು ನೃತ್ಯ ಕ್ಷೇತ್ರದ ಚಿಂತನೆಗೆ ಚಾವಡಿಯಾಬೇಕು.. ಅವರನ್ನು ದರ್ಶನ ಭ್ರಮರಿಯ ಅಂಗಣಕ್ಕೆ ಕರೆತನ್ನಿ, ನಾವೆಲ್ಲರೂ ಸಂ-ದರ್ಶಿಸೋಣ. ಚರ್ಚೆಗಳು ಚೆಂದಗೆ ಮೂಡಿ ಬರಲಿ… ತಿಳಿವಳಿಕೆಯ ಮಂಥನಕ್ಕೆ ಇದು ವೇದಿಕೆ.

ಕನ್ನಡತಿಯಾಗಿ ಕರಾವಳಿಯಲ್ಲಿ ನೆಲೆಸಿದ ನೃತ್ಯಸರಸ್ವತಿ : ಶ್ರೀಮತಿ ಜಯಲಕ್ಷ್ಮಿ ಆಳ್ವ

Sunday, February 28th, 2010
ಕನ್ನಡತಿಯಾಗಿ ಕರಾವಳಿಯಲ್ಲಿ ನೆಲೆಸಿದ ನೃತ್ಯಸರಸ್ವತಿ : ಶ್ರೀಮತಿ ಜಯಲಕ್ಷ್ಮಿ ಆಳ್ವ

ಸ್ವತಃ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರಿಂದಲೇ ‘ನೃತ್ಯ ಸರಸ್ವತಿ’ ಎಂದು ಹೊಗಳಿಸಿಕೊಂಡು ಗೌರವಕ್ಕೆ ಪಾತ್ರರಾದವರು ಶ್ರೀಮತಿ ಜಯಲಕ್ಷ್ಮಿ ಆಳ್ವ.. ಅವರಿಗೀಗ ೭೭ರ ಹರೆಯ. ತವರೂರು ಕುಂಭಕೋಣಂ. ೧೯೩೩ರಲ್ಲಿ ಜನನ. ಭರತನಾಟ್ಯದ ಪಂದನಲ್ಲೂರು ಪದ್ಧತಿಯ ಮೇರು ಗುರುಗಳಾದ ಕಲಾಕ್ಷೇತ್ರದಲ್ಲಿ ಅರುಂಡೇಲ್ ಅವರೊಂದಿಗೆ ಸೇವೆ ಸಲ್ಲಿಸಿದ ಗುರು ಕೆ.ಎನ್. ದಂಡಾಯುಧ ಪಾಣಿ ಪಿಳ್ಳೈ ಅವರ ಪಟ್ಟ ಶಿಷ್ಯೆ. ಹಿರಿಯ ನೃತ್ಯದಿಗ್ಗಜರಾದ ಸ್ವರ್ಣಂ ಸರಸ್ವತಿ, ಗೌರಿ ಅಮ್ಮಾಳ್, ಕರುಣಾಕರ್ ಪಣಿಕ್ಕರ್ ಅವರಲ್ಲಿ ಅಭಿನಯ [...]

ಮಂಟಪ ಪ್ರಭಾಕರ ಉಪಾಧ್ಯಾಯ

Sunday, February 15th, 2009
ಮಂಟಪ ಪ್ರಭಾಕರ ಉಪಾಧ್ಯಾಯ

ಯಕ್ಷಗಾನಕ್ಕೆ ಅನನ್ಯ ಸೇವೆ ಸಲ್ಲಿಸುವುದರೊಂದಿಗೆ, ಹೊಸ ಹುಟ್ಟು, ಹೊಸ ಪ್ರಯೋಗಗಳಿಗೆ ಕಾರಣಕರ್ತರಾದ ಮಂಟಪರು ರಸಿಕರ ಕಣ್ಮಣಿಯಾಗಿ, ಯಕ್ಷಗಾನ ಸ್ತ್ರೀ ವೇಷದ ಆಳ-ಅಗಲ-ವ್ಯಾಪ್ತಿ ವಿಸ್ತಾರವನ್ನು ಮತ್ತಷ್ಟು ಹಿರಿದುಗೊಳಿಸಿದವರು. ರಸಾನುಭೂತಿಗೆ ತಮ್ಮನ್ನು ತಾವು ಹೊಸ ಹೊಸ ರೀತಿಗಳಲ್ಲಿ ದುಡಿಸಿಕೊಳ್ಳುತ್ತಾ, ಸ್ತ್ರೀ ವೇಷದ ವಯಸ್ಸನ್ನೂ ಮೀರಿ ಬೆಳೆಯುತ್ತಲಿದ್ದಾರೆ. ಸ್ವತಃ ಗಂಡಸರೂ ಮಾರು ಹೋಗಿ ಆಕರ್ಷಿತರಾಗುವ ಮಟ್ಟಿಗೆ ಪರಿಣಾಮ ಬೀರುವ ಅವರ ಗಾಢವಾದ ಅಭಿನಯ ಅವರಲ್ಲಡಗಿದ ಕಲೆಗೆ ಸಾಕ್ಷಿ.
ಮೂರನೇ ವರ್ಷದ ಈ ಸಂಭ್ರಮಕ್ಕೆ ನಮ್ಮ ನೂಪುರ ಅವರ ನೂಪುರಗಳ ದನಿಯನ್ನು ದರ್ಶನ-ಸಂದರ್ಶನ [...]

ವಿದುಷಿ ಬಿ. ಕೆ. ವಸಂತಲಕ್ಷ್ಮಿ

Thursday, November 6th, 2008
ವಿದುಷಿ ಬಿ. ಕೆ. ವಸಂತಲಕ್ಷ್ಮಿ

ಸಾದಿರ್ ಪದ್ಧತಿಯ ನೃತ್ಯಕ್ಕೆ ಭರತನಾಟ್ಯವೆಂಬ ಶುದ್ಧ ರೂಪವನ್ನು ಕೊಟ್ಟ ತಮಿಳ್ನಾಡಿನ ಕಲಾಕ್ಷೇತ್ರದ ಗುರು ರುಕ್ಮಿಣೀದೇವಿ ಅರುಂಡೇಲ್ ಮತ್ತು ಮೈಸೂರು ಶೈಲಿಯ ಅಗ್ರ ಗುರು ವೆಂಕಟಲಕ್ಷ್ಮಮ್ಮ ಅವರ ಶಿಷ್ಯರುಗಳಲ್ಲಿ ಬಿ. ಕೆ. ವಸಂತಲಕ್ಷ್ಮಿ ಅವರದ್ದು ಮೊದಲ್ಪಂಕ್ತಿಯ ಹೆಸರು. ಭರತನಾಟ್ಯದ ಹಿರಿಯ ಗುರು ಕೇಶವ ನೃತ್ಯಶಾಲಾದ ದಿವಂಗತ ಎಚ್. [...]

ವಿದ್ವಾನ್ ಶ್ರೀಧರ್

Thursday, November 6th, 2008
ವಿದ್ವಾನ್ ಶ್ರೀಧರ್

ಶ್ರೀಧರ್ ಅವರನ್ನು ಯಾರಿಗೆ ತಾನೇ ತಿಳಿದಿಲ್ಲ? ಚಲನಚಿತ್ರ ಕಲಾವಿದರಾಗಿ, ಹೆಸರಾಂತ ಭರತನಾಟ್ಯ ಪಟುವಾಗಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಜನಜನಿತ. ಪತ್ನಿ ಅನುರಾಧಾ ಶ್ರೀಧರ್ ಅವರ ಜೊತೆಗೂಡಿ ಅವರು ನಡೆಸಿಕೊಟ್ಟ ಕಾರ್ಯಕ್ರಮಗಳು, ನೃತ್ಯ ವೈವಿಧ್ಯಗಳು, ಉಪನ್ಯಾಸ-ಕಾರ್ಯಗಾರಗಳು ಸುಮಾರು ೨೦೦೦ ಕ್ಕಿಂತಲೂ ಹೆಚ್ಚು. ಬೆಂಗಳೂರಿನಲ್ಲಿ ಖೇಚರ ಅಕಾಡೆಮಿ ಆಫ್ [...]

ವಿದುಷಿ ರೂಪಾ ಶ್ರೀಕೃಷ್ಣ ಉಪಾಧ್ಯ

Thursday, November 6th, 2008
ವಿದುಷಿ ರೂಪಾ ಶ್ರೀಕೃಷ್ಣ ಉಪಾಧ್ಯ

ಯುವ ಭರತನಾಟ್ಯ ಗುರು ಮತ್ತು ಪ್ರಬುದ್ಧ ಕಲಾವಿದೆ. ಸಾಗರದ ವಿದ್ವಾನ್ ಜಿ. ಬಿ. ಜನಾರ್ಧನ್, ಬೆಂಗಳೂರಿನ ವಿದುಷಿ ಬಿ. ಕೆ. ವಸಂತಲಕ್ಷ್ಮೀ ಇವರ ಗರಡಿಯಲ್ಲಿ ಪಳಗಿದ ರೂಪಾ ಉಪಾಧ್ಯ ಭರತನಾಟ್ಯ ವಿದ್ವತ್ ಮತ್ತು ಎಂ.ಎ ರ್‍ಯಾಂಕ್ ವಿಜೇತೆ. ನಾಡಿನಾದ್ಯಂತ ಹಲವಾರು ಕಾರ್‍ಯಕ್ರಮಗಳನ್ನು ನೀಡುತ್ತಾ ಬಂದಿರುವ ರೂಪಾ, ಹಲವು ಸನ್ಮಾನ, [...]

ನಾಟ್ಯಾಚಾರ್ಯ ಮುರಳೀಧರರಾವ್

Thursday, November 6th, 2008

ಪಂದನಲ್ಲೂರು ಭರತನಾಟ್ಯ ಶೈಲಿಯ ಹಿರಿಯ ಗುರು. ೧೯೨೪ ರಲ್ಲಿ ಕಾಸರಗೋಡಿನಲ್ಲಿ ಜನಿಸಿದ ಇವರು, ೧೯೫೮ರಲ್ಲಿ ಕಥಕ್ಕಳಿ ನೃತ್ಯ ಕಲಿತರಾದರೂ ಕ್ರಮೇಣ ಅವರ ಆಸಕ್ತಿ ಚಾಚಿಕೊಂಡದ್ದು ಭರತನಾಟ್ಯದೆಡೆಗೆ. ಪಂದನಲ್ಲೂರು ಚೊಕ್ಕಲಿಂಗಮ್, ಎಂ.ಆರ್. ರಾಜರತ್ನಂ ಪಿಳ್ಳೈ ಅವರಲ್ಲಿ ಅಧ್ಯಯನ. ಹಾಗಾಗಿ ಅವರು ಜ್ಞಾನವೃದ್ಧರೂ ಹೌದು, ವಯೋವೃದ್ಧರೂ ಹೌದು. ಕಲೆಯನ್ನೇ ವರಿಸಿದ [...]

ಶತಾವಧಾನಿ ಡಾ | ಆರ್ ಗಣೇಶ್

Thursday, November 6th, 2008
ಶತಾವಧಾನಿ ಡಾ | ಆರ್ ಗಣೇಶ್

ಶತಾವಧಾನಿ ಡಾ | ಆರ್ ಗಣೇಶ್ ಅವರನ್ನು ಯಾರಿಗೆ ತಾನೇ ತಿಳಿದಿಲ್ಲ? ಸಮಕಾಲೀನ ಯುಗದಲ್ಲಿ ಯಾವುದೇ ವಿಷಯದ ಕುರಿತಾಗಿ ಪ್ರಬುದ್ಧವಾಗಿ, ಪ್ರಗತಿಪರ ದೃಷ್ಟಿಯಿಂದ ಮಾತನಾಡಬಲ್ಲ ವಾಗ್ಮಿ. ದರ್ಶಿಸಿ-ಸಂದರ್ಶಿಸಿದ ಹೊತ್ತಿನಲ್ಲಿ ಅವರ ಮಾತಿನ ಕೆಲವು ನೆನಪುಗಳು ವಿಶೇಷ ಸಂಚಿಕೆಯ ಈ ಹೊತ್ತಿಗೆ ನಿಮಗಾಗಿ ಇಲ್ಲಿವೆ. ಬದಲಾವಣೆಗಳ ಪ್ರಸ್ತುತತೆ ಮತ್ತು ಪರಿಣಾಮಕಾರಿ ಸಂವಹನ [...]

Dance: Poetry in motion.

Thursday, November 6th, 2008
Dance: Poetry in motion.

-Veronica Stivala
India’s top dancer Vyjayanthi Kashi believes dance is like poetry. “Just as when you’re fluent with your grammar, you make poetry instead of words,” she says. “Dance is something so natural to me that it becomes my poetry, my breath. I’m in love with it.”
Que: Have you noticed any difference between past and [...]