‘ಅನನ್ಯ’ ‘ನಿರಂತರ’ : ಅದ್ಭುತವೆನಿಸಿದ ‘ಶಾಂತ’ ಭಾವ
Thursday, December 15th, 2011
೧೧ ನವೆಂಬರ್ ಸ್ಥಳ : ಮಲ್ಲೇಶ್ವರಂ ಸೇವಾಸದನ
ಗುರುಪರಂಪರೆಯ ಮಜಲುಗಳ ನಿರಂತರ ಹರಿವನ್ನು ಸಾದರಪಡಿಸುವಲ್ಲಿ ಅನನ್ಯ ಸಂಸ್ಥೆ ಹಮ್ಮಿಕೊಂಡ ‘ನಿರಂತರ’ ನೃತ್ಯಕಾರ್ಯಕ್ರಮ ರಸಸೋಪಾನದ ದೃಷ್ಟಿಯಲ್ಲಿ ಹೆಚ್ಚು ವಿಕಸಿತಗೊಂಡು ಭರತನಾಟ್ಯ(ನೃತ್ಯ) ಪರಂಪರೆಯ ಭವಿಷ್ಯದ ಸಾಧ್ಯತೆಗಳನ್ನು ಪ್ರಕಟಪಡಿಸಿತು. ಈ ಹಿನ್ನಲೆಯಲ್ಲಿ ‘ನಿರಂತರ’ದ ಕೇಂದ್ರಬಿಂದುವಾದವರು ನಿರುಪಮಾ(ರಾಜೇಂದ್ರ). ಅಂತೆಯೇ ಅವರ ಶಿಷ್ಯೆ ಮೃದುಲಾ ಎರಡನೇ ತಲೆಮಾರಿನ ಹಾಗೂ ಹರಿಣಿ ಮೂರನೇ ತಲೆಮಾರಿನ ಕಲಾವಿದರಾಗಿ ತಮ್ಮ ನೃತ್ಯಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.
ಬ್ರಹ್ಮ, ವಿಷ್ಣು, ಶಿವ, ತಂಡು, ಭರತ..ಹೀಗೆ ನಾಟ್ಯದ ಗುರುಪರಂಪರೆಗೆ ಸರಳ, ಸುಲಲಿತ ಅರ್ಪಣೆಗೈವ [...]









