ಅಂಕಣಗಳು

ನೂಪುರ ಪತ್ರಿಕೆ

‘ಮುದ್ರಾರ್ಣವ’ದ ಮೋಹಕ ಮೇಘಮಲ್ಹಾರ… : ಅನಾವರಣದಲ್ಲರಳಿದ ಅಲೆಗಳು

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ದೀವಟಿಗೆ ಎಂಬ ನೂತನ ವೇದಿಕೆ…ಇಲ್ಲಿ ನಿಮ್ಮ ಸುತಮುತ್ತ ನಡೆದ ನೃತ್ಯ-ನಾಟ್ಯ-ನಾಟಕ-ಜಾನಪದ ಮುಂತಾದ ಪ್ರದರ್ಶನ ಕಲೆಗಳ ಒಳಿತು, ಕೆಡುಕುಗಳನ್ನು ಹಂಚಿಕೊಳ್ಳಬಹುದು.
ಅಗತ್ಯತೆ-ಪ್ರಸ್ತುತತೆಗಳ ಕುರಿತು ನೀವು ಕಂಡುಕೊಂಡ ವಿಚಾರಗಳನ್ನು ಮುಕ್ತವಾಗಿ ನಿಮಗನಿಸಿದಂತೆ ತೆರೆದಿಡಬಹುದು.
ಈ ಮೂಲಕ ನಿಮ್ಮ ಅಭಿಪ್ರಾಯಗಳು ಕಲಾರಾಧಕ ಮನಸ್ಸುಗಳಿಗೆ ಕೈಮರವಾಗುವ ಸಾಧ್ಯತೆಗಳಿವೆ…ಬನ್ನಿ, ಬೆಳಕು ಹರಡಿ…
ಇದು ದೀಪದ ದಾರಿ…

‘ಮುದ್ರಾರ್ಣವ’ದ ಮೋಹಕ ಮೇಘಮಲ್ಹಾರ… : ಅನಾವರಣದಲ್ಲರಳಿದ ಅಲೆಗಳು

Wednesday, February 3rd, 2010
‘ಮುದ್ರಾರ್ಣವ’ದ ಮೋಹಕ ಮೇಘಮಲ್ಹಾರ… : ಅನಾವರಣದಲ್ಲರಳಿದ ಅಲೆಗಳು

ನೂಪುರದ ಬಳಗಕ್ಕೆ ಅಂದು ಕಣ್ತುಂಬಿಕೊಳ್ಳುವ ಹಬ್ಬ. ಇನ್ನೇನು ವಾರ್ಷಿಕ ಸಂಭ್ರಮಕ್ಕೆ ಎರಡು ತಿಂಗಳಿರುವಾಗಲೇ, ಮೂರನೇ ವರ್ಷಾಂತ್ಯವಾಗುವುದರೊಳಗೆ ಸಂತಸದ ಸಂದರ್ಭಗಳಿಗೆ ಮುನ್ಸೂಚನೆಯೇನೋ ಎಂಬಂತೆ ವಿದ್ವತ್ಪೂರ್ಣ ಕ್ಷಣಗಳನ್ನು ಬರಮಾಡಿಕೊಂಡ ಸಾಂಗತ್ಯ. ನವೆಂಬರ್ ೨೨. ಸಂಜೆ ೪.೩೦. ವಿಮರ್ಶಕ, ಲೇಖಕ ವಿ.ಬಿ. ಅರ್ತಿಕಜೆ, ಹಾಸ್ಯ ಸಾಹಿತಿ ಕು.ಗೋ, ನಾಟ್ಯಾಚಾರ್ಯರುಗಳಾದ ಕಮಲಾಕ್ಷಾಚಾರ್, ದೀಪಕ್ ಕುಮಾರ್, ಉಜಿರೆ ಕಾಲೇಜಿನ ಕಲಾಸಕ್ತ ಉಪನ್ಯಾಸಕರು, ಕಲಾರಸಿಕ ವಿದ್ಯಾರ್ಥಿಗಳು, ಊರಿನ ಹೆಮ್ಮೆಯ ನಾಗರಿಕರು ಮುಂತಾಗಿ; ಕೆಲವೇ ಕ್ಷಣಗಳ ಅವಧಿಯಲ್ಲಿ ಉಜಿರೆಯ ಶ್ರೀ [...]

ಭಾಮಿನಿ- ಅಷ್ಟ ನಾಯಕಿಯರ ಚಿತ್ತವೃತ್ತಿಗಳ ಸಮರ್ಥ ಅಭಿವ್ಯಕ್ತಿ

Saturday, August 15th, 2009
ಭಾಮಿನಿ- ಅಷ್ಟ ನಾಯಕಿಯರ ಚಿತ್ತವೃತ್ತಿಗಳ ಸಮರ್ಥ ಅಭಿವ್ಯಕ್ತಿ

ಯಾವುದೇ ಬಗೆಯ ನೃತ್ಯದಲ್ಲಿ ಭಾವಪ್ರಕಾಶನಕ್ಕೆ ಸಹಕಾರಿಯಾಗಬಲ್ಲ ಅವಸ್ಥೆಗಳೇ ನಾಯಿಕೆ ನಾಯಕ ಭಾವಗಳು. ಇವೊಂದು ರೀತಿಯಲ್ಲಿ ನಾಟ್ಯಕ್ರಮವನ್ನೂ ಒಳಗೊಂಡಂತೆ ಸಾಮಾನ್ಯ ಜನಜೀವನದಲ್ಲೂ ಕಂಡು ಬರುವ ಭಾವಾವಸ್ಥೆಗಳು. ಇವುಗಳ ಆಧಾರದಲ್ಲಿ ಮತ್ತಷ್ಟು ಅವಸ್ಥೆಗಳು ಅಂದರೆ ೩೮೪ಕ್ಕಿಂತಲೂ ಹೆಚ್ಚು ವಿಭಾಗಗಳಿವೆ. ಮಾತ್ರವಲ್ಲ ಪ್ರತೀ ಅವಸ್ಥೆಗಳಿಗೂ ವಿಭಿನ್ನ ರೀತಿಯ ಭಾವೋತ್ಪತ್ತಿಗೆ ಕಾರಣವಾಗುವ ವಿಭಾವಗಳೂ, ಅದರಿಂದುಟಾಗುವ ಪರಿಣಾಮಗಳೆಂಬ ಅನುಭಾವಗಳೂ ಇವೆ.

ಇಂತಹ ನಾಯಿಕೆಯರಲ್ಲಿ ಎಲ್ಲ ಗ್ರಂಥಗಳಿಂದಲೂ, ಪಂಡಿತರಿಂದಲೂ ಅಂಗೀಕರಿಸಲ್ಪಟ್ಟಂತಹ ನಾಯಿಕೆಯರು ಒಟ್ಟು ಎಂಟು :
೧. ಪ್ರೋಷಿತ ಪತಿಕಾ [...]

ಯುವ ಕಲಾವಿದರ ಆಶಾಕಿರಣವಾದ ಯಕ್ಷಗಾನ ಪುನಶ್ಚೇತನಾ ಶಿಬಿರ

Saturday, August 15th, 2009
ಯುವ ಕಲಾವಿದರ ಆಶಾಕಿರಣವಾದ ಯಕ್ಷಗಾನ ಪುನಶ್ಚೇತನಾ ಶಿಬಿರ

ಜೀವನದಲ್ಲಿ ಕೆಲವೊಂದು ಘಟನೆಗಳು, ಕ್ಷಣಗಳು, ವ್ಯಕ್ತಿಗಳನ್ನು ಮರೆಯಲಾಗುವುದಿಲ್ಲ. ಕಾರಣ, ಅವು ಅಷ್ಟು ಪರಿಣಾಮಕಾರಿ. ಇದಕ್ಕೊಂದು ಉತ್ತಮ ಉದಾಹರಣೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಆಯೋಜಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಆಶ್ರಯದಲ್ಲಿ ಸಂಪನ್ನಗೊಂಡ ಯುವ ವೃತ್ತಿಪರ ಯಕ್ಷಗಾನ ಕಲಾವಿದರ ಪುನಶ್ಚೇತನಾ ಶಿಬಿರ.
ಇತ್ತೀಚೆಗೆ ಪ್ರತಿಯೊಬ್ಬರೂ ಬಯಸುತ್ತಿರುವುದು ಪ್ರಸಿದ್ಧಿಯನ್ನು, ಸಿದ್ಧಿಯನ್ನಲ್ಲ. ಅದು ನೃತ್ಯ ಮತ್ತು ಯಕ್ಷಗಾನದಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದರಿಂದ ಕಳೆದ ಜೂನ್ ೭ರಿಂದ ೧೩ ರವರೆಗೆ ೭ ದಿವಸಗಳ ಕಾಲ ಯುವ ವೃತ್ತಿಪರ ಯಕ್ಷಕಲಾವಿದರಿಗೆ ( [...]

ಭರತ -ಭಾವ -ನೃತ್ಯ

Monday, June 8th, 2009

ಮಂಗಳೂರಿನ ಭರತನೃತ್ಯ ಸಭಾ ಏರ್ಪಡಿಸುವ ಪ್ರತಿಭಾನ್ವಿತ ಸ್ಥಳೀಯ ಕಲಾವಿದರ ತಿಂಗಳ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅರ್ಥಾ ಪೆರ್ಲ ಅವರ ಭರತನಾಟ್ಯ ನೃತ್ಯ ಪ್ರದರ್ಶನದಲ್ಲಿ ತಮ್ಮ ತಂದೆ ಡಾ. ವಸಂತಕುಮಾರ್ ಪೆರ್ಲ ಅವರ ‘ಬಾ ಮಗುವೆ ಬಾ ಮಗುವೆ ಜೀವಭಾವದ ನಗುವೆ’ ಎಂಬ ಭಾವಗೀತೆಗೆ ವಿಸ್ತೃತ ಅಭಿನಯ ಮಾಡಿದರು. ಹಿರಿಯ ನೃತ್ಯ ಗುರು ಕೆ.ಮುರಳೀಧರರಾಯರ ಸಂಯೋಜನೆಯಲ್ಲಿ ಮೂಡಿಬಂದ ಈ ನೃತ್ಯಭಾಗವು ಸಂಪ್ರದಾಯದ ಚೌಕಟ್ಟಿನಿಂದ ಹೊರಗೆ ಬಂದು ಭಾವಗೀತೆಯನ್ನು ಭಕ್ತಿಗೀತೆಯಂತೆ ಪ್ರದರ್ಶಿಸಿದ್ದು ಸ್ತುತ್ಯರ್ಹ.
ಇಂತಹ ಪ್ರಯೋಗಗಳು ಈಗಾಗಲೇ ಸಾಕಷ್ಟು ಯಶಸ್ವಿಯಾಗಿದ್ದರೂ ಸಾಂಪ್ರದಾಯಿಕ ನೃತ್ಯ [...]

ಶಾಸ್ತ್ರೀಯ ನೃತ್ಯಗಳ ಆಂಗಿಕಾಭಿನಯ ಪ್ರಾತ್ಯಕ್ಷಿಕೆ : ಯಕ್ಷ ಅನೌಚಿತ್ಯದ ನಡುವೆ ಬೆಳಗಿದ ಕಥಕ್ಕಳಿ

Wednesday, June 3rd, 2009
ಶಾಸ್ತ್ರೀಯ ನೃತ್ಯಗಳ ಆಂಗಿಕಾಭಿನಯ ಪ್ರಾತ್ಯಕ್ಷಿಕೆ : ಯಕ್ಷ ಅನೌಚಿತ್ಯದ ನಡುವೆ ಬೆಳಗಿದ ಕಥಕ್ಕಳಿ

ಆದಿತ್ಯವಾರ ೨೯-೩-೨೦೦೯ ಕಿನ್ನಿಗೋಳಿಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಆಂಗಿಕಾಭಿನಯ ಅವಲೋಕನಕ್ಕೆ ಮೀಸಲಿಟ್ಟಿತ್ತು. ನನಗೆ ಆಮಂತ್ರಣ ಬಂದ ಕೂಡಲೇ ಮೊದಲು ನನ್ನ ಕಣ್ಣೋಡಿದ್ದು ಸಂಪನ್ಮೂಲ ವ್ಯಕ್ತಿ ಅಥವಾ ಸಂಸ್ಥೆ ಮತ್ತು ಪ್ರಾತ್ಯಕ್ಷಿಕೆಗಳ ವಿವರಗಳತ್ತ. ಎಲ್ಲಾ ಅನುದಾನಿತ ಸಂಸ್ಥೆಗಳು ಮಾಡುವಂತೆ ಇಲ್ಲೂ ಮುಖ್ಯ ಕೆಲಸವನ್ನು `ಉಳಿದ ಸಮಯಕ್ಕೆ ಸಂಕೋಚಗೊಳ್ಳುವಂತೆ’ ಭರ್ಜರಿ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳು ಕಾಣುತ್ತಿತ್ತು; ಬೆಳಿಗ್ಗೆ ಒಂಬತ್ತರಿಂದ ಹತ್ತು (ನಿಜದಲ್ಲಿ ನಡೆದಷ್ಟು ಹೊತ್ತು) ಮತ್ತು ಸಂಜೆ ನಾಲ್ಕರಿಂದ ಐದು (ಕೂತವನ ತಾಳ್ಮೆ ಖೈದು). ಎಡೆಯಲ್ಲಿ ಊಟದ ಬಿಡುವಿನೊಡನೆ [...]

ನಟನ ಮತ್ತು ರಂಗಮನೆ

Wednesday, April 15th, 2009
ನಟನ ಮತ್ತು ರಂಗಮನೆ

ಚಲನಚಿತ್ರ ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ಮೈಸೂರಿನ ‘ನಟನ’ ಸಂಸ್ಥೆ ರಂಗಭೂಮಿಗೆ ಸಂಬಂಧಪಟ್ಟಂತೆ ಸದಾ ಕ್ರಿಯಾಶೀಲವಾಗಿ,  ವರ್ಷದುದ್ದಕ್ಕೂ ಜೀವಂತಿಕೆಯಿಂದ ತುಡಿಯುತ್ತಲಿದೆ. ನಾಟಕಗಳಷ್ಟೆ ಅಲ್ಲದೆ ರಂಗಭೂಮಿಯ ವಿವಿಧ ಮಜಲುಗಳನ್ನು ಏರುತ್ತಿರುವ ನಟನ ಮಕ್ಕಳ ರಂಗಭೂಮಿಗೂ ಜೀವ ತುಂಬುತ್ತಾ ಆಗಾಗ ಕಾರ್ಯಾಗಾರ, ಶಿಬಿರ, ಕಮ್ಮಟಗಳನ್ನು, ಸಿನಿಮಾ ರಸಗ್ರಹಣ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಸದಭಿರುಚಿಯ ವಿಚಾರಗಳಿಗೆ ವೇದಿಕೆಯಾಗುತ್ತಿದೆ. ಅವರ ಕುರಿತ ಹೆಚ್ಚಿನ ಮಾಹಿತಿಗೆ www.natana.org ನ್ನು ಸಂಪರ್ಕಿಸಬಹುದು.
ಅಂತೆಯೇ ದಕ್ಷಿಣಕನ್ನಡದ ಸುಳ್ಯ ತಾಲೂಕಿನ ‘ರಂಗಮನೆ -ಸಾಂಸ್ಕೃತಿಕ ಕಲಾಕೇಂದ್ರ’ವೂ ಕೂಡಾ ! [...]

ಅಲರಿಪುವಿನ ಹೊಸ ಸಾಧ್ಯತೆ

Sunday, February 15th, 2009

ಭರತನಾಟ್ಯ ಪ್ರದರ್ಶನಗಳಲ್ಲಿ ಸಾಮಾನ್ಯವಾಗಿ ಪ್ರೇಕ್ಷಕರು ಇಷ್ಟಪಡುವುದು ಅಭಿನಯ, ಭಾವ ಪೂರಿತ ನೃತ್ಯಭಾಗಗಳನ್ನೇ! ಏಕೆಂದರೆ ಅದನ್ನು ಅರ್ಥ ಮಾಡಿಕೊಳಲು, ಅನುಭವಿಸಲು ಸುಲಭ. ಅದೇ ನೃತ್ತ ಭಾಗಗಳಾದರೆ ಅದರ ತಾಳ, ಜತಿ, ಬಹಳಷ್ಟು ಸಲ ಕಲಾವಿದರಿಂದಾಗುವ ಲೋಪ, ಪೇಲವ ಅಡವು ಸಂಯೋಜನೆ, ಅಚ್ಚುಕಟ್ಟುತನ ಇಲ್ಲದಿರು ವಿಕೆ ಸಭಿಕರನ್ನು ಆಕರ್ಷಿಸು ವಲ್ಲಿ ವಿಫಲವಾಗುವುದು ಸತ್ಯ. ಹಾಗಾಗಿ ನೃತ್ತ ಒಂದು ಸವಾಲು. ಆದರೆ ನೃತ್ತ ಆಕರ್ಷಕ ವಲ್ಲ ಎಂಬ ಭಾವ ಬೆಳೆಯುವಲ್ಲಿ ಕಲಾವಿದರ ಪಾತ್ರವೂ ದೊಡ್ಡದಿದೆ.
‘ಪ್ರೇಕ್ಷಕರು [...]

ನೃತ್ಯ ರೂಪಕಗಳ ರಂಗ ಸಾಧ್ಯತೆಗಳಿಗೆ ಕನ್ನಡಿ : ‘ಅಂಬೆ’

Sunday, February 15th, 2009
ನೃತ್ಯ ರೂಪಕಗಳ ರಂಗ ಸಾಧ್ಯತೆಗಳಿಗೆ ಕನ್ನಡಿ : ‘ಅಂಬೆ’

ಪಾಂಚಾಲೀ, ಉಪನಿಷದುದ್ಯಾನಂ ಎಂಬ ಸಾರ್ಥಕ ರಂಗಪ್ರಯೋಗಗಳ ಹುಟ್ಟಿಗೆ ಕಾರಣರಾದ ಉಡುಪಿಯ ಉದ್ಯಾವರ ಮಾಧವ ಆಚಾರ್ಯ ಅವರ ಮತ್ತೊಂದು ಕಾವ್ಯ ಕನ್ನಿಕೆಗೆ ಜೀವ ಬಂದಿದೆ. ಡಾ| ವಸುಂಧರಾ ದೊರೈಸ್ವಾಮಿಯವರಂತಹ ಕಲಾವಿದೆಯ ಅಭಿವ್ಯಕ್ತಿಯಲ್ಲಿ ಅದು ಮತ್ತಷ್ಟು ಮೂರ್ತ ರೂಪ ತಳೆದಿದೆ. ಅದೇ ‘ಅಂಬೆ’.
ಮಹಾಭಾರತದ ಆದಿಯಲ್ಲಿ ಕಾಣಸಿಗುವ ಕಥೆಯೊಂದನ್ನು ತುಸು ತಾತ್ವಿಕ ನೋಟದಿಂದ ಪ್ರತಿಭಟನೆಯ ಸ್ತ್ರೀ ಧ್ವನಿಯಾಗಿ ರೂಪಿಸಿರುವ ಶ್ರಮ ಶ್ಲಾಘನೀಯ. ವ್ಯಾಸರ ಮಹಾಭಾರತದಲ್ಲಿ ಸಂದರ್ಭದ ಕೈಯೊಳಗಿನ ಪಾಶಕ್ಕೆ ನಲುಗುವ ಹೆಣ್ಣಾಗಿ ಅಂಬೆ ಚಿತ್ರಿತವಾದರೂ, ಸಮಕಾಲೀನ ವ್ಯವಸ್ಥೆಯನ್ನು ಧ್ವನಿಸುವಂತೆ ಮಾಡಲು [...]

ಯಕ್ಷಗಾನ ಶಿಕ್ಷಣ ಮತ್ತು ಶಿಕ್ಷಣದಲ್ಲಿ ಯಕ್ಷಗಾನ

Sunday, February 15th, 2009

ನೂತನವಾಗಿ ರಚನೆಗೊಂಡಿರುವ ಕರ್ನಾಟಕ ಯಕ್ಷಗಾನ ಅಕಾಡೆಮಿ ಇದೀಗ ತನ್ನ ಕಾರ್ಯ ಚಟುವಟಿಕೆಗಳನ್ನು ಆರಂಭಿಸುತ್ತಿದೆ. ಅಕಾಡೆಮಿಯ ವತಿಯಿಂದ ಮೊದಲ ಕಾರ್ಯಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆ.ವಿ.ಜಿ.ಪುರಭವನದಲ್ಲಿ ಶಿಕ್ಷಕರ ಯಕ್ಷಗಾನ ಒಕ್ಕೂಟದ ಸಹಭಾಗಿತ್ವ ದಲ್ಲಿ ಎರಡು ದಿನಗಳ ಯಕ್ಷ ನಡಿಗೆ ಚಾಲನೆ ಮತ್ತು ಯಕ್ಷಶಿಕ್ಷಣ ಕಾರ್ಯಾಗಾರ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಜನವರಿ ೩೧ ಮತ್ತು ಫೆಬ್ರವರಿ ೦೧ರಂದು ಜರುಗಿದ ಅದ್ಧೂರಿ ಕಾರ್ಯಕ್ರಮದ ಮುಖ್ಯವಸ್ತುವೇ ರಾಜ್ಯದ ಆಯ್ದ ಸುಮಾರು ೬೦ ಯಕ್ಷಶಿಕ್ಷಣ ತಜ್ಞರಿಂದ ‘ಶಿಕ್ಷಣದಲ್ಲಿ ಯಕ್ಷಗಾನ ಮತ್ತು ಯಕ್ಷಗಾನ ಶಿಕ್ಷಣ’ ಎಂಬ [...]

ಯಕ್ಷಗಾನದಲ್ಲೀಗ ಸ್ತ್ರೀಯರ ಬಳೆಗಳ ಸದ್ದು..!

Sunday, February 15th, 2009
ಯಕ್ಷಗಾನದಲ್ಲೀಗ ಸ್ತ್ರೀಯರ ಬಳೆಗಳ ಸದ್ದು..!

ಗಂಡು ಕಲೆಯೆಂಬ ಅನ್ವರ್ಥನಾಮಕ್ಕೆ ಪೂರಕವಾಗಿ ಹಿಂದಿನಿಂದಲೂ ಯಕ್ಷಗಾನದಲ್ಲಿ ಪುರುಷರಿಗೇ ಪ್ರಾತಿನಿಧ್ಯ. ಕಲೆಯು ಸ್ತ್ರೀಯರನ್ನು ದೂರವಿಟ್ಟಿಲ್ಲವಾದರೂ ನಾನಾ ಕಾರಣಗಳಿಂದ, ಸಮಸ್ಯೆಗಳಿಂದ ಅವರು ಹಿಂದೆ ಇದ್ದದೇ ಹೆಚ್ಚು. ಮೇಳಗಳ ರಾತ್ರಿ-ಹಗಲೆನ್ನದ ತಿರುಗಾಟ, ವೇಷಭೂಷಣ ತೊಡುವುದರಲಿ, ವಾಚಿಕಾಭಿನಯದಲ್ಲಿ ಬೇಕಾಗುವ ಗಡಸುತನ, ಗಟ್ಟಿತನ, ಸ್ತ್ರೀಯರ ಮನೋ-ದೈಹಿಕ ವ್ಯತ್ಯಾಸಗಳು.., ಹೀಗೆ ಪುರುಷರು ಅನಿವಾರ್ಯವೆಂಬಂತೆ ಯಕ್ಷಗಾನದ ಭಾಗವೇ ಆಗಿಹೋಗಿದ್ದಾರೆ.
ಆದರೆ ಬದಲಾದ ಕಾಲಘಟ್ಟಕ್ಕೆ ಸ್ತ್ರೀಯರ ಭಾಗವಹಿಸುವಿಕೆ ಹೆಚ್ಚಾಗಿ ಇತ್ತೀಚಿನ ದಶಕಗಳಲ್ಲಿ ಸಮಯ ಮಿತಿಯಲ್ಲಿ ಪ್ರದರ್ಶನ ನೀಡುವ ಹಲವು ತಂಡಗಳು, ಕಲಾವಿದರ ಬಳಗಗಳು ಹುಟ್ಟಿಕೊಂಡಿವೆ. ಶ್ರೀಮತಿ ವಿದ್ಯಾ ಕೋಳ್ಯೂರಿನಂತವರು [...]