ಅಂಕಣಗಳು

ನೂಪುರ ಪತ್ರಿಕೆ

ಐದನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ  ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ ೨೦೧೧)

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಪ್ರತೀ ಸಂಚಿಕೆಗಳಲ್ಲಿ ಸಾಹಿತ್ಯವನ್ನೂ ಸಮೀಕರಿಸಿದ, ನರ್ತನದ ವೈಶಾಲ್ಯ ಸಾರುವ ಕವನಗಳ ಪುಟ್ಟ ಪುಟ್ಟ ಸಾಲುಗಳನ್ನು ನೀವು ಓದುತ್ತಲೇ ಇದ್ದೀರಿ, ಮೆಚ್ಚಿದ್ದೀರಿ. ಈ ಮೂಲಕವಾಗಿ ಸಾಹಿತ್ಯದ ವಿಭಿನ್ನ ಅಂಗಳದಲ್ಲೂ ನರ್ತನ ರಂಗವನ್ನೂ ದರ್ಶಿಸುವ, ಪರಿಭ್ರಮಣೆ ಮಾಡುವ ಇಚ್ಛೆ ನಮ್ಮದು.

ನೃತ್ಯ – ನಾಟ್ಯ – ಕುಣಿತ… ಹೀಗೆ ನರ್ತನ ಜಗತ್ತಿನ ವೈಭವ ಸಾರುವ ಅಥವಾ ನರ್ತನವನ್ನು ಆಧಾರವಾಗಿರಿಸಿ ರಚಿಸಿದ ಭಾವ-ಅನುಭವ-ಅನುಭಾವಗಳ ಲಹರಿಯಿದು. ತಡವೇಕೆ? ನಿಮ್ಮ ಸಂಗ್ರಹದಲ್ಲಿರುವ ನರ್ತನದ ಕುರಿತಾಗಿನ ಚೆಂದನೆಯ ಸಾಲುಗಳನ್ನು ಲಲಿತ ಲಹರಿಗೆ ಬರೆದು ಕಳಿಸಿ. ನಿಮ್ಮದೇ ಸಾಲುಗಳಾದರೆ ಮತ್ತಷ್ಟು ಸಂತೋಷ. ಲಲಿತ ಲಹರಿ ನಮ್ಮಲ್ಲಡಗಿದ ಭಾವ ಭಿತ್ತಿ.. ಕಾವ್ಯ ಗುಚ್ಛ..

ಖಂಡಿತಾ ನಾಯಿಕೆ

Thursday, December 15th, 2011

(ಕಳೆದ ಸಂಚಿಕೆಯಿಂದ ಮುಂದುವರೆದುದು…)
ಕಾಯುತ್ತಾ ಕಂಗೆಟ್ಟ ನಾಯಕಿಯ ಮನಸ್ಸು ಹದಗೆಡುತ್ತಿರುವಾಗ ಬರುವ ನಾಯಕನನ್ನು ಕಂಡು ಆತನು ಅನ್ಯಾಸಕ್ತನೆಂದು ಆರೋಪಿಸಿಯೋ, ಅನುಮಾನಿಸಿಯೋ; ಇಲ್ಲವೇ ಆತನು ಮತ್ತೋರ್ವ ಸ್ತ್ರೀಯೊಡನೆ ಇರುವುದನ್ನು ತಿಳಿದೋ ತೀವ್ರವಾಗಿ ಆಘಾತಗೊಂಡು ಖಂಡಿಸುವ ನಾಯಿಕೆ ಖಂಡಿತೆ. ನಾಯಕನಲ್ಲಿರುವ ನಿರುತ್ಸಾಹ, ಖಿನ್ನತೆ, ನಿದ್ರೆ, ಆಲಸ್ಯ, ಇನ್ನೊಬ್ಬಳೊಡನೆ ಇಲ್ಲವೇ ಸವತಿಯ ಜೊತೆ ಸರಸವಾಗಿ ವರ್ತಿಸಿದ ಕುರುಹುಗಳು, ಅಂಗವಿಕಾರ, ಪರಸ್ತ್ರೀಯನ್ನು ಅತಿಯಾಗಿ ಓಲೈಕೆ ಮಾಡುತ್ತಿರುವುದೋ ಕಂಡು ವಂಚಕನೆಂದು ಕುದಿದು ಮನಸ್ಸು ಕೆಡಿಸಿಕೊಂಡು ಸಂಘರ್ಷಕ್ಕಿಳಿಯುತ್ತಾಳೆ. ತನ್ನ ಸ್ವಭಾವಕ್ಕೆ ಸಹಕರಿಸದಂತಿರುವ ಆತನ ವಿಪರೀತ ಸ್ವಭಾವಕ್ಕೆ ಜಗಳಕ್ಕಿಳಿಯುತ್ತಾಳೆ; [...]

ಅಷ್ಟನಾಯಿಕಾ ಚಿತ್ತವೃತ್ತಿ : ವಿರಹೋತ್ಕಂಠಿತೆ

Saturday, October 15th, 2011

(ಕಳೆದ ಸಂಚಿಕೆಯಿಂದ ಮುಂದುವರೆದುದು…)
ದೀರ್ಘ ಕಾಯುವಿಕೆಯಿಂದಾಗಿ ಅಥವಾ ಪ್ರಿಯಕರನಿಂದ ಬೇರಾಗಿ ಇಲ್ಲವೇ ಆತನ ಅನೈಚ್ಛಿಕ-ಆಕಸ್ಮಿಕ ಅನಾಗಮನದಿಂದ ವಿರಹವೇದನೆಯಲ್ಲಿ ಇರುವವಳು. ಈಕೆಗೆ ಉತ್ಕಾ, ಉತ್ಕಂಠಿತಾ ಎಂಬ ಹೆಸರುಗಳೂ ಇವೆ. ಮಿತ್ರರ ಮಾತುಗಳು, ವ್ರತದ ದಿನ, ಮನಸ್ತ್ತಾಪ, ಸವತಿಯರ ತಂತ್ರ, ನೆರೆ ಮುಂತಾದ ವಿಕಲ್ಪ, ಕತ್ತಲೆ, ದಾರಿ ತಪ್ಪುವುದು, ಪಾತಿವ್ರತ್ಯದ ಪರೀಕ್ಷೆ, ಮಿತ್ರಾಗಮನ, ಬೇರೆ ಸುಂದರಿಯ ಸಹವಾಸ, ಅನುಮಾನ ಹೀಗೆ ಹತ್ತು ಹಲವು ಕಾರಣಗಳು, ಅವಸ್ಥೆಗಳು ವಿರಹೋತ್ಕಂಠಿತೆಯನ್ನಾಗಿಸುತ್ತವೆ. ಈಕೆ ಸಂತಾಪ, ದೇಹಕ್ಷೀಣ, ನಿಡುಸುಯ್ಲು, ನಿರುತ್ಸಾಹ, ಕಣ್ಣೀರು, ವ್ಯಥೆ, ಚಿಂತೆ, ಬೇಸರ, ನಡುಗುವಿಕೆ, [...]

ಅಷ್ಟನಾಯಿಕಾ ಚಿತ್ತವೃತ್ತಿ : ವಿಪ್ರಲಬ್ಧಾ ನಾಯಿಕೆ

Monday, August 15th, 2011

(ಕಳೆದ ಸಂಚಿಕೆಯಿಂದ ಮುಂದುವರೆದುದು…)
ದೂರಸ್ಥಳಕ್ಕೆ ಹೋದ ನಾಯಕನಿಗಾಗಿ ಕಾಯುತ್ತಾ ಪ್ರೋಷಿತಪತಿಕೆಯಾದ ನಾಯಿಕೆ, ಆತನು ಬರುವ ಸೂಚನೆ ದೊರೆತ ಕೂಡಲೇ ಸರ್ವಾಲಂಕಾರಭೂಷಿತೆಯಾಗುತ್ತಾ ವಾಸಕಸಜ್ಜೆಯಾಗುವಳು. ಆತನ ಆಗಮನ ತಡವಾದಷ್ಟೂ ನಿರೀಕ್ಷೆ ಉಲ್ಬಣಿಸಿ ಆತನು ಬರುವ ಸಂಕೇತಸ್ಥಳಕ್ಕೆ ತಾನೇ ತೆರಳಿ ಅಭಿಸಾರಿಕೆಯಾಗುವಳು. ಆದರೆ ನಾಯಕನು ನಾಯಕಿಗೆ ನೀಡಿದ ವಾಗ್ಧಾನದಂತೆ ಸಂಕೇತಸ್ಥಳಕ್ಕೆ ಬರದೆ ಕಾಯಿಸುವುದರಿಂದಾಗಿ ಆಕೆಗೆ ತಾನು ವಂಚಿತೆಯೆಂಬಂತಾಗಿ ಕ್ರೋಧಿತಳಾಗುತ್ತಾಳೆ. ಬೇಸರ, ದುಃಖ, ಅವಮಾನ, ರೋಧನೆ, ವ್ಯಥೆ, ನಿಟ್ಟುಸಿರು, ನಿರಾಶೆ, ಬಳಲಿಕೆ, ಕಣ್ಣೀರು, ಆತಂಕ, ವಿನಾಕಾರಣ ಭೀತಿ-ಯೋಚನೆ, ಖಿನ್ನತೆ, ಅಸಮಾಧಾನ ಆಕೆಯನ್ನು ಆವರಿಸುತ್ತದೆ. ಈಕೆಯೇ [...]

ಅಷ್ಟನಾಯಿಕಾ ಚಿತ್ತವೃತ್ತಿ : ಅಭಿಸಾರಿಕಾ ನಾಯಿಕೆ

Wednesday, June 15th, 2011

(ಕಳೆದ ಸಂಚಿಕೆಯಿಂದ ಮುಂದುವರೆದುದು…)
ಪ್ರಿಯನ ಸಂದೇಶವನ್ನನುಸರಿಸಿ ಅರಸುತ್ತಾ ಇಲ್ಲವೇ ಪ್ರೇಮ-ಕಾಮಪೀಡಿತಳಾಗಿ ತನ್ನ ಇನಿಯನನ್ನು ತಾನಾಗಿ ಹುಡುಕಿಕೊಂಡು ಹೋಗುವವಳು ಅಥವಾ ತನ್ನ ಪ್ರಿಯನನ್ನು ಸಖಿಯರ ಕಡೆಯಿಂದ ಕರೆಸಿಕೊಳ್ಳುವವಳು ಅಭಿಸಾರಿಕೆ. ಈಕೆಯ ಅಭಿಸರಣದ ಸ್ಥಾನಗಳು : ಸಸ್ಯಸಂಪತ್ತಿನ ಭೂಮಿ, ನಿರ್ಜನ ಪ್ರದೇಶ, ಜೀರ್ಣಾವಸ್ಥೆಯ ದೇವಾಲಯ, ದೂತಿಯ ಮನೆ, ಅರಣ್ಯ, ನದೀ ತಟಾಕ, ಉಪವನ, ಉದ್ಯಾನ, ಸ್ಮಶಾನ, ಸಮುದ್ರತೀರ, ಸೇತುವೆ ಇತ್ಯಾದಿ. ಭಾನುದತ್ತನು ತನ್ನ ಗ್ರಂಥ ರಸಮಂಜರಿಂiiಲ್ಲಿ ಅಭಿಸಾರಿಕೆಯನ್ನು ಮೂರು ವಿಧವಾಗಿ ವಿಂಗಡಿಸಿದ್ದಾನೆ.
೧. ದಿವಸಾಭಿಸಾರಿಕಾ : ಹಾಡುಹಗಲಿನಲ್ಲಿ ನಲ್ಲನೆಡೆಗೆ ಸಾಗುವವಳು.
೨. ಜೋತ್ಸ್ನಾಭಿಸಾರಿಕಾ : [...]

ಅಷ್ಟನಾಯಿಕಾ ಚಿತ್ತವೃತ್ತಿ : ವಾಸಕಸಜ್ಜಿಕಾ ನಾಯಿಕೆ

Friday, April 15th, 2011

(ಕಳೆದ ಸಂಚಿಕೆಯಿಂದ ಮುಂದುವರೆದುದು…)

ತನ್ನನ್ನು ಮತ್ತು ತನ್ನ ಕೋಣೆಯನ್ನು ಆಸ್ಥೆಯಿಂದ ಸಿಂಗರಿಸಿಕೊಂಡು ಪ್ರಿಯಕರ/ನಾಯಕನ ಬರುವಿಕೆಗಾಗಿ ನಿರೀಕ್ಷೆ ಹೊಂದಿ ಸಿದ್ಧವಾಗಿರುವವಳೇ ವಾಸಕಸಜ್ಜಿಕೆ. ನಾಯಕನೊಂದಿಗೆ ಸಂಗಸುಖದ ಕನಸು ಕಾಣುತ್ತಾ, ಭವಿಷ್ಯವನ್ನು ನೆನೆದು ಸಂತಸ ಹೊಂದುವವಳು; ಆಗಾಗ್ಗೆ ನಾಯಕನ ದಾರಿ ನೋಡುತ್ತಾ ಊಟೋಪಚಾರದ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡು ತನ್ನ ನಿರೀಕ್ಷೆಯನ್ನು ಹಲವು ಮಾದರಿಗಳಲ್ಲಿ ವ್ಯಕ್ತಪಡಿಸುತ್ತಾಳೆ. ಸಖಿಯರೊಡನೆ ಆತನ ಬರುವಿಕೆಯ ಕುರಿತಂತೆ ಕೇಳುತ್ತಾ, ಆತನ ಬಗ್ಗೆಯೇ ಪ್ರಿಯ ಮಾತನ್ನಾಡುವವಳಾದ ಈಕೆ ; ಉತ್ಸಾಹಿತಳಾಗಿರುತ್ತಾಳೆ.
ಈ ನಾಯಿಕೆಯಲ್ಲೂ ಉತ್ತಮ, ಮಧ್ಯಮ, ಅಧಮ ಅಥವಾ ಸ್ವೀಯಾ, ಪರಕೀಯ, ಸಾಮಾನ್ಯವೆಂಬ [...]

ಅಷ್ಟನಾಯಿಕಾ ಚಿತ್ತವೃತ್ತಿ ಪ್ರೋಷಿತ ಪತಿಕಾ(ಭರ್ತೃಕಾ)

Tuesday, February 15th, 2011

ಪ್ರೋಷಿತ ಪತಿಕಾ(ಭರ್ತೃಕಾ)

(ಕಳೆದ ಸಂಚಿಕೆಯಿಂದ ಮುಂದುವರೆದುದು…)
ಅಷ್ಟವಿಧ ನಾಯಿಕೆಯರ ಪೈಕಿ ಸ್ಥಿತಿ-ಸಂದರ್ಭಾನುಸಾರ ವರ್ಗೀಕರಿಸಿದರೆ ಮೊದಲನೆಯವಳೇ- ಪ್ರೋಷಿತ ಪತಿಕಾ. ತನ್ನ ಪತಿ ಅಥವಾ ಪ್ರಿಯನು ಕಾರ್ಯಾರ್ಥವಾಗಿ ದೂರದೂರಿಗೆ ಹೋಗಿರುವಾಗ ಅಥವಾ ದೂರದೇಶಕ್ಕೆ ಪ್ರಯಾಣಸನ್ನದ್ಧವಾಗಿರುವಾಗ ಅವನ ವಿಯೋಗಕ್ಕಾಗಿ ವ್ಯಥೆಪಡುವವಳು. ಪ್ರಿಯನ ಹಾದಿ ಕಾಯುತ್ತಾ ಕುಳಿತುಕೊಳ್ಳುವುದು, ಎಂದಿಗೆ ಬರುವನು ಎಂಬ ನಿರೀಕ್ಷೆಯಲ್ಲಿ ದಿನಗಣನೆ, ಶಕುನ ನೋಡುವುದು, ಆತನ ಕಷ್ಟ-ಇಷ್ಟಗಳ ಬಗೆಗೆ ಯೋಚನೆಗಳು, ನಿದ್ರೆ ಇಲ್ಲದಿರುವುದು, ದುಃಸ್ವಪ್ನಗಳು, ಅನಾಸಕ್ತಿ, ನಿಂತ ಕಡೆ ನಿಲ್ಲದಿರುವುದು, ಏನೂ ತೋಚದಂತಾಗಿರುವುದು, ದಿನ ಮುಗಿದು ಕತ್ತಲಾವರಿಸಿದಾಗ ಭಾರವಾದ ಹೆಜ್ಜೆಯಿಂದ ತನ [...]

ಅಷ್ಟನಾಯಿಕೆಯರ ಚಿತ್ತವೃತ್ತಿ-ಭಾಗ ೧

Tuesday, December 14th, 2010

ಲಲಿತಲಹರಿಯ ಮೂಲಕ ಮನೋಜ್ಞವಾದ, ಅಪೂರ್ವವೆನಿಸುವ ನೃತ್ಯಸಂಬಂಧೀ ಕನ್ನಡ ಭಾಷಾ ರಚನೆಗಳನ್ನು ಹಲವು ಸಂಚಿಕೆಗಳಿಂದ ಓದಿಕೊಂಡು ಬಂದಿದ್ದೀರಿ. ಈಗ ಅವೆಲ್ಲದಕ್ಕೂ ಕಳಶಪ್ರಾಯವಾಗಿ ನೃತ್ಯ-ನಾಟ್ಯಾದಿ ವರ್ಗಗಳಲ್ಲಿ ಸಾರ್ವಕಾಲೀನವೆನಿಸುವ, ಅಭಿವ್ಯಕ್ತಿಗೆ ಸವಾಲು ಮತ್ತು ಸಾಧನವೆನಿಸುವ ಅಷ್ಟನಾಯಿಕೆಯರ ಚಿತ್ತವೃತ್ತಿಗಳನ್ನು ಬಗೆಬಗೆಯಾಗಿ ಹರಡಿ ಅದರ ಅಂದಚೆಂದಗಳನ್ನು ಕಾಣಿಸುವ ಪ್ರಯತ್ನ ಈ ಸಂಚಿಕೆಯಿಂದ ಪ್ರಾರಂಭಗೊಳ್ಳಲಿದೆ. ಆ ಮೂಲಕವಾಗಿ ನಾಟ್ಯಾಭಿವ್ಯಕ್ತಿಗೆ ಕಲಾವಿದರಿಗೆ ಪ್ರೇರಣೆ ಮತ್ತು ಪೋಷಣೆಯನ್ನು ನೀಡುವುದರೊಂದಿಗೆ ಓದುಗರ ನಡುವೆ ಸಂವಾದ, ಅರಿವಿನ ಹರಿವಿಗೆ ಮತ್ತಷ್ಟು ಅವಕಾಶವಾಗುವುದೆಂಬ ನಂಬುಗೆ ನಮ್ಮದು. ಇದನ್ನು ಸೂಕ್ತವಾಗಿ ಕಂಡುಕೊಂಡಲ್ಲಿ ರಸಿಕವರ್ಗಕ್ಕೆ ರಸದೃಷ್ಟಿ, [...]

ಸೀತೆಯ ಸ್ವಗತ ಅಥವಾ ಮತ್ತೆ ಹುತ್ತಗಟ್ಟಿತೆ ಸೀತೆಯ ಚಿತ್ತ?

Friday, October 15th, 2010
ಸೀತೆಯ ಸ್ವಗತ ಅಥವಾ ಮತ್ತೆ ಹುತ್ತಗಟ್ಟಿತೆ ಸೀತೆಯ ಚಿತ್ತ?

ಪರಿಕಲ್ಪನೆ ಸಾಹಿತ್ಯ: ಪ್ರೊ| ಉದ್ಯಾವರ ಮಾಧವ ಆಚಾರ್ಯ
ಸಂಗೀತ, ನೃತ್ಯಸಂಯೋಜನೆ ಮತ್ತು ಪ್ರಸ್ತುತಿ: ಶ್ರೀಮತಿ ಭ್ರಮರಿ ಶಿವಪ್ರಕಾಶ್, ಯು‌ಎಸ್‌ಎ
ವಾಲ್ಮೀಕಿಯ ಆಶ್ರಮದಲ್ಲಿ ಕುಶ-ಲವರ ಜನ್ಮದ ಪೂರ್ವದಲ್ಲಿ ರಾಮನಾಣತಿಯಂತೆ ತಮ್ಮ ಲಕ್ಷಣ ಕರೆತಂದು ತೊರೆದಾಗ ಕವಿ ಮನಸ್ಸಿನ ಮುನಿ ವಾಲ್ಮೀಕಿಯಿಂದ ಆಶ್ರಯ ಪಡೆದ ಗರ್ಣಿಣಿ ಸೀತೆಯ ಮನದ ಲಹರಿಯನ್ನು ಕಲ್ಪನಾತ್ಮಕವಾಗಿ ಚಿತ್ರಿಸಲಾಗಿದೆ. ಇದೊಂದು ಮೆಲುಕು. ಇದೊಂದು ಸ್ವಗತ. ಅಳಲಿನ ಆಕ್ರಂದನ. ಯಾರು ಸರಿಯೋ, ಯಾರದು ತಪ್ಪೋ ಎಂಬ ತೀರ್ಮಾನವಿಲ್ಲ. [...]

ನಾಟ್ಯ

Sunday, August 15th, 2010

ನಡಿಗೆಯ ಲಯಕೆ
ಬಳುಕುವ ಜೊತೆಗೆ
ಭಾವ ರಾಗಗಳ ಬರವಣಿಗೆ
ಹಾವ ಭಾವಗಳ ನೋಡಿ
ರಸದೂಟ ಕಣ್ಗಳಿಗೆ
ಎಲ್ಲವನೂ ಮರೆತು
ಆಸ್ವಾದಿಸುವ ಘಳಿಗೆ
ಮನಸು ಶರಣಾಗಿದೆ ಕಲೆಗೆ
ಅದರ ಮೋಹ ಪರಿಗೆ
(ಕವಯತ್ರಿ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ, ವಿವೇಕಾನಂದ ಕಾಲೇಜು, ಪುತ್ತೂರು.)

ಆಶಯ

Sunday, August 15th, 2010

ಭಾವದ ಬದುಕಿದು ಭಾವನೆ ತಪ್ಪದು
ಭಕುತಿಯಿರದಿರೆ ಪಾಶ ಸೆಳೆವುದು
ಕಿಂಕಿಣಿ ಘಲಿರೊಂದೂ ಕೇಳದ
ಮಿಡಿತವಿರದ ಯಂತ್ರವಾದೊಡೆ
ಸಿಗುವ ಸುಖವೇನು ನಿರತದಿ?
ಹೆಜ್ಜೆಗೆಜ್ಜೆಯ ಲಾಸ್ಯ ಮೆರೆಯಲಿ
ಎನಿತೊ ಸಂಭ್ರಮ ನಾಟ್ಯವಾಡಲಿ
ಢಮರು ನಾದಕೆ ನರ್ತಿಸಲಿ ಮನ ತಾಂಡವವಾಡಲಿ
ಪ್ರಳಯವಾಗಲಿ, ಕೊಚ್ಚಿಹೋಗಲಿ ಕಿಲ್ಬಿಷದ ಕೊಳೆ
ಮತ್ತೆ ಹುಟ್ಟಲಿ ಕ್ಷೀರಸಾಗರದಲ್ಲಿ ಅಮೃತವು
ಜಗದ ಮುಪ್ಪಿದು ಕವಿತೆ ಹುಟ್ಟಲಿ
ಕಾಲ ಬೆಳೆವನು ಭ್ರಮೆಯ ಕಳೆವನು
ಬದುಕ ಅರಳಿಸೊ ಶಕ್ತಿ ಅಕ್ಷರವೆಂಬ ಕುಸುಮ
ನಿವೇದನೆಯ ಜೊತೆ ಪುಷ್ಪಜಾತ್ರೆಗೆ ಸಿದ್ಧರಾಗೋಣ
ಮನಸು ಮಜ್ಜನ
ಮಾಡಿ ಪುಳಕಿತ
ಭಾಷೆಯಮ್ಮನ
ಒಲವನೂಟದಿ
ಹೊಸತು ಬೆಳಗಿದು
ಹಸಿರೋ ಹಸಿರು.
( [...]