ಅಂಕಣಗಳು

ನೂಪುರ ಪತ್ರಿಕೆ

‘ಮುದ್ರಾರ್ಣವ’ದ ಮೋಹಕ ಮೇಘಮಲ್ಹಾರ… : ಅನಾವರಣದಲ್ಲರಳಿದ ಅಲೆಗಳು

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಪ್ರತೀ ಸಂಚಿಕೆಗಳಲ್ಲಿ ಸಾಹಿತ್ಯವನ್ನೂ ಸಮೀಕರಿಸಿದ, ನರ್ತನದ ವೈಶಾಲ್ಯ ಸಾರುವ ಕವನಗಳ ಪುಟ್ಟ ಪುಟ್ಟ ಸಾಲುಗಳನ್ನು ನೀವು ಓದುತ್ತಲೇ ಇದ್ದೀರಿ, ಮೆಚ್ಚಿದ್ದೀರಿ. ಈ ಮೂಲಕವಾಗಿ ಸಾಹಿತ್ಯದ ವಿಭಿನ್ನ ಅಂಗಳದಲ್ಲೂ ನರ್ತನ ರಂಗವನ್ನೂ ದರ್ಶಿಸುವ, ಪರಿಭ್ರಮಣೆ ಮಾಡುವ ಇಚ್ಛೆ ನಮ್ಮದು.

ನೃತ್ಯ – ನಾಟ್ಯ – ಕುಣಿತ… ಹೀಗೆ ನರ್ತನ ಜಗತ್ತಿನ ವೈಭವ ಸಾರುವ ಅಥವಾ ನರ್ತನವನ್ನು ಆಧಾರವಾಗಿರಿಸಿ ರಚಿಸಿದ ಭಾವ-ಅನುಭವ-ಅನುಭಾವಗಳ ಲಹರಿಯಿದು. ತಡವೇಕೆ? ನಿಮ್ಮ ಸಂಗ್ರಹದಲ್ಲಿರುವ ನರ್ತನದ ಕುರಿತಾಗಿನ ಚೆಂದನೆಯ ಸಾಲುಗಳನ್ನು ಲಲಿತ ಲಹರಿಗೆ ಬರೆದು ಕಳಿಸಿ. ನಿಮ್ಮದೇ ಸಾಲುಗಳಾದರೆ ಮತ್ತಷ್ಟು ಸಂತೋಷ. ಲಲಿತ ಲಹರಿ ನಮ್ಮಲ್ಲಡಗಿದ ಭಾವ ಭಿತ್ತಿ.. ಕಾವ್ಯ ಗುಚ್ಛ..

ಗಿರಿಜಾ ಕಲ್ಯಾಣ- 2

Monday, February 15th, 2010

ಕಳೆದ ಸಂಚಿಕೆಯಿಂದ ಮುಂದುವರಿದ ಭಾಗ ಇಲ್ಲಿದೆ.
ರತಿ-ಪಾರ್ವತಿ : ಪತಿ ವಿರಹಿತ ರತಿ ಗತಿರಹಿತಳು ಸತಿ |
ವ್ಯಥಿತ ಮನೋಗತಿ ನತಮಸ್ತಕ ಸ್ಥಿತಿ |
ಅತಿಗೆಳೆಯದ ಮಿತಿ ಧೃತಿಗೆಟ್ಟಿತು ಮತಿ |
ಶತಸಂಕಟ ತತಿ ಸತತ ಪತಿತ ಗತಿ |
-೪-
ಸುಟು ಹೋದನೆನ್ನ ನಲ್ಲ ದಿಟ್ಟಿಸಿದರೆ ಕಾಣನಲ್ಲ |
ಬಿಟ್ಟ ಬಾಣ ನೆಟ್ಟಿತಲ್ಲ ಕಟ್ಟಿ ಕನಸ ಕೆಟ್ಟೆನಲ್ಲ ||
ರತಿ : ಮುಗುಳಂಬನ ಬೆಂಬಲಿಸಿದೆನೆನ್ನನು ನಂಬಿಸಿ ಕೈ ಬಿಟ್ಟ !
ಅಗಜೆಯ ಹಂಬಲ ಶಂಕರಗಿಲ್ಲವೆ ಅಂಗಜನನು ಸುಟ್ಟ ?
ಪಾರ್ವತಿ : ಅಂಜದಿರಬಲೆಯೆ ನಂಜುಗೊರಳನಾ ಭಸ್ಮವ ಬಳಿದಾತ |
ಅಂಗಜನಂಗವ ಭಂಗಿಸಿ [...]

‘ರಮ್ಯ-ಅಗಮ್ಯ’

Monday, February 15th, 2010

………….
ಇನಿಸು ಉಳಿದು ಇನಿಸು ಬೆಳೆದು
ಅಳಿವುದಿನಿಸು ರೂಪವು
ಸೃಷ್ಟಿಲೀಲೆಗಿದು ಸ್ವಭಾವ
ರೂಪಗಳ ಸ್ವರೂಪವು
ಹುಟ್ಟು ಸಾವು ಎರಡು ಮೆಟ್ಟು
ಜೀವನಟನ ಆಟಕೆ
ಜೀವನವಿದು ನಾಟ್ಯರಂಗ
ಭಾವ ರಸದ ಮಾಟಕೆ……….
– ದ. ರಾ. ಬೇಂದ್ರೆ, (ಅರಳು ಮರುಳು)

ನರ್ತನ

Tuesday, December 15th, 2009

ತನುಮನಗಳ
ಬಳುಕಿನ ಜೊತೆ
ಹಾವಭಾವಗಳ
ಸಮ್ಮಿಲನ

ಗಿರಿಜಾ ಕಲ್ಯಾಣ- ರೂಪಕ :- ದಿವಾಕರ ಹೆಗಡೆ

Tuesday, December 15th, 2009

ಗಿರಿಜಾ ಕಲ್ಯಾಣವೆಂಬ ಪೌರಾಣಿಕ ಕಥಾ ವಸ್ತು ಕಾವ್ಯ-ನಾಟ್ಯ-ನೃತ್ಯ-ಜಾನಪದಾದಿಯಾಗಿ ಹಲವು ಸನ್ನಿವೇಶಗಳಿಗೆ ಅದ್ಭುತವೆನಿಸುವ ವಸ್ತು. ಮತ್ತೊಮ್ಮೆ ಈ ಲಲಿತ ಮನೋಹರವಾದ ಸೊಗದಿಂದೊಡಗೂಡಿದ ‘ಗಿರಿಜಾ ಕಲ್ಯಾಣ’ ವನ್ನು ತಮ್ಮ ಕಾವ್ಯ ಲಹರಿಯಲ್ಲಿ ನಿಮ್ಮ ಮುಂದಿರಿಸಿದ್ದಾರೆ ಧಾರವಾಡದಲ್ಲಿ ಆಕಾಶವಾಣಿ ಮಾಧ್ಯಮದಲ್ಲಿ ವೃತ್ತಿಯಲ್ಲಿರುವ, ಪ್ರವೃತ್ತಿಯಲ್ಲಿ ಕವಿಯೂ, ರೂಪಕ ರಚನೆಯಲ್ಲಿ ಛಂದಸ್ಸು-ಪ್ರಾಸಗಳ ಸಮಯೋಚಿತ ಬಳಕೆಯೊಂದಿಗೆ ಸೃಷ್ಟಿಶೀಲರೆನಿಸಿದ ದಿವಾಕರ ಹೆಗಡೆ.
ಓದಿ ಆನಂದಿಸಿ, ಕೇಳಿ ಖುಷಿಯಾಗಿ, ನಲಿದು ನಾಟ್ಯವಾಡಿ.
(ನೃತ್ಯ-ನಾಟ್ಯಗಳ ಕುರಿತಾಗಿ ಕಾವ್ಯ ಬರೆಯುವ, ಲಹರಿ ನುಡಿಸುವ ಸರ್ವ ಸಹೃದಯರಿಗೂ [...]

ಹಂಬಲ :-ಕಪಿಲಾ ಶ್ರೀಧರ್, ಬೆಂಗಳೂರು.

Saturday, October 17th, 2009

ಹೊಸ ಹಸಿರು ಚಿಗುರೀತು
ಹೊಸ ಕನಸು ಹುಟ್ಟೀತು
ಮತ್ತೆ ಧುಮ್ಮಿಕ್ಕುವ ಜೋಗವಾದೀತು
ಕರುಣೆ ದ್ರವಿಸೀತು
ಎದೆಗೊಲವ ಲಾಘವಗಳೆದುರಿಸುವ
ಚೈತನ್ಯ ತಂದೀತು
ಮತ್ತೆ ನೂಪುರ ಬೆಸೆದು
ಉದುರಿ ನಿಂತಿಹ ಗೆಜ್ಜೆ
ಲಯಬದ್ಧ ನಡಿಗೆಯಲಿ ನಾಟ್ಯವಾದೀತು
……….!
ಬದುಕ ಕಲಿಸೀತು.

ಇಂಗಿತ- ವಸಂತ್ ಪ್ರಕಾಶ್ ಕಕ್ಕೆಪದವು

Saturday, October 17th, 2009

ಹೃದಯದೊಳಗಿನ ಭಾರ ಕಳೆಯಲು
ಓದು ಮೈಗೂಡಿಸುವುದೇ ಸರಿ !
ಎಲ್ಲಿ ಎಂದು ಹುಡುಕುತ್ತಿರಲು
ನಮ್ಮ ಮುಂದಿದೆ ನೂಪುರ ಭ್ರಮರಿ

ಸಹಸ್ರತಂತ್ರೀ ನಿಃಸ್ವನದಂತೆ- ದ.ರಾ.ಬೇಂದ್ರೆ

Saturday, October 17th, 2009

ಏನೋ ತಿಳಿಯದು ! ಆಗಸವೇ ತೂತಾಗಿರಬಹುದೇ ಎಂಬಂತೆ ಎಲ್ಲೆಲ್ಲಿಯೂ ಮಳೆಯ ಅಖಂಡನಾದ ಮೊರೆದಿದೆ. ಕೊಚ್ಚಿಹೋದ ಕಾಲ-ಕಾರಣಗಳಿಗೆ ಸಾಕ್ಷಿಯಾಗಿ ಅದರ ಹನಿಗಳು ಇನ್ನೂ ಜೀವಂತವಿವೆ. ವರ್ಷ ಋತುವಿನ ಹರ್ಷ ಧಾರೆಯ ಬೆನ್ನಿಗೇ ಶರದ್ ಸಂಭ್ರಮಕ್ಕೆ ಅಚ್ಚರಿಯೆಂಬಂತೆ ದೃಷ್ಟಿಬೊಟ್ಟನ್ನಿಟ್ಟಿದೆ. ಈ ಸಂಕ್ರಾಂತಿಕಾಲಕ್ಕೆ ದೃಷ್ಟಿಯನ್ನಿಡೋಣ ; ಒಮ್ಮೆ  ಭವಿಷ್ಯದ ಭರವಸೆ ಮತ್ತು ಆತಂಕಗಳ; ದ.ರಾ.ಬೇಂದ್ರೆಯವರ ‘ಅರಳು ಮರಳು’ ಕವನಸಂಕಲನದಿಂದಾಯ್ದ ‘ಸಹಸ್ರತಂತ್ರೀ ನಿಃಸ್ವನದಂತೆ’ ಓದಿನೊಂದಿಗೆ…!
ಸಹಸ್ರತಂತ್ರೀ ನಿಃಸ್ವನದಂತೆ
ಮಾತರಿಶ್ವನಾ ಘನಮನದಂತೆ
ಗುಡುಗಾಡುತ್ತಿದೆ ಗಗನದ ತುಂಬ
ಪ್ರಣವ ಪ್ರವೀಣನ ನಾದಸ್ತಂಭ.
ಏಕದಿಂದಲೇ ಉದಿಸಿದೆ ಸರ್ವ
ಐಕ್ಯ ಶರಿಸಿಯೇ ಆಳುವನೋರ್ವ
ಆ ಓರ್ವನೊಳೇ ಸರ್ವವು ಸೇರಿ
ಜಯವನು [...]

ಧನ್ಯತೆ

Saturday, August 15th, 2009

ಜಗದಿ ಬೀಸುವ ಗಾಳಿಗೆ
ಮರದೆಲೆಗಳ ನರ್ತನ
ಮನದಿ ಸುಳಿಯುವ ನೋವಿಗೆ
ನೃತ್ಯಕೆ ದಿವ್ಯ ಅರ್ಪಣ

ಆಶಯ

Saturday, August 15th, 2009

ಜೀವನ್ಮುಖಿ ನೂಪುರಕೆ
ಜೀವಧಾತುವು ಒರತೆ- ಹೆಪ್ಪುಕಟ್ಟದ ಒಡಲ ಸ್ತೋತ್ರಸರತಿ
ಸ್ನಿಗ್ಧ ಹಿಮಗಿರಿಯೊಡಲ
ಮಂಜಿನರಮನೆ ಒಳಗೆ-ನೂಪುರದ ಹೆಜ್ಜೆ ಸದ್ದು
ಅಭಿಮಾನ ಮಾತ್ರವೇ ನಮ್ಮೆಲ್ಲರದು..!

ಚುಟುಕು

Wednesday, June 3rd, 2009

ಶಿವನ ತಾಂಡವ ನೃತ್ಯ ಶುರುವಾಗೊ ದಿನವೆಂದು?
ದುಷ್ಟ ನಿಗ್ರಹಗೈವ ಪರ್ವ ದಿನವೆಂದು?
ಸಜ್ಜನರ ಮೊರೆ ಕೇಳಿ ಶಿವನ ತಪ ಮುರಿವಂದು,
ಕಾಯುತಿದೆ ಜಗದೊಡಲು ನಿತ್ಯ ಬೆಂದು