ನಾಟ್ಯ ತಪಸ್ವಿ “ ಕಿಟ್ಟೂ ಸರ್”
Thursday, December 15th, 2011
“ಕಿಟ್ಟೂ ಸರ್” ಎಂದೇ ತಮ್ಮ ಶಿಷ್ಯವೃಂದದಲ್ಲಿ ಪ್ರಸಿದ್ಧರಾಗಿರುವ ಎಮ್. ಆರ್. ಕೃಷ್ಣಮೂರ್ತಿಯವರು ೧೯-೧೨-೧೯೩೬ ರಂದು ಶ್ರೀ ರಾಜಾರಾವ್ ಹಾಗು ಶ್ರೀಮತಿ ಸೇತುಬಾಯಿಯವರ ಪುತ್ರನಾಗಿ ಬೆಂಗಳೂರಿನಲ್ಲಿ ಜನಿಸಿದರು. ಬಾಲ್ಯದಲ್ಲೇ ನಾಟ್ಯಕಲೆಯ ಬಗೆ ಅಪಾರ ಆಸಕ್ತಿ ಮೂಡಿದಾಗ, ಭರತನಾಟ್ಯಕ್ಷೇತ್ರದಲ್ಲಿ ಗಟ್ಟಿಯಾಗಿ ತಳವೂರಲು ದೊರಕ್ಕಿದ್ದು ಚೆನೈನ ಶ್ರೀಮತಿ ರುಕ್ಮಿಣಿ ಅರುಂಡೇಲ್ ಅವರ ಮಾರ್ಗದರ್ಶನ. ತಮ್ಮ ಹದಿನಾರು ವರ್ಷದಿಂದ ಗುರುಕುಲ ಪದ್ದತಿಯಲ್ಲಿ ಚೆನೈ ಕಲಾಕ್ಷೇತ್ರದಲ್ಲಿ ಶಿಸ್ತುಬದ್ಧವಾಗಿ ಭರತನಾಟ್ಯ ಅಭ್ಯಾಸ ಮಾಡಿ, ತಮ್ಮ ಮುಂದಿನ ನೃತ್ಯವೃತ್ತಿಗೆ ಭದ್ರ ಬುನಾದಿ ಹಾಕಿಕೊಂಡರು. ಕಲಾಕ್ಷೇತ್ರದಲ್ಲಿ ಭರತನಾಟ್ಯದಲ್ಲಿ ಸ್ನಾತಕೋತ್ತರ [...]



