ಅಂಕಣಗಳು

ನೂಪುರ ಪತ್ರಿಕೆ

‘ಮುದ್ರಾರ್ಣವ’ದ ಮೋಹಕ ಮೇಘಮಲ್ಹಾರ… : ಅನಾವರಣದಲ್ಲರಳಿದ ಅಲೆಗಳು

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಆಯಾ ಸಂಚಿಕೆಯ ವಿಶೇಷಗಳನ್ನೊಳಗೊಂಡಂತೆ ಸಂಪಾದಕರ ಅನುಭವ-ಅಭಿವ್ಯಕ್ತಿಯ ಸಾಲುಗಳಿವೆ ಮಂಜೀರದಲ್ಲಿ!
ಪ್ರತೀ ಸಂಚಿಕೆಯಲ್ಲೂ ಓದಲೇಬೇಕಾದ ಮತ್ತು ಪತ್ರಿಕೆಯ ಬಳಗವು ಓದುಗಬಂಧುಗಳೊಂದಿಗೆ ಹಂಚಿಕೊಳ್ಳಬೇಕಾದ ಭಾವ- ಅನುಭಾವ – ಚಿಂತೆ – ಚಿಂತನೆ – ಕುಟುಕು – ಮೊಟಕು- ಗತ್ತು – ಗಮ್ಮತ್ತುಗಳ ಮುಕ್ತ ಸಂವಾದಗಳು, ನಮ್ಮ-ನಿಮ್ಮೆಲ್ಲರ ಆತ್ಮೀಯ ಸಂಬಂಧಕ್ಕೆ ಸೋಪಾನವಾಗುವ ಹದವೆನಿಸುವ ಸ್ಪರ್ಶ ಮಂಜೀರದ ಆಕರ್ಷಣೆ.

ಮಂಜೀರ (ಶಿಶಿರ ಶೃಂಗಾರ ೨೦೧೦)

Monday, February 15th, 2010

ಕಾದು, ಕಾತರಿಸಿ, ಕನವರಿಸಿ, ನೊಂದು-ಬೆಂದು ನಡೆದು ಪಡೆದ ಖುಷಿ ಎಂದೆಂದಿಗೂ ಇಮ್ಮಡಿಯಾಗುತ್ತಲೇ ಇರುತ್ತದೆ ಎಂಬ ಮಾತು ಸುಳ್ಳಲ್ಲ. ಇಂದಿಗೆ ವಿಶಾಲ ಬಯಲಿನಲ್ಲಿ, ಎತ್ತರದ ಅವಕಾಶದಲ್ಲಿ, ಅನಂತ ಸಾಗರದ ಅಲೆಗಳ ನಡುವೆ ಜೋರಾಗಿ ‘ಹುರ್ರೇ’ ಎಂದು ಮನಬಿಚ್ಚಿ ಕೂಗಿ ಧ್ವನಿಗೈಯ್ಯಬೇಕೆನ್ನಿಸುತ್ತಿದೆ. ಅವು ಮಾರ್ದನಿಯಾಗಿ ನಿತ್ಯವೂ ಅನುರಣಿಸಬೇಕೆನ್ನಿಸುತ್ತಿದೆ. ಕಾರಣ ; ನೂಪುರ ಭ್ರಮರಿ ರಿಜಿಸ್ಟ್ರಾರ್ ಆಫ್ ನ್ಯೂಸ್ ಪೇಪರ್ಸ್ ಫಾರ್ ಇಂಡಿಯಾದಿಂದ ನೋಂದಾವಣೆಗೊಂಡಿದೆ ! ಇದರಲ್ಲೇನಿದೆ? ಸಾಮಾನ್ಯ. ಕಾಣಿಸುವುದು ಸಹಜ. ಆದರೆ ಕಳೆದ ಮೂರು ವರ್ಷಗಳಲ್ಲಿ ನೂಪುರದ [...]

ಹೇಮಂತ ಋತುಗಾನ-( ನವೆಂಬರ್ ಡಿಸೆಂಬರ್ ೨೦೦೯)

Tuesday, December 15th, 2009

ಸಂಪಾದಕೀಯ ಬರೆಯಹೊರಟಾಗಲೆಲ್ಲಾ ಕಲೆಯ ವಿಸ್ತಾರದೊಳಗೆ ಆಗಿರುವ ಹುಳುಕುಗಳೇ ಏಕೆ ಕಣ್ಣ ಮುಂದೆ ಧುತ್ತನೆ ಬಂದು ನಿಲ್ಲುತ್ತವೋ ತಿಳಿಯದು. ಆದರೆ ಈ ಹುಳುಕುಗಳ ಮುಂದೆ ಕೆಲವೇ ಕೆಲವು ಒಳ್ಳೆಯತನಗಳೂ ಮುಚ್ಚಿ ಹೋಗುವ ಮಟ್ಟಿಗೆ ಸ್ಥಿತಿಯಿದೆ ಎಂದಾದರೆ, ಏನೋ ಎಡವಟ್ಟು ನಡೆಯುತ್ತಿದೆ ಎಂದು ಅಂದುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಕಲೆಯ ಕುರಿತು ಯೋಚನೆ ಮಾಡುವಾಗೆಲ್ಲಾ ನಮ್ಮೊಳಗೆ ಕಂಡು, ಕೇಳಿದ, ಅನುಭವಿಸಿದ, ಆಗಿಹೋದ, ಆಗುತ್ತಿರುವ ಎಷ್ಟೋ ನಕಲುಗಳು, ಆಡಂಬರಗಳು, ಸಮಯಸ್ಫೂರ್ತಿಯಿಲ್ಲದ ಪ್ರಯೋಗಗಳು (?) ಅಣಕಿಸುವಾಗಲೆಲ್ಲಾ, ‘ಬರೆದೇ ಬಿಡುವ’ [...]

ಶರದ್ ಸಂಭ್ರಮ ( ಸೆಪ್ಟೆಂಬರ್-ಅಕ್ಟೋಬರ್ ೨೦೦೯)

Saturday, October 17th, 2009

ಹೀಗೆ., ಒಂದು ಅಧ್ಯಯನ ಸಾಮಗ್ರಿಗೆ ಹುಡುಕುವಾಗ ಮೊದಲು ಕಂಡಿದ್ದು ಜನಪದ. ಅದರಲ್ಲೂ ಜಾನಪದ ನೃತ್ಯಗಳು. ಶತಶತಮಾನದಿಂದ ಜನಜೀವನದಲ್ಲಿ ಹಾಸುಕೊಕ್ಕಾಗಿ, ಹಲವು ಪಲ್ಲಟಗಳಿಗೆ ಸಾಕ್ಷಿಯಾಗಿ, ಯಾವುದೇ ಆಗ್ರಹಗಳನ್ನೂ ಕಟ್ಟಿಕೊಳ್ಳದೆ, ನಿತ್ಯವಿನೂತನವಾಗಿ ತನ್ನ ಹೆಜ್ಜೆ-ಗೆಜ್ಜೆಗಳಲ್ಲಿ ಮನಸುಗಳ ಅರಳುವಿಕೆಯನ್ನೂ ಸಾಧಿಸಿಕೊಂಡವುಗಳು ಅವು. ಅಷ್ಟೇ ಅಲ್ಲ, ಇಂದಿನ ಎಲ್ಲಾ ಶಾಸ್ತ್ರೀಯವೆನಿಸುವ ನೃತ್ಯಗಳು ಒಂದಾನೊಂದು ಕಾಲದಲ್ಲಿ ಜನಪದದಿಂದ ಬಂದವುಗಳೇ ಆಗಿವೆ. ಇಂತಹ ಸಮೃದ್ಧಭರಿತ ಸಾಂಗತ್ಯದಲ್ಲಿ ಶಾಸ್ತ್ರೀಯ ನೃತ್ಯಗಳೊಂದಿಗೆ ಪರಸ್ಪರ ಪ್ರಭಾವ-ಅನುಭಾವಗಳ ಬೆಸುಗೆ ಇಂದಿಗೆ ಯಾವ ತೆರನದ್ದು ಎಂದು ಹುಡುಕಿ ಹೊರಟಾಗ ಪ್ರಸಕ್ತ ರೀತಿಗೆ ಸಂವಾದಿಯಾಗಿ [...]

ಮಂಜೀರ ‘ವರ್ಷ ವೈಭವ’- ಸಂಚಿಕೆ 4: ಸಂಪುಟ 3

Saturday, August 15th, 2009

ಇತ್ತೀಚಿನ ಭರತನಾಟ್ಯ ರಂಗಪ್ರವೇಶಗಳನ್ನೂ ಸೇರಿಸಿದಂತೆ ನೃತ್ಯಗಳ ರಂಗಪ್ರವೇಶದ ಕಲ್ಪನೆಯೇ ಹೊಲಸೆದ್ದು ಹೋಗಿದೆ. ರಂಗಪ್ರವೇಶಗಳ ಅಸ್ತಿತ್ವದ ಹಿಂದಿನ ಕಾರಣಗಳು ಆಡಂಬರ, ಪ್ರತಿಷ್ಠೆಯ ಮೂಸೆಯೊಳಗೆ ಕಾಣೆಯಾಗಿದೆ. ಇಂತಹ ಕಣ್ಣುಮುಚ್ಚಾಲೆಯ ನಡುವೆಯೇ ಅದೊಂದು ದಿನ ಎಳೆಯ ಹುಡುಗಿಯ ರಂಗಪ್ರವೇಶದ ಭರ್ಜರಿ ಆಹ್ವಾನ ನನ್ನ ಕೈಸೇರಿತ್ತು. ನೋಡೋಣವೆಂದು ಹೋದರೆ ಅದು ‘ಶಾಸ್ತ್ರೀಯ ನೃತ್ಯ ರಂಗಪ್ರವೇಶ’ ! ಭರತನಾಟ್ಯ, ಕಥಕ್, ಮೋಹಿನಿಯಾಟ್ಟಂ, ಕೂಚಿಪುಡಿ, ಒಡಿಸ್ಸಿ, ಮಣಿಪುರಿ..ಹೀಗೆ ಎಲ್ಲಾ ನೃತ್ಯಸಂಪ್ರದಾಯಗಳ ಒಂದೊಂದು ತುಣುಕುಗಳ ಬಫೆ ! ಗುರುಗಳು ಕಲಿತ [...]

ಮಂಜೀರ ಸಂಚಿಕೆ 3: ಸಂಪುಟ 3

Tuesday, June 9th, 2009

‘ಯಕ್ಷಗಾನವನ್ನು ನೋಡ್ಬೇಡಿ, ಒಂದು ವೇಳೇ ಕಲಿತರಂತೂ ನಿಮಗೆ ನೃತ್ಯ ಕಲಿಸಲಾಗುವುದಿಲ್ಲ, ಮತ್ತು ನೃತ್ಯಕ್ಕೆ ಅಹ‌ರೆನಿಸಿಕೊಳ್ಳಬೇಕಾದರೆ ಅಷ್ಟು ಸುಲಭವೂ ಆಗುವುದಿಲ್ಲ. ಯಕ್ಷಗಾನವನ್ನು ಕಲಿತರೆ ನೃತ್ಯ ಶೈಲಿ ಹಾಳಾಗುತ್ತದೆ. ಅದರ ಭಾವವೇ ಆಳವಾಗಿ ಬೇರೂರುತ್ತದೆ. ನೃತ್ಯದಲ್ಲಿರುವ ಲಾಸ್ಯದ ಅಂಶ‌ಗಳನ್ನು ಯಕ್ಷಗಾನವೆಂಬ ಗಂಡು ಕಲೆ ನುಂಗಿ ಹಾಕಿಬಿಡುತ್ತದೆ ! ‘ – ಇಂತಹದೊಂದು ಹೇಳಿಕೆ ಕಲಾವಲಯದಲ್ಲಿ ಕೇಳಿಬರುತ್ತಲಿದೆೆ. ಅದರಲ್ಲೂ ಶೈಲಿ, ಸಂಪ್ರದಾಯಗಳಿಗೆ ಬದ್ಧರಾಗಿರುವ ಮಂದಿಗಳಲ್ಲಿ ಇದರ ಪ್ರಮಾಣ ಹೆಚ್ಚು. ಕೊನೆಗೆ ಎಷ್ಟು ತೀವ್ರವೆಂದರೆ ನೃತ್ಯದಲ್ಲಿ ಮಾಡುವ ಯಾವುದೇ ರೀತಿಯ ಭಾವ ಪ್ರದರ್ಶನವೂ [...]

ಮಂಜೀರ-ಸಂಚಿಕೆ ೨, ಸಂಪುಟ ೩

Wednesday, April 15th, 2009

ಮೂರನೇ ವರ್ಷದ ಮೆಟ್ಟಿಲು ಏರುವ ಹಂತಕ್ಕೆ ಮುನ್ನುಡಿ ಶುಭಾಶಯಗಳ ಬೆಂಬಲ ದೊರೆತಿದೆ. ಗುರಿ ತಲುಪುವ ಹಂತದ ಪ್ರಯಾಣದ ಸುಖ-ದುಃಖಗಳು ಅನುಭವ ಹಾಗೂ‌ಅರಿವಿನ ಸಮೃದ್ಧ ಪಾಕಕ್ಕೆ ಹದವಾಗಿ ರಸ ತುಂಬುತ್ತಿದೆ. ಜೊತೆಗೆ ವರುಷ ಮುಗಿಯುವದರೊಳಗೆ ಪತ್ರಿಕೆ ರಿಜಿಸ್ಟರ್ಡ್ ಆಗಲಿದೆ ಎಂಬ ವಿಶ್ವಾಸ. ಈ ಹಂತದಲ್ಲೆಲ್ಲಾ ನೂಪುರದಂತೆಯೇ ಲಾಭದ ಉದ್ದೇಶವಿಲ್ಲದೆ ತಾವಾಗಿಯೇ ಬಂದು ಕೈಜೋಡಿಸಿ ದುಡಿಯುತ್ತಿರುವವ ಮಿತ್ರರು ಒಬ್ಬಿಬ್ಬರಲ್ಲ. ಹಾಗಾಗಿಯೇ ದಿನದಿಂದ ದಿನಕ್ಕೆ ನಮ್ಮದು ಹೊಸ ಸದಸ್ಯರನ್ನು ಹೊಂದಿಕೊಳ್ಳುತ್ತಿರುವ ಒಂದು ಕುಟುಂಬ. ನೋವು-ನಲಿವುಗಳ ನಡುವೆಯೂ ಪ್ರತಿಜ್ಞೆಯ ಹಾದಿಯೋ ಎಂಬ ಹಾಗೆ [...]

೨ ವರುಷ ತುಂಬಿದ ಸಂಭ್ರಮ

Sunday, February 15th, 2009

ಜ಼ೆರಾಕ್ಸ್ ಪ್ರತಿಯಾಗಿ ನಮ್ಮ ಕೈಗಳಲ್ಲಿ ಕಣ್ಣು ತೆರೆದಿತ್ತು ಮೊದಲ ತಿಂಗಳ ನೂಪುರ ಭ್ರಮರಿ. ಅಂದು ಫೆಬ್ರವರಿ ೧೦, ೨೦೦೭. ಅದೇ ತಿಂಗಳ ಶಿವರಾತ್ರಿಯ ಹೊತ್ತಿಗೆ ನರ್ತನ ಜಗತ್ತಿನ ಸಾಧ್ಯತೆಗಳನ್ನು ಬಿಡುಗಣ್ಣುಗಳಿಂದ ನೋಡಿ. ಕ್ರಮೇಣ ಪಿಡಿ‌ಎಫ್ ಪ್ರತಿಯಾಗಿ, ನಂತರ ಮುದ್ರಿತಗೊಳ್ಳುವ ಹೊತ್ತಿಗೆ ಒಂದು ವರ್ಷ ಸಂದಿದ್ದವು.
ಮತ್ತದೇ ಫೆಬ್ರವರಿ, ೧೦ನೇ ದಿನ. ವರುಷ ತುಂಬಿದ ಸಂಭ್ರಮಕ್ಕೆ ಸಾಕ್ಷಿ ಯಾದದ್ದು ೨೦೦೮. ಅಂಬೆಗಾಲಿಕ್ಕಿ ಬಂದ ಹಾದಿಯನ್ನು ಒಮ್ಮೆ ಹಿಂತಿರುಗಿ ನೋಡುವ ಪ್ರಯತ್ನ- ಮಡಿಕೇರಿಯ ಭಾರತೀಯ ವಿದ್ಯಾ ಭವನದಲ್ಲಿ. ಜೊತೆಗೊಂದು ಓದುಗರ, ಬಳಗದ [...]

ಮಂಜೀರ

Monday, December 15th, 2008

ಇತ್ತೀಚೆಗೆ ಮತ್ತೊಮ್ಮೆ ಕಾರ್ಯಕ್ರಮವೊಂದರಲ್ಲಿ ಈ ಮಾತುಗಳು ಪ್ರತಿಧ್ವನಿಸಿದವು. ’ಮದುವೆಯಾದ ನಂತರ ಸ್ತ್ರೀಯರು ನೃತ್ಯ ಮಾಡುವುದು, ಪ್ರದರ್ಶನ ನೀಡುವುದು ಅಷ್ಟು ಸಮಂಜಸವಲ್ಲ ಎಂಬ ಮನಸ್ಸು ಇಂದಿಗೂ ಇದೆ. ಬೇಕಾದರೆ ಗುರುವಾಗಿ ಮುಂದುವರಿಯಬಹುದೇನೋ ! ಒಂದು ವೇಳೆ ಪ್ರದರ್ಶನ ಕೊಟ್ಟರೂ ಕೂಡಾ, ’ ಅವಳಾ ! ಕುಣೀತಾಳೆ, ಕೊಣಿಪ್ಪೆ( ಪ್ರಾದೇಶಿಕ ಶಬ್ದ) ಎಂಬ ಬಿರುದಾವಳಿ [...]

ಕಳೆದು ಹೊದೇವೆ ನಾವು ?

Thursday, December 11th, 2008

ಗೆಳತಿ ಶ್ರೀನಿಧಿ ಒಮ್ಮೆ ಹೇಳಿದ ಮಾತುಗಳು ಆಗಾಗ ನೆನಪಾಗುತ್ತವೆ.
’ಯಾವುದೋ ಅನಿಶ್ಚಿತತೆಯತ್ತ ಸಾಗುತ್ತಿದ್ದೇವೆ ಅಂತನ್ಸುತ್ತೆ. ಮೊದಲಿನ ಮಹತ್ವಾಕಾಂಕ್ಷೆ ಈಗಿಲ್ಲ. ಎಷ್ಟು ಹೆಸರು ಬಂದ್ರೇನು, ನೆಮ್ಮದಿ ಸಿಗುತ್ತೆ ಅನ್ನೋ ನಂಬಿಕೆಯಿಲ್ಲ. ಬೇರೆ ದಾರಿನಾದ್ರೂ ಹಿಡಿಯೋಣ ಅಂದ್ರೆ ಜಾಬ್ ಸ್ಯಾಟಿಸ್ಫ್ಯಾಕ್ಷನ್ ಸಿಗುತ್ತೆ ಅನ್ನೋ ಗ್ಯಾರಂಟಿಯಿಲ್ಲ. ಮೊದಲು ಯಾವೆಲ್ಲಾ ಕಲ್ಪನೆಯಿಟ್ಟು ಉತ್ಸಾಹದಿಂದ ಬಂದಿದ್ದೆವೋ ಅದೆಲ್ಲಾ ಇಳಿದುಹೋಗಿದೆ. ಕ್ರಿಯೇಟಿವ್..! ಹಾಗಂದ್ರೆ ? ಎಲ್ಲಾ ಅಟ್ಟ ಹತ್ತಿ ಕೂತಿದೆ. ಎಲ್ಲಿ ದಿನದಿಂದ ದಿನಕ್ಕೆ ವರ್ಕೊಲಿಕ್ ಆಗ್ತೀವೋ ಅಂತ ಭಯ ಕಾಡ್ತಿದೆ !’
ನಿರಾಸೆಯೋ…, ಬೇಸರವೋ.., ಅರಗಿಸಿಕೊಳ್ಳಲಾರದೇ ಹೋದ [...]

ಸಂಚಿಕೆ – ೧೦

Wednesday, November 5th, 2008

ಭಾರತೀಯ ಲಲಿತ ಕಲೆಗಳಿಗೆ ಬೇಕಿರುವುದು ಸಾಂಪ್ರದಾಯಿಕ ಗುರುಪರಂಪರೆಯ ಆಶ್ರಯವೋ? ಅಥವಾ ಬದಲಾದ ಕಾಲಘಟ್ಟದ ಶೈಕ್ಷಣಿಕ ಮಾನ್ಯತೆಯೋ? ..

.ಈ ಚರ್ಚೆ ರೂಪ ಪಡೆದುಕೊಂಡಿದ್ದು ಇತ್ತೀಚಿನ ದಶಕಗಳಲ್ಲಿ. ಯಾಕೆಂದರೆ ಗುರುಪರಂಪರೆ ಮತ್ತು ಅಕಾಡೆಮಿಕ್ ವಲಯಗಳು ಒಂದಷ್ಟು ಹೊಂದಾಣಿಕೆ, ಅಂತರಗಳನ್ನಿಟ್ಟುಕೊಂಡು ಮುಂದುವರೆಯುತಿದ್ದರೂ, ಎದುರಿಸುತ್ತಿರುವ ವೈರುಧ್ಯಗಳು ಹೊಸತೇನೂ ಅಲ್ಲ.

ಮೊದಲಿನಿಂದಲೂ ತಮ್ಮ [...]