<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>: Noopura bhramari &#124; ನೂಪುರ ಭ್ರಮರಿ : ನರ್ತನ ಜಗತ್ತಿಗೊಂದು ಪರಿಭ್ರಮಣ &#124; Bharatanatyam Magazine :: &#187; ಮಂಜೀರ</title>
	<atom:link href="http://www.noopurabhramari.com/articles/manjira/feed" rel="self" type="application/rss+xml" />
	<link>http://www.noopurabhramari.com</link>
	<description>:ನರ್ತನ ಜಗತ್ತಿಗೊಂದು ಪರಿಭ್ರಮಣ &#124; Bharatanatyam Magazine</description>
	<lastBuildDate>Tue, 31 Jan 2012 12:52:22 +0000</lastBuildDate>
	<generator>http://wordpress.org/?v=2.9.1</generator>
	<language>en</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
			<item>
		<title>ಮಾರ್ಗಶೀರ ಪುಷ್ಯ ೨೦೧೧( ನವೆಂಬರ್ -ಡಿಸೆಂಬರ್)</title>
		<link>http://www.noopurabhramari.com/manjira/%e0%b2%ae%e0%b2%be%e0%b2%b0%e0%b3%8d%e0%b2%97%e0%b2%b6%e0%b3%80%e0%b2%b0-%e0%b2%aa%e0%b3%81%e0%b2%b7%e0%b3%8d%e0%b2%af-%e0%b3%a8%e0%b3%a6%e0%b3%a7%e0%b3%a7-%e0%b2%a8%e0%b2%b5%e0%b3%86%e0%b2%82</link>
		<comments>http://www.noopurabhramari.com/manjira/%e0%b2%ae%e0%b2%be%e0%b2%b0%e0%b3%8d%e0%b2%97%e0%b2%b6%e0%b3%80%e0%b2%b0-%e0%b2%aa%e0%b3%81%e0%b2%b7%e0%b3%8d%e0%b2%af-%e0%b3%a8%e0%b3%a6%e0%b3%a7%e0%b3%a7-%e0%b2%a8%e0%b2%b5%e0%b3%86%e0%b2%82#comments</comments>
		<pubDate>Thu, 15 Dec 2011 05:18:16 +0000</pubDate>
		<dc:creator>ಸಂಪಾದಕಿ</dc:creator>
				<category><![CDATA[ಮಂಜೀರ]]></category>
		<category><![CDATA[Art research]]></category>
		<category><![CDATA[ನರ್ತನ]]></category>
		<category><![CDATA[ನೃತ್ಯ]]></category>
		<category><![CDATA[ನೂಪುರಭ್ರಮರಿ]]></category>
		<category><![CDATA[Bharathanatyam]]></category>
		<category><![CDATA[Bharathanatyam research]]></category>
		<category><![CDATA[bhramari]]></category>
		<category><![CDATA[Classical Dance]]></category>
		<category><![CDATA[Cultural magazine]]></category>
		<category><![CDATA[Dance]]></category>
		<category><![CDATA[Dance Research]]></category>
		<category><![CDATA[Dance research in karantaka]]></category>
		<category><![CDATA[dance research seminar in karnataka]]></category>
		<category><![CDATA[dance research workshop]]></category>
		<category><![CDATA[fine arts research]]></category>
		<category><![CDATA[manjeera]]></category>
		<category><![CDATA[manorama]]></category>
		<category><![CDATA[methodologies of dance research]]></category>
		<category><![CDATA[natya]]></category>
		<category><![CDATA[noopura]]></category>
		<category><![CDATA[noopura bhramari]]></category>
		<category><![CDATA[nrutya]]></category>
		<category><![CDATA[preforming art research models]]></category>

		<guid isPermaLink="false">http://www.noopurabhramari.com/?p=1821</guid>
		<description><![CDATA[‘ಇಂದಿನ ದಿನದಲ್ಲಿ ಕಲೆಯ ಕುರಿತ ಸಂಶೋಧನೆಯ ದಿಕ್ಕುಗಳಿಗೆ ಅವಕಾಶಗಳು ಸಿಕ್ಕಿವೆಯೇನೋ ನಿಜ. ಆದರೆ ಅದು ಸಾಗುತ್ತಿರುವ ಹಾದಿ ಗಮನಿಸಿದರೆ ವಾಕರಿಕೆ ಬರುತ್ತದೆ. ಕೆಲವರಿಗೆ ಪಿ‌ಎಚ್‌ಡಿ ಪ್ರಮಾಣ ಪತ್ರ ತೆಗೆದುಕೊಳ್ಳುವವರೆಗೆ ಅದೊಂದು ‘ಅರ್ಹತೆ’ ಗಿಟ್ಟಿಸಿಕೊಳ್ಳುವ ಅನಿವಾರ್ಯ ತಲೆನೋವಾದರೆ; ಇನ್ನೂ ಕೆಲವರಿಗೆ ಹೆಸರಿನ ಮುಂದೆ ಅಂಟಿಸಿಕೊಳ್ಳುವ ಲೇಬಲ್. ಮತ್ತಷ್ಟು ಮಂದಿಗೆ ಅದು ದುಡ್ಡು ಮಾಡಿಕೊಳ್ಳುವ ದಂಧೆ; ಇನ್ನಷ್ಟು ಮಂದಿ ಸಂಶೋಧನೆಯ ಕ್ಷೇತ್ರವನ್ನೇ ತಮ್ಮ ಗುತ್ತಿಗೆಗೆ ತೆಗೆದುಕೊಂಡಂತೆ ಮಾತನಾಡುತ್ತಾರೆ. ಇನ್ನು ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಸಂಶೋಧನೆಗಳನ್ನು ನೋಡಿದರೆ ಬಹುಪಾಲು ರೀಸರ್ಚ್‌ಗೆ ತಲೆಯೂ ಇಲ್ಲ, [...]]]></description>
			<content:encoded><![CDATA[<p style="text-align: justify;"><span><span style="color: #000000;">‘</span></span><span style="font-family: Tunga;"><span style="color: #000000;">ಇಂದಿನ ದಿನದಲ್ಲಿ ಕಲೆಯ ಕುರಿತ ಸಂಶೋಧನೆಯ ದಿಕ್ಕುಗಳಿಗೆ ಅವಕಾಶಗಳು ಸಿಕ್ಕಿವೆಯೇನೋ ನಿಜ. ಆದರೆ ಅದು ಸಾಗುತ್ತಿರುವ ಹಾದಿ ಗಮನಿಸಿದರೆ ವಾಕರಿಕೆ ಬರುತ್ತದೆ. ಕೆಲವರಿಗೆ ಪಿ‌ಎಚ್‌ಡಿ ಪ್ರಮಾಣ ಪತ್ರ ತೆಗೆದುಕೊಳ್ಳುವವರೆಗೆ ಅದೊಂದು </span></span><span><span style="color: #000000;">‘</span></span><span style="font-family: Tunga;"><span style="color: #000000;">ಅರ್ಹತೆ</span></span><span><span style="color: #000000;">’</span></span><span style="font-family: Tunga;"><span style="color: #000000;"> ಗಿಟ್ಟಿಸಿಕೊಳ್ಳುವ ಅನಿವಾರ್ಯ ತಲೆನೋವಾದರೆ; ಇನ್ನೂ ಕೆಲವರಿಗೆ ಹೆಸರಿನ ಮುಂದೆ ಅಂಟಿಸಿಕೊಳ್ಳುವ ಲೇಬಲ್. ಮತ್ತಷ್ಟು ಮಂದಿಗೆ ಅದು ದುಡ್ಡು ಮಾಡಿಕೊಳ್ಳುವ ದಂಧೆ; ಇನ್ನಷ್ಟು ಮಂದಿ ಸಂಶೋಧನೆಯ ಕ್ಷೇತ್ರವನ್ನೇ ತಮ್ಮ ಗುತ್ತಿಗೆಗೆ ತೆಗೆದುಕೊಂಡಂತೆ ಮಾತನಾಡುತ್ತಾರೆ. ಇನ್ನು ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಸಂಶೋಧನೆಗಳನ್ನು ನೋಡಿದರೆ ಬಹುಪಾಲು ರೀಸರ್ಚ್‌ಗೆ ತಲೆಯೂ ಇಲ್ಲ, ಬುಡವೂ ಇಲ್ಲ. ಕ್ರಮ-ವಿಧಾನಗಳಾವುವೂ ಗೊತ್ತಿಲ್ಲ. ೪-೫ ಪುಸ್ತಕಗಳಿಂದ ವಿಷಯ ಹೆಕ್ಕಿ ತೆಗೆದು ಒಟ್ಟು ಮಾಡಿದರೆ ಅದೇ ಸಂಶೋಧನೆ ಎನ್ನುವವರೇ ಹೆಚ್ಚು. ಜೊತೆಗೆ ಏನೇನೋ ಹುಚ್ಚುಚ್ಚು ಅಸಂದ್ಧ ವಿಷಯಗಳು. ಅದನ್ನು ಸಾಧಿಸಲು ಏನೇನೋ ವಿತಂಡವಾದಗಳು. ಹೀಗಾದರೆ ನೈಜ, ವಸ್ತುನಿಷ್ಠ ಸಂಶೋಧನೆಗಳು ಎಂದು ಬೆಳಕು ಕಂಡಾವು? ಏನೋ ಒಂದಷ್ಟು ನಿರೀಕ್ಷೆಗಳು, ಪ್ರತಿಭೆಗಳನ್ನು ಹೊತ್ತು ನಡೆಯುವವರಿಗಂತೂ ಅವಕಾಶ ಮತ್ತು ಮಾರ್ಗದರ್ಶನವೇ ಇಲ್ಲದಂತಾಗಿದೆ. ಸದ್ಯ, ನಮ್ಮ ಇತಿಹಾಸ ಕ್ಷೇತ್ರದಲ್ಲಿ ಇಷ್ಟೆಲ್ಲಾ ಗೋಜಲುಗಳಿಲ್ಲವಲ್ಲಾ ಎಂಬುದೇ ಸಮಾಧಾನದ ಸಂಗತಿ </span></span><span><span style="color: #000000;">’</span></span><span style="font-family: Tunga;"><span style="color: #000000;"> ಎಂದು ನಿಟ್ಟುಸಿರಿಟ್ಟರು ಓರ್ವ ಹಿರಿಯ ಇತಿಹಾಸ ಸಂಶೋಧಕ.</span></span></p>
<p style="text-align: justify;"><span style="font-family: Tunga;"><span style="color: #000000;">ಅವರ ನಿಟ್ಟುಸಿರಿನ ಅರ್ಥ ಹುಡುಕುತ್ತಾ ನಡೆದೆ. ನಮ್ಮ ಕಲಾಕ್ಷೇತ್ರದ ಸಂಶೋಧನಾ ಭವಿಷ್ಯ ಸೊನ್ನೆಯೆಂದೋ? ಅರಿವಿದ್ದೂ ಅಸಹಾಯಕರಾಗಿರುವುದರ ಉತ್ತರವೇ? ಶಿಕ್ಷಣದ ಹಾದಿಯ ವ್ಯಂಗ್ಯವನ್ನು ಜೀರ್ಣಿಸಿಕೊಳ್ಳಲಾಗದ್ದಕ್ಕೋ? ಅಥವಾ ಅವರ ಇತಿಹಾಸ ಕ್ಷೇತ್ರ ಕೆಲಮಟ್ಟಿಗಾದರೂ ಸಾಧ್ಯತೆ, ಅನುಕೂಲ, ಅವಕಾಶಗಳನ್ನು ಉಳಿಸಿಕೊಂಡು ಬಂದಿದೆಯೆಂಬ ಸಮಾಧಾನಕ್ಕೋ? ಒಟ್ಟಿನಲ್ಲಿ ಅವರ ಭಾವ ಹಲವು ರೀತಿಯಲ್ಲಿ ಹಲವು ತಿಂಗಳಿನಿಂದ ಕಾಡುತ್ತಲೇ ಇದೆ.</span></span></p>
<p style="text-align: justify;"><span style="font-family: Tunga;"><span style="color: #000000;">ಹೌದು. ಕಲಾ ಸಂಶೋಧನೆ ಎಂದಾಕ್ಷಣ ಇಂದಿಗೆ ಹಲವು ಮಂದಿ ಪ್ರಾಜ್ಞರು ಒಂದೋ ಮೂಗು ಮುರಿಯುತ್ತಾರೆ ಇಲ್ಲವೇ ಒಳಗೊಳಗೇ ಅನುಮಾನದ ದೃಷ್ಟಿಯಿಂದ ನೊಡುತ್ತಾರೆ. ಇದು ಸ್ವತಃ ಸ್ವಂತ ಆಸಕ್ತಿಯಿಂದ ಸಂಶೋಧನಾ ಕ್ಷೇತ್ರಕ್ಕಿಳಿದ ನನ್ನನ್ನೂ ಒಳಗೊಂಡಂತೆ ಹಲವು ಯುವ ಉತ್ಸಾಹಿಗಳ ಮುಂದಿರುವ ನುಂಗಲಾರದ ಬಿಸಿತುಪ್ಪ. ಹಾಗೆ ನೋಡಿದರೆ ಕಲಾಸಂಶೋಧನೆಗೆ ತಟ್ಟಿರುವಷ್ಟು ಶಾಪ ಬಹುಷಃ ವಿಜ್ಞಾನ, ತಂತ್ರಜ್ಞಾನ, ಕೃಷಿ, ಪರಿಸರ, ಸಮಾಜ ವಿಜ್ಞಾನಗಳಾದಿಯಾಗಿ ಯಾವ ಕ್ಷೇತ್ರಕ್ಕೂ ತಟ್ಟಿಲ್ಲ. ಫಲವಾಗಿ ಪ್ರದರ್ಶಕ ಕಲೆಯಾದ ನೃತ್ಯವನ್ನೇ ಲಕ್ಷಿಸಿದರೂ ಸಾಕು; ಬೆಳವಣಿಗೆಯು ಹೆಪ್ಪುಗಟ್ಟಿದ ಸರೋವರದಂತೆ ಮರೀಚಿಕೆಯಾಗುತ್ತಲಿದೆ.</span></span></p>
<p style="text-align: justify;"><span style="font-family: Tunga;"><span style="color: #000000;"> ಕಾರಣಗಳಿಲ್ಲದಿಲ್ಲ. ಒಂದಲ್ಲ, ಎರಡಲ್ಲ ; ಹಿರಿಯರು ಹೇಳಿದಂತೆ ಸಾಕಷ್ಟು ಅಪಸವ್ಯಗಳು ಕಲಾ ಸಂಶೋಧನೆಯ ಕ್ಷೇತ್ರವನ್ನು ಕಾಡುತ್ತಲೇ ಇದೆ. ಚರ್ವಿತಚರ್ವಣವಾಗುತ್ತಿರುವ ಸವಕಲು ವಿಷಯಗಳು, ವಿಷಯದ ಆಯ್ಕೆಯಲ್ಲಿ ಜವಾಬ್ದಾರಿ-ಮಾರ್ಗದರ್ಶನದ ಕೊರತೆ, ಪಟ್ಟಭದ್ರ ಹಿತಾಸಕ್ತಿಗಳಲ್ಲಿ ಕರಗಿಹೋಗುವ ಪ್ರತಿಭೆಗಳು, ಹಾದಿ ತಪ್ಪಿಸುವ ಕುತ್ಸಿತರು, ಕೇವಲ ಪದವಿ-ಪ್ರಮಾಣ ಪತ್ರಗಳೇ ಮಾನದಂಡವಾಗುತ್ತಿರುವ ಸಂಶೋಧನಾ ಪ್ರಕ್ರಿಯೆ..ಹೀಗೆ ಕಲಾ ಸಂಶೋಧನೆಯ ಹಾದಿಯ ತುಂಬೆಲ್ಲಾ ಗೊಂದಲ-ಅವ್ಯವಸ್ಥೆಗಳ ಹೆಬ್ಬಾವು ಅಂಗಾತ ಮಲಗಿದೆ. ಅಕಾಡೆಮಿಕ್ ಶಿಸ್ತುಗಳ ಪ್ರಯತ್ನಕ್ಕಿಂತಲೂ ಸ್ವಪ್ರತಿಷ್ಠೆಗಳನ್ನು ರೂಪಿಸಿಕೊಳ್ಳುವಲ್ಲಿಗೆ ಮಾತ್ರ ಸಂಶೋಧನೆ ಸೀಮಿತವಾಗುತ್ತಿದೆ. ಆದ್ದರಿಂದಲೇ ಕರ್ನಾಟಕದಲ್ಲಿನ ನೃತ್ಯಸಂಶೋಧನೆಗಳು ಜಾಗತಿಕವಾದ ಒಂದು ನೆಲೆಯನ್ನು ಕಂಡುಕೊಳ್ಳುವಲ್ಲಿ ದುರ್ಲಭವೆನಿಸಿವೆ. ಪರಿಣಾಮ ನಮ್ಮೊಳಗಿನ ಅವಕಾಶ, ಕೊರತೆಗಳನ್ನು ಅರ್ಥೈಸುವ ಹಾದಿ ಮುಚ್ಚಿದಂತಾಗಿ ನಮ್ಮ ಕೈಗಳನ್ನು ನಮಗರಿವಿಲ್ಲದೆ ನಾವೇ ಕಟ್ಟಿಕೊಂಡು ಇನ್ನೊಬ್ಬರ ಕಾಲಿಗೆ ಬೀಳುತ್ತಲೇ ಇದ್ದೇವೆ.</span></span></p>
<p style="text-align: justify;"><span style="font-family: Tunga;"><span style="color: #000000;">ಹಾಗಾದರೆ ಕಲೆಯೆಂಬ ಪ್ರಾಯೋಗಿಕ ನೆಲೆಯುಳ್ಳ ವಸ್ತುವಿಗೆ ಯಾವ ಮಾದರಿಯ ಸಂಶೋಧನಾ ಸ್ಪರ್ಶ ಬೇಕು? ಕಲಾ ಸಂಶೋಧನೆಗಳು ಹೇಗಿರಬೇಕು? ಸಂಶೋಧನೆಯ ನಿಜವಾದ ಅರ್ಥ ಏನು? ಎಂತಹ ಗುಣಮಟ್ಟ ಇಂದಿನ ಕಲಾ ಸಂಶೋಧನಾ ಜಗತ್ತಿಗೆ ಬೇಕು? ಅದನ್ನು ಕಂಡುಕೊಳ್ಳುವ ಹಂತಗಳು ಹೇಗೆ? ಕಲೆಯನ್ನು ಸಂಶೋಧನೆಯ ಹಿನ್ನಲೆಯಲ್ಲಿ ಕಾಣುವಾಗ ಗಮನಿಸಬೇಕಾದ ಅಂಶಗಳೇನು? ಅದರ ನೆಲೆಗಳೇನು? ಶಿಸ್ತುಗಳ್ಯಾವುವು? ನಡೆಸುವ ಮಾದರಿಗಳು ಹೇಗೆ? ಸಂಶೋಧನಾ ಉದ್ದೇಶ ಮತ್ತು ವಿಧಾನಗಳನ್ನು ಕಂಡುಕೊಳ್ಳುವುದು ಹೇಗೆ? ಇಂದಿನ ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗುವಂತೆ ಎಂತಹ ದಿಕ್ಕುಗಳು ನಮ್ಮೆದುರಿಗಿವೆ? ಸವಾಲುಗಳೇನು? ಅತ್ಯಗತ್ಯ ಕರ್ತವ್ಯಗಳೇನು? ಸಂಶೋಧಕನ ಜವಾಬ್ದಾರಿಗಳೇನು? ಅವಕಾಶಗಳಾವುವು? ಅಂತರ್ ಶಿಸ್ತೀಯ ನೆಲೆಗಳೇನು? ಎಂತಹ ಮನಸ್ಸು ಬೇಕು? ಸಂಶೋಧನೆಯೊಂದರ ಭವಿಷ್ಯ, ಆಯುಷ್ಯ ಹೇಗೆ ನಿರ್ಧಾರವಾಗುತ್ತದೆ? ..ಹೀಗೆ ಶೋಧ ಜಗತ್ತಿನ ವಿವಿಧ ಪ್ರಶ್ನೆಗಳನ್ನು ನಮ್ಮೆದುರಿಗೆ ಇಟ್ಟುಕೊಂಡು ಪೂರ್ಣ ಅಕಾಡೆಮಿಕ್ ಮತ್ತು ಅದಕ್ಕೆ ಪೂರಕವಾದ ಪ್ರಾಯೋಗಿಕ ನೆಲೆಗಟ್ಟಿನಲ್ಲಿ ಉತ್ತರ ಕಂಡುಕೊಳ್ಳುವ ಅನಿವಾರ್ಯತೆಯಿದೆ.</span></span></p>
<p style="text-align: justify;"><span style="font-family: Tunga;"><span style="color: #000000;">ಈ ಹಿನ್ನಲೆಯಲ್ಲಿ ನೂಪುರ ಭ್ರಮರಿ ಪ್ರತಿಷ್ಠಾನ(ರಿ.) ಮಹಾಶಿವರಾತ್ರಿಯ ದಿನದಂದು ಒಂದು ದಿನದ ಕಮ್ಮಟವನ್ನು ಹಿರಿಯ ಸಂಶೋಧಕರು, ವಿದ್ವಾಂಸರೊಂದಿಗೆ ಹಮ್ಮಿಕೊಳ್ಳುತ್ತಲಿದೆ. ಜೊತೆಗೆ ಈಗಾಗಲೇ ಜರುಗಿದ ಸಂಶೋಧನೆಗಳಿಗೆ ಕ್ಷಕಿರಣ ಬೀರುತ್ತಾ ಸಂಶೋಧನಾ ಪ್ರಬಂಧ ಮಂಡನೆ, ಸಂವಾದ, ಚರ್ಚೆ, ನಿರ್ಣಯ, ಪ್ರಶ್ನೋತ್ತರ ಸರಣಿಗಳು, ನೃತ್ಯವಿಸ್ತಾರವನ್ನು ಹಿಗ್ಗಿಸುವ ಸಂಶೋಧನಾ ನೆಲೆಗಟ್ಟಿನ ವಿದ್ವತ್ ಪೂರ್ಣ ನೃತ್ಯ ಪ್ರದರ್ಶನ.. ಹೀಗೆ ಹಲವು ಆಯಾಮಗಳನ್ನು ಸ್ಪರ್ಶಿಸಬೇಕೆಂದಿದೆ. ನಮ್ಮ ಆಶಯದ ಯಶಸ್ಸಿಗೆ ನೀವೂ ಜೊತೆಗಿರಬೇಕು.</span></span></p>
<p style="text-align: justify;"><span style="font-family: Tunga;"><span style="color: #000000;">ಪಿ‌ಎಚ್‌ಡಿಯಂತಹ ಪದವಿಗಳನ್ನು ಪಡೆದು ಪುಸ್ತಕ ಪ್ರಕಟಿಸಿದಲ್ಲಿಗೆ ಸಂಶೋಧನೆಯ ಜವಾಬ್ದಾರಿಗಳು ಮುಗಿಯುವುದಿಲ್ಲ ಅಥವಾ ಅಂತವರು ಸಂಶೋಧಕರೂ ಆಗುವುದಿಲ್ಲ. ಸಂಶೋಧನೆಯೆಂಬುದು ನಿರಂತರ ಶ್ರದ್ಧೆಯ ಅನಂತ ಸಾಧ್ಯತೆಗಳ ಹರಿವು. ಅದರಲ್ಲಿ ಈಜಲು ಒಂದಷ್ಟು ಸ್ವಯಂಬದ್ಧತೆಗಳೇ ಬೇಕು. ಹಾಗಾಗಿ ಪಿ‌ಎಚ್‌ಡಿ/ ಎಂಫಿಲ್ ಪದವಿಗಳಿಂದಾಚೆಯೂ ಸಂಶೋಧನೆಯನ್ನು ಶಿಸ್ತಾಗಿ ಬೆಳೆಸಿಕೊಳ್ಳುವ ಅಧ್ಯಯನ ಶೀಲತೆ ಬೆಳೆದುಬರಬೇಕು ಎಂಬುದು ಪ್ರತಿಷ್ಠಾನದ ಅಭೀಪ್ಸೆ. ಹಾಗಾಗಿ ನೃತ್ಯದ ಎಂದಿನ ಸವಕಲು ಚರ್ಚೆಗಳಿಂದ ದೂರವಿದ್ದು, ಪ್ರತಿಷ್ಠೆ-ಗೌರವಗಳ ಮೂಟೆಯನ್ನು ಪಕ್ಕಕ್ಕಿಟ್ಟು, ಪೂರ್ವಾಗ್ರಹಗಳನ್ನು ಬದಿಗಿಟ್ಟು ಕಲಾ ಜಗತ್ತಿನ ಮತ್ತೊಂದು ಮುಖಕ್ಕೆ ಸಹೃದಯತೆಯಿಂದ ತೆರೆದುಕೊಳ್ಳಬೇಕು. ಈ ಹಿನ್ನಲೆಯಲ್ಲಿ ಒಂದಷ್ಟು ಶಿಸ್ತು-ಸಂವಿಧಾನಗಳನ್ನು ಜೊತೆಗಿರಿಸಿಕೊಂಡು ಮುನ್ನಡೆಯಬೇಕೆಂದಿದೆ ಪ್ರತಿಷ್ಠಾನ. ಈ ಅನ್ವೇಷಣೆಯ ಹೆಜ್ಜೆಗಳ ಜೊತೆ ನಿಮ್ಮ ಹೆಜ್ಜೆಯೂ ಇದೆ ತಾನೇ? ಸ್ವಾಗತವಿದೆ.</span></span></p>
<p style="text-align: justify;"><span style="font-family: Tunga;"><span style="color: #000000;"><strong> </strong></span></span></p>
<p style="text-align: justify;"><span style="font-family: Tunga;"><span style="color: #000000;"><strong>ಪ್ರೀತಿಯಿಂದ, </strong></span></span></p>
<p style="text-align: justify;"><span style="font-family: Tunga;"><span style="color: #000000;"><strong>ಸಂಪಾದಕರು</strong></span></span></p>
<p style="text-align: justify;">
<p style="text-align: justify;">
]]></content:encoded>
			<wfw:commentRss>http://www.noopurabhramari.com/manjira/%e0%b2%ae%e0%b2%be%e0%b2%b0%e0%b3%8d%e0%b2%97%e0%b2%b6%e0%b3%80%e0%b2%b0-%e0%b2%aa%e0%b3%81%e0%b2%b7%e0%b3%8d%e0%b2%af-%e0%b3%a8%e0%b3%a6%e0%b3%a7%e0%b3%a7-%e0%b2%a8%e0%b2%b5%e0%b3%86%e0%b2%82/feed</wfw:commentRss>
		<slash:comments>0</slash:comments>
		</item>
		<item>
		<title>ಅಶ್ವೀಜ-ಕಾರ್ತಿಕ ೨೦೧೧ (ಅಕ್ಟೋಬರ್-ಡಿಸೆಂಬರ್)</title>
		<link>http://www.noopurabhramari.com/manjira/virahotkantithe</link>
		<comments>http://www.noopurabhramari.com/manjira/virahotkantithe#comments</comments>
		<pubDate>Sat, 15 Oct 2011 11:38:51 +0000</pubDate>
		<dc:creator>ಸಂಪಾದಕಿ</dc:creator>
				<category><![CDATA[ಮಂಜೀರ]]></category>
		<category><![CDATA[Ashta nayika]]></category>
		<category><![CDATA[ನರ್ತನ]]></category>
		<category><![CDATA[ನೃತ್ಯ]]></category>
		<category><![CDATA[ನೂಪುರಭ್ರಮರಿ]]></category>
		<category><![CDATA[bhakti bhava in dance]]></category>
		<category><![CDATA[Bharathanatyam]]></category>
		<category><![CDATA[bharathanatyam artist]]></category>
		<category><![CDATA[bhramari]]></category>
		<category><![CDATA[chikka bhoopala]]></category>
		<category><![CDATA[Classical Dance]]></category>
		<category><![CDATA[Cultural Journalism]]></category>
		<category><![CDATA[Cultural magazine]]></category>
		<category><![CDATA[Dance]]></category>
		<category><![CDATA[dance artst]]></category>
		<category><![CDATA[journalism]]></category>
		<category><![CDATA[magazine]]></category>
		<category><![CDATA[manjeera]]></category>
		<category><![CDATA[manorama]]></category>
		<category><![CDATA[natya]]></category>
		<category><![CDATA[nayika abhinaya]]></category>
		<category><![CDATA[nayika bhaava]]></category>
		<category><![CDATA[nayike in dance]]></category>
		<category><![CDATA[noopura]]></category>
		<category><![CDATA[noopura bhramari]]></category>
		<category><![CDATA[nrutya]]></category>
		<category><![CDATA[viraha in dance]]></category>
		<category><![CDATA[virahotkantitha nayika sahitya]]></category>
		<category><![CDATA[virahotkantithe]]></category>

		<guid isPermaLink="false">http://www.noopurabhramari.com/?p=1730</guid>
		<description><![CDATA[‘.. ಭರತನಾಟ್ಯ ಕಲಾವಿದರಿಗೆ ವಿರಹದುರಿ ಹೆಚ್ಚಾಗಿದೆಯೆನಿಸುತ್ತದೆ.. ’ ಈ ಮಾತುಗಳನ್ನು ಕೇಳಿದಾಕ್ಷಣ ಬೆಚ್ಚಿಬಿದ್ದಿದ್ದೆ. ಸಾವರಿಸಿಕೊಂಡರೆ ನಿಜವೆನಿಸಿತು. ಬೇಕಾದರೆ ಗಮನಿಸಿ ನೋಡಿ.‘ಇಂದಿನ ವರ್ಣದ ನಾಯಿಕೆ ವಿರಹೋತ್ಕಂಠಿತೆ’ ಎಂಬ ನಿರೂಪಣೆಯ ಜಾಳನ್ನು ಕೇಳಿ, ಅದರ ಜಾಡನ್ನು ಹಿಡಿಯುವ ಹೊತ್ತಿಗೆ ಜಾಡ್ಯ ಹತ್ತಿ ತಲೆ ಚಿಟ್ಟು ಹಿಡಿಯುತ್ತಿರುವುದಂತೂ ಹೌದು. ಇಂದಿನ ಬಹುಪಾಲು ಭರತನಾಟ್ಯ ಕಾರ್ಯಕ್ರಮಗಳಲ್ಲಿ, ರಂಗಪ್ರವೇಶಗಳಲ್ಲಿ, ಪರೀಕ್ಷೆಗಳಲ್ಲಿ ವಿರಹದ ಪ್ರದರ್ಶನ ಯಾವ ಮಟ್ಟಿಗೆ ಮುಟ್ಟಿದೆಯೆಂದರೆ ಬೇರೆ ಯಾವ ವಸ್ತುಗಳನ್ನು ಆರಿಸಿದರೂ ಅದು ಅಪಚಾರ ಎಂಬಲ್ಲಿಯವರೆಗೆ. ಅಷ್ಟೇ ಏಕೆ, ಆಗ ತಾನೇ ಪ್ರಾಯಪ್ರಬುದ್ಧರಾಗುತ್ತಿರುವ, [...]]]></description>
			<content:encoded><![CDATA[<p style="text-align: justify;"><span><span style="color: #000000;">‘</span></span><span style="font-family: Tunga;"><span style="color: #000000;">.. ಭರತನಾಟ್ಯ ಕಲಾವಿದರಿಗೆ ವಿರಹದುರಿ ಹೆಚ್ಚಾಗಿದೆಯೆನಿಸುತ್ತದೆ.. </span></span><span><span style="color: #000000;">’</span></span><span style="font-family: Tunga;"><span style="color: #000000;"> ಈ ಮಾತುಗಳನ್ನು ಕೇಳಿದಾಕ್ಷಣ ಬೆಚ್ಚಿಬಿದ್ದಿದ್ದೆ. ಸಾವರಿಸಿಕೊಂಡರೆ ನಿಜವೆನಿಸಿತು. ಬೇಕಾದರೆ ಗಮನಿಸಿ ನೋಡಿ.</span></span><span><span style="color: #000000;">‘</span></span><span style="font-family: Tunga;"><span style="color: #000000;">ಇಂದಿನ ವರ್ಣದ ನಾಯಿಕೆ ವಿರಹೋತ್ಕಂಠಿತೆ</span></span><span><span style="color: #000000;">’</span></span><span style="font-family: Tunga;"><span style="color: #000000;"> ಎಂಬ ನಿರೂಪಣೆಯ ಜಾಳನ್ನು ಕೇಳಿ, ಅದರ ಜಾಡನ್ನು ಹಿಡಿಯುವ ಹೊತ್ತಿಗೆ ಜಾಡ್ಯ ಹತ್ತಿ ತಲೆ ಚಿಟ್ಟು ಹಿಡಿಯುತ್ತಿರುವುದಂತೂ ಹೌದು. ಇಂದಿನ ಬಹುಪಾಲು ಭರತನಾಟ್ಯ ಕಾರ್ಯಕ್ರಮಗಳಲ್ಲಿ, ರಂಗಪ್ರವೇಶಗಳಲ್ಲಿ, ಪರೀಕ್ಷೆಗಳಲ್ಲಿ ವಿರಹದ ಪ್ರದರ್ಶನ ಯಾವ ಮಟ್ಟಿಗೆ ಮುಟ್ಟಿದೆಯೆಂದರೆ ಬೇರೆ ಯಾವ ವಸ್ತುಗಳನ್ನು ಆರಿಸಿದರೂ ಅದು ಅಪಚಾರ ಎಂಬಲ್ಲಿಯವರೆಗೆ. ಅಷ್ಟೇ ಏಕೆ, ಆಗ ತಾನೇ ಪ್ರಾಯಪ್ರಬುದ್ಧರಾಗುತ್ತಿರುವ, ಕಿಶೋರ ವಯಸ್ಸಿಗೆ ಕಾಲಿಡುವ ಹುಡುಗಿಯರೂ ವಿರಹವನ್ನು ತರಹೇವಾರಿಯಾಗಿ ಎತ್ತಿ ಆಡಿಸುವಷ್ಟು ಪ್ರಸಿದ್ಧ, ಪ್ರಚಲಿತ. ಯಾವ ವರ್ಣ, ಪದಗಳ ಅಭಿನಯದಲ್ಲೂ..ವಿರಹ, ವಿರಹ, ವಿರಹ. ಒಟ್ಟಿನಲ್ಲಿ ಕಲಾರಸಿಕರಿಗೆ ವಿರಹದುರಿ ಮೈಮನಸ್ಸಾದಿಯಾಗಿ ನೂರು ತರಹದಲ್ಲಿ ಬೆನ್ನಟ್ಟಿ ಬೆದರಿಸಲಾರಂಬಿಸಿದೆ. ವಿರಹದುರಿ ಹೆಚ್ಚಾಗಿದ್ದಕ್ಕೋ ಏನೋ ಪ್ರೋಷಿತ ಪತಿಕೆ, ಅಭಿಸಾರಿಕೆ, ವಿಪ್ರಲಬ್ಧೆ, ಖಂಡಿತೆ, ಸ್ವಾಧೀನಪತಿಕೆಯರು ಸೋಲೊಪ್ಪಿಕೊಂಡು ಪುಸ್ತಕ-ಪರೀಕ್ಷೆಗಳಲ್ಲಷ್ಟೇ ಜೀವಂತವಾಗಿ, ಹೇಳಹೆಸರಿಲ್ಲದಂತೆ ನರ್ತನದಲ್ಲಿ ಅವಸಾನ ಕಾಣುತ್ತಿದ್ದಾರೆ. </span></span><span><span style="color: #000000;">‘</span></span><span style="font-family: Tunga;"><span style="color: #000000;">ಆಟಕ್ಕುಂಟು, ಲೆಕ್ಕಕ್ಕಿಲ್ಲ</span></span><span><span style="color: #000000;">’</span></span><span style="font-family: Tunga;"><span style="color: #000000;"> ಎಂಬ ಮಾತು ಇವರನ್ನು ಕಂಡೇ ಹೇಳಿದ್ದಾರೇನೋ ಎಂದನ್ನಿಸದಿರದು.</span></span></p>
<p style="text-align: justify;"><span style="font-family: Tunga;"><span style="color: #000000;">ಇದೇಕೆ ಹೀಗೆ? </span></span><span><span style="color: #000000;">‘</span></span><span style="font-family: Tunga;"><span style="color: #000000;">ಈ ಪರಿಯ ಸೊಬಗಾವ ಬೇರೆ ನಾಯಿಕೆಯಲಿ ನಾಕಾಣೆ</span></span><span><span style="color: #000000;">’</span></span><span style="font-family: Tunga;"><span style="color: #000000;"> ಎಂದೋ? ಸವಕಲು ಸಂಚಾರಿ ಭಾವಗಳನ್ನೇ ಮತ್ತೆ ಮತ್ತೆ ಮಾಡಿಕೊಂಡು ಹೋಗಲು ಸುಲಭ ಎಂದೋ? ಅಥವಾ ನಮ್ಮ ಕಲಾವಿದರಲ್ಲಿ ಕಲ್ಪನೆಯ ಅಂಶಕ್ಕೆ ಅವಕಾಶವಿಲ್ಲವೆಂದೋ? ಇಲ್ಲವೇ ಹೊಸ ವಸ್ತುಗಳನ್ನು, ಸಂಚಾರಿಗಳನ್ನು ನಿಭಾಯಿಸಲು ಭಯವೇಂದೋ? ಅಶಕ್ತಿಯೇ? ಅಥವಾ ಅದೊಂದೇ ಕಲಾವಿದರೆನಿಸಿಕೊಂಡವರ ಬಂಡವಾಳವೇ?</span></span></p>
<p style="text-align: justify;"><span style="font-family: Tunga;"><span style="color: #000000;">ಅದರಲ್ಲೂ ವಿರಹೋತ್ಕಂಠಿತಾ ನಾಯಿಕೆಯೆಂದಾದರೆ ಕುಳಿತಲ್ಲಿಂದಲ್ಲೇ ಕಲಾವಿದರ ಭಾವಗಳ ಕಣಿ ಹೇಳಬಹುದು, ರಸಗಳ ಕಣಿ(ಹೊಂಡ) ತೋಡಲೂಬಹುದು. ಕಾರಣ ಇಷ್ಟೇ. ನಾಯಿಕೆಯ ಬೇಸರ, ವಿರಕ್ತಿ, ಹೂವು-ಬಳೆ-ಆಭರಣ ಕಿತ್ತೆಸೆಯುವುದು, ಆಹಾರಾದಿಗಳನ್ನು ವರ್ಜ್ಯಗೊಳಿಸಿ ನಾಯಕನ ಬರುವಿಕೆಗೆ ಕಾಯುತ್ತಾ ಖಿನ್ನಳಾಗುವುದು ಮಾಮೂಲಿ ಪರಿಪಾಠ. ಬಹುಷಃ ಉತ್ತರ- ಹಳಸಲು ಆಹಾರಕ್ಕೂ ಬೇಡಿಕೆ ಎಂದಿದ್ದರೆ ಅದು ಇಂದಿನ ಭರತನಾಟ್ಯ ನೃತ್ಯಕ್ರಮದಲ್ಲಿ ಎಂದು ಘಂಟಾಘೋಷವಾಗಿ ಹೇಳಲಿಕ್ಕಿರಬಹುದು.</span></span></p>
<p style="text-align: justify;"><span style="font-family: Tunga;"><span style="color: #000000;">ಇವುಗಳಿಗೆ ಅಪವಾದವೆನ್ನಿಸುವ ಪ್ರತಿಭಾವಂತ ಕಲಾವಿದರು ಇಲ್ಲವೆಂದಲ್ಲ. ಆದರೆ ವಿರಹದುರಿಯ ಕಲಾವಿದರ ಮುಂದೆ ಅವರದ್ದು ಹರದಾರಿ ದೂರದ ಬದುಕು. ಹಾಗಾಗಿ ಚ್ಯೂಯಿಂಗ್‌ಗಮ್‌ನಂತೆ ಎಳೆದೂ ಎಳೆದೂ ರಸವನ್ನೇ ಹಿಂಡಿ ಹಾಕುವವರಿಗಿದು ಕಾಲ ಎಂದೆನಿಸುವುದರಲ್ಲಿ ಅತಿಶಯವಿಲ್ಲ. ವಿದ್ವಾನ್, ವಿದುಷಿಯೆನಿಸಿಕೊಂಡ ಬಹಳ ಜನರದ್ದೂ ಇದೇ ಜಾಯಮಾನ. ಒಂದು ವೇಳೆ ಪ್ರಶ್ನೆ ಎಸೆದರೆ </span></span><span><span style="color: #000000;">‘</span></span><span style="font-family: Tunga;"><span style="color: #000000;">ಸಾಹಿತ್ಯವೇ ಹಾಗೆ. ಸಂಪ್ರದಾಯವೇ ಹಾಗಾಗಿದೆ</span></span><span><span style="color: #000000;">’</span></span><span style="font-family: Tunga;"><span style="color: #000000;"> ಎಂಬ ಹಾರಿಕೆಯ ಜಾಣ ಉತ್ತರ.</span></span></p>
<p style="text-align: justify;"><span style="font-family: Tunga;"><span style="color: #000000;">ಸರಿ, ಸಾಹಿತ್ಯದಲ್ಲೇ ಲೋಪವೆಂದಾದರೆ ಎಂದಿನ ತಮಿಳು ಸಾಹಿತ್ಯವೇ ಆಗಬೇಕೇ? ಅದರಲ್ಲಿ ವಿರಹದ ವಿನಃ ಆಯ್ಕೆಯೇ ಇಲ್ಲವೇ? ಕನ್ನಡ ಸಾಹಿತ್ಯಸಂಪತ್ತು ಬರಿದೇ? ದಾಸರ ಪದಗಳಿಂದ ಮೊದಲ್ಗೊಂಡು ಎಷ್ಟು ಸಾಹಿತ್ಯ ನಮ್ಮಲ್ಲಿಲ್ಲ ಹೇಳಿ? ಹಾಗೆ ನೋಡಿದರೆ ಚಿಕ್ಕಭೂಪಾಲನಿಂದ ಮೊದಲ್ಗೊಂಡು ಈ ವರೆಗೆ ಬಂದಿರುವ ಕನ್ನಡದ ಜಾವಳಿಗಳಲ್ಲೇ ಈ ಬಗೆಯ ಚರ್ವಿತಚರ್ವಣವಿಲ್ಲದಂತ ಸಂಪದ್ಭರಿತ ಸಾಲುಗಳಿವೆ. ಅವುಗಳಲ್ಲಿ ವರ್ಣಕ್ಕೆ ಅನುಸರಣಾರ್ಹ ಮನೋಧರ್ಮ ಕಾಣದೇ ಕಲಾವಿದರಿಗೆ?</span></span></p>
<p style="text-align: justify;"><span style="font-family: Tunga;"><span style="color: #000000;">ಖಂಡಿತಾ ಕಂಡೀತು. ಆದರೇನು ಮಾಡೋಣ? ಜಡ್ಡು ಹಿಡಿದ ಮನಸ್ಸುಗಳ ಫಲ ನೂರಾರು ಕಾರಣಗಳನ್ನು ಕೊಡುತ್ತದೆ. ಕಂದಿಹೋದ ಪ್ರತಿಭೆ ಅಸಂಬದ್ಧವನ್ನೆ ಮಾಡುತ್ತದೆ. ತತ್ಫಲವಾಗಿ ಅನ್ವೇಷಣೆ ಅಸಾಧ್ಯವಾಗುತ್ತದೆ;ಅಸಾಧುವೆನಿಸಿಕೊಳ್ಳುತ್ತದೆ. ಮನಸ್ಸಿದ್ದಂತೆ ಮಾರ್ಗ! ಈಗಂತೂ ಶಾಸ್ತ್ರ, ಸಂಪ್ರದಾಯದ ಮೇಲಿರುವ ಗೂಬೆಯಿಂದಾಗಿ ಬೆಳಕಿದ್ದರೂ ಕತ್ತಲಲ್ಲೇ ಕಣ್ಣುಬಿಡುವ ನಿಶಾಚರ ಪ್ರವೃತ್ತಿ ನಮ್ಮದು. ಹಾಗಾಗಿ ವಿಸ್ತಾರವಿಲ್ಲದ ಮಬ್ಬು ಮಬ್ಬು ಬಾವಿಯೊಳಗಿನ ಜಗತ್ತೇ ಬ್ರಹ್ಮಾಂಡವೆಂದುಕೊಳ್ಳುತ್ತೇವೆ. ರಸಾಸ್ವಾದನೆಗೆ ಬಂದ ಪ್ರೇಕ್ಷಕಮಹಾಪ್ರಭುಗಳನ್ನು ಮೂರ್ಖರೆಂದು ಬಗೆಯುತ್ತೇವೆ. ನಮ್ಮೊಳಗಿನ ನ್ಯೂನತೆಗಳು ನಮ್ಮನ್ನೇ ನಿಂತು ಅಣಕಿಸುವುದನ್ನು ತಿಳಿಯದ ಮುಗ್ಧರು ನಾವು ??!! ದುರಂತ&#8230;!!</span></span></p>
<p style="text-align: justify;"><span style="font-family: Tunga;"><span style="color: #000000;">ಅಂತೆಯೇ ಭಕ್ತಿಯೂ ಕೂಡಾ.. ಭಕ್ತಿ, ವಿರಹವನ್ನು ಕೊಂಡಾಡಿದಷ್ಟು ನಮ್ಮಲ್ಲಿ ಇತರೆ ರಸ-ಭಾವಗಳನ್ನು ಕಣ್ಬಿಟ್ಟೂ ನೋಡಿದವರು ಭಾರೀ ಅಪರೂಪ. ನವರಸಗಳೇನಿದ್ದರೂ ಪೋಷಕವೆಂಬಂತ ಧೋರಣೆಯಿಂದಾಗಿ ನೃತ್ಯದಲ್ಲಿ ಅಲ್ಲೊಂದು ಇಲ್ಲೊಂದು </span></span><span><span style="color: #000000;">‘</span></span><span style="font-family: Tunga;"><span style="color: #000000;">ನವರಸ ಪ್ರತಿಪಾದನೆ</span></span><span><span style="color: #000000;">’</span></span><span style="font-family: Tunga;"><span style="color: #000000;">ಯಾದಲ್ಲಿಗೆ ಕತವ್ಯದಿಂದ ಕೈತೊಳೆದುಕೊಂಡ ನಿರಾಳ ಭಾವ. ಅದರಲ್ಲೂ ಅತ್ತ ಭಕ್ತಿಯನ್ನೂ, ಇತ್ತ ಪ್ರೇಮ-ಶೃಂಗಾರವನ್ನೂ ಅಭಿವ್ಯಕ್ತಿಸಲು ಬಾರದವರಿಗೆ ಮಧುರ ಭಕ್ತಿ ಎಂಬೆಲ್ಲಾ ನಾಮವಿಶೇಷಣಗಳ ಸಹಾಯಬಲ ನಿಜಕ್ಕೂ ಒಂದು ವರವೇ ಸರಿ ! ಹಾಗೆಂದು ಭಕ್ತಿಯನ್ನೂ ರಸದ ಪ್ರಕಾರವೆಂದು ಒಪ್ಪಿಕೊಂಡವರೂ ದಶಕಗಳಿಂದ ಇದ್ದಾರೆ, ಅಂತೆಯೇ ಹೀಗಳೆದವರೂ ಇದ್ದಾರೆ. ಮಧುರಭಕ್ತಿಯನ್ನು ಸುಂದರವಾಗಿ ಪ್ರಕಟಪಡಿಸಿದವರೂ ನಮ್ಮಲ್ಲಿ ಅನೇಕ. ಅಂತೆಯೇ ತಿಪ್ಪೆಯ ತೊಪ್ಪೆಯನ್ನಾಗಿಸಿದವರೂ ಇದ್ದಾರೆ. ಅದು ನಮ್ಮ ಚರ್ಚೆಯ ವಿಷಯವಲ್ಲ. ಆದರೆ ಭಕ್ತಿ-ವಿರಹದ ಪರಾಕಾಷ್ಠೆಯಲ್ಲಿ ಉಳಿದ ರಸ-ಭಾವಗಳು, ಪ್ರೇಕ್ಷಕನ ರಸದೃಷ್ಟಿ, ಪ್ರತಿಭಾವಂತರ ನೋಟ ಕಾಷ್ಠಕ್ಕೇರದಿದ್ದರೆ ಅದೇ ಒಂದು ಪುಣ್ಯ !!</span></span></p>
<p style="text-align: justify;"><span style="font-family: Tunga;"><span style="color: #000000;">ಬಹುಷಃ ನಮ್ಮ ನಾಡಿನ ನೃತ್ಯಪರಂಪರೆಯಲ್ಲಿ ಹಿಂದೆಂದೂ ಇಲ್ಲದ ಬರಗಾಲ ಇತ್ತೀಚಿನ ದಶಕಗಳಲ್ಲೇ ವ್ಯಾಪಕವಾಗುತ್ತಿದೆ. ಆದರೆ ಅದನ್ನೇ ಸಂಪತ್ತು, ಪ್ರತಿಭೆ ಎಂದು ಬಗೆಯುವ ಮುಗ್ಧ ಮಹಾತ್ಮರೂ, ನಿರ್ಲಜ್ಜ ನರ್ತಕರೂ ನಮ್ಮಲ್ಲಿ ಸಾಕಷ್ಟಿದ್ದಾರೆ. </span></span><span><span style="color: #000000;">‘</span></span><span style="font-family: Tunga;"><span style="color: #000000;">ವಿದ್ವತ್ತು</span></span><span><span style="color: #000000;">’</span></span><span style="font-family: Tunga;"><span style="color: #000000;"> ಎಂಬ ಪದಕ್ಕೇ ಅಪಚಾರವೆಸಗುತ್ತಿದ್ದಾರೆ. ಪರಿಣಾಮ ನಮ್ಮೊಳಗಿನ ಸತ್ತ್ವವನ್ನು ಅರ್ಥ ಮಾಡಿಕೊಳ್ಳದೆ ಉಳಿದವರಿಗೆ ಊಳಿಗದವರಾಗುವ ಸ್ಥಿತಿ. ನಾಚಿಕೆಗೇಡು..</span></span></p>
<p style="text-align: justify;"><span style="font-family: Tunga;"><span style="color: #000000;"><strong> </strong></span></span></p>
<p style="text-align: justify;"><span style="font-family: Tunga;"><span style="color: #000000;"><strong>ಕಳೆದ ಸೆಪ್ಟೆಂಬರ್‌ನಲ್ಲಿ ೯ ದಿನಗಳ ಆಸುಪಾಸಿನೊಳಗೆ ಕಲಾಪ್ರಪಂಚ ಈರ್ವರು ಹಿರಿಯ ವಿದ್ವನ್ಮಣಿಗಳನ್ನು ಕಳೆದುಕೊಂಡಿದೆ. ನೂಪುರ ಭ್ರಮರಿಯಿಂದ ಈ ಸಂಚಿಕೆಯನ್ನು ಅವರೀರ್ವರಿಗೂ ನುಡಿ-ನಮನ-ಅಂಜಲಿಯಾಗಿ ಅರ್ಪಿಸಲಾಗುತ್ತಿದೆ.</strong></span></span></p>
<p style="text-align: justify;"><span style="font-family: Tunga;"><span style="color: #000000;"><strong> </strong></span></span></p>
<p style="text-align: justify;"><span style="font-family: Tunga;"><span style="color: #000000;"><strong>ಪ್ರೀತಿಯಿಂದ, </strong></span></span></p>
<p style="text-align: justify;"><span style="font-family: Tunga;"><span style="color: #000000;"><strong>ಸಂಪಾದಕರು</strong></span></span></p>
]]></content:encoded>
			<wfw:commentRss>http://www.noopurabhramari.com/manjira/virahotkantithe/feed</wfw:commentRss>
		<slash:comments>0</slash:comments>
		</item>
		<item>
		<title>ಶ್ರಾವಣ-ಭಾದ್ರಪದ ೨೦೧೧ ( ಜುಲೈ -ಆಗಸ್ಟ್)</title>
		<link>http://www.noopurabhramari.com/manjira/july-august2011</link>
		<comments>http://www.noopurabhramari.com/manjira/july-august2011#comments</comments>
		<pubDate>Sun, 14 Aug 2011 20:25:31 +0000</pubDate>
		<dc:creator>ಸಂಪಾದಕಿ</dc:creator>
				<category><![CDATA[ಮಂಜೀರ]]></category>
		<category><![CDATA[art and religion]]></category>
		<category><![CDATA[ಎಂ.ಎಫ್. ಹುಸೇನ್]]></category>
		<category><![CDATA[ನರ್ತನ]]></category>
		<category><![CDATA[ನೃತ್ಯ]]></category>
		<category><![CDATA[ನೂಪುರಭ್ರಮರಿ]]></category>
		<category><![CDATA[ಮಾಸ್ಟರ್ ವಿಠಲ್]]></category>
		<category><![CDATA[ಕಲೆ ಮತ್ತು ಧರ್ಮದ ನೀತಿ]]></category>
		<category><![CDATA[ಕಲೆ ಮತ್ತು ಮತ]]></category>
		<category><![CDATA[Bharathanatyam]]></category>
		<category><![CDATA[Bharathanatyam gurus in Mangalore]]></category>
		<category><![CDATA[Classical Dance]]></category>
		<category><![CDATA[Cultural Journalism]]></category>
		<category><![CDATA[Cultural magazine]]></category>
		<category><![CDATA[Dance]]></category>
		<category><![CDATA[Indian Art and foriegeners]]></category>
		<category><![CDATA[M.F.Husain]]></category>
		<category><![CDATA[M.f.Husen]]></category>
		<category><![CDATA[madikeri]]></category>
		<category><![CDATA[mangalore dance masters]]></category>
		<category><![CDATA[manjeera]]></category>
		<category><![CDATA[manorama]]></category>
		<category><![CDATA[master vittal]]></category>
		<category><![CDATA[natya]]></category>
		<category><![CDATA[noopura]]></category>
		<category><![CDATA[noopura bhramari]]></category>
		<category><![CDATA[nrutya]]></category>
		<category><![CDATA[vatapi ganapatim bhaje]]></category>

		<guid isPermaLink="false">http://www.noopurabhramari.com/?p=1674</guid>
		<description><![CDATA[‘ಎಂ.ಎಫ್.ಹುಸೇನ್ ಸತ್ತಾಗ ಅವನನ್ನು ಹೊಗಳಿ ತುಚ್ಛ ತುಚ್ಛ ಲೇಖನಗಳು ಕರ್ನಾಟಕದ ಎಲ್ಲಾ ಮುಖ್ಯ ದಿನಪತ್ರಿಕೆಗಳಲ್ಲೂ ಬಂದಿದೆ. ತನಗೆ ಬೇಕಾದಷ್ಟು ತನ್ನ ಪಾಲಿನ ಅಶ್ಲೀಲತೆಯನ್ನು, ನಮ್ಮ ದೇಶದ ಕುರಿತು ಅನೇಕಾನೇಕ ನೀಚತನವನ್ನು ಹುಸೇನರು ತೋರ್ಪಡಿಸಿದುದನ್ನು ಹೇಸಿಗೆಯಿಲ್ಲದೆ ಹೊಗಳಿ ಬರೆದವರೂ ಇದ್ದಾರೆ. ಹಿಂದೆಯೂ ಒಂದೆರಡು ಬಾರಿ ಈ ಕುರಿತು ಓದಿದ್ದು ನೆನಪಿದೆ. ಆಗ ನಾನು ‘ಅಯ್ಯೋ’ ಇದನ್ನು ಓದುಗರು ಹೀಗೆ ಬಿಟ್ಟಿದ್ದಾರಲ್ಲಾ ಎಂದು ಚಿಂತಿಸುತ್ತಿದ್ದೆ. ಅದೇ ವಿಷಯ ಇಂದು ಮಾನವೀಯತೆಯನ್ನೆ ಹುಚ್ಚುಚ್ಚು ಮಾಡಿದೆ. ದಯವಿಟ್ಟು ಇದನ್ನು ಹೀಗೆ ಬಿಡದೆ ಪ್ರತೀಕಾರವೆಂಬ [...]]]></description>
			<content:encoded><![CDATA[<p style="text-align: justify;"><span><span style="color: #000000;">‘</span></span><span style="font-family: Tunga;"><span style="color: #000000;">ಎಂ.ಎಫ್.ಹುಸೇನ್ ಸತ್ತಾಗ ಅವನನ್ನು ಹೊಗಳಿ ತುಚ್ಛ ತುಚ್ಛ ಲೇಖನಗಳು ಕರ್ನಾಟಕದ ಎಲ್ಲಾ ಮುಖ್ಯ ದಿನಪತ್ರಿಕೆಗಳಲ್ಲೂ ಬಂದಿದೆ. ತನಗೆ ಬೇಕಾದಷ್ಟು ತನ್ನ ಪಾಲಿನ ಅಶ್ಲೀಲತೆಯನ್ನು, ನಮ್ಮ ದೇಶದ ಕುರಿತು ಅನೇಕಾನೇಕ ನೀಚತನವನ್ನು ಹುಸೇನರು ತೋರ್ಪಡಿಸಿದುದನ್ನು ಹೇಸಿಗೆಯಿಲ್ಲದೆ ಹೊಗಳಿ ಬರೆದವರೂ ಇದ್ದಾರೆ. ಹಿಂದೆಯೂ ಒಂದೆರಡು ಬಾರಿ ಈ ಕುರಿತು ಓದಿದ್ದು ನೆನಪಿದೆ. ಆಗ ನಾನು </span></span><span><span style="color: #000000;">‘</span></span><span style="font-family: Tunga;"><span style="color: #000000;">ಅಯ್ಯೋ</span></span><span><span style="color: #000000;">’</span></span><span style="font-family: Tunga;"><span style="color: #000000;"> ಇದನ್ನು ಓದುಗರು ಹೀಗೆ ಬಿಟ್ಟಿದ್ದಾರಲ್ಲಾ ಎಂದು ಚಿಂತಿಸುತ್ತಿದ್ದೆ. ಅದೇ ವಿಷಯ ಇಂದು ಮಾನವೀಯತೆಯನ್ನೆ ಹುಚ್ಚುಚ್ಚು ಮಾಡಿದೆ. ದಯವಿಟ್ಟು ಇದನ್ನು ಹೀಗೆ ಬಿಡದೆ ಪ್ರತೀಕಾರವೆಂಬ ಅಸ್ತ್ರವನ್ನು ಹೂಡಲೇಬೇಕು. ಸುಮ್ಮಗಿರಬಾರದು. ದಮ್ಮಯ್ಯ</span></span><span><span style="color: #000000;">’</span></span><span style="font-family: Tunga;"><span style="color: #000000;"> ಎಂದು ಕಳಕಳಿಯನ್ನು ಹೊತ್ತು ಬಂದ ಅಂಚೆಕಾರ್ಡು ಮಂಗಳೂರಿನಿಂದ ಕೈಸೇರಿತ್ತು. ಹಿರಿಯ ಗುರು ಮಾಸ್ಟರ್ ವಿಠಲ್ ತಮ್ಮ ಅಸಹನೆ, ನೋವನ್ನು ಬಿಚ್ಚಿಟ್ಟದ್ದು ಹೀಗೆ.</span></span></p>
<p style="text-align: justify;"><span style="font-family: Tunga;"><span style="color: #000000;"> </span></span><span><span style="color: #000000;">‘</span></span><span style="font-family: Tunga;"><span style="color: #000000;">ತೀರಿಹೋದವರ ಕುರಿತಂತೆ ಆಡಿಕೊಳ್ಳಬಾರದು</span></span><span><span style="color: #000000;">’</span></span><span style="font-family: Tunga;"><span style="color: #000000;"> ಎಂಬ ನಾಣ್ಣುಡಿಯನ್ವಯ ಚಿಂತನೆ ಮಾಡಹೊರಟರೆ ಈ ವಿಷಯದಲ್ಲಿ ಟೀಕೆಗಳನ್ನು ಮಾಡುವುದು ಸರಿಯಲ್ಲ ಎಂದೆನಿಸುವುದಿದೆ. ಅಷ್ಟಕ್ಕೂ ಇಲ್ಲಿ ಹುಸೇನರ ವ್ಯಕ್ತಿತ್ವವೋ ಅಥವಾ ಅವರ ಕುರಿತ ಶ್ರದ್ಧಾಂಜಲಿ ಲೇಖನಗಳೋ ನಮ್ಮ ಚರ್ಚೆಯ ವಿಷಯವೂ ಅಲ್ಲ. ಹಾಗಂತ ನಿಧನ ಹೊಂದಿದವರ ಮನುಷ್ಯ ಸ್ವಭಾವದ ಸಹಜತೆಯನ್ನು ಹೇಳುವ ಬದಲು ವೃಥಾ ಹೊಗಳಿಕೆಗಳನ್ನು ಆರೋಪಿಸುವುದೂ ನಮ್ಮಲ್ಲಿನ ಸಂಸ್ಕಾರಹೀನತೆಯ ಲಕ್ಷಣವಲ್ಲವೇ? ಅದೂ ಕಲೆ-ಧರ್ಮ-ಮತಗಳ ಮೂಲಭೂತ ಧರ್ಮಗಳೆಡೆಗೇ ವಿವಾದಾಸ್ಪದ ವಿಷಯಗಳನ್ನು ಹುಟ್ಟುಹಾಕಿದವರ ಲೋಪಗಳಿಗೆ ತೇಪೆ ಹಾಕುವ, ಕಣ್ಣಿದ್ದೂ ಕುರುಡಾಗುವ, ಜಾಣಕಿವುಡನ್ನು ಪ್ರದರ್ಶಿಸುವ ನಿರ್ಲಕ್ಷ್ಯ ಯಾವ ಪುರುಷಾರ್ಥಕ್ಕೆ?</span></span><span style="font-family: Tunga;"><span style="color: #000000;"><strong> </strong></span></span></p>
<p style="text-align: justify;"><span style="font-family: Tunga;"><span style="color: #000000;">ಯಾವುದೇ ಕಲೆಯ ಗುರಿ ಲಿಂಗ-ಮತ-ಧರ್ಮಗಳಾಚೆಗಿನ ಒಂದು ಅದ್ಭುತ ರಸಾನುಭವ. ಅದನ್ನು ಪೂರೈಸದವರು ಎಷ್ಟೇ ದೊಡ್ಡ ಕಲಾವಿದರೇ ಆಗಿರಲಿ ಅವರು ಕಲೆ ಮತ್ತು ಕಲಾವಂತಿಕೆಯ ದೃಷ್ಟಿಯಿಂದ ಅನಿವಾರ್ಯವಲ್ಲ, ಅವರ ಅಗತ್ಯವೂ ಇಲ್ಲ್ಲ. ಅದರಲ್ಲೂ ಮತ-ಧರ್ಮಗಳ ಪರಿಮಿತಿಯಲ್ಲಿ ಕಲೆಯನ್ನು ಕಟ್ಟಿಹಾಕುವುದೇ ಒಂದು ದೊಡ್ಡ ಮೂರ್ಖತನ. ಹೀಗಿರುವಾಗ ಮತ-ಧರ್ಮಗಳ ಅನುಷ್ಠಾನಕ್ಕೆ, ಮತ ಪ್ರಸಾರಕ್ಕೆ ಅಥವಾ ಪರಧರ್ಮ ನಿಂದೆಗೆ ಕಲೆಗಳನ್ನು ಬಳಸುವುದು ಕಲೆ ಮತ್ತು ಧರ್ಮದ ಹಿನ್ನಲೆಯಲ್ಲಿ ದೊಡ್ಡ ಅಪರಾಧವಷ್ಟೇ ಅಲ್ಲ; ಮಾನವೀಯತೆಗೆ ನೀಡುವ ಕೊಡಲಿಯೇಟು. ದುರಂತವೆಂದರೆ ಸಂಗೀತ ನೃತ್ಯಾದಿಗಳನ್ನೂ ಒಳಗೊಂಡಂತೆ ಚಿತ್ರಕಲೆ, ಶಿಲ್ಪಕಲೆ ಹೀಗೆ ಎಲ್ಲೆಡೆಯೂ</span></span><span><span style="color: #000000;">‘</span></span><span style="font-family: Tunga;"><span style="color: #000000;">ತಮ್ಮತನ</span></span><span><span style="color: #000000;">’</span></span><span style="font-family: Tunga;"><span style="color: #000000;">ದ ಅನಪೇಕ್ಷಿತ ವೈಭವೀಕರಣಕ್ಕೆ ಕಲೆಗಳನ್ನು ಅಸ್ತ್ರವನ್ನಾಗಿಸುವವರ ಸಂಖ್ಯೆ ಬಹಳ. ಅದಕ್ಕಿಂತಲೂ ಹೆಚ್ಚಾಗಿ ತಮಗೆ ಏನೇನೂ ಸಂಬಂಧವಿಲ್ಲವೆಂಬಂತೆ ಪ್ರಜ್ಞಾವಂತ ನಾಗರಿಕರೆನಿಸಿಕೊಂಡವರು ತೋರುವ ದಿವ್ಯ ನಿರ್ಲಕ್ಷ್ಯವು ಲಜ್ಜೆಗೇಡಿತನದ ಪರಮಾವಧಿ.</span></span></p>
<p style="text-align: justify;"><span style="font-family: Tunga;"><span style="color: #000000;">ಇಂತಹ ಪ್ರಯತ್ನಗಳ, ಅನುಭವಗಳ ಆಯುಷ್ಯ ಕ್ಷಣಿಕವೆಂಬುದು ವಿದಿತ. ನಿಜ, ಆದರೆ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷವೆಂಬುದು ಇಂತಹ ಸಂದರ್ಭಗಳಲ್ಲಿ ವೇದ್ಯವಾಗುವುದು ಕೊಳ್ಳೆ ಹೊಡೆದ ನಂತರ ಕೋಟೆ ಬಾಗಿಲು ಹಾಕಿದಂತೆಯೇ ! ಕಲಾ ದುರುಪಯೋಗವು ಸರಿಪಡಿಸಲಾರದ ಕಂದಕವನ್ನು ಉಂಟುಮಾಡಿದ ಉದಾಹರಣೆಗಳು ನಮ್ಮ ಇತಿಹಾಸದಲ್ಲಿ ಎಷ್ಟಿಲ್ಲ ಹೇಳಿ ? ಮತ್ತು ಅವೆಷ್ಟು ಬಗೆಯಲ್ಲಿ ತಿರುಚಲ್ಪಟ್ಟು ಶೈಕ್ಷಣಿಕ ಪಠ್ಯಗಳಲ್ಲೂ ತಿದ್ದಲಾರದ ಮಟ್ಟಿಗೆ ರೂಢಿಯಾಗಿಲ್ಲ? ಇದರಿಂದ ಧರ್ಮಕ್ಕೋ, ಕಲೆಗೋ ಚ್ಯುತಿ ಅಥವಾ ಹಾನಿಯಾಗಿ ಇತಿಹಾಸದ ಪುಟಗಳು ಶಾಪಗ್ರಸ್ಥವಾಗಿ, ವರ್ತಮಾನವೂ ಹೂತುಹೋಗುತ್ತಾ, ಭವಿಷ್ಯ ಪ್ರಶ್ನಾರ್ಥಕವಾಗಿ ಉಳಿಯುತ್ತಿದೆ. ಜೊತೆಗೆ ಸಮಾಜದ ಸ್ವಾಸ್ಥ್ಯವೂ ಕೆಡುತ್ತಾ ಮತ್ತೆಂದು ನಮ್ಮ ಪುರಾತನರನ್ನು ದಿಟ್ಟಿಸದಿರುವಷ್ಟರ ಮಟ್ಟಿಗಿನ ಪೂರ್ವಾಗ್ರಹ ಆವರಿಸಿಕೊಳ್ಳುತ್ತಲಿದೆ.</span></span></p>
<p style="text-align: justify;"><span style="font-family: Tunga;"><span style="color: #000000;">ಪ್ರತಿಯೊಂದು ಕಲೆಗಳೂ ತನ್ನದೇ ಆದ ಪರಿಸರ, ನೈಜ ಅಭಿವ್ಯಕ್ತಿ, ಪ್ರೇಕ್ಷಕ ವರ್ಗ, ಬೆಳವಣಿಗೆಯ ನೆಲೆಗಳಿಂದ ಕಾಲ-ದೇಶ-ಜನಗಳನ್ನನುಸರಿಸಿ ವೈವಿಧ್ಯವನ್ನು ಪಡೆದಿರುತ್ತವೆ. ಹೀಗಿರುವಾಗ ಯಾವುದೇ ಕಲೆಯನ್ನು ತಮ್ಮ ಅಯಾಚಿತ ಪ್ರಸಿದ್ಧಿಯ ಹಂಬಲಕ್ಕೋ; ತಮ್ಮ ಜಾತಿ, ಮತ, ಧರ್ಮದ ಪಾರಮ್ಯವೇ ಹೆಚ್ಚು ಎಂಬುದನ್ನು ಸಾಧಿಸುವುದಕ್ಕೋ; ಒಂದಷ್ಟು ಮತಪ್ರಚಾರ ನಡೆಸಲಿಕ್ಕೋ ಅಥವಾ ತಂತಮ್ಮ ಹೆಚ್ಚುಗಾರಿಕೆ, ಪಟ್ಟಭದ್ರ ಹಿತಾಸಕ್ತಿಗೋ; ಸರ್ಕಾರದ ಅನುದಾನ, ಪ್ರಯೋಜನಗಳ ಲಾಭ ಗಿಟ್ಟಿಸಿಕೊಳ್ಳಲೋ ಮತ್ತೊಂದು ಧರ್ಮದವರನ್ನು ಹೀಗಳೆದು ಇಲ್ಲವೇ ಅಪರೋಕ್ಷವಾಗಿ ಹೀಯಾಳಿಸಿ, ಊಹಾಪೋಹಗಳನ್ನು ಸೃಷ್ಟಿಸಿ ಅಥವಾ ವೃಥಾ ವೈಭವೀಕರಿಸಿ, ಸಮಕಾಲೀನದ ಮುಖವಾಡ ತೊಟ್ಟು ಸಂಕರ ನಡೆಸುವವರ ಜಾಯಮಾನ ಇಂದು ನಿನ್ನೆಯದಲ್ಲ. ಈ ಮೂಲಕ ಉಳಿದವರ ಕೆಂಗಣ್ಣಿಗೆ ಗುರಿಯಾಗುವುದನ್ನೇ ಗುತ್ತಿಗೆಗೆ ತೆಗೆದುಕೊಂಡವರಂತೆ ಬದುಕುವವರು ; ವಿರೋಧಿಸುವ, ವಾದಿಸುವ ನೆಪದಲ್ಲಿ ತಮ್ಮ ಉದ್ದೇಶಿತಾರ್ಥ ನೆರವೇರಿಸಿಕೊಳ್ಳುವವರೂ ನಮ್ಮ ನಡುವಿನಲ್ಲಿ ಸಾಕಷ್ಟು ಮಂದಿ ಇದ್ದಾರೆ. ಒಂದರ್ಥದಲ್ಲಿ ಈ ಬಗೆಯ ಮನೋಧರ್ಮ ಉಳಿದವರಿಗಿಂತ ವಿಭಿನ್ನವಾಗಿರುವ ಚಟಕ್ಕೆ ಋಣಾತ್ಮಕವಾಗಿಯಾದರೂ ಪ್ರಸಿದ್ಧಿಯನ್ನು ಪಡೆಯಬೇಕು ಎಂಬ ವಿಕೃತ ಆನಂದವೇ ಆಗಿರುತ್ತದೆ.</span></span></p>
<p style="text-align: justify;"><span style="font-family: Tunga;"><span style="color: #000000;">ಗೆಳೆಯರೊಬ್ಬರ ನಿಕಟವರ್ತಿಗಳ ಅನುಭವದ ನೈಜ ಘಟನೆ. ಸಂಗೀತ ಕಾಲೇಜೊಂದರ ಪ್ರಾಂಶುಪಾಲರಾಗಿ ಆಯ್ಕೆಯಾದ ಅವರಿಗೆ ಕೆಲವೇ ದಿನಗಳಲ್ಲಿ ಎದುರಾದ ದೊಡ್ಡ ಆಘಾತ &#8211; </span></span><span><span style="color: #000000;">‘</span></span><span style="font-family: Tunga;"><span style="color: #000000;">ವಾತಾಪಿ ಗಣಪತಿಂ ಭಜೇ</span></span><span><span style="color: #000000;">’</span></span><span style="font-family: Tunga;"><span style="color: #000000;"> ಕೀರ್ತನೆಯನ್ನು ಬೇರೊಂದು ಮತದ ದೇವರ ಹೆಸರನ್ನು ಹಾಕಿ ಅದೇ ಧಾಟಿಯಲ್ಲಿ ಹಾಡಿ, ಪಠ್ಯಕ್ರವುದಲ್ಲಿ ಸೇರಿಸಿ ಪ್ರಸಿದ್ಧಿಯಾಗಿಸಬೇಕೆಂಬ ಆಗ್ರಹಪೂರ್ವಕ ವಿನಂತಿ ! ಕೊನೆಗೆ ತಮ್ಮ ಆತ್ಮಸಾಕ್ಷಿಗೆ ದ್ರೋಹ ಬಗೆಯಲು ಮನಸ್ಸಿಲ್ಲದೆ ತಮ್ಮ ಕನಸಿನ ಹುದ್ದೆಗೆ ರಾಜೀನಾಮೆ ನೀಡಿ ವಾಪಾಸ್ಸಾದರಂತೆ ! ತಿಳಿದು ಬಂದ ಪ್ರಕರಣಗಳು ಕೆಲವು. ತಿಳಿಯದವು ಅದೆಷ್ಟೋ !</span></span></p>
<p style="text-align: justify;"><span style="font-family: Tunga;"><span style="color: #000000;">ಶತಶತಮಾನಗಳಿಂದಲೂ ನಮ್ಮ ಭರತಖಂಡದ ಮೇಲೆ ಅದೆಷ್ಟೋ ಆಕ್ರಮಣ, ಹಿಂಸೆ, ಅನಾಚಾರಗಳು, ಸನಾತನ ಪ್ರಜ್ಞೆಯ ಕುರಿತಂತೆ ಅಪಪ್ರಚಾರಗಳು ನಡೆಯುತ್ತಾ ಬಂದಿವೆ. ಆದರೂ ಇಲ್ಲಿನ ಯಾವ ಮಾದರಿಗೂ ಕುಟಿಲ ತಂತ್ರಾಲೋಚನೆಗಳು ಆದರ್ಶವಾಗಲೇ ಇಲ್ಲ. ಬದಲಾಗಿ ದಾಳಿ ಮಾಡಿದ ಎಲ್ಲಾ ಸಂಸ್ಕೃತಿಗಳಿಗೂ </span></span><span><span style="color: #000000;">‘</span></span><span style="font-family: Tunga;"><span style="color: #000000;">ಆನೋ ಭದ್ರಾಃ ಕೃತವೋ ಯಂತು ವಿಶ್ವತಃ</span></span><span><span style="color: #000000;">’</span></span><span style="font-family: Tunga;"><span style="color: #000000;"> ಎನ್ನುತ್ತಲೇ ಸದಾಕಾಲವು ಸ್ವಾಗತಿಸುತ್ತಾ ಬಂದಿರುವ ಸಮೃದ್ಧ ರಾಷ್ಟ್ರ ನಮ್ಮದು. ಆದ್ದರಿಂದಲೇ ಮೊಗೆದಷ್ಟೂ ಬತ್ತದ ಅನಂತ ಸತ್ತ್ವ, ತತ್ತ್ವ,, ಆಧಾತ್ಮ, ಜ್ಞಾನ ಸಾಗರದ ತವರಿಗೆ ಇಂದಿಗೂ ಅದೆಷ್ಟೋ ಸಹೃದಯಿ ವಿದೇಶಿಯರು ಆಕರ್ಷಿತರಾಗುತ್ತಲೇ ಇದ್ದಾರೆ. ಹಾಗಿದ್ದಾಗ ನಮ್ಮ ಸಂಸ್ಕೃತಿಗೆ ನಾವೇ iಸಿ ಬಳಿಯುವುದೂ ಒಂದೇ; ತೆಪ್ಪಗೆ ಇರುವುದೂ ಒಂದೇ !</span></span></p>
<p style="text-align: justify;"><span style="font-family: Tunga;"><span style="color: #000000;">ಕಲೆಯನ್ನೇ ಪ್ರಲೋಭನೆಗೆ, ಮಾರಾಟಕ್ಕೆ ಇಡುವ, ಸ್ವಹಿತಾಸಕ್ತಿಯ ಲೋಭಕ್ಕೆ ಬಳಸುವ ಕೀಳು, ಬೋಳು ವ್ಯಕ್ತಿತ್ವಗಳ ದಾಹಕ್ಕೆ ಕಲೆಗಳೂ ಪ್ರತೀಕವೆಂಬಂತೆಯೇ ಆಗಿಬಿಡುವ ಅಪಾಯ ನಿಧಾನವಾಗಿ ಗೋಚರಿಸುತ್ತದೆ. ಆದರೆ ಭೂತ, ವರ್ತಮಾನ, ಭವಿಷ್ಯ ಎಲ್ಲವೂ ಭ್ರಷ್ಟವಾಗುವ ವರೆಗೆ, ಅದರ ಇತಿಹಾಸವು ಹೆಪ್ಪುಗಟ್ಟುವ ತನಕ ಎಲ್ಲಾ ದಾರ್ಷ್ಟ್ಯ, ದೌರ್ಜನ್ಯಗಳಿಗೆ ನಮ್ಮ ಮೌನವೇ ಉತ್ತರವಾದರೆ ಅದು ಬಹಳಷ್ಟು ಸಲ </span></span><span><span style="color: #000000;">‘</span></span><span style="font-family: Tunga;"><span style="color: #000000;">ಸಮ್ಮತಿ ಲಕ್ಷಣ</span></span><span><span style="color: #000000;">’</span></span><span style="font-family: Tunga;"><span style="color: #000000;">ವೇ ಆಗಿ ಕರಾಳ ಅಧ್ಯಾಯದ ಸರಪಣಿಯೇ ನಮ್ಮನ್ನು ಹಿಂಬಾಲಿಸಬಹುದು. ಎಚ್ಚೆತ್ತುಕೊಳ್ಳುವ ವೇಳೆಗೆ ಕೈಮೀರಿ ಹೋಗಬಹುದು.</span></span></p>
<p style="text-align: justify;"><span style="font-family: Tunga;"><span style="color: #000000;">ಶಿಕ್ಷಣ, ಆಧ್ಯಾತ್ಮ, ಕಲೆಗೆ ಅಂಟುವ ಕಳಂಕ ಎಂದೆಂದಿಗೂ ಮಾಸದ ಗಾಯವಾಗುತ್ತದೆ. ಎಚ್ಚರ !</span></span></p>
<p style="text-align: justify;"><span style="font-family: Tunga;"><span style="color: #000000;"><strong> </strong></span></span></p>
<p style="text-align: justify;"><span style="font-family: Tunga;"><span style="color: #000000;"> </span></span></p>
<p style="text-align: right;"><span style="font-family: Tunga;"><span style="color: #000000;"><strong>ಪ್ರೀತಿಯಿಂದ, </strong></span></span></p>
<p style="text-align: right;"><span style="font-family: Tunga;"><span style="color: #000000;"><strong>ಸಂಪಾದಕರು</strong></span></span></p>
]]></content:encoded>
			<wfw:commentRss>http://www.noopurabhramari.com/manjira/july-august2011/feed</wfw:commentRss>
		<slash:comments>0</slash:comments>
		</item>
		<item>
		<title>ಜ್ಯೇಷ್ಟ ಆಷಾಢ ( ಮೇ-ಜೂನ್ ೨೦೧೧)</title>
		<link>http://www.noopurabhramari.com/manjira/may-june2011</link>
		<comments>http://www.noopurabhramari.com/manjira/may-june2011#comments</comments>
		<pubDate>Wed, 15 Jun 2011 17:50:59 +0000</pubDate>
		<dc:creator>ಸಂಪಾದಕಿ</dc:creator>
				<category><![CDATA[ಮಂಜೀರ]]></category>
		<category><![CDATA[ನರ್ತನ]]></category>
		<category><![CDATA[ನೃತ್ಯ]]></category>
		<category><![CDATA[ನೂಪುರಭ್ರಮರಿ]]></category>
		<category><![CDATA[bani system of bahrathanatyam]]></category>
		<category><![CDATA[Bharathanatyam]]></category>
		<category><![CDATA[bhramari]]></category>
		<category><![CDATA[Classical Dance]]></category>
		<category><![CDATA[Cultural Journalism]]></category>
		<category><![CDATA[Dance]]></category>
		<category><![CDATA[dandayudhapani pillai student]]></category>
		<category><![CDATA[jayalakshmi alva]]></category>
		<category><![CDATA[jayalaxmi alwa]]></category>
		<category><![CDATA[jeshta ashadha sanchike]]></category>
		<category><![CDATA[madikeri]]></category>
		<category><![CDATA[manorama]]></category>
		<category><![CDATA[natya]]></category>
		<category><![CDATA[noopura]]></category>
		<category><![CDATA[noopura bhramari]]></category>
		<category><![CDATA[nrutya]]></category>
		<category><![CDATA[school of bharathanatyam]]></category>
		<category><![CDATA[styles of Bharathanatyam]]></category>

		<guid isPermaLink="false">http://www.noopurabhramari.com/?p=1633</guid>
		<description><![CDATA[‘ಯಾಕೆ ಬಾನಿ? ಯಾವುದು ಬಾನಿ? ಅವೆಲ್ಲಾ ಅವರವರ ಸೃಷ್ಠಿ ಅಲ್ಲವೇ? ಅದನ್ಯಾಕೆ ಇನ್ನೊಬ್ಬರ ಮೇಲೆ ಹೇರಬೇಕು? ಯಾಕೆ ತಮ್ಮದನ್ನೇ ಎಲ್ಲರೂ ಕಲಿಯಬೇಕು, ಪ್ರತಿಷ್ಠಾಪಿಸಿಕೊಳ್ಳಬೇಕು ಎಂಬ ಹಠ? ಎಲ್ಲಾ ಗುರುಗಳೂ ಸೇರಿ ಕಲಿಯುವ ವಿದ್ಯಾರ್ಥಿಗಳೆಲ್ಲರಿಗೂ ಅನ್ವಯವಾಗುವ ಹಾಗೆ ಒಂದೇ ಬಗೆಯ ಸಿಲೆಬಸ್ ಅಂತ ಯಾಕೆ ಮಾಡಿಕೊಳ್ಳಬಾರದು? ಎಲ್ಲರಿಗೂ ಅನ್ವಯವಾಗುವ ಹಾಗೆ ಒಂದು ಸಮಗ್ರ ಶಿಕ್ಷಣ ಬೇಕು. ಪಾಪ. ಕಲಿಯುವ ಮಕ್ಕಳಿಗೆ ಗುರುಗಳು ಬದಲಾದಂತೆಲ್ಲಾ ಅವರವರ ಶೈಲಿ ಕಲಿಯಲು ಹೋಗಬೇಕಾದ ಅನಿವಾರ್ಯತೆ. ಹೀಗೆ ಆಗಿ ಮಕ್ಕಳು ಕೊನೆಗೆ ನೃತ್ಯದ ಮೇಲೆ [...]]]></description>
			<content:encoded><![CDATA[<p style="text-align: justify;"><span><span style="color: #000000; font-size: x-small;"><strong><span style="text-decoration: underline;">‘</span></strong></span></span><span style="font-family: Tunga;"><span style="color: #000000;">ಯಾಕೆ ಬಾನಿ? ಯಾವುದು ಬಾನಿ? ಅವೆಲ್ಲಾ ಅವರವರ ಸೃಷ್ಠಿ ಅಲ್ಲವೇ? ಅದನ್ಯಾಕೆ ಇನ್ನೊಬ್ಬರ ಮೇಲೆ ಹೇರಬೇಕು? ಯಾಕೆ ತಮ್ಮದನ್ನೇ ಎಲ್ಲರೂ ಕಲಿಯಬೇಕು, ಪ್ರತಿಷ್ಠಾಪಿಸಿಕೊಳ್ಳಬೇಕು ಎಂಬ ಹಠ? ಎಲ್ಲಾ ಗುರುಗಳೂ ಸೇರಿ ಕಲಿಯುವ ವಿದ್ಯಾರ್ಥಿಗಳೆಲ್ಲರಿಗೂ ಅನ್ವಯವಾಗುವ ಹಾಗೆ ಒಂದೇ ಬಗೆಯ ಸಿಲೆಬಸ್ ಅಂತ ಯಾಕೆ ಮಾಡಿಕೊಳ್ಳಬಾರದು? ಎಲ್ಲರಿಗೂ ಅನ್ವಯವಾಗುವ ಹಾಗೆ ಒಂದು ಸಮಗ್ರ ಶಿಕ್ಷಣ ಬೇಕು. ಪಾಪ. ಕಲಿಯುವ ಮಕ್ಕಳಿಗೆ ಗುರುಗಳು ಬದಲಾದಂತೆಲ್ಲಾ ಅವರವರ ಶೈಲಿ ಕಲಿಯಲು ಹೋಗಬೇಕಾದ ಅನಿವಾರ್ಯತೆ. ಹೀಗೆ ಆಗಿ ಮಕ್ಕಳು ಕೊನೆಗೆ ನೃತ್ಯದ ಮೇಲೆ ಆಸಕ್ತಿಯನ್ನೇ ಕಳೆದುಕೊಳ್ತಾರೆ. </span></span><span><span style="color: #000000;">’</span></span><span style="font-family: Tunga;"><span style="color: #000000;"> ಎಂದಿದ್ದರು ದಿ. ದಂಡಾಯುಧಪಾಣಿ ಪಿಳ್ಳೈ ಅವರ ಪಟ್ಟ ಶಿಷ್ಯೆ ಹಿರಿಯ ಕಲಾವಿದೆ ಜಯಲಕ್ಷ್ಮಿ ಆಳ್ವ. ಅವರ ದನಿಯಲ್ಲಿ ವೇದನೆಯಿತ್ತು; ಆಗ್ರಹವಿತ್ತು.</span></span><span style="font-family: Tunga;"><span style="color: #000000; font-size: x-small;"><strong></strong></span></span></p>
<p style="text-align: justify;"><span style="font-family: Tunga;"><span style="color: #000000;">ಹೌದು. ಒಮ್ಮೆ ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಸಾಮಾನ್ಯರಿಂದ ಮೊದಲ್ಗೊಂಡು ನೃತ್ಯ ಅದರಲ್ಲೂ ಭರತನಾಟ್ಯವನ್ನು ಕಲಿಯುವ ಪ್ರತೀ ವಿದ್ಯಾರ್ಥಿಗೂ ಇದು ಅನುಭವಕ್ಕೆ ಬಂದಿರುತ್ತದೆ. ಉದಾ : ಅಡವು ಶೈಲಿಯಲ್ಲೇ ಸಾಕಷ್ಟು ವ್ಯತ್ಯಾಸಗಳು, ಅಲರಿಪ್ಪುವಿನಂತಹ ನೃತ್ಯಬಂಧಗಳಲ್ಲಿಯೇ ಸಾಕಷ್ಟು ಮಾರ್ಪಾಡುಗಳು. ಅದರಲ್ಲೂ ಬಹಳ ಸಲ ನಮ್ಮೆಲ್ಲರ ಅನುಭವಕ್ಕೆ ಬರುವಂತೆ ವಿದ್ಯಾರ್ಥಿಗಳು ಗುರುವನ್ನು ಕಾರಣಾಂತರಗಳಿಂದ ಬದಲಾಯಿಸಿ ಮತ್ತೊಬ್ಬರಲ್ಲಿ ವಿದ್ಯಾಭ್ಯಾಸ ಅರಸಿ ಹೊರಟರೆ ರಸಾಸ್ವಾದನೆಗೆ ಅನುಕೂಲವಾಗುವಂತಹ ದಾರಿಯಲ್ಲಿ ನಡೆಯಲು ಕಲಿಸುವುದಕ್ಕಿಂತ ಕುದುರೆ ಕಣ್ಣುಪಟ್ಟಿಯಂತೆ ನಡೆಯಲು ಕಲಿಸುವ, ತಮ್ಮ ಮುದ್ರೆಯನ್ನೊತ್ತಲು ಬಯಸುವವರೇ ಬಹಳ. ಇದು ನಗರ- ಪಟ್ಟಣ-ಗ್ರಾಮವೆನ್ನದೆ ಹರಡಿಕೊಂಡಿರುವುದಲ್ಲದೆ ಅದೆಲ್ಲವನ್ನೂ ಒಳಗೊಂಡ ವಿಶಾಲ ವ್ಯಾಪ್ತಿಯಲ್ಲಿ ಶಿಕ್ಷಣನೀತಿಗಳಲ್ಲೂ ವ್ಯಾಪಕವಾಗಿ ಕಂಡುಬರುತ್ತಲಿದೆ. ಫಲವಾಗಿ ಬಹುಸಾಂಖ್ಯಿಕರ ಕೂಗು ಬಲವಾಗಿ ಕಲೆಯೆಂಬುದು ಪ್ರಲೋಭನೆಗೊಳಗೆ ಮುಳುಗಿ ಅಷ್ಟೇನೂ ಒತ್ತಾಸೆಯಿಲ್ಲದವರು ಬದಿಗೆ ಸರಿದುಹೋಗುತ್ತಲೇ ಇದ್ದಾರೆ.</span></span></p>
<p style="text-align: justify;"><span style="font-family: Tunga;"><span style="color: #000000;">ಹಾಗೆ ನೋಡಿದರೆ ಇಂತವರ ಪೈಕಿ ಒಂದು ಗುಂಪು ತಮ್ಮದೇ ಆದ ಸ್ವತಂತ್ರ ಅಭಿವ್ಯಕ್ತಿಯನ್ನು ಕಂಡುಕೊಳ್ಳುವಲ್ಲಿ ಹಿಂದುಳಿದ, ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುತ್ತೇವೆ ಎನ್ನುವಂತವರಾದರೆ; ಮತ್ತೊಂದು ಗುಂಪು ತಮ್ಮದೇ ಆದ ಹೊಸ ಪರಂಪರೆಯನ್ನು ಬೆಳೆಸಿಕೊಳ್ಳುವ ಚಪಲಿಗರು. ಎಲ್ಲರಿಗೂ ಶಿಷ್ಯರ ತಪ್ಪನ್ನು ತಿದ್ದುವುದಕ್ಕಿಂತ ಹೆಚ್ಚಾಗಿ </span></span><span><span style="color: #000000;">‘</span></span><span style="font-family: Tunga;"><span style="color: #000000;">ತಪ್ಪಿರುವುದನ್ನು ಸರಿ ಮಾಡುತ್ತಿದ್ದೇವೆ</span></span><span><span style="color: #000000;">’</span></span><span style="font-family: Tunga;"><span style="color: #000000;"> ಎನ್ನುತ್ತಾ ಬಾನಿ/ಶೈಲಿಯ ಮುದ್ರೆಯೊತ್ತುವ ಚಟ. ಇದರ ಫಲವಾಗಿ ಎಷ್ಟೋ ಮಂದಿ ನರ್ತನಾಪೇಕ್ಷಿಗಳು, ವಿದ್ಯಾರ್ಥಿಗಳು ತಮ್ಮ ಗುರುಗಳ, ಶಿಕ್ಷಕರ ಪಡಿಯಚ್ಚಿನಂತೆ ತಯಾರಾಗುತ್ತಾರೆಯೇ ವಿನಾ ತಮ್ಮದೇ ಪ್ರಭಾವಳಿಯನ್ನು ರೂಪಿಸಿಕೊಳ್ಳುವಲ್ಲಿ ಸೋಲುತ್ತಾರೆ. ಕಾರಣ, ಅರ್ಥ, ಔಚಿತ್ಯ ತಿಳಿಯದೆ ಗೊಂದಲದ ಗೂಡುಗಳೊಳಗೆ ಸಿಲುಕುತ್ತಾರೆ. ಇದೊಂದು ಮಾದರಿಯಲ್ಲಿ ಆನೆಗೆ ಸರಪಳಿ ಹಾಕಿ ಹಿಡಿದಿರಿಸಿ ಪಳಗಿಸಿದಂತೆಯೇ.</span></span></p>
<p style="text-align: justify;"><span style="font-family: Tunga;"><span style="color: #000000;">ಇಂತಹ ಪೂರ್ವಾಗ್ರಹ ಪೀಡಿತ ಗುರುಗಳೇ ಇಂದಿನ ನರ್ತನಕ್ಷೇತ್ರದಲ್ಲಿ ಬಹುಪಾಲು ಮಂದಿ ಎನ್ನುವುದೇ ದೊಡ್ಡ ವೇದನೆ ಮತ್ತು ಅಪಾಯವೂ ಕೂಡಾ. ಒಳ್ಳೆಯದು ಯಾವುದೇ ಆಗಿದ್ದರೂ ಅದನ್ನು ಅಳವಡಿಸಿಕೊಳ್ಳೋಣ ಎಂಬ ವೈಶಾಲ್ಯತೆಯಿಲ್ಲದ ; ಬೇರೊಬ್ಬರ ಅಭಿವ್ಯಕ್ತಿಯಲ್ಲಿ ಲೋಪ ಕಂಡುಹಿಡಿಯುವ ಸಣ್ಣ ಮನಸ್ಸು ; ಎಲ್ಲಿ ತಮ್ಮ ಪ್ರಕಾಶ ಮಂಕಾಗುವುದೋ ಎಂಬ ಆತಂಕ. ತಮ್ಮ ಎಲೆಯಲ್ಲಿ ಆನೆ ಸತ್ತು ಬಿದ್ದರೂ ಬೇರೊಬ್ಬರ ಎಲೆಯ ನೊಣ ಹುಡುಕುವ ವಿಚಿತ್ರ ಆನಂದ. ಪ್ರತಿಭೆಯಿದ್ದರೆ ಅದಕ್ಕೆ ಪ್ರಕಾಶಿಸುವ ಶಕ್ತಿಯು ಇರುತ್ತದೆ ಎಂಬ ನಂಬುಗೆಯಿಲ್ಲದವರ ಬಳಿಯಲ್ಲಿ ಕಲಿಯಹೋಗುವುದು ಎಂದರೆ ಆಯ್ಕೆಯ ಪ್ರಶ್ನೆಯೇ ಇಲ್ಲದೆ ತಮ್ಮನ್ನು ತಾವೇ ಬಂಧನದಲ್ಲಿರಿಸಿಕೊಳ್ಳುವುದೆಂದೇ ಅರ್ಥ.</span></span></p>
<p style="text-align: justify;"><span style="font-family: Tunga;"><span style="color: #000000;">ಈ ಕಬಂಧ ಬಾಹು ಸಂಗೀತಕ್ಕಿಂತಲೂ ಹೆಚ್ಚಾಗಿ ನೃತ್ಯವನ್ನು ಆವರಿಸಿಕೊಂಡಿರುವುದು ಒಂದು ವಿಶೇಷ. ಬಹುಷಃ ಸಂಗೀತದಲ್ಲಿ ನೃತ್ಯದಷ್ಟು ಘೋಷಿತ ಶೈಲಿಗಳು ಬಾರದಿರುವುದೇ ಕಾರಣವೇನೋ ! ಮತ್ತು ಸಂಗೀತ ಕಛೇರಿ ಮತ್ತು ಪರೀಕ್ಷೆಗಳಿಗೆ ನಿರೀಕ್ಷಿತ ಮಟ್ಟದ ಪ್ರತಿಭೆ ಇಲ್ಲದೇ ಹೋದರೆ ಎಂತಹ ಹಿನ್ನೆಲೆ, ಅನುಕೂಲಗಳಿದ್ದರೂ ಅದು ಬಹಳ ಸಮಯ ಪ್ರಯೋಜನಕ್ಕೆ ಬರಲಾರದು. ಆದರೆ ನೃತ್ಯದಲ್ಲಿ ಹಾಗಲ್ಲ; ಪ್ರತಿಭೆಗಿಂತಲೂ ಹೆಚ್ಚಾಗಿ ಮೊದಲೇ ಹಣ, ಪ್ರತಿಷ್ಠೆ, ಖರ್ಚು ಮಾಡುವ ಶಕ್ತಿ-ಆಡಂಬರಗಳಲ್ಲೇ ಮುಳುಗಿ ಹೋಗಿರುವ ನೃತ್ಯಕ್ಕೆ ಬಾನಿ/ಶೈಲಿಯೆಂಬುದು ಅಳತೆಗೋಲಾಗುತ್ತಿದೆ. ಪಂದನಲ್ಲೂರು, ಮೈಸೂರು, ವಳವೂರ್, ಕಲಾಕ್ಷೇತ್ರ,&#8230;ಮುಂತಾದವುಗಳಷ್ಟೇ ಅಲ್ಲದೆ ಪ್ರತೀ ಮುಖ್ಯ ಶೈಲಿಗಳೊಳಗೂ ಹಲವು ಶೈಲಿಗಳು, ಅದರಂತೆಯೇ ನಡೆಯಬೇಕೆನ್ನುವ ಹಠ ಕೇವಲ ನೃತ್ಯಪ್ರದರ್ಶನಗಳಲ್ಲಷ್ಟೇ ಅಲ್ಲದೆ; ಪ್ರಾಥಮಿಕ ಪಠ್ಯದೊಳಗೂ ಹೇರಳವಾಗಿ ಇಣುಕುತ್ತಿದೆ.</span></span></p>
<p style="text-align: justify;"><span style="font-family: Tunga;"><span style="color: #000000;">ಯಾವ ಶೈಲಿಯೂ ಮೇಲಲ್ಲ ಅಥವಾ ಕೀಳಲ್ಲ. ಅದೆಲ್ಲವೂ ಆಯಾಯ ಕಲಾವಿದನ ಪ್ರತಿಭಾ ಸಂಪನ್ನತೆಯ ಕಾಣಿಕೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಶೈಲಿ ನಿಲುವು ಇದೆ. ಅದನ್ನು ಶೋಧಿಸಿಕೊಳ್ಳುವ ಪ್ರಯತ್ನಗಳಾದಾಗಲೇ ಆತ ಸೃಷ್ಟಿಶೀಲ ಕಲಾವಿದನೆನಿಸಿಕೊಳ್ಲಲು ಸಾಧ್ಯ. ಇಲ್ಲದಿದ್ದಲ್ಲಿ ತನ್ನ ಬಾನಿ/ಶೈಲಿಯ ಮಾರ್ಕೆಟಿಂಗ್ ಮ್ಯಾನೇಜರ್‌ನಂತೆ ಆಗುತ್ತಾರೆಯೇ ಹೊರತು ಗುರುವಂತೂ ಅಲ್ಲವೇ ಅಲ್ಲ.</span></span></p>
<p style="text-align: justify;"><span style="font-family: Tunga;"><span style="color: #000000;">ಬಾನಿ, ಶೈಲಿಗಳಿಗನುಸಾರವಾಗಿ ಪಠ್ಯಪುಸ್ತಕವನ್ನೋ, ಶಿಕ್ಷಣ ಕ್ರಮವನ್ನೋ ಸಿದ್ಧಪಡಿಸುವುದು; ಅದನ್ನೇ ಪರೀಕ್ಷೆ, ವಿದ್ಯಾಭ್ಯಾಸದಲ್ಲಿ ಜಾರಿಗೆ ತರುವಂತೆ ನೋಡಿಕೊಳ್ಳುವುದೋ ಅಥವಾ ಸಿದ್ಧ ಬಾನಿ ಅಥವಾ ಆಚಾರ್ಯ ಪರಂಪರೆಯ ಲೋಪ-ದೋಷಗಳೆನ್ನು ಎಣಿಸದೆ ಯಥಾವತ್ತಾಗಿ ಕಣ್ಣು ಮುಚ್ಚಿಕೊಂಡು ಅನುಸರಿಸುವುದು ನಿಜಕ್ಕೂ ಕಲೆ ತನ್ನ ಸ್ವಾದವನ್ನು ಕಳೆದುಕೊಳ್ಳುವ ದಾರಿಗಳು. ಬಾನಿಯೆಂಬುದು ಕಲಾವಿದನು ಏರಬೇಕಾದ ಎತ್ತರಕ್ಕಿರುವ ಒಂದು ದಾರಿಯೇ ಹೊರತು ಅದೇ ಮೂಲವಲ್ಲ. ಎಲ್ಲಾ ಪರಂಪರೆಗಲೂ ಒಂದೇ ಗಂಗೋತ್ರಿಯ ಹಲವು ನದಿಗಳು, ಅಷ್ಟೇ. ಹಾಗಾಗಿ ಕಲಾವಿದನ ಉದ್ದೇಶ ರಸಾಸ್ವಾದನೆ ಅನುಕೂಲವಾದ ಸೋಪಾನಗಳನ್ನು ಏರುವುದೇ ವಿನಾ ಶೈಲಿ, ಸಂಪ್ರದಾಯ, ಬಾನಿ ಎನ್ನುತ್ತಾ ತನ್ನ ಕುರ್ಚಿಗೇ ಅಂಟಿಕೊಂಡು ಅರಸಿನ ಕಾಮಲೆಯ ಕಣ್ಣುಗಳಿಂದ ನೋಡುವುದಲ್ಲ.</span></span></p>
<p style="text-align: justify;"><span style="font-family: Tunga;"><span style="color: #000000;">ಈ ನಿಟ್ಟಿನಲ್ಲಿ ಸಾರ್ವಕಾಲಿಕವಾಗಿ ಎಲ್ಲೆಡೆಯೂ ಅನ್ವಯವಾಗುವ, ಮೂಲಭೂತವಾದ, ಒಂದೇ ತಳಹದಿಯುಳ್ಳ ಪ್ರಾಥಮಿಕ ಶಿಕ್ಷಣ ಒದಗಿದರೇನೇ ಕಲಾ ಜಗತ್ತು ಬೇಧನೀತಿಗಳಿಂದ ಮುಕ್ತವಾಗಿ ಸಹೃದಯರಿಗೂ ಉಪಕಾರವಾದೀತು. ಇಲ್ಲವಾದರೆ ಆಯಾಯ ಪರಂಪರೆಗಳನ್ನು ಪುಷ್ಠಿಗೊಳಿಸುವುದೋ, ಕಲಿಯುವುದಕ್ಕೋ ಕಲೆ ಸೀಮಿತವಾದೀತು.</span></span></p>
<p style="text-align: justify;"><span style="font-family: Tunga;"><span style="color: #000000;"><strong>ಪ್ರೀತಿಯಿಂದ,</strong></span></span></p>
<p style="text-align: justify;"><span style="font-family: Tunga;"><span style="color: #000000;"><strong>ಸಂಪಾದಕರು</strong></span></span></p>
]]></content:encoded>
			<wfw:commentRss>http://www.noopurabhramari.com/manjira/may-june2011/feed</wfw:commentRss>
		<slash:comments>0</slash:comments>
		</item>
		<item>
		<title>ಮಾಘ-ಫಾಲ್ಗುಣ ೨೦೧೧</title>
		<link>http://www.noopurabhramari.com/manjira/shishira-shringara-2011</link>
		<comments>http://www.noopurabhramari.com/manjira/shishira-shringara-2011#comments</comments>
		<pubDate>Tue, 15 Feb 2011 05:21:53 +0000</pubDate>
		<dc:creator>ಸಂಪಾದಕಿ</dc:creator>
				<category><![CDATA[ಮಂಜೀರ]]></category>
		<category><![CDATA[anklets of Dance]]></category>
		<category><![CDATA[bharatanatyam]]></category>
		<category><![CDATA[Classical Dance]]></category>
		<category><![CDATA[Cultural Journalism]]></category>
		<category><![CDATA[Dance]]></category>
		<category><![CDATA[dance magazine]]></category>
		<category><![CDATA[fifth annivaersary of noopura]]></category>
		<category><![CDATA[magazine in bharathanatyam]]></category>
		<category><![CDATA[manjeera]]></category>
		<category><![CDATA[manorama]]></category>
		<category><![CDATA[noopura]]></category>
		<category><![CDATA[noopura bhramari]]></category>
		<category><![CDATA[shishira shringara]]></category>

		<guid isPermaLink="false">http://www.noopurabhramari.com/?p=1467</guid>
		<description><![CDATA[ಐದನೇ ಸಂವತ್ಸರಕ್ಕೆ ಅಡಿಯಿಡುವ ಈ ಹೊತ್ತು ನಿಜಕ್ಕೂ ನಾವು ಮೊದಲೆಂದೂ ಊಹಿಸದ ಸಂಭ್ರಮದ ಕ್ಷಣ. ಸಂತಸದ ಘಳಿಗೆಗಳನ್ನು ಪಡೆಯಬೇಕಿದ್ದರೆ ಒಂದಷ್ಟೂ ಸವಾಲು, ಸಂಕಟ, ಸಂಕಷ್ಟಗಳನ್ನೂ ಅನುಭವಿಸಬೇಕಾದ್ದು ಅನಿವಾರ್ಯ. ಅಷ್ಟಕ್ಕೂ ಸಂತಸ, ಸುಖದ ಧನ್ಯತೆ ಅರಿವಾಗುವುದು ಒಂದಷ್ಟು ತಲ್ಲಣ, ಆತಂಕ, ದುಃಖ, ಬೇಸರದ ಮೆಟ್ಟಿಲುಗಳನ್ನು ಹತ್ತುತ್ತಾ ಬಂದಾಗಲೇ. ಒಂದೇ ಓಟಕ್ಕೆ ಶಿಖರ ತಲುಪುವುದಕ್ಕಿಂತಲೂ ಹಂತಹಂತವಾಗಿ ಏರಿದಾಗಲೇ ಬದುಕಿನ ಓಟಕ್ಕೆ ಮೌಲ್ಯ ಬರುವುದು.
ಹಾಗೆಂದು ಶಿಖರ ತಲುಪಿದಲ್ಲಿಗೆ ಪೂರ್ಣ ವಿರಮಿಸುವುದೆಂದರೆ ಆ ಪಯಣಕ್ಕೆ ಏನಿದೆ ಅರ್ಥ? ಗುರಿ ಸಮಾಪ್ತಿಯಾದರೆ ಜೀವನದೊಡಲೊಳಗಿರುವ ರಸದೃಷ್ಟಿ [...]]]></description>
			<content:encoded><![CDATA[<p>ಐದನೇ ಸಂವತ್ಸರಕ್ಕೆ ಅಡಿಯಿಡುವ ಈ ಹೊತ್ತು ನಿಜಕ್ಕೂ ನಾವು ಮೊದಲೆಂದೂ ಊಹಿಸದ ಸಂಭ್ರಮದ ಕ್ಷಣ. ಸಂತಸದ ಘಳಿಗೆಗಳನ್ನು ಪಡೆಯಬೇಕಿದ್ದರೆ ಒಂದಷ್ಟೂ ಸವಾಲು, ಸಂಕಟ, ಸಂಕಷ್ಟಗಳನ್ನೂ ಅನುಭವಿಸಬೇಕಾದ್ದು ಅನಿವಾರ್ಯ. ಅಷ್ಟಕ್ಕೂ ಸಂತಸ, ಸುಖದ ಧನ್ಯತೆ ಅರಿವಾಗುವುದು ಒಂದಷ್ಟು ತಲ್ಲಣ, ಆತಂಕ, ದುಃಖ, ಬೇಸರದ ಮೆಟ್ಟಿಲುಗಳನ್ನು ಹತ್ತುತ್ತಾ ಬಂದಾಗಲೇ. ಒಂದೇ ಓಟಕ್ಕೆ ಶಿಖರ ತಲುಪುವುದಕ್ಕಿಂತಲೂ ಹಂತಹಂತವಾಗಿ ಏರಿದಾಗಲೇ ಬದುಕಿನ ಓಟಕ್ಕೆ ಮೌಲ್ಯ ಬರುವುದು.</p>
<p>ಹಾಗೆಂದು ಶಿಖರ ತಲುಪಿದಲ್ಲಿಗೆ ಪೂರ್ಣ ವಿರಮಿಸುವುದೆಂದರೆ ಆ ಪಯಣಕ್ಕೆ ಏನಿದೆ ಅರ್ಥ? ಗುರಿ ಸಮಾಪ್ತಿಯಾದರೆ ಜೀವನದೊಡಲೊಳಗಿರುವ ರಸದೃಷ್ಟಿ ತನ್ನಿಂತಾನೇ ಖಾಲಿಯಾಗತೊಡಗುತ್ತದೆ. ಬೆಟ್ಟಕ್ಕಿಂತ ಬೆಟ್ಟ ದೊಡ್ಡದು ಎಂಬಂತೆ ಕಣ್ಣು ಹಾಯಿಸಿದಷ್ಟೂ ಮುಗಿಯದ ಅನಂತ ಅವಕಾಶ, ಕ್ಷಿತಿಜವನ್ನು ತಲುಪುವ ಹಣಾಹಣಿ, ಹಪಹಪಿಕೆಯು ಆಗಾಗ್ಗೆ ಅಲ್ಪವಿರಾಮಗಳೊಂದಿಗೆ ಮುಂದುವರಿದಾಗಲಷ್ಟೇ ಅನುಭವಗಳ ಘನೀಕರಣಕ್ಕೆ ಅರ್ಥ ಬರುತ್ತದೆ; ಸಲಿಲದ ಸೆಲೆ, ಹರಿವಿನಲ್ಲಿ ನಿರಂತರತೆಯಿರುತ್ತದೆ. ಈ ಹಿನ್ನಲೆಯಲ್ಲಿ ಬೆಳವಣಿಗೆ ಎನ್ನುವ ಕ್ರಮಿಸಿದಷ್ಟೂ ಮುಗಿಯದ ಹಾದಿಯಲ್ಲಿ ದೇಹದ ಕಸುವು ಇರುವಷ್ಟೂ ದಿನ ನಡೆಯುವ ಹಂಬಲ ನಮ್ಮದು. ಹೀಗಾಗಿ ಕಳೆದ ನಾಲ್ಕು ವರ್ಷಗಳಿಂದಲೂ ಪ್ರಯಾಸಪಡುತ್ತಾ ಬಂದರೂ ಒಂದು ಬಗೆಯ ಪ್ರವಾಸದಂತೆ ನರ್ತನರಂಗದ, ಬರಹಲೋಕದ ಅನುಭವಗಳನ್ನು ಅಂತರಂಗಕ್ಕೆ ತಂದುಕೊಳ್ಳುತ್ತಾ ಪರಿಭ್ರಮಿಸುತ್ತಿದ್ದೇವೆ.</p>
<p>ಕಿರಿದಾದ ಆಸೆಗಳಿಂದ ವಿಸ್ತಾರಗೊಳ್ಳುವ ಕನಸುಗಳು ವಿಶಾಲವಾದಷ್ಟೂ ನಮ್ಮ ಕಿಟಕಿಗಳ ಹರಹು ದೊಡ್ಡದಾಗುತ್ತಾ ಅನಂತ ಆಕಾಶದ ನೋಟ ಸುಂದರವೆನಿಸುತ್ತದೆ. ಈ ದೃಷ್ಟಿಯಲ್ಲಿ ಯೋಚಿಸಿದಾಗ ನೂಪುರದ ಸೃಷ್ಟಿ ದಕ್ಕಿದ ಪುಟ್ಟ ಪುಟ್ಟ ಬೊಗಸೆಗಳಿಂದ ಆರಂಭವಾದರೂ, ಪತ್ರಿಕೆಯಾಗಿ, ಅರಿವಿನ ಅವಕಾಶವಾಗಿ ಅದು ತುಂಬಿಸಿಕೊಡುತ್ತಿರುವುದು ಬೊಗಸೆ ಹಿಡಿದಷ್ಟೂ ಮುಗಿಯದ ಮಳೆ. ಹೊಸ ಹೊಸ ಚಿಗುರುಗಳನ್ನು ಬೆಳೆಸುವ ಧನ್ಯತೆಯಿದೆಯಲ್ಲಾ; ಅದು ನಮ್ಮ ಬದುಕನ್ನು ಮತ್ತಷ್ಟು ಸಾರ್ಥಕ್ಯಗೊಳಿಸುವ, ಸ್ಫೂರ್ತಿಯನ್ನು ಇಮ್ಮಡಿ ಮಾಡುವ, ಸಂತೃಪ್ತಿಯ ಮೂಟೆಯನ್ನೀಡುವ ಅಪರಿಮಿತ ಆನಂದ.</p>
<p>ಮೊದಮೊದಲಿನ ಹೆಜ್ಜೆಗಳಲ್ಲಿ ಅಳುಕು, ಅಭದ್ರತೆ, ಆತ್ಮನಿಂದನೆ, ಹಿಂಜರಿಕೆ, ಆರಂಭಶೂರತ್ವವೆಂಬ ಮೂದಲಿಕೆಗಳು, ಸ್ಪರ್ಧಾತ್ಮಕ ಜಗತ್ತಿಗೆ ಸಡ್ಡು ಹೊಡೆಯುವಲ್ಲಿ ನೋವುಗಳು ತೀರಾ ಕಾಡಿದರೂ ಕ್ಷಣಕಾಲ ಮಿಂಚುವ ಮಿಂಚಿಗಿಂತಲೂ ನಿಧಾನವಾಗಿ ನೆಲದ ಒಡಲನ್ನು ತುಂಬಿಸುವ ವರ್ಷಧಾರೆಯೇ ಸತ್ತ್ವಯುತವಾದದ್ದು ಎಂದು ಕಂಡದ್ದೇ ಅದರ ಹನಿಗಳತ್ತ ನಮ್ಮ ಹೆಜ್ಜೆಗಳು ತಳವೂರಿದವು. ಆರ್ಥಿಕ ಶಕ್ತಿಯಿಲ್ಲದಿದ್ದರೂ, ಇಚ್ಛಾಶಕ್ತಿಯೊಂದಷ್ಟೇ ನಮ್ಮನ್ನು ಈವರೆಗೆ ಮುನ್ನಡಿಯಿಡುವಂತೆ ಮಾಡಿದವು. ಜಡಿಗುಡುವ ಮಳೆಯನ್ನು ಸುರಿಸುವ ಅಸಾಮಾನ್ಯ ಬಲವಲ್ಲದಿದ್ದರೂ, ಕಾದು ಕೆಂಪಡರಿದ ನೆಲದ ಬಾಯಾರಿಕೆಯನ್ನು ನೀಗಿಸುವಷ್ಟರ ಮಟ್ಟಿಗೆ ಹನಿಗೂಡಿಸುವ ಶಕ್ತಿಯನ್ನು ನೀಡು ಎನ್ನುವ ಕೋರಿಕೆ ಕಾಣದ ಕೈಗಳಿಗೆ ನಿತ್ಯ ನಿವೇದನೆಗೊಳ್ಳುತ್ತದೆ.</p>
<p>ಹಾಗೆಂದು ಈಗಲೂ ನಾವು ಬಲಿಷ್ಠರಲ್ಲ. ಜೊತೆಗೆ, ಪೈಪೋಟಿಯನ್ನೇ ಗುರಿಯಾಗಿಸಿದ ನಿಲುವೂ ನಮ್ಮಲ್ಲಿಲ್ಲ್ಲ. ಬೆನ್ನು ಬಿಡದ ಬೇತಾಳದಂತೆ ಬೇಡಿಕೆಯಿಡುವ, ಹೊಸ ಆಸೆಗಳನ್ನು ಹುಟ್ಟಿಸುವ, ಒಂದು ಹಾದಿಯಿಂದ ಮತ್ತೊಂದೆಡೆಗೆ ಆಗಾಗ್ಗೆ ಲಂಘಿಸುವ ವಿಷಯಗಳಲ್ಲಿ ನಂಬಿಕೆಯಿಲ್ಲ. ಪತ್ರಿಕೆಯನ್ನು ಬಿಟ್ಟು ಬದುಕು ಕಟ್ಟಿಕೊಳ್ಳಬೇಕಾದ ಅವಸರಗಳು ಇಲ್ಲ. ಅರಿವಿನ ಲಾಭದ ಹೆಚ್ಚುಗಾರಿಕೆಯೇ ಕಾಣಿಸುವಾಗ ಆರ್ಥಿಕ ಲಾಭಕ್ಕಾಗಿ ಗೌರವವನ್ನು ಪಣವಿಡುವ ಒಳದಾರಿಗಳು, ಓಲೈಸುವಿಕೆಯು ನಮ್ಮಿಂದ ಸಾಧ್ಯವಿಲ್ಲ. ಹಾದಿಗೆ ಅನುಕ್ರಮವಾದ, ಅನುಸರಿಸಬೇಕಾದ ರೀತಿಯಲ್ಲಿ ಅಗತ್ಯ ಬದಲಾವಣೆಗಳನ್ನನುಸರಿಸಿ ನಮ್ಮ ನಡೆಯೇ ಹೊರತು; ವ್ಯಕ್ತಿ, ವೈಯಕ್ತಿಕಗಳೊಂದಿಗಲ್ಲ. ಬಹುಷಃ ನೂಪುರದಂತಹ ಆತ್ಮಬಂಧು ನಮ್ಮ ಪಾಲಿಗೆ ಬೇರಾವುದೂ ಇಲ್ಲ.</p>
<p>ಎಲ್ಲರನ್ನೂ ತಲುಪುವ ಬಯಕೆಯಿದೆ; ಆದರೆ ನಮ್ಮ ಮಿತಿಗಳ ಆವರಣದ ಪರಿಚಯವೂ ಇದೆ. ಪ್ರಯಾಣದ ಬೇಸರ ತಣಿಸಲು ಬಾಂಧವ್ಯಗಳು ಜೊತೆಯಾದರೆ ಸಂತೋಷ. ಆದರೆ ಅದೇನೆ ಪ್ರಶ್ನೆಗಳು, ಅಸಮಂಜಸ ಪ್ರಸಂಗಗಳು, ರಗಳೆಗಳು, ಸಮಸ್ಯೆಗಳು, ಶರಣಾಗತಿಗಳು, ಬೇಡಿಕೆಗಳು, ಮನಸ್ತಾಪಗಳು, ಅನ್ಯಮನಸ್ಕತೆ, ಮರೀಚಿಕೆಗಳು, ಆಗ್ರಹಗಳು, ಆಸೆಗಳು ಎದುರಾದರೂ; ಸಾಧ್ಯತೆಗಳ ಅಪಾರ ಮುನ್ನೋಟವನ್ನು, ಬೆಂಬಲವನ್ನೂ ಈಯುತ್ತಿರುವ ನೂಪುರವನ್ನು ಬಿಟ್ಟು ಕೊಟ್ಟ ಹೊಸ ರಾಜಿಸೂತ್ರ, ಮಮಕಾರಗಳು ನಮಗೆ ಒಗ್ಗದ ವಿಷಯ. ಆದರೆ ನಿಧಾನವಾದರೂ ಪ್ರಧಾನವೆನಿಸುವಂತೆ ಕ್ರಮಿಸಿದಷ್ಟೂ ಕಾಲ ಸತ್ತ್ವಯುತವಾದುದನ್ನಷ್ಟೇ ಹಂಚಿಕೊಳ್ಳುವ, ಕಾಣ್ಕೆಯನ್ನೀಯುವ, ಸಾತ್ತ್ವಿಕರನ್ನೇ ಸಮೂಹವಾಗಿ ಬಯಸುವ ಅಭೀಪ್ಸೆ ಮಾತ್ರ ನಮ್ಮದು. ಸಾರ್ಥವೆಂದು ಹೊರಟ ಮೇಲೆ ಸ್ವಾರ್ಥವಿರದೆ ಯಾತ್ರೆ ಮಾಡಿದರೇನೆ ಅದು ಸಾರ್ಥಕ.</p>
<p>ಆದ್ದರಿಂದಲೇ ಹೆಮ್ಮೆಯಿದೆ, ಪ್ರೀತಿಯಿದೆ, ಅಕ್ಕರೆಯಿದೆ, ಗೌರವವಿದೆ, ಕಳಕಳಿಯಿದೆ, ಆಳವಾದ ನಂಟು ಬೆಸೆದಿದೆ..ನೂಪುರ ಭ್ರಮರಿಯೊಂದಿಗೆ, ಅದರ ಸಮಾನಶೀಲ ಮನಸ್ಸುಗಳೊಂದಿಗೆ. ಶಿಕ್ಷಣ, ವಿಚಾರಗಳ ಮನನ, ಮೌಲಿಕ ಚಿಂತನ, ಅರಿವಿನ ಮಂಥನ, ಸತ್ತ್ವದ ಪೂರಣ, ಸೃಷ್ಟಿಶೀಲ ಪ್ರಕಾಶನ, ಸಂಸ್ಕಾರದ ಉದ್ದೀಪನ, ಅವಕಾಶದ ವಿಕರ್ಷಣ, ಒಳಿತಿನ ಪ್ರಜ್ವಾಲನ, ವಿವೇಚನಾಸಹಿತ ದರ್ಶನ, ಸಹಕಾರದ ನಿರೀಕ್ಷಣ, ಅಧ್ಯಯನ, ಪುನರಾವರ್ತನ, ಪ್ರತಿಫಲನ, ಪರಿವರ್ತನ, ಪ್ರಸರಣ, ಸಂವಹನ ..ಒಟ್ಟಿನಲ್ಲಿ ಎಲ್ಲವನ್ನೂ ಒಡಗೂಡಿದ ನರ್ತನ ಜಗತ್ತಿಗೊಂದು ಪರಿಭ್ರಮಣ ನಮ್ಮ ಕರ್ತವ್ಯದ ಕರಣ, ಕಾರಣ.</p>
<p>ನಮ್ಮೊಳಗಿನ ಹುಡುಕಾಟಕ್ಕೆ ತೆರೆದುಕೊಂಡ ಹೊಸ ದಾರಿ ನೂಪುರ ಭ್ರಮರಿ. ಆದರೆ ನೂಪುರವನ್ನು ರೂಪಿಸಿದ್ದಕ್ಕಿಂತಲೂ ಅದು ನಮ್ಮನ್ನು ರೂಪಿಸಿದ್ದು ಹೆಚ್ಚು. ಈ ದಾರಿಯಲ್ಲಿ ಶಕ್ತಿಯನ್ನೂ ಮೀರಿದ ಭಕ್ತಿಯನ್ನು ಕೊಟ್ಟ ಬಳಗದವರೊಂದಿಗೆ ನೆನಪುಗಳನ್ನು ಹಂಚಿಕೊಳ್ಳುತ್ತಲಿದ್ದೇವೆ. ನಿಮ್ಮ ಹರಕೆ, ಹಾರೈಕೆಗಳು ನಮ್ಮನ್ನು ಅನಂತ ಸಲಹಲಿ.</p>
<p>ಪ್ರೀತಿಯಿಂದ</p>
<p>ಸಂಪಾದಕರು</p>
]]></content:encoded>
			<wfw:commentRss>http://www.noopurabhramari.com/manjira/shishira-shringara-2011/feed</wfw:commentRss>
		<slash:comments>0</slash:comments>
		</item>
		<item>
		<title>ಸಂವತ್ಸರಾಭಿನಂದನ-ಪಂಚಮದ ಪಲುಕಿಗೆ ಶ್ರುತಿಯಾಗಿ&#8230;  ಮಾರ್ಗಕ್ಕೆ ಮುಕುರವಾಗಿ..</title>
		<link>http://www.noopurabhramari.com/extra/5th-annual-2</link>
		<comments>http://www.noopurabhramari.com/extra/5th-annual-2#comments</comments>
		<pubDate>Mon, 14 Feb 2011 15:05:22 +0000</pubDate>
		<dc:creator>ಸಂಪಾದಕಿ</dc:creator>
				<category><![CDATA[ಇತರ]]></category>
		<category><![CDATA[ನೂಪುರ ಬ್ಲಾಗ್]]></category>
		<category><![CDATA[ಪ್ರಕಟಣೆ]]></category>
		<category><![CDATA[ಮಂಜೀರ]]></category>
		<category><![CDATA[ವರದಿಗಳು]]></category>
		<category><![CDATA[Aishwarya Nityananda]]></category>
		<category><![CDATA[Ashtavadhana]]></category>
		<category><![CDATA[ನರ್ತನ]]></category>
		<category><![CDATA[ನೃತ್ಯ]]></category>
		<category><![CDATA[ನೃತ್ಯ ಮಾರ್ಗ ಮುಕುರ]]></category>
		<category><![CDATA[ನೂಪುರಭ್ರಮರಿ]]></category>
		<category><![CDATA[ಮನೋರಮಾ ಬಿ.ಎನ್]]></category>
		<category><![CDATA[B.G.Narayana Bhat]]></category>
		<category><![CDATA[Bharathanatyam]]></category>
		<category><![CDATA[bhramari]]></category>
		<category><![CDATA[chaitra rashmi]]></category>
		<category><![CDATA[chitrakavya]]></category>
		<category><![CDATA[Classical Dance]]></category>
		<category><![CDATA[Cultural Journalism]]></category>
		<category><![CDATA[Cultural magazine]]></category>
		<category><![CDATA[Dance]]></category>
		<category><![CDATA[Dance Crititcism Award 2010]]></category>
		<category><![CDATA[divakara hegade]]></category>
		<category><![CDATA[Dr. G.B. Harish]]></category>
		<category><![CDATA[Dr. R. Shankar]]></category>
		<category><![CDATA[DVG anatapura geete nrutya]]></category>
		<category><![CDATA[karuna vijayendra]]></category>
		<category><![CDATA[manorama]]></category>
		<category><![CDATA[manorama vishnuprasad]]></category>
		<category><![CDATA[mantapa prabhakara upadhyaya]]></category>
		<category><![CDATA[Muralidhara Rao]]></category>
		<category><![CDATA[Nagaraj Navunda]]></category>
		<category><![CDATA[natya]]></category>
		<category><![CDATA[nayana hall]]></category>
		<category><![CDATA[noopura]]></category>
		<category><![CDATA[noopura bhramari]]></category>
		<category><![CDATA[Noopura bhramari 5th annual celebration]]></category>
		<category><![CDATA[Nritya marga Mukura]]></category>
		<category><![CDATA[nrutya]]></category>
		<category><![CDATA[Pradhan Gurudatt]]></category>
		<category><![CDATA[priya raman]]></category>
		<category><![CDATA[Prucchaka]]></category>
		<category><![CDATA[Raghavendra Anwekar]]></category>
		<category><![CDATA[ramachandra hegade]]></category>
		<category><![CDATA[raveendra kalakshetra bangalore]]></category>
		<category><![CDATA[Sannidhya Publication]]></category>
		<category><![CDATA[Srishti Ventures]]></category>

		<guid isPermaLink="false">http://www.noopurabhramari.com/?p=1563</guid>
		<description><![CDATA[ 
೧೩ ಫೆಬ್ರವರಿ ೨೦೧೧ ರಂದು ‘ನಯನ ಸಭಾಂಗಣ’ , ಕನ್ನಡ ಭವನ, ಜೆ.ಸಿ ರಸ್ತೆ , ಬೆಂಗಳೂರು.
ನೂಪುರ ಭ್ರಮರಿ ಐದರ ಹೆಜ್ಜೆಗಳಿಗೆ ಅಡಿಯಿಡುವ ಸಂವತ್ಸರಾಭಿನಂದನ ಸಂಭ್ರಮ ನಿಜಕ್ಕೂ ಒಂದು ಆಪ್ತ ಮತ್ತು ಅಷ್ಟೇ ಆಕಸ್ಮಿಕವೂ ಕೂಡಾ. ಹಾಗೆ ನೊಡಿದರೆ ಬೆಂಗಳೂರಿನಂತಹ ಮಹಾ ಸಮುದ್ರದಲ್ಲಿ ಕಾರ್ಯಕ್ರಮ ಸಂಘಟಿಸುವ ಇರಾದೆ, ಧೈರ್ಯ ಮೊದಲು ಅಷ್ಟಾಗಿ ಇರಲಿಲ್ಲ. ಆದರೆ ಮನದೊಳಡಗಿದ್ದ ಸಂಭ್ರಮವನ್ನು ಹಂಚಿಕೊಳ್ಳುವ ಕಂಡೂ ಕಾಣದಂತಿದ್ದ ಅಭೀಪ್ಸೆಗೆ ಇಂಬನ್ನಿತ್ತವರು ದೈವಬಲ, ಹಿರಿಯರ ಆಶೀರ್ವಾದ, ನಿಕಟವರ್ತಿ ಗೆಳೆಯರು. ಜೊತೆಗೆ ನೃತ್ಯ ಸಂವೇದನೆಗಳಿಗೆ [...]]]></description>
			<content:encoded><![CDATA[<p style="text-align: justify;"><span style="font-family: Tunga;"><span style="color: #000000;"><strong> </strong></span></span></p>
<div id="attachment_1564" class="wp-caption aligncenter" style="width: 394px"><span style="font-family: Tunga;"><span style="color: #000000;"><strong><a href="http://www.noopurabhramari.com/wp-content/uploads/2011/03/SPV_0022.jpg"><img class="size-full wp-image-1564 " title="SPV_0022" src="http://www.noopurabhramari.com/wp-content/uploads/2011/03/SPV_0022.jpg" alt="" width="384" height="257" /></a></strong></span></span><p class="wp-caption-text">ದೀಪ ಪ್ರಜ್ವಾಲನ</p></div>
<p><span style="font-family: Tunga;"><span style="color: #000000;"><strong>೧೩ ಫೆಬ್ರವರಿ ೨೦೧೧ ರಂದು </strong></span></span><span><span style="color: #000000;"><strong>‘</strong></span></span><span style="font-family: Tunga;"><span style="color: #000000;"><strong>ನಯನ ಸಭಾಂಗಣ’ , ಕನ್ನಡ ಭವನ, ಜೆ.ಸಿ ರಸ್ತೆ , ಬೆಂಗಳೂರು.</strong></span></span></p>
<p style="text-align: justify;"><span style="font-family: Tunga;"><span style="color: #000000;">ನೂಪುರ ಭ್ರಮರಿ ಐದರ ಹೆಜ್ಜೆಗಳಿಗೆ ಅಡಿಯಿಡುವ ಸಂವತ್ಸರಾಭಿನಂದನ ಸಂಭ್ರಮ ನಿಜಕ್ಕೂ ಒಂದು ಆಪ್ತ ಮತ್ತು ಅಷ್ಟೇ ಆಕಸ್ಮಿಕವೂ ಕೂಡಾ. ಹಾಗೆ ನೊಡಿದರೆ ಬೆಂಗಳೂರಿನಂತಹ ಮಹಾ ಸಮುದ್ರದಲ್ಲಿ ಕಾರ್ಯಕ್ರಮ ಸಂಘಟಿಸುವ ಇರಾದೆ, ಧೈರ್ಯ ಮೊದಲು ಅಷ್ಟಾಗಿ ಇರಲಿಲ್ಲ. ಆದರೆ ಮನದೊಳಡಗಿದ್ದ ಸಂಭ್ರಮವನ್ನು ಹಂಚಿಕೊಳ್ಳುವ ಕಂಡೂ ಕಾಣದಂತಿದ್ದ ಅಭೀಪ್ಸೆಗೆ ಇಂಬನ್ನಿತ್ತವರು ದೈವಬಲ, ಹಿರಿಯರ ಆಶೀರ್ವಾದ, ನಿಕಟವರ್ತಿ ಗೆಳೆಯರು. ಜೊತೆಗೆ ನೃತ್ಯ ಸಂವೇದನೆಗಳಿಗೆ ಹೊಸ ಆಯಾಮವನ್ನು ನಮ್ಮಿಂದಾದಷ್ಟೂ ನೀಡಬೇಕೆಂಬ ತುಡಿತ. ಪರಿಣಾಮ, ಕರ್ನಾಟಕದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ನೃತ್ಯ/ನಾಟ್ಯ ವಿಮರ್ಶಕರನ್ನು ಗುರುತಿಸಿ ವರ್ಷದ ವಿಮರ್ಶೆ ಪ್ರಶಸ್ತಿಯನ್ನು ನೀಡಬೇಕೆಂಬ ಚಿಂತನೆ; ಭರತನಾಟ್ಯದ ಕಪೋಲಕಲ್ಪಿತ ನಂಬಿಕೆಗಳನ್ನು ಆಧಾರಸಹಿತವಾಗಿ ನಿರೂಪಿಸುವ ಛಲದ ಪ್ರತಿರೂಪವಾಗಿ </span></span><span><span style="color: #000000;">‘</span></span><span style="font-family: Tunga;"><span style="color: #000000;"> ಮಾರ್ಗ ಮುಕುರ</span></span><span><span style="color: #000000;">’</span></span><span style="font-family: Tunga;"><span style="color: #000000;"> ಅನಾವರಣವು ನೂಪುರದ ಪಾಲಿಗೆ ಅತ್ಯಪೂರ್ವ ಕ್ಷಣವೆಂದೇ ಹೇಳಬಹುದು.</span></span></p>
<p style="text-align: justify;"><span style="font-family: Tunga;"><span style="color: #000000;">ಉದ್ದೇಶ ಒಳ್ಳೆಯದಾದಷ್ಟೂ ಅದರ ಸತ್ತ್ವನಿರೂಪಣೆಗೆ ಪರೀಕ್ಷೆಗಳು ಸಾವಿರಾರು. ಕಾರ್ಯಕ್ರಮ ಸಂಘಟಿಸುವ ಪ್ರಾಥಮಿಕ ಹಂತದಿಂದಲೇ ಒಂದಲ್ಲ ಒಂದು ವಿಘ್ನಗಳು ಬಾಧಿಸಿ ಧೃತಿಗೆಡಿಸಿದ್ದು ಸುಳ್ಳಲ್ಲ. ವಿಘ್ನಸಂತೋಷಿಗಳು, ಕುತ್ಸಿತರು, ಕುಟುಕಿ-ಮೆಟ್ಟುವವರು, ಸ್ವಹಿತಾಸಕ್ತಿಪೀಡಿತರ ಸಂಖ್ಯೆ ಕಡಿಮೆಯೇನಲ್ಲ. ಆದರೇನಾಯಿತು? ಸಂಕಲ್ಪದ ಮುಂದೆ ಸಾವೂ ಹಿಮ್ಮೆಟ್ಟುವಂತೆ ಫಲಾಫಲಗಳನ್ನು ಅಮೂರ್ತಕ್ಕೆ ಬಿಟ್ಟು ನಿರ್ಲಿಪ್ತವಾಗಿಯೇ ಹೆಜ್ಜೆಗಳನ್ನು ಮುಂದಿರಿಸಿದೆವು. ಕೊನೆಗೂ ನಿರೀಕ್ಷೆಗಳು ಹುಸಿಯಾಗಲಿಲ್ಲ. ನಯನ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಸಂಜೆ ೪.೩೦ ಯಿಂದ ರಾತ್ರಿ ೯ ಗಂಟೆಯ ವರೆಗೂ ೨ ಪುಸ್ತಕ, ೨ ವಿಶೇಷ ಸಂಚಿಕೆ ಅನಾವರಣ, ಆರು ಮಂದಿ ಗಣ್ಯರ ನಲ್ನುಡಿಗಳು, ವಿಮರ್ಶಾ ಪ್ರಶಸ್ತಿ ಪ್ರದಾನ, ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ, ೪ ಮಂದಿಗೆ ಸನ್ಮಾನ ಸಮಾರಂಭ, ಅವರ ಮನದಾಳದ ಅನಿಸಿಕೆಗಳು, ಬಳಗದ ಹೆಮ್ಮೆಯ ಸಾಧಕರಿಗೆ ಮತ್ತು ಶ್ರಮಿಕರಿಗೆ ಅಭಿವಂದನೆ, ಡಿವಿಜಿಯವರ ಅಂತಃಪುರ ಗೀತೆಗಳಿಗೆ ನೃತ್ಯ&#8230;ಒಟ್ಟಿನಲ್ಲಿ ಕಾರ್ಯಕ್ರಮದ ಯಶಸ್ಸು ಧನ್ಯತೆಯ ಹನಿಗಳನ್ನು ಕಣ್ಣಂಚಿನಲ್ಲಿ ತರಿಸಿದ್ದು ಎಂದೆಂದಿಗೂ ಸ್ಮೃತಿಪಟಲದಲ್ಲಿ ಅನುಭವವಾಗಿ, ನೆನಪಾಗಿ ಜೊತೆಗಿರುತ್ತದೆ.</span></span></p>
<p style="text-align: justify;"><span style="font-family: Tunga;"><span style="color: #000000;">ಅಂದು ನಮ್ಮೊಂದಿಗೆ ವೇದಿಕೆಯಲ್ಲಿ ಒಂದಲ್ಲ ಎರಡಲ್ಲ, ಪ್ರೀತಿ, ವಿಶ್ವಾಸಗಳ ಒರತೆಯನ್ನೇ ನಂಬುವ ಐವರು ಘನತೆವೆತ್ತ ಹಿರಿಯರು ಬಗಲಿಗಿದ್ದರು. ಶತಾವಧಾನಿ ಡಾ. ಆರ್. ಗಣೇಶ್ ಅವರ ಅನಾರೋಗ್ಯದಿಂದಾಗಿ ಅನುಪಸ್ಥಿತಿಯ ಬೇಸರವನ್ನು ತೋರಿಸಿತ್ತಾದರೂ ಅವರ ಆಶೀರ್ವಾದ, ಬೆಂಬಲ ನಮ್ಮನ್ನು ಕೈಬಿಟ್ಟಿರಲಿಲ್ಲ. ಕರ್ನಾಟಕ ಅನುವಾದ ಅಕಾಡೆಮಿ ಅಧ್ಯಕ್ಷರಾಗಿದ್ದ ಪ್ರಸ್ತುತ ಕುವೆಂಪು ಭಾಷಾ ಭಾರತಿಯ ಅಧ್ಯಕ್ಷರಾದ ಪ್ರಧಾನ್ ಗುರುದತ್ ಅತ್ಯಲ್ಪ ಕ್ಷಣದಲೇ ನಮ್ಮ ಕರೆಗೆ ಓಗೊಟ್ಟು ಬಂದು ಸಮಾರಂಭದ ಅಧ್ಯಕ್ಷರಾಗಿ ಬೆನ್ನು ತಟ್ಟಿದ್ದರು. ಶತಾವಧಾನಿ ಗಣೇಶ್‌ರ ಶಿಷ್ಯ, ಮನಶಾಸ್ತ್ರಜ್ಞ ಮತ್ತು ಸ್ವತಃ </span></span><span style="font-family: Tunga;"><span style="color: #000000;"><strong>ಚಿತ್ರಕಾವ್ಯ ಪರಿಣತರು, ಪೃಚ್ಛಕರೂ, </strong></span></span><span style="font-family: Tunga;"><span style="color: #000000;">ಅಷ್ಟಾವಧಾನಿಗಳೂ ಆದ ಡಾ. ಆರ್. ಶಂಕರ್‌ರ ಪರಿಚಯ ಹೊಸತಾದರೂ ಅಷ್ಟೂ ರೂಪುರೇಷೆಗಳನ್ನು ಪ್ರೀತಿಯಿಂದ ಆಲಿಸಿ ಕಾರ್ಯಕ್ರಮದುದ್ದಕ್ಕೂ ಜೊತೆಗಿದ್ದರು. ನೂಪುರದ ಬೆಳವಣಿಗೆಯನ್ನು ಬಹಳಷ್ಟು ವರ್ಷಗಳಿಂದ ನೋಡುತ್ತಾ, ಗಮನಿಸುತ್ತಾ, ಪ್ರತಿಕ್ರಿಯಿಸುತ್ತಾ ಬಂದಿರುವ ವಿಮರ್ಶಕರೂ, ಪ್ರಾಧ್ಯಾಪಕರೂ ಆದ ಡಾ||ಜಿ.ಬಿ. ಹರೀಶ್ ಭರವಸೆಯ ನುಡಿಗಳನ್ನಾಡಿದ್ದರು. ಧಾರವಾಢದ ಯಕ್ಷಗಾನ ಸಾಹಿತಿ ಮತ್ತು ಸನ್ಮಿತ್ರ್ರರೂ ಕವಿಗಳೂ ಆದ ದಿವಾಕರ ಹೆಗಡೆ ಮನೆಮಂದಿಯಲ್ಲೊಬ್ಬರಾಗಿ ಆತ್ಮೀಯವಾಗಿ ಬೆರೆತು ಸಂವಾದ ನಡೆಸಿದರೆ; ಕರವಾಣಿಯ ಕರೆಗೂ ಪ್ರೀತಿ ಸೂಚಿಸಿ ತಮ್ಮ ೮೬ರ ಇಳಿವಯಸ್ಸಿನಲ್ಲೂ, ಅನಾರೋಗ್ಯದ ನಡುವೆಯೂ ದೂರದ ಮಂಗಳೂರಿನಿಂದ ಹಿರಿಯ ನಾಟ್ಯಾಚಾರ್ಯ ಕೆ. ಮುರಳೀಧರ್ ರಾವ್ ಅವರು ಬಂದದ್ದು ನಿಜಕ್ಕೂ ಮತ್ತೊಂದು ಧನ್ಯತೆಯ ಕ್ಷಣ.</span></span></p>
<p style="text-align: justify;"><span style="font-family: Tunga; font-size: small;"><br />
</span></p>
<div class="mceTemp mceIEcenter">
<dl id="attachment_1565" class="wp-caption aligncenter" style="width: 310px;">
<dd class="wp-caption-dd">ನೃತ್ಯ ಮಾರ್ಗ ಮುಕುರ ಮತ್ತು ನೂಪುರ ಭ್ರಮರಿ ವಿಶೇಷ ಸಂಚಿಕೆ ಅನಾವರಣ</dd>
</dl>
</div>
<p><span style="font-family: Tunga; font-size: small;"><strong><br />
</strong></span></p>
<p style="text-align: justify;"><span style="font-family: Tunga;"><span style="color: #000000;"><strong> ಮನೋರಮಾ ಬಿ.ಎನ್</strong></span></span><span style="font-family: Tunga;"><span style="color: #000000;"> ಅವರ ನೃತ್ಯ ಸಂಬಂಧಿತ ಹಸ್ತಮುದ್ರೆಗಳ ಕುರಿತ ಸಂಶೋಧನಾ ಕೃತಿ </span></span><span><span style="color: #000000;">‘</span></span><span style="font-family: Tunga;"><span style="color: #000000;">ಮುದ್ರಾರ್ಣವ</span></span><span><span style="color: #000000;">’</span></span><span style="font-family: Tunga;"><span style="color: #000000;">ದ ನಂತರ ರಚಿತಗೊಂಡ ಎರಡನೇಯ ಕೃತಿ ಇದಾಗಿದೆ.</span></span><span style="font-family: Tunga;"><span style="color: #000000;"><strong> </strong></span></span></p>
<p style="text-align: center;">
<div id="attachment_1566" class="wp-caption aligncenter" style="width: 284px"><a href="http://www.noopurabhramari.com/wp-content/uploads/2011/03/SPV_0100.jpg"><img class="size-full wp-image-1566 " title="SPV_0100" src="http://www.noopurabhramari.com/wp-content/uploads/2011/03/SPV_0100.jpg" alt="" width="274" height="410" /></a><p class="wp-caption-text">ನಾಟ್ಯಾಚಾರ್ಯ ಮುರಳೀಧರ ರಾಯರಿಗೆ ಗೌರವಾರ್ಪಣೆ</p></div>
<p style="text-align: justify;"><span style="font-family: Tunga;"><span style="color: #000000;">ರಸನಿರೂಪಣೆಯೇ ಕಲೆಯ ಅತ್ಯುನ್ನತ ಸಾಧನೆ ಎನ್ನುವ ಸಾರಾಂಶವನ್ನು ಹೇಳುವ ಈ ಕೃತಿ, ಭರತನಾಟ್ಯದ ಸಮಕಾಲೀನ ಬದಲಾವಣೆ, ಬೆಳವಣಿಗೆ, ವ್ಯತ್ಯಾಸ, ಲೋಪದೋಷ, ಗುಣಾವಗುಣಗಳನ್ನೂ ಸಾಕ್ಷ್ಯಸಮೇತ ವಿಶ್ಲೇಷಿಸಿದೆ. ಪುಷ್ಪಾಂಜಲಿ, ಅಲಾರಿಪ್ಪು ಮುಂತಾದ ನರ್ತನಪ್ರಕಾರಗಳಿಂದ ಮೊದಲ್ಗೊಂಡು ತಮಿಳ್ನಾಡು ಮತ್ತು ಮೈಸೂರು ಪರಂಪರೆಗಳಲ್ಲಿ ಬೆಳೆದುಬಂದ ವಿವಿಧ ನೃತ್ಯಾಂಗಗಳನ್ನೂ ಸೂಕ್ತ ದಾಖಲೆ, ಹಿನ್ನಲೆಗಳೊಂದಿಗೆ ಮೆಟ್ಟಿಲಿನೋಪಾದಿಯಲ್ಲಿ ಚರ್ಚಿಸಿದೆ. ನೃತ್ಯಕ್ಷೇತ್ರದ ಹಿರಿಯರ ಸಂದರ್ಶನ, ಗ್ರಂಥ ಪರಾಮರ್ಶನ, ಅವಲೋಕನ, ಕ್ಷೇತ್ರಕಾರ್ಯಾಧಾರಿತ ಸಂಶೋಧನೆಯಿಂದ </span></span><span><span style="color: #000000;">‘</span></span><span style="font-family: Tunga;"><span style="color: #000000;">ನೃತ್ಯಮಾರ್ಗ ಮುಕುರ</span></span><span><span style="color: #000000;">’</span></span><span style="font-family: Tunga;"><span style="color: #000000;">ದ ವಿಷಯ ವಿಶ್ಲೇಷಣೆ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಇಂದಿನ ಭರತನಾಟ್ಯಕ್ಷೇತ್ರದ ಅಗತ್ಯ, ಅನಿವಾರ್ಯತೆ, ಸಮಸ್ಯೆಗಳಿಗೆ ಕನ್ನಡಿ ಹಿಡಿದಿರುವ ಈ ಪುಸ್ತಕ ನೃತ್ಯಕ್ಷೇತ್ರದ ಒಂದು ಕೊಡುಗೆ ಮತ್ತು ನಿಜಕ್ಕೂ ಮಾರ್ಗ ಮುಕುರವೆಂಬ ಹೆಸರಿಗೆ ಅನ್ವರ್ಥ</span></span><span style="font-family: Tunga;"><span style="color: #000000; font-size: xx-small;">.- </span></span><span style="font-family: Tunga;"><span style="color: #000000;">ಎಂದಿದ್ದಾರೆ ಪುಸ್ತಕಕ್ಕೆ ವಿಶ್ಲೇಷಣೆಯನ್ನಿತ್ತ </span></span><span style="font-family: Tunga;"><span style="color: #000000;"><strong>ಅಷ್ಟಾವಧಾನಿಗಳು, ಚಿತ್ರಕಾವ್ಯ ಪರಿಣತರು, ಪೃಚ್ಛಕರೂ ಆದ ಡಾ. ಆರ್. ಶಂಕರ್.</strong></span></span></p>
<p style="text-align: justify;">
<p><span style="font-family: Tunga;"><span style="color: #000000;"><em> </em></span></span></p>
<p style="text-align: center;">
<div id="attachment_1567" class="wp-caption aligncenter" style="width: 310px"><a href="http://www.noopurabhramari.com/wp-content/uploads/2011/03/SPV_0101.jpg"><img class="size-medium wp-image-1567" title="SPV_0101" src="http://www.noopurabhramari.com/wp-content/uploads/2011/03/SPV_0101-300x200.jpg" alt="" width="300" height="200" /></a><p class="wp-caption-text">ಕವಿ ದಿವಾಕರ ಹೆಗಡೆಯವರಿಗೆ ಗೌರವಾರ್ಪಣೆ</p></div>
<p style="text-align: justify;"><span style="font-family: Tunga;"><span style="color: #000000;"><em>ಭರತನಾಟ್ಯ-ಭರತನ ನಾಟ್ಯಶಾಸ್ತ್ರ</em></span></span><span style="font-family: Tunga;"><span style="color: #000000;"> ಪ್ರಸ್ತುತ ಸಂದರ್ಭದಲ್ಲಿ ಗೊಂದಲವನ್ನು ಸೃಷ್ಟಿಸಿಕೊಂಡ ಪಾರಿಭಾಷಿಕ ಪದಗಳಾಗಿ ಮಾರ್ಪಟ್ಟಿವೆ. </span></span><span><span style="color: #000000;">‘</span></span><span style="font-family: Tunga;"><span style="color: #000000;">ಇಂದಿನ</span></span><span><span style="color: #000000;">’</span></span><span style="font-family: Tunga;"><span style="color: #000000;"> ಭರತನಾಟ್ಯ ಎಂಬ ನೃತ್ಯಪದ್ಧತಿಗೂ</span></span><span><span style="color: #000000;">‘</span></span><span style="font-family: Tunga;"><span style="color: #000000;">ಅಂದಿನ</span></span><span><span style="color: #000000;">’</span></span><span style="font-family: Tunga;"><span style="color: #000000;"> ಭರತನ ನಾಟ್ಯಶಾಸ್ತ್ರಗ್ರಂಥಕ್ಕೂ ಇರುವ ಸಂಬಂಧಗಳ ಬಗ್ಗೆ ಗಹನವಾದ ಚರ್ಚೆಗಳು ನಡೆಯುತ್ತಿದ್ದರೂ ತಾರ್ಕಿಕ, ತಲಸ್ಪರ್ಶಿಯಾದ ಅಧ್ಯಯನಗಳಾಗಿರುವುದು ಬೆರಳೆಣಿಕೆಯಷ್ಟು. ಈ ನಿಟ್ಟಿನಲ್ಲಿ </span></span><span><span style="color: #000000;"><strong><em>‘</em></strong></span></span><span style="font-family: Tunga;"><span style="color: #000000;"><strong><em>ನೃತ್ಯ ಮಾರ್ಗ ಮುಕುರ</em></strong></span></span><span><span style="color: #000000;"><strong><em>’</em></strong></span></span><span style="font-family: Tunga;"><span style="color: #000000;"> ಭರತನಾಟ್ಯ ನೃತ್ಯಮಾರ್ಗಕ್ಕೆ ಹಿಡಿದ ಕೈಗನ್ನಡಿಯೇ ಆಗಿರುವುದು ಅಭಿನಂದನೀಯ.- ಎಂದಿದ್ದಾರೆ ಪುಸ್ತಕಕ್ಕೆ ನಲ್ನುಡಿಯನ್ನಿತ್ತ </span></span><span style="font-family: Tunga;"><span style="color: #000000;"><strong>ಕಲಾ-ಇತಿಹಾಸ ಸಂಶೋಧಕಿ ಡಾ. ಕರುಣಾ ವಿಜಯೇಂದ್ರ.</strong></span></span></p>
<p><span style="font-family: Tunga;"><span style="color: #000000; font-size: xx-small;"> </span></span></p>
<p style="text-align: justify;">
<div id="attachment_1568" class="wp-caption aligncenter" style="width: 210px"><a href="http://www.noopurabhramari.com/wp-content/uploads/2011/03/SPV_0089.jpg"><img class="size-medium wp-image-1568" title="SPV_0089" src="http://www.noopurabhramari.com/wp-content/uploads/2011/03/SPV_0089-200x300.jpg" alt="" width="200" height="300" /></a><p class="wp-caption-text">ವರ್ಷದ ಶ್ರೇಷ್ಥ ನೃತ್ಯ ವಿಮರ್ಶೆಗಾಗಿ ಪ್ರಿಯಾ ರಾಮನ್ ಅವರಿಗೆ ಪ್ರಶಸ್ತಿ</p></div>
<p style="text-align: justify;"><span style="font-family: Tunga;"><span style="color: #000000;">ದಿನದಿಂದ ದಿನಕ್ಕೆ ಸಾಂಸ್ಕೃತಿಕ ರಂಗದ ಅದರಲ್ಲೂ ನರ್ತನ ಕ್ಷೇತ್ರದ ವಿಮರ್ಶಾಪರಂಪರೆ ಕುಸಿಯುತ್ತಿರುವಾಗ ವಿಮರ್ಶಕರನ್ನು ಗುರುತಿಸಿ, ಗೌರವಿಸುವ ದೃಷ್ಟಿಯಿಂದಷ್ಟೇ ಅಲ್ಲದೆ, ಈ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ</span></span><span style="font-family: Tunga;"><span style="color: #000000;"><strong>ವರ್ಷದ ಶ್ರೇಷ್ಠ ನೃತ್ಯ ವಿಮರ್ಶೆ ಪ್ರಶಸಿ</strong></span></span><span style="font-family: Tunga;"><span style="color: #000000;">ಯನ್ನು </span></span><span style="font-family: Tunga;"><span style="color: #000000;"><strong>ಕರ್ನಾಟಕದಲ್ಲೇ ಮೊತ್ತ ಮೊದಲಬಾರಿಗೆ</strong></span></span><span style="font-family: Tunga;"><span style="color: #000000;"> ನೂಪುರ ಭ್ರಮರಿ ಆರಂಭಿಸಿದ್ದು ನಿಜಕ್ಕೂ ಒಂದು ಹೆಗ್ಗಳಿಕೆ. ಕರ್ನಾಟಕದ ಉದ್ದಗಲಕ್ಕೂ ಇದ್ದ ವಿಮರ್ಶಕರು, ಬರೆಹಗಾರರು ತಮ್ಮ ವಿಮರ್ಶೆಗಳನ್ನು ಕಳಿಸಿಕೊಟ್ಟು ಸ್ಪರ್ಧೆಯ ಆರಂಭಿಕ ವರ್ಷಕ್ಕೆ ಉತ್ತಮ ಮುನ್ನುಡಿ ಹಾಕಿದ್ದರು. ಶತಾವಧಾನಿ ಡಾ. ಆರ್. ಗಣೇಶ್ ಅವರ ಬೆಂಬಲ, ಸಾಂತ್ವನಗಳು ಸ್ಪರ್ಧೆಯ ಮೌಲ್ಯವನ್ನು ಮತ್ತಷ್ಟೂ ಹೆಚ್ಚಿಸಿದ್ದವು. ಹೀಗೆ, ಹೊಸ ಹುರುಪಿನ ನಡಿಗೆಗೆ ಸಾಕ್ಷಿಯಾಗಿ ಈ ಪ್ರಶಸ್ತಿಗೆ ಮೊದಲು ಭಾಜನರಾದವರು ಪ್ರಸ್ತುತ ಹೈದರಾಬಾದಿನಲ್ಲಿ ನೆಲೆಸಿರುವ ಕರ್ನಾಟಕದವರೇ ಆದ ಯುವ ಬರಹಗಾರ್ತಿ </span></span><span style="font-family: Tunga;"><span style="color: #000000;"><strong>ಶ್ರೀಮತಿ ಪ್ರಿಯಾ ರಾಮನ್. </strong></span></span><span style="font-family: Tunga;"><span style="color: #000000;">ತೀರ್ಪುಗಾರಿಕೆಗೆ ಸಹಕರಿಸಿದ ನೃತ್ಯಕ್ಷೇತ್ರದ ಅನುಭವೀ, ಹಿರಿಯ</span></span><span style="font-family: Tunga;"><span style="color: #000000;"><strong> </strong></span></span><span style="font-family: Tunga;"><span style="color: #000000;">ವಿದ್ವನ್ಮಣಿಗಳಿಗೆ ಈ ನಿಟ್ಟಿನಲ್ಲಿ ಸಾದರ ಕೃತಜ್ಞತೆ ಸಲ್ಲಲೇಬೇಕು.</span></span></p>
<div><span style="font-family: Tunga;"><span style="color: #000000;"><br />
</span></span></div>
<p style="text-align: justify;"><span style="font-family: Tunga;"><span style="color: #000000;">.</span></span></p>
<p style="text-align: justify;"><span style="font-family: Tunga;"> </span></p>
<div id="attachment_1569" class="wp-caption aligncenter" style="width: 310px"><span style="font-family: Tunga;"><span style="color: #000000;"><a href="http://www.noopurabhramari.com/wp-content/uploads/2011/03/SPV_0050.jpg"><img class="size-medium wp-image-1569" title="SPV_0050" src="http://www.noopurabhramari.com/wp-content/uploads/2011/03/SPV_0050-300x200.jpg" alt="" width="300" height="200" /></a></span></span><p class="wp-caption-text">ವಿಕಲಚೇತನ ಕ್ರೀಡಾಪಟು, ಏಕಲವ್ಯ ಪ್ರಶಸ್ತಿ ವಿಜೇತ ರಾಘವೆಂದ್ರ ಅಣ್ವೇಕರ್ ಅವರಿಗೆ ಸನ್ಮಾನ</p></div>
<p style="text-align: justify;"><span style="font-family: Tunga;"><span style="color: #000000;">ಅಂದಿನದು ಒಂದು ಬಗೆಯ ಜಂಟಿ ಸಮಾರಂಭ. ಸೋದರೀ ಪತ್ರಿಕೆಗಳಾದ ನೂಪುರ ಭ್ರಮರಿ, ಚೈತ್ರರಶ್ಮಿ ಪರಸ್ಪರ ಜೊತೆಗೂಡಿದ್ದವು. ಚೈತ್ರರಶ್ಮಿ ಪ್ರತಿಕೆ ತನ್ನ ೬ನೇ ವರ್ಷದ ಸಂಭ್ರಮಕ್ಕಾಗಿ ರಾಜ್ಯಮಟ್ಟದ ಕಥಾಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ೫೦ ಮಂದಿ ಗ್ರಾಮೀಣ, ಹೊಸ ಕಥೆಗಾರರ ಅನ್ವೇಷಣೆಯಲ್ಲಿ ಐವತ್ತು ಮಂದಿ ಕಥೆಗಾರರ ನಡುವೆ ಸ್ಪರ್ಧೆಯಿತ್ತು. ಫಲವಾಗಿ ೧೦ ಮಂದಿ ವಿಜೇತ ಸ್ಪರ್ಧಿಗಳ ಕಥಾಸಂಕಲನ </span></span><span><span style="color: #000000;">‘</span></span><span style="font-family: Tunga;"><span style="color: #000000;">ಕನ್ನಡಿ ಬಿಂಬದ ನೆರಳು</span></span><span><span style="color: #000000;">’</span></span><span style="font-family: Tunga;"><span style="color: #000000;"> ಅನಾವರಣವನ್ನೂ ಒಳಗೊಂಡಿತ್ತು. ವಿಕಲಚೇತನ ಈಜು ಕ್ರೀಡಾಪಟು ಏಕಲವ್ಯ ಪ್ರಶಸ್ತಿ ವಿಜೇತ ರಾಘವೇಂದ್ರ ಅಣ್ವೇಕರ್ ಮತ್ತು ಸಾಮಾಜಿಕ ಕಾರ್ಯಕರ್ತ ನಾಗರಾಜ ನಾವುಂದ ಅವರಿಗೆ ಸನ್ಮಾನಿಸುವಾಗಲಂತೂ ಅವರ ಕೆಚ್ಚೆದೆಯ ಹೋರಾಟ ಮತ್ತು ಸಾಧನೆಯ ತುಡಿತವನ್ನು ಕಂಡು ಕಣ್ಣಲ್ಲಿ ನೀರು ಜಿನುಗಿದ್ದು ಸುಳ್ಳಲ್ಲ. ನಿಜಕ್ಕೂ ಅದು ಉತ್ಸಾಹದ ಸೆಲೆಯನ್ನು ಜೀವಂತವಾಗಿಸುವ, ಜೀವನ ಚೈತನ್ಯ ಕೊಡುವ ಕ್ಷಣ.</span></span></p>
<p style="text-align: justify;"><span style="font-family: Tunga;"><span style="color: #000000;">ದೇಹದ ಎಲ್ಲಾ ಅಶುದ್ಧ ರಕ್ತವನ್ನು ನಿತ್ಯ ಶುದ್ಧ ಮಾಡುವ ಹೃದಯ ಶರೀರದ ಪುಟ್ಟ ಘಟಕ. ಅಲ್ಲಿ ನಡೆಯುವ ಕೆಲಸ-ಕರ್ತವ್ಯ ಇಡೀ ಜೀವಮಾನದ ಶಕ್ತಿ. ಅಂತೆಯೇ ಸಮಾಜದಲ್ಲಿ ನಡೆಯುವ ಪುಟ್ಟ ಪುಟ್ಟ ಘಟಕಗಳ ಕಾರ್ಯಗಳೇ ಸಮಾಜವನ್ನು ಜೀವಂತವಾಗಿರಿಸುತ್ತವೆ. ವಿಪರ್ಯಾಸವೆಂದರೆ ಜನರು ಸಾಮಾನ್ಯವಾಗಿ ಸಮುದ್ರವನ್ನೇ ಗುರುತಿಸುತ್ತಾರೆಯೇ ವಿನಾ ನದಿ ತೊರೆಗಳನ್ನಲ್ಲ. ಎಲ್ಲರಿಗೂ ಸ್ಥೂಲವಾಗಿ ಕಾಣುವುದು, ದೊಡ್ಡದೆನಿಸಿಕೊಂಡದ್ದು ಮಾತ್ರ ನೆನಪಾಗುವುದು, ಆಪ್ತವಾಗುವುದು ಇಂದಿನ ದುರಂತ. ಆದರೆ ಸಂಸ್ಕೃತಿಗೆ ತೊಡಕುಗಳು ಬಂದಾಗ ಇಂತಹ ಘಟಕಗಳೇ ಸೆಟೆದು ನಿಂತು ಸೂಕ್ಷ್ಮ ರೂಪದಲ್ಲಿ ಹೋರಾಡುತ್ತವೆ. ಈ ನಿಟ್ಟಿನಲ್ಲಿ ನೂಪುರ ಭ್ರಮರಿಯದ್ದು ನಿಜಕ್ಕೂ ಅಂತಹ ಒಂದು ಅತ್ಯಪೂರ್ವ ಕೆಲಸ. ಸಾಹಿತ್ಯದ ಚಳುವಳಿಗಿಂತ ಉಳಿದ ಕಲಾಪ್ರಕಾರದ ಚಳುವಳಿಗೆ ಹೆಚ್ಚಿನ ಅವಕಾಶಗಳಿರುವ ಕಾಲಕ್ಕೆ ನೂಪುರ ಮಾಡುತ್ತಿರುವುದು ಆತ್ಮೀಯತೆಂii ಕೆಲಸ. ವೈಭವಕ್ಕಿಂತಲೂ ಈ ಪತ್ರಿಕೆ ನೆಚ್ಚಿಕೊಂಡದ್ದು ನಿಧಾನವಾದರೂ ಪ್ರಧಾನವೆಂಬಂತ</span></span><span><span style="color: #000000;">‘</span></span><span style="font-family: Tunga;"><span style="color: #000000;">ನೀಟುಗಾರಿಕೆ</span></span><span><span style="color: #000000;">’</span></span><span style="font-family: Tunga;"><span style="color: #000000;">ಯ, ಅಚ್ಚುಕಟ್ಟುತನದ ಕೆಲಸವನ್ನು. ಇಂತಹ ಕೆಲಸ ಇಂದಿನ ಕಾಲಕ್ಕೆ ಅಗತ್ಯವಾಗಿ ಹೆಚ್ಚಾಗಬೇಕು. ಸಾಮಾಜಿಕ, ಸಾಹಿತ್ಯಿಕ ಕಾರ್ಯಗಳನ್ನು ಒಟ್ಟಿಗೆ ನಿಂತು ಮಾಡುವ ಕೆಲಸವೂ ನೂಪುರ ಭ್ರಮರಿಯಿಂದಾಗುತ್ತಿದ್ದು ಇದರ ಧ್ಯೇಯಕ್ಕೆ ಮತ್ತಷ್ಟು ಸಹಕಾರ ಸಿಗಲಿ ಎಂದು ಆಶಿಸಿದವರು ಡಾ. ಜಿ.ಬಿ.ಹರೀಶ್.</span></span></p>
<p style="text-align: justify;">
<div>
<dl id="attachment_1565">
<dt><a href="http://www.noopurabhramari.com/wp-content/uploads/2011/03/SPV_0070.jpg"><img title="SPV_0070" src="http://www.noopurabhramari.com/wp-content/uploads/2011/03/SPV_0070-300x200.jpg" alt="" width="300" height="200" /></a></dt>
</dl>
</div>
<p style="text-align: justify;"><span style="font-family: Tunga;"> </span></p>
<div id="attachment_1570" class="wp-caption aligncenter" style="width: 310px"><span style="font-family: Tunga;"><span style="color: #000000;"><a href="http://www.noopurabhramari.com/wp-content/uploads/2011/03/SPV_0081.jpg"><img class="size-medium wp-image-1570" title="SPV_0081" src="http://www.noopurabhramari.com/wp-content/uploads/2011/03/SPV_0081-300x200.jpg" alt="" width="300" height="200" /></a></span></span><p class="wp-caption-text">ಸಂಪಾದಕಿ ಮನೋರಮಾ ಬಿ.ಎನ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ..</p></div>
<p style="text-align: justify;"><span style="font-family: Tunga;"><span style="color: #000000;">ಸಾನ್ನಿಧ್ಯ ಪ್ರಕಾಶನದ ಅಧ್ಯಕ್ಷ ಬಿ.ಜಿ. ನಾರಾಯಣ ಭಟ್, ನೃತ್ಯ ಸಂಶೋಧಕಿ ಡಾ. ಶೋಭಾ ಶಶಿಕುಮಾರ್, ಅಂತರ್ರಾಷ್ಟ್ರೀಯ ಈ-ಕವಿ ಸಂಘಟನೆಯ ಅಧ್ಯಕ್ಷ ವಿ. ಎಂ. ಕುಮಾರಸ್ವಾಮಿ, ಹಿರಿಯ ಕಲಾವಿದೆ, ಬರಹಗಾರ್ತಿ ವೇದಪುಷ್ಪ, ಸಂಗೀತ ವಿದುಷಿ ಡಾ. ಅರ್ಚನಾ ಭಟ್, ಹವ್ಯಕ ಪತ್ರಿಕೆಯ ಸಂಪಾದಕ ಶ್ರೀಕಾಂತ ಹೆಗಡೆ, ಕರ್ನಾಟಕ ಸಾಂಸ್ಕೃತಿಕ ವೇದಿಕೆಯ ಪಂಜಾಜೆ ಸಹೋದರರು, ಅಂಕಣಕಾರ ರಾಕೇಶ್ ಕುಮಾರ್ ಕಮ್ಮಜೆ.. ಹೀಗೆ ಕಾರ್ಯಕ್ರಮದ ಒಟ್ಟು ಅಂದಕ್ಕೆ ಮೆರುಗು ನೀಡಿದವರು ನೂರಾರು ಮಂದಿ. ಈ ಎಲ್ಲಾ ಹಂತದಲ್ಲಿ ನೂಪುರದ ಗೆಳೆಯಬಳಗ ಚೈತ್ರರಶ್ಮಿ ಸಂಪಾದಕ ರಾಮಚಂದ್ರ ಹೆಗಡೆ, ರಾಜೀವ ಹೆಗಡೆ, ಎನ್. ವಿ. ವೈದ್ಯ, ಮೇಧಾ ನಾಗರಾಜ್, ನಮ್ರತಾಪ್ರಸಾದ್, ಶ್ರೀನಿಧಿ ಅಡಿಗ, ಹರ್ಷ ಕಮ್ಮಜೆ, ಕಾರ್ತಿಕ್ ಪರಾಡ್ಕರ್.. ಅವರ ಸಹಕಾರ ಮರೆಯಲಸಾಧ್ಯ.</span></span></p>
<div id="attachment_1571" class="wp-caption aligncenter" style="width: 324px"><span style="font-family: Tunga;"><span style="color: #000000;"><a href="http://www.noopurabhramari.com/wp-content/uploads/2011/03/DSC00351.jpg"><img class="size-full wp-image-1571" title="DSC00351" src="http://www.noopurabhramari.com/wp-content/uploads/2011/03/DSC00351.jpg" alt="" width="314" height="235" /></a></span></span><p class="wp-caption-text"> ವಿದುಷಿ ಐಶ್ವರ್ಯ ನಿತ್ಯಾನಂದ ಅವರಿಂದ ಡಿ.ವಿ.ಜಿ. ಅಂತಃಪುರ ಗೀತೆಗಳ ಮನಮೋಹಕ ನೃತ್ಯ</p></div>
<p style="text-align: center;">
<p style="text-align: justify;"><span style="font-family: Tunga;"><span style="color: #000000;"><span style="font-family: Tunga;"><span style="color: #000000;">ನೂಪುರದ ಬಳಗದಿಂದ ಗುರು ಮುರಳೀಧರ ರಾವ್, ದಿವಾಕರ ಹೆಗಡೆ, ಧ್ಯೇಯ ಸಾಫ್ಟ್ವೇರ್ ಸೊಲ್ಯೂಷನ್ಸ್‌ನ ಮಹೇಶ್ ಎಳ್ಯಡ್ಕ, ಅವರನ್ನು ಸನ್ಮಾನಿಸಿ ಅಭಿವಂದಿಸಲಾಯಿತು. ಡಾ. ಪ್ರಧಾನ್ ಗುರುದತ್ ಮತ್ತು ದಿವಾಕರ ಹೆಗಡೆಯವರು ನೂಪುರದ ಧ್ಯೇಯೋದ್ದೇಶಗಳನ್ನು ಮನದುಂಬಿ ಶ್ಲಾಘಿಸಿದರು. ಮಿತ್ರ </span></span><span><span style="color: #000000;">‘</span></span><span style="font-family: Tunga;"><span style="color: #000000;">ರಾಧೇ</span></span><span><span style="color: #000000;">’</span></span><span style="font-family: Tunga;"><span style="color: #000000;"> ವೇದಿಕೆಗಿಂತಲೂ ತೆರೆಯ ಮರೆಯಲ್ಲೇ ಪ್ರಸರಣಾಧಿಕಾರಿ ವಿಷ್ಣುಪ್ರಸಾದ್‌ರಿಂದ ನೆನಪಿನ ಕಾಣಿಕೆ ಸ್ವೀಕರಿಸಬೇಕೆಂಬ ಪಟ್ಟು ಹಿಡಿದರು. ಸುನಿಲ್ ಕುಲಕರ್ಣಿ, ರಾಮ ಭಟ್ ಅವರ ಅನುಪಸ್ಥಿತಿ ಅವರಿತ್ತ ಸಹಕಾರವನ್ನು ಮತ್ತಷ್ಟು ಸ್ಮರಿಸಿತು. ಎಫ್‌ಎಂ ರೈನ್‌ಬೋ ನಿರೂಪಕಿ ರೇವತಿ ಶೆಟ್ಟಿಯವರ ಅಸ್ಖಲಿತ ನಿರೂಪಣೆ ಕಾರ್ಯಕ್ರಮದ ಔಪಚಾರಿಕತೆಯ ಬಿಗಿಯನ್ನು ಕಳಚಿ ಸ್ನೇಹಪೂರ್ವಕ ಸಮ್ಮಿಲನವಾಗಿಸಿತು. ದೂರದರ್ಶನ ಕಲಾವಿದೆ ವಿದುಷಿ ಶ್ರೀಮತಿ ಐಶ್ವರ್ಯಾ ನಿತ್ಯಾನಂದ </span></span><span style="font-family: Tunga;"><span style="color: #000000;"><strong> </strong></span></span><span style="font-family: Tunga;"><span style="color: #000000;">ಅವರಿಂದ ಡಿ.ವಿ.ಜಿ. ಅಂತಃಪುರ ಗೀತೆಗಳ ಕುರಿತ ಸೊಗಸಾದ ಭರತನಾಟ್ಯ ನೆರೆದವರ ಕಣ್ಣಿಗೆ ಮತ್ತೊಂದು ಹಬ್ಬ</span></span></span></span></p>
<p><span style="font-family: Tunga;"><span style="color: #000000;"><span style="font-family: Tunga;"></span>ಮೊದಲ ಹೆಜ್ಜೆ ಮಡಿಕೇರಿಯಲ್ಲಿ, ಎರಡನೇಯದು ಮಂಗಳೂರಿನಲ್ಲಿ, ಮೂರನೇಯದಕ್ಕೆ </span></span><span><span style="color: #000000;">‘</span></span><span style="font-family: Tunga;"><span style="color: #000000;">ಮುದ್ರಾರ್ಣವ</span></span><span><span style="color: #000000;">’</span></span><span style="font-family: Tunga;"><span style="color: #000000;">ದ ಮೇಘಮಲ್ಹಾರ ಉಜಿರೆಯಲ್ಲಿ, ನಾಲ್ಕನೇಯದಕ್ಕೆ ಬೆಂಗಳೂರಿನಲ್ಲಿ ಮಾರ್ಗ ಮುಕುರವಾಗಿ.. ಮುಂದಿನದು? ನಿಮ್ಮ ನಿರಂತರ ಆಶೀರ್ವಾದ, ನಮ್ಮ ನಿರೀಕ್ಷೆ. ಒಟ್ಟಿನಲ್ಲಿ ಕರ್ತವ್ಯ ಜಾರಿಯಲ್ಲಿರಬೇಕು. ಕೈಜೋಡಿಸಿ ಮುಂದುವರಿಯಬೇಕು, ಫಲಾಫಲಗಳನ್ನು ಅನಂತಕ್ಕೆ ಬಿಟ್ಟು, ಧ್ಯೇಯವೊಂದನ್ನೇ ಜೊತೆಗಿಟ್ಟು.</span></span></p>
<p><span style="font-family: Tunga;"><span style="color: #000000;">ನಮ್ಮೊಂದಿಗೆ ಇರುತ್ತೀರಲ್ವಾ?</span></span></p>
<p><span style="font-family: Tunga;"><span style="color: #000000;">ಒರತೆ ನದಿಯಾಗುತ್ತಲಿದೆ&#8230;ಕನಸುಗಳು ಹಲವಿವೆ, ಹಿರಿದಿವೆ&#8230; ಗುರಿಯೆಡೆಗಿನ ಪಯಣ ನಿರಂತರ.</span></span></p>
<p style="text-align: center;">&#8212;&#8212;&#8212;&#8212;&#8212;&#8212;-</p>
<p style="text-align: center;"><strong>A calling for social responsibility</strong>!</p>
<p style="text-align: right;">-Mrs. Priya Raman, Awardee, Best Dance Criticism-2010</p>
<p style="text-align: justify;">Everytime I sit to pen something, a strange feeling of nostalgia crosses over, something that reminds me of this new found immense passion. But at the threshold that I stand today, it is no longer new, now that I carry a lot of responsibility what with an award showered on me for my writing!</p>
<p style="text-align: justify;">As I humbly accept that this is a beautiful recognition for hard work, what I more deeply acknowledge and value is the very thought of giving an award to this field, the commendable service being done by ‘Noopura Bhramari’ under Smt. Manorama B.N and her team in Bangalore for treading a path which others dare not. It makes it all the more special that the organization just started off as a mere idea in complete meagerness in the corridors of a University has only flowered to greater, respectable heights.<a href="http://www.noopurabhramari.com/wp-content/uploads/2011/03/SPV_0065.jpg"><img class="aligncenter size-full wp-image-1572" title="SPV_0065" src="http://www.noopurabhramari.com/wp-content/uploads/2011/03/SPV_0065.jpg" alt="" width="384" height="257" /></a></p>
<p style="text-align: justify;">The team’s gesture of throwing light on the work of writers of dance, encouraging educative content and publishing a magazine of art most sincerely at near negligible costs is something only people with untiring devotion could muster. Noopura Bhramari spelt a strong message of art carrying a great degree of accountability to the society at large.</p>
<p style="text-align: justify;">Noopura Bhramari’s annual function celebrating the completion of four years was a vivid picture of experiences and commitment. An early Sunday evening with eight speakers talk on exploration and furthering of arts is not a small fete. Add to his an auditorium filled in its capacity is definitely a sign to show a job very well done.</p>
<p style="text-align: justify;">
<div id="attachment_1573" class="wp-caption aligncenter" style="width: 310px"><a href="http://www.noopurabhramari.com/wp-content/uploads/2011/03/SPV_0061.jpg"><img class="size-medium wp-image-1573" title="SPV_0061" src="http://www.noopurabhramari.com/wp-content/uploads/2011/03/SPV_0061-300x200.jpg" alt="" width="300" height="200" /></a><p class="wp-caption-text">ಸಮಾಜ ಸೇವಕ ಸೃಷ್ಟಿ ಸಂಘಟನೆಯ ನಾಗರಾಜ ನಾವುಂದ ಅವರಿಗೆ ಸನ್ಮಾನ( ಕಾರ್ಯಕ್ರಮದ ಹಿಂದಿನ ಬ್ಯಾನರ್ ಮಾಡಿಕೊಟ್ಟವರೂ ಇವರೇ..)</p></div>
<p>The function was also a healthy collaboration of another like minded organization – Chaitra Rashmi providing a platform for rural population to come to the fore and motivating them to achieve. Some extraordinary achievers were felicitated for their contributions to Karnataka. Mr. Raghavendra Anvekar with his spirited approach to life (being polio attacked) received a standing ovation for his success in water sports and social worker Nagaraj Navunda called for a strong will power to make a good society.</p>
<p style="text-align: justify;">The speakers ranging from Dr. G.B Harish, noted critic and Professor of Tumkur V.V who expressed concern about the diminishing educative research mentality among the urban population, to Shri Pradhan Gurudutt who lauded the efforts of such organizations, the function in totality voiced social responsibility and knowledged decision making . Ashtavadhani Dr. R Shankar, Senior Guru Muralidhar Rao, Yakshagana and Bharathanatyam Lyricist Divakara  Hegde’s words also memorable.</p>
<p style="text-align: justify;">
<div id="attachment_1574" class="wp-caption aligncenter" style="width: 310px"><a href="http://www.noopurabhramari.com/wp-content/uploads/2011/03/SPV_0112.jpg"><img class="size-medium wp-image-1574" title="SPV_0112" src="http://www.noopurabhramari.com/wp-content/uploads/2011/03/SPV_0112-300x200.jpg" alt="" width="300" height="200" /></a><p class="wp-caption-text">ನೂಪುರದ ಬಳಗದವರಿಗೆ ಸನ್ಮಾನ</p></div>
<p style="text-align: justify;">The programme had a cultural end with a pleasing Bharatanatyam recital by Ms. Aishwarya Nityananda and the attendees went home heavy with a plethora of thoughts to kindle them. On a more personal note, this would go down deep in memory lane for the encouragement received and with a larger role to play in future. (I shall also try my skills at Kannada writing, but it may take a while before that, with due apologies!)</p>
<div id="attachment_1575" class="wp-caption aligncenter" style="width: 310px"><a href="http://www.noopurabhramari.com/wp-content/uploads/2011/03/SPV_0123.jpg"><img class="size-medium wp-image-1575" title="SPV_0123" src="http://www.noopurabhramari.com/wp-content/uploads/2011/03/SPV_0123-300x200.jpg" alt="" width="300" height="200" /></a><p class="wp-caption-text">ಡಾ. ಆರ್. ಶಂಕರ್ ಅವರೊಂದಿಗೆ ಮನೋರಮಾ ವಿಷ್ಣುಪ್ರಸಾದ್</p></div>
<p style="text-align: center;">&#8212;&#8212;&#8212;</p>
<div>
<dl id="attachment_1571"></dl>
</div>
]]></content:encoded>
			<wfw:commentRss>http://www.noopurabhramari.com/extra/5th-annual-2/feed</wfw:commentRss>
		<slash:comments>0</slash:comments>
		</item>
		<item>
		<title>ಮಾರ್ಗಶಿರ ಪುಷ್ಯ-೨೦೧೦</title>
		<link>http://www.noopurabhramari.com/manjira/46</link>
		<comments>http://www.noopurabhramari.com/manjira/46#comments</comments>
		<pubDate>Tue, 14 Dec 2010 13:35:24 +0000</pubDate>
		<dc:creator>ಸಂಪಾದಕಿ</dc:creator>
				<category><![CDATA[ಮಂಜೀರ]]></category>
		<category><![CDATA[Abhinavagupta]]></category>
		<category><![CDATA[ನರ್ತನ]]></category>
		<category><![CDATA[ನೃತ್ಯ]]></category>
		<category><![CDATA[Bhakti Shringara]]></category>
		<category><![CDATA[Bharathanatyam]]></category>
		<category><![CDATA[bhoja]]></category>
		<category><![CDATA[Classical Dance]]></category>
		<category><![CDATA[Cultural Journalism]]></category>
		<category><![CDATA[Dance]]></category>
		<category><![CDATA[erotic]]></category>
		<category><![CDATA[madhura bhakti]]></category>
		<category><![CDATA[manjeera]]></category>
		<category><![CDATA[manorama]]></category>
		<category><![CDATA[natya]]></category>
		<category><![CDATA[natyashastra]]></category>
		<category><![CDATA[noopura]]></category>
		<category><![CDATA[noopura bhramari]]></category>
		<category><![CDATA[nrutya]]></category>
		<category><![CDATA[rukmini devi arundale]]></category>
		<category><![CDATA[sambhoga shringara]]></category>
		<category><![CDATA[shringara]]></category>
		<category><![CDATA[vipralamba shringara]]></category>

		<guid isPermaLink="false">http://www.noopurabhramari.com/?p=1439</guid>
		<description><![CDATA[ಇಂದಿನ ಭರತನಾಟ್ಯ ಕಾರ್ಯಕ್ರಮಗಳನ್ನೊಮ್ಮೆ ನೋಡಿ. ಬಹುತೇಕ ನೃತ್ಯಬಂಧಗಳಲ್ಲಿ ಅದರಲ್ಲೂ ವರ್ಣ, ಪದ, ಅಷ್ಟಪದಿಗಳನ್ನು ಪ್ರಧಾನವಾಗಿ ಗಮನಿಸಿದರೆ ನೀವು ಕಾಣುವುದು ಮಧುರ ಭಕ್ತಿಯೆಂಬ ಶೃಂಗಾರವಲ್ಲದ ಶೃಂಗಾರವನ್ನೋ; ಅಥವಾ ವಿರಹೋತ್ಕಂಠಿತೆಯಾಗಿ ನೆಗೆಯುವ ನಾಯಿಕೆಯನ್ನು !
ಹಾಗೆ ನೋಡಿದರೆ ಭರತನಾಟ್ಯದಂತಹ ನೃತ್ಯಪ್ರಕಾರದಲ್ಲಿ ಭಕ್ತಿ ಶೃಂಗಾರ ವ್ಯಾಪಕವಾದದ್ದು ೧೯೩೦ರ ದಶಕದ ನಂತರ. ಸದಿರ್ ನೃತ್ಯ ಪ್ರಕಾರ ಅಳಿವಿನಂಚಿನಲ್ಲಿದ್ದಾಗ, ಸಮಾಜವು ಸದಿರ್ ಮತ್ತು ಶೃಂಗಾರವನ್ನು ಅನುಮಾನಾಸ್ಪದವಾಗಿ ನೋಡುತ್ತಿದ್ದಾಗ ನೃತ್ಯದ ಮರುಹುಟ್ಟಿಗೆ ರುಕ್ಮಿಣೀದೇವಿ ಪರಿಚಯಿಸಿದ ಮಧುರ ಭಕ್ತಿ ಪ್ರತಿಪಾದನೆ ಸದಿರ್‌ನ ಕೊಂಕು-ಕೊಳಕುಗಳನ್ನು ತೊಳೆದು ಭರತನಾಟ್ಯವಾಗಿ ಮಿಂಚುವಲ್ಲಿ ಒಂದು [...]]]></description>
			<content:encoded><![CDATA[<p>ಇಂದಿನ ಭರತನಾಟ್ಯ ಕಾರ್ಯಕ್ರಮಗಳನ್ನೊಮ್ಮೆ ನೋಡಿ. ಬಹುತೇಕ ನೃತ್ಯಬಂಧಗಳಲ್ಲಿ ಅದರಲ್ಲೂ ವರ್ಣ, ಪದ, ಅಷ್ಟಪದಿಗಳನ್ನು ಪ್ರಧಾನವಾಗಿ ಗಮನಿಸಿದರೆ ನೀವು ಕಾಣುವುದು ಮಧುರ ಭಕ್ತಿಯೆಂಬ ಶೃಂಗಾರವಲ್ಲದ ಶೃಂಗಾರವನ್ನೋ; ಅಥವಾ ವಿರಹೋತ್ಕಂಠಿತೆಯಾಗಿ ನೆಗೆಯುವ ನಾಯಿಕೆಯನ್ನು !</p>
<p>ಹಾಗೆ ನೋಡಿದರೆ ಭರತನಾಟ್ಯದಂತಹ ನೃತ್ಯಪ್ರಕಾರದಲ್ಲಿ ಭಕ್ತಿ ಶೃಂಗಾರ ವ್ಯಾಪಕವಾದದ್ದು ೧೯೩೦ರ ದಶಕದ ನಂತರ. ಸದಿರ್ ನೃತ್ಯ ಪ್ರಕಾರ ಅಳಿವಿನಂಚಿನಲ್ಲಿದ್ದಾಗ, ಸಮಾಜವು ಸದಿರ್ ಮತ್ತು ಶೃಂಗಾರವನ್ನು ಅನುಮಾನಾಸ್ಪದವಾಗಿ ನೋಡುತ್ತಿದ್ದಾಗ ನೃತ್ಯದ ಮರುಹುಟ್ಟಿಗೆ ರುಕ್ಮಿಣೀದೇವಿ ಪರಿಚಯಿಸಿದ ಮಧುರ ಭಕ್ತಿ ಪ್ರತಿಪಾದನೆ ಸದಿರ್‌ನ ಕೊಂಕು-ಕೊಳಕುಗಳನ್ನು ತೊಳೆದು ಭರತನಾಟ್ಯವಾಗಿ ಮಿಂಚುವಲ್ಲಿ ಒಂದು ಕಾಲಕ್ಕೆ ಕೊಡುಗೆಯಾದದ್ದು ನಿಜ.<br />
ರುಕ್ಮಿಣೀ ಅವರ ಮಾತಿನಲ್ಲೇ ಹೇಳುವುದಾದರೆ ‘ಶೃಂಗಾರಕ್ಕೆ ಪರ್ಯಾಯವಾಗಿ ರೂಪಿಸಿದ್ದು ಮಧುರ ಭಕ್ತಿಯನ್ನು. ಹಾಗೆಂದು ಶೃಂಗಾರ ಬೇಡವೆಂದಲ್ಲ ; ಬೇಕು. ಅದು ಅಗತ್ಯ ಕೂಡಾ ! ಆದರೆ ನಾನು ಅಭಿವ್ಯಕ್ತಿಸುವ ವಿಧಾನ ಉಳಿದವರಿಗಿಂತ ವಿಭಿನ್ನ ಮತ್ತು ಕೊಡುವ ಆಯಾಮ ಬೇರೆ.’ ಅವರ ಪ್ರಕಾರ ಸದಿರ್‌ನಂತಹ ನೃತ್ಯದ ದಿಕ್ಕನ್ನು ಬದಲಾಯಿಸಿ, ದೇವದಾಸಿಗಳ ಕಪಿಮುಷ್ಟಿಯಿಂದ ಅದನ್ನು ಮುಕ್ತವಾಗಿ ಮಾಡಬೇಕಿದ್ದಲ್ಲಿ ಭಕ್ತಿಯನ್ನು ಶೃಂಗಾರದ ವಿರುದ್ಧ ಕಲ್ಪನೆಯೆಂಬಂತೆ ಬೆಳೆಸುವ ಅಗತ್ಯತೆ ಇತ್ತು. ಭಕ್ತಿಪೂರಿತ ಸಾಹಿತ್ಯವನ್ನೇ ಹೆಚ್ಚು ಎಂಬಂತೆ ತೋರುವುದರಿಂದ ನೃತ್ಯದ ಸತ್ತ್ವ ಮತ್ತು ಗೌರವ ಹೆಚ್ಚುತ್ತದೆ ಎಂಬುದು ಆಕೆಯ ವಾದ.<br />
ಆದರೆ ಅಂದಿನ ಸಂಧಿಗ್ಧ ಕಾಲಕ್ಕೆ ಅಗತ್ಯವಿದ್ದ ಸುಧಾರಣೆಯು ಮತ್ತೊಮ್ಮೆ ಸುಧಾರಣೆಯಾಗಬೇಕಾದ ಅನಿವಾರ್ಯತೆಯನ್ನು ಹೊತ್ತು ನಿಂತಿರುವುದು ಇಂದಿನ ವಾಸ್ತವ, ಅಪಾಯ, ವಿಪರ್ಯಾಸ ಮತ್ತು ಅಚ್ಚರಿಯೊಂದಿಗಿನ ದೊಡ್ಡ ವಿಷಾದ. ಇಂದಿಗೆ ಯಾವುದೇ ವರ್ಣ, ಪದಂಗಳ ಅಭಿವ್ಯಕ್ತಿಯನ್ನು ನೋಡಿ, ಭಕ್ತಿ ಶೃಂಗಾರದಲ್ಲಿ ಭಕ್ತಿಯೂ ಇಲ್ಲ; ಶೃಂಗಾರವೂ ಇಲ್ಲ ಎಂಬಂತಾಗಿದೆ. ನೃತ್ಯದಲ್ಲಿ ಗೀತಗೋವಿಂದ ಅಷ್ಟಪದಿ, ಕ್ಷೇತ್ರಜ್ಞನ ಪದಗಳಾದಿಯಾಗಿ ಯಾವುದನ್ನೆಲ್ಲ ಮಧುರ ಭಕ್ತಿಗೆ ಎಂದು ‘ಬ್ರಾಂಡ್’ ಮಾಡಿದ್ದಾರೋ, ಅದೆಲ್ಲಕ್ಕೂ ಇರುವ ಶೃಂಗಾರವೆಂಬ ಮೂಲಧಾತುವನ್ನು ಕೀಳೆಂದು ಕಾಣುತ್ತಾ ಭಕ್ತಿಯನ್ನೇ ಬಂಡವಾಳವಾಗಿಸಿ ಅಲೌಕಿಕವನ್ನು ಮುಟ್ಟಲು ಹೆಣಗುತ್ತಿದ್ದಾರೆ. ಶೃಂಗಾರದ ಅವಸ್ಥೆಗಳಿಗಿಂತ, ಭಕ್ತಿ ಶೃಂಗಾರವೇ ಉನ್ನತವಾದದ್ದು ಎಂಬ ಧೋರಣೆಯಲ್ಲೇ ‘ಶಕ್ತಿಪ್ರದರ್ಶನ’ಕ್ಕೆ ಸಜ್ಜಾಗುತ್ತಿದ್ದಾರೆ. ಅಂಧಾನುಕರಣೆಯೋ ಅಥವಾ ಔದಾಸೀನ್ಯವೋ; ನಾಟ್ಯಶಾಸ್ತ್ರದ ಮೂಲ ವ್ಯಾಖ್ಯೆಗಳನ್ನೇ ಮರೆತು, ಭಕ್ತಿಯನ್ನೇ ‘ಶೃಂಗಾರಶಾಸ್ತ್ರ’ವೆಂಬ ಹಣೆಪಟ್ಟಿ ಕಟ್ಟಿಸಿಕೊಂಡು ಭರತನಾಟ್ಯದ ಥಿಯರಿಯಲ್ಲಷ್ಟೇ ಶೃಂಗಾರವನ್ನು ಕಾಣುತ್ತಾ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂತೆ ಅಕ್ಷರಶಃ ಅಸ್ಪೃಶ್ಯನನ್ನಾಗಿಸಿದ್ದಾರೆ !<br />
ಹಾಗೆ ನೋಡಿದರೆ ಭಕ್ತಿಯೆಂಬ ಕಲ್ಪನೆಯನ್ನು ವಿದ್ವಾಂಸರು, ಲಾಕ್ಷಣಿಕರು ರಸವೆಂದು ಪ್ರತಿಪಾದಿಸಿದರೂ ಅದನ್ನು ಅಲ್ಲಗಳೆದವರೇ ಹೆಚ್ಚು. ಭಕ್ತಿ ಮುಂತಾದ ಭಾವಗಳು ರಸತ್ವವನ್ನು ಪಡೆಯಬಲ್ಲುದು ಎಂದು ಭೋಜರಾಜ ತನ್ನ ಶೃಂಗಾರ ಪ್ರಕಾಶ, ಸರಸ್ವತೀ ಕಂಠಾಭರಣದಲ್ಲಿ ಹೇಳಿದರೂ ಅಭಿನವ ಗುಪ್ತ ಮೊದಲಾದವರು ಅದನ್ನೊಪ್ಪುವುದಿಲ್ಲ. ಯಾವುದು ಸಹಜವೋ ಅದು ರಸ. ಯಾವುದು ಮತ್ತೊಂದರ ಜನ್ಯವೋ ಅದು ರಸವಾಗಲಾರದು ; ರಸದೃಷ್ಟಿಯ ಆಳಕ್ಕಿಳಿದು ಗಮನಿಸಿದರೆ ಎಂದೆಂದಿಗೂ ನಮಗೆ ಕಾಣುವುದು ಪ್ರಮುಖವಾಗಿ ಸಂಭೋಗಶೃಂಗಾರ ಮತ್ತು ವಿಪ್ರಲಂಭಶೃಂಗಾರ ಎಂಬ ಎರಡು ಬಗೆ ಮಾತ್ರ ; ಹಾಗಾಗಿ ಮಧುರ ಭಕ್ತಿಯೆಂಬುದು ನೇರ ಹಾದಿಯಿಂದ ಬರದೆ, ಬಯಲುಹಾದಿಯಲ್ಲಿ ಇರದೆ ಒಳಹಾದಿಗಳಿಂದ ಬಂದ ಒಂದು ಉತ್ಪನ್ನ ಎಂಬುದು ಅವರ ವಾದ.<br />
ಭಕ್ತಿಯನ್ನು ಅನುಭವದ ನಿಟ್ಟಿನಲ್ಲಿ ನೋಡಿದಾಗ ಅದು ಭಗವದ್ವಿಷಯವಾದ ಪ್ರೀತಿ. ಯಾವುದೇ ವಸ್ತುವನ್ನು ದೊಡ್ಡದಾಗಿ ಗೌರವಿಸಿ ಪ್ರದರ್ಶಿಸುವುದು ಭಕ್ತಿ. ಮನುಷ್ಯ, ಪ್ರಾಣಿ, ಪರಿಸರದ ಬಗ್ಗೆಯೂ ಇದನ್ನು ತೋರಿಸಬಹುದು. ತಂದೆ, ತಾಯಿ, ಗಂಡ, ಹೆಂಡತಿ..ಹೀಗೆ ಲೌಕಿಕವಾಗಿಯೂ ಇರಬಹುದು. ಈಗ ‘ದೇಶಭಕ್ತಿ’ಯ ಪರಿಕಲ್ಪನೆಯೂ ಸೇರಿಕೊಂಡಿದೆ. ಆದರೆ ಲಿಂಗಕ್ಕೂ ಮೀರಿದ ಭಾವಸರ್ವಸ್ವ ಶೃಂಗಾರ. ಅದು ಕೇವಲ ಅಲಂಕಾರ, ಒನಪು, ಒಯ್ಯಾರ ಮಾತ್ರವಲ್ಲ, ಸಮರ್ಪಣೆಯ ಶೃಂಗ. ಅಲ್ಲಿ ದೇವರಾಗಲಿ ಅಥವಾ ಯಾವುದೇ ಆಗಲಿ ಅದು ಪ್ರೀತಿಯ ಅಗಾಧ ಸಾಧ್ಯತೆ. ಎಲ್ಲಾ ಹಂಗನ್ನು ತೊರೆದು, ತನ್ನದು ಎನ್ನುವ ಪ್ರತ್ಯೇಕತೆಯನ್ನು ಕಳಚಿ ಜೀವಾತ್ಮ ಪರಮಾತ್ಮ-ಎಲ್ಲವೂ ಒಂದೇ ಆಗಿ ಒಂದರೊಳಗೊಂದು ಸಮೃದ್ಧವಾಗಿ ಸೇರಿಕೊಳ್ಳುವ ಅದ್ಭುತ ಪರಿಕಲ್ಪನೆ.<br />
ಹಾಗಾಗಿಯೇ ಸರ್ವ ರಸಗಳಲ್ಲಿಯೂ ಶೃಂಗಾರಕ್ಕೇ ಮೊದಲ ಸ್ಥಾನ. ಉಳಿದೆಲ್ಲಾ ರಸಗಳೂ ಶೃಂಗಾರದ ವಿಭಾಗಗಳಷ್ಟೇ! ಶುದ್ಧ ಶೃಂಗಾರ ಭಕ್ತಿಗಿಂತ ಮೇಲ್ಮಟ್ಟದ್ದು, ಭಕ್ತಿಯು ಶೃಂಗಾರದ ಸಾಧನಾ ಹಂತದ ಒಂದು ದಾರಿಯಷ್ಟೇ ಹೊರತು ಐಕ್ಯವನ್ನು ಸಾಧಿಸುವ ಅಂಶವಲ್ಲ ; ಭಕ್ತಿ ಭಾವ ಶೃಂಗಾರ ಮಾಧ್ಯಮದ ಮೂಲಕ ವ್ಯಕ್ತವಾಗಿ, ಅದಕ್ಕೆ ತಕ್ಕ ದೇಹ ಚಲನೆಗಳೂ ಮೂಡಿಬಂದಾಗ ಅದನ್ನು ಮಧುರಭಕ್ತಿಯೆಂದು ಕರೆದು ಶೃಂಗಾರದ ಒಳಗೆ ಸೇರಿಸಬಹುದಾದರೂ ಶೃಂಗಾರದ ಪರಮ ತತ್ತ್ವಕ್ಕಿಂತ ಮೇಲಲ್ಲ ಎಂಬುದು ಲಾಕ್ಷಣಿಕರ ಅಭಿಮತ. ಸರಳವಾಗಿ ಉದಾಹರಿಸುವುದಾದರೆ ಭಜನೆಯೇ ಭಕ್ತಿಯಲ್ಲ. ಭಜನೆಗಿಂತಲೂ ಮುಂದಿನದು ಅದರೊಳಗಿನ ಸಮರ್ಪಣಾ ಭಾವ. ಆದರೆ ಭಜನೆಯ ಭಕ್ತಿಯನ್ನೇ ಎಲ್ಲವೂ ಅಂದುಕೊಂಡಿರುವ ಪರಿಸ್ಥಿತಿ ಇಂದಿನ ಭರತನಾಟ್ಯ ಕಲಾವಿದರದ್ದು!<br />
ಹಾಗಂತ ಕಲೆಯನ್ನು ದೈವಿಕವಾಗಿ ಬಿಂಬಿಸುವುದು, ಅದಕ್ಕೆ ಭಕ್ತಿಯನ್ನು ಬಳಸುವುದು ಕಲೆಯ ಅಸ್ತಿತ್ವದ ದೃಷ್ಟಿಯಿಂದ ಒಂದು ಹಂತಕ್ಕೆ ಔಚಿತ್ಯ, ಅಗತ್ಯ ಮತ್ತು ಅನಿವಾರ್ಯವೂ ಹೌದು. ಆದರೆ ಕಲಾವಿದರು ಭಕ್ತಿಯನ್ನು ಅರ್ಥವಿಲ್ಲದ ಮಡಿವಂತಿಕೆಯ ಚೌಕಟ್ಟು ಹಾಕಿ ಕೂರಿಸಿ, ‘ಉಳಿಸಿಕೊಂಡದ್ದು ಹೇಗಾದರೂ ದಕ್ಕಬೇಕು’ ಎಂಬ ಒಂದು ಬಗೆಯ ಮೀಸಲಾತಿ, ಪ್ರತ್ಯೇಕತೆಯ ಆಗ್ರಹವನ್ನಷ್ಟೆ ಕಟ್ಟಿಕೊಂಡು ತಿರುಗುತ್ತಾ ; ತಮ್ಮ ‘ಬ್ರಾಂಡ್’ಗಳನ್ನು ರಸದೃಷ್ಟಿಗೆ ಒಯ್ಯಲು ಆಗದೇ ಇದ್ದರೂ; ರಸಿಕನಿಗೆ ಯಾವ ಬಗೆಯ ಸಂವಹನ ಆಗದೇ ಹೋದರೂ ‘ತಮ್ಮದು ಶಾಸ್ತ್ರೀಯ, ಹಾಗಾಗಿ ಅರ್ಥವಾಗುವುದಿಲ್ಲ’ ಎಂಬ ವಿತಂಡ ವಾದವನ್ನು ಮಾಡುತ್ತಲೇಯಿದ್ದಾರೆ ! ಹೀಗೆ ಕಲಾವಿದರು ತಮ್ಮ ಯೋಗ್ಯತೆ-ಪ್ರತಿಭೆಯನ್ನು ಪರಿಗಣಿಸದೇ ಕೇವಲ ವಸ್ತುವಿನಲ್ಲಷ್ಟೆ ಯೋಗ್ಯತೆಯಿದೆ ಎಂಬ ಅಜ್ಞಾನ ಪ್ರದರ್ಶಿಸಿದರೆ ಆಗುವ ಪರಿಣಾಮ, ಕಲೆಯ ಕೊಲೆ !<br />
ಒಟ್ಟಿನಲ್ಲಿ ಇಂದಿನ ಭರತನಾಟ್ಯವು ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲು ಎಷ್ಟು ಬೇಕೋ ಅದಕ್ಕಿಂತ ಹೆಚ್ಚಿನದ್ದು ಕಲಿತಿದೆ. ಆದರೆ ಲೌಕಿಕದಿಂದ ಪಾರಮಾರ್ಥಿಕತೆ ಸಂವಹನಕ್ಕೆ ದಾರಿಯಾದ ಶೃಂಗಾರವನ್ನು ‘ಕೇವಲ ಕಾಮ’ವೆಂಬಂತೆ ಅಸ್ಪೃಶ್ಯವಾಗಿ ಕಾಣುತ್ತಿರುವುದು, ಪ್ರೇಕ್ಷಕನ ರಸಾನುಭವಕ್ಕಾಗಿ ಅನುಸರಿಸಲೇಬೇಕಾದ ಕರ್ತವ್ಯವನ್ನು ಮರೆತು ರಸಿಕ ಪಡೆಯಲೇಬೇಕಾದ ಹಕ್ಕನ್ನು ವಂಚಿಸುತ್ತಿರುವುದು ಜಾಣತನವಲ್ಲ ; ಬದಲಾಗಿ ತನಗೆ ತಾನೇ ಮಾಡಿಕೊಳ್ಳುತ್ತಿರುವ ಮೋಸ. ಅನುಭಾವಿಕ ಪ್ರಜ್ಞೆಯೊಳಗೆ ಒಂದಾಗಿ ನಲಿಯುವುದು ಕೈಗೆಟುಕದ ದ್ರಾಕ್ಷಿಯಂತಾದಾಗ ನಾವು ಕಟ್ಟುವ ಭಕ್ತಿಶೃಂಗಾರವೆಂಬ ರಕ್ಷಣಾ ತಡೆಗೋಡೆ ರಸದಿಂದ, ಅಂತಃಸತ್ತ್ವಕ್ಕೆ ಇಡುವ ಸವಾಲಿನಿಂದ ವಿಮುಖವಾಗುವ ಪಲಾಯನವಾದವಲ್ಲದೆ ಬೇರೇನಲ್ಲ.<br />
ಕಲೆಯ ಅತ್ಯುಚ್ಚ ಮಟ್ಟದಲ್ಲಿ ಯಾವುದೇ ಆದರೂ ಸಾರ್ವಜನೀನವಾಗಿರುವುದು ರಸ; ಇಲ್ಲವಾದರೆ ಅದು ಮಡಿಯೆಂಬ ‘ನೀರಸ’. ರಸವಿಹೀನವಾದರೆ ಶಾಸ್ತ್ರೀಯ ನೃತ್ಯವಾದರೂ ಅದು ಯಾವ ಪ್ರಯೋಜನಕ್ಕೂ ಇಲ್ಲ. ಆದರೆ ನಮ್ಮೊಳಗಿನ ನಿರ್ಜೀವ ಮನಸ್ಸು, ಸ್ವಹಿತಾಸಕ್ತಿ, ಅಂಧತ್ವ, ಜಡತ್ವಗಳಿಗೆ ಸಾಕ್ಷಿಯಾಗಿ ಮಡಿವಂತಿಕೆಯ ಸೋಗನ್ನು ಮುಂದುವರೆಸಿಕೊಂಡು ಹೋದರೆ ಮುಂದೊಮ್ಮೆ ಕೊನೆಯ ಸಾಲಿನಲ್ಲಿ ನಿಲ್ಲುವ ಅರ್ಹತೆಯೂ ಕಡಿದು ಹೋಗಬಹುದು. ಕಾಲ ಮತ್ತು ಕಲೆ ಬಯಸುವ ಶೃಂಗಾರರಸದೃಷ್ಟಿ ಆಯಾಯ ಹಂತಕ್ಕೆ ದೊರಕದೇ; ನೃತ್ಯದ ಒಂದು ಕಾಲದ ಪುನರುಜ್ಜೀವನಕ್ಕೆ ಹಾದಿಯಾದ ಭಕ್ತಿಯನ್ನೇ ಸತತವಾಗಿ ಪರ್ಯಾಯಶಕ್ತಿಯೆಂಬಂತೆ ಬಳಸುತ್ತಾ ಹೋದರೆ ಆಡು ಕೂಡಾ ಮುಟ್ಟದೆ ಹೋಗುವ ಆಡುಸೋಗೆಯಂತೆ ಭರತನಾಟ್ಯವನ್ನು ಕಲಾ ಅಸೃಶ್ಯತೆ ಕಾಡೀತು! ನಮ್ಮ ಅತಿಯಾದ ಮಡಿ ನಮ್ಮನ್ನೇ ಎಲ್ಲರಿಂದ ದೂರವಿಟ್ಟೀತು! ಎಚ್ಚರವಿರಲಿ, ಅತಿಯಾದರೆ ಅಮೃತವೂ ವಿಷ!<br />
<strong>ಪ್ರೀತಿಯಿಂದ<br />
ಸಂಪಾದಕರು</strong></p>
]]></content:encoded>
			<wfw:commentRss>http://www.noopurabhramari.com/manjira/46/feed</wfw:commentRss>
		<slash:comments>0</slash:comments>
		</item>
		<item>
		<title>ಅಶ್ವೀಜ ಕಾರ್ತಿಕ ೨೦೧೦</title>
		<link>http://www.noopurabhramari.com/manjira/ashweeja-kartika-2010</link>
		<comments>http://www.noopurabhramari.com/manjira/ashweeja-kartika-2010#comments</comments>
		<pubDate>Fri, 15 Oct 2010 09:56:38 +0000</pubDate>
		<dc:creator>ಸಂಪಾದಕಿ</dc:creator>
				<category><![CDATA[ಮಂಜೀರ]]></category>
		<category><![CDATA[adavu jati]]></category>
		<category><![CDATA[ನರ್ತನ]]></category>
		<category><![CDATA[ನೃತ್ಯ]]></category>
		<category><![CDATA[ನೂಪುರಭ್ರಮರಿ]]></category>
		<category><![CDATA[Bharathanatyam]]></category>
		<category><![CDATA[bhramari]]></category>
		<category><![CDATA[Classical Dance]]></category>
		<category><![CDATA[Cultural Journalism]]></category>
		<category><![CDATA[Cultural magazine]]></category>
		<category><![CDATA[jati]]></category>
		<category><![CDATA[journalism]]></category>
		<category><![CDATA[magazine]]></category>
		<category><![CDATA[makuta jati]]></category>
		<category><![CDATA[manjeera]]></category>
		<category><![CDATA[mela prapti jati]]></category>
		<category><![CDATA[mukha jati]]></category>
		<category><![CDATA[nilugade jati]]></category>
		<category><![CDATA[noopura]]></category>
		<category><![CDATA[noopura bhramari]]></category>
		<category><![CDATA[nrutya]]></category>
		<category><![CDATA[patra jati]]></category>
		<category><![CDATA[trikala jati]]></category>
		<category><![CDATA[yakshagana]]></category>
		<category><![CDATA[yati]]></category>

		<guid isPermaLink="false">http://www.noopurabhramari.com/?p=1379</guid>
		<description><![CDATA[ಭರತನಾಟ್ಯ ನೃತ್ಯ ಕಾರ್ಯಕ್ರಮವದು. ಅರೆ, ಜತಿಸ್ವರದ ಜತಿ-ಕೋರ್ವೆಗಳನ್ನು ಬೇರೊಂದು ರಾಗದ ಅದೇ ತಾಳದ ನೃತ್ಯಬಂಧವೊಂದರಲ್ಲಿ ಕಂಡ ನೆನಪು. ಶಬ್ದಬಂಧವನ್ನು ಗಮನಿಸಿದರೆ ಅದರಲ್ಲೂ ಒಂದೇ ತೆರನಾದ ಭಾವ. ವರ್ಣವನ್ನು ನೋಡುವ ಹೊತ್ತಿಗೆ, ನಿಚ್ಚಳವಾಯಿತು ; ಯಾವುದೋ ಜತಿಸ್ವರ, ಶಬ್ದ, ವರ್ಣಗಳ ಜತಿ-ಕೋರ್ವೆಗಳ ಯಥಾವತ್ತು ನಕಲು ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಮತ್ತೊಂದು ರೂಪಕದಲ್ಲಿ ಎರಡು ಜತಿಗಳನ್ನು ಹೆಣೆದು ಮಾಡಿರುವ ಮಿಕ್ಸಡ್ ಅಡುಗೆ ಎನ್ನುವುದು ಮತ್ತಷ್ಟು ಸ್ಪಷ್ಟ ! ಹಾಡು ಹಳೆಯದಾದರೇನು ; ಭಾವ ನವನವೀನ ಎನ್ನೋಣವೇ? ಉಹುಂ..ಒಂದಿಂಚೂ [...]]]></description>
			<content:encoded><![CDATA[<p>ಭರತನಾಟ್ಯ ನೃತ್ಯ ಕಾರ್ಯಕ್ರಮವದು. ಅರೆ, ಜತಿಸ್ವರದ ಜತಿ-ಕೋರ್ವೆಗಳನ್ನು ಬೇರೊಂದು ರಾಗದ ಅದೇ ತಾಳದ ನೃತ್ಯಬಂಧವೊಂದರಲ್ಲಿ ಕಂಡ ನೆನಪು. ಶಬ್ದಬಂಧವನ್ನು ಗಮನಿಸಿದರೆ ಅದರಲ್ಲೂ ಒಂದೇ ತೆರನಾದ ಭಾವ. ವರ್ಣವನ್ನು ನೋಡುವ ಹೊತ್ತಿಗೆ, ನಿಚ್ಚಳವಾಯಿತು ; ಯಾವುದೋ ಜತಿಸ್ವರ, ಶಬ್ದ, ವರ್ಣಗಳ ಜತಿ-ಕೋರ್ವೆಗಳ ಯಥಾವತ್ತು ನಕಲು ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಮತ್ತೊಂದು ರೂಪಕದಲ್ಲಿ ಎರಡು ಜತಿಗಳನ್ನು ಹೆಣೆದು ಮಾಡಿರುವ ಮಿಕ್ಸಡ್ ಅಡುಗೆ ಎನ್ನುವುದು ಮತ್ತಷ್ಟು ಸ್ಪಷ್ಟ ! ಹಾಡು ಹಳೆಯದಾದರೇನು ; ಭಾವ ನವನವೀನ ಎನ್ನೋಣವೇ? ಉಹುಂ..ಒಂದಿಂಚೂ ಅವಕಾಶವಿಲ್ಲ.<br />
ಇದೇನು ಹೊಸತಲ್ಲ. ಕಂಡಕಂಡಲ್ಲಿ ಬೀದಿಗೊಂದರಂತೆ ಡ್ಯಾನ್ಸ್ ಕ್ಲಾಸ್ ಎಂಬ ಅಂಗಡಿ ತೆರೆದರೂ ಪುಟ್ಟ ಜತಿಯನ್ನು ಹೆಣೆಯಲು ಬಾರದ ಗುರು-ಕಲಾವಿದರುಗಳ ಅರ್ಹತೆಗೆ (?) ತಕ್ಕುದಾಗಿ ಸಿದ್ಧವಾಗುವ ಬೇರೆ ಜತಿಗಳಿಂದಾಯ್ದ ರೆಡಿಮೇಡ್ ಪದಾರ್ಥಗಳು ; ಅಪ್ಪ ಹಾಕಿದ ಆಲದ ಮರ ಎಂದು ಗುರುಗಳು ಹೇಳಿಕೊಟ್ಟ ಜತಿನಿರೂಪಣೆಯ ಯಥಾವತ್ತು ನಕಲಿನಿಂದಾಗಿ ಜತಿಗಳು ಪುನರಾವರ್ತನೆಯಾಗುವುದು ಮಾಮೂಲಿಯೆನಿಸಿದೆ. ಹೀಗಾಗಿ ಹೊಸತೆನಿಸುವ, ಸವಾಲೆನಿಸುವ ಜತಿಗಳ ನಿರ್ವಹಣೆ ಮತ್ತು ನೈಜವೆನಿಸುವ ಉತ್ಪತ್ತಿಗಳು ಕಂಡುಬಂದರೆ ಅದೇ ಸೌಭಾಗ್ಯವೆನ್ನಿಸಿದೆ. ಅದರಲ್ಲೂ ದಶಕಗಳಿಂದಲೂ ಕರ್ನಾಟಕದ ಅನೇಕ ಕಲಾವಿದರಿಗಿದು ಅನೂಚಾನ ಪದ್ಧತಿ.<br />
ಜತಿಯೆಂಬುದು ಅಭಿನಯರಹಿತವಾದ ಅಂಗವಿನ್ಯಾಸಗಳನ್ನೊಳಗೊಂಡ ಶುದ್ಧ ನೃತ್ತ. ಮೃದಂಗ, ತಬಲ, ತಾಳ ಮುಂತಾದ ವಾದ್ಯಗಳಿಂದ ಬರುವ ಶಬ್ದಗಳನ್ನು ಕೆಲವು ಅಕ್ಷರಗಳಿಂದ ಗುರುತಿಸಿ, ನುಡಿಕಾರಗಳನ್ನು ತಾಳಾವರ್ತನಕ್ಕೆ ಹೊಂದಿಸಿ ರಚನೆ ಮಾಡಿದುದಾಗಿರುತ್ತದೆ. ಜತಿಯೆಂಬುದು ನರ್ತನದ ಅಡಿಪಾಯ ; ಭರತನಾಟ್ಯದ ಅನಿವಾರ್ಯ ಅವಶ್ಯಕತೆ. ಯಾವ ವಿಧವಾದ ಅರ್ಥ, ವಿಚಾರ, ಸನ್ನಿವೇಶಗಳನ್ನು ಬಳಸದೆ ಅಂಗಗಳ ಚಲನೆಯಿಂದ ಲಾಲಿತ್ಯಮಯವಾಗಿಯೂ ಸುಂದರ ರಚನೆಗಳನ್ನು ನಿರೂಪಿಸುವುದು ಜತಿಯ ಅಸಾಧಾರಣ ಶಕ್ತಿ. ತಾಳ, ಲಯ, ಪಾಠಾಕ್ಷರ, ಅಡವು ಮತ್ತು ಕರಣಗಳನ್ನು ತೀರ್ಮಾನ ಸಹಿತವಾಗಿ ಸಂಘಟಿಸಲಾಗುವ ಇದರಿಂದ ಕೇವಲ ರಂಜನೆಯಷ್ಟೇ ಅಲ್ಲದೆ ; ನೃತ್ಯ ಮತ್ತು ಸಂಗೀತ ವಾದ್ಯಗಳೊಳಗೆ ಸಾಂಗತ್ಯವು ಏರ್ಪಡಲು, ವಿವಿಧ ವಿಕ್ಷೇಪಗಳನ್ನು ನೆನಪಿನಲ್ಲಿರಿಸಲೂ ಸಹಕರಿಸುತ್ತದೆ. ಗತಿಭೇಧ ನಡೆಗಳುಳ್ಳ ಜತಿಯನ್ನು ವಿದ್ವತ್ಪೂರ್ಣ ನಟ್ಟುವನ್ನಾರ್‌ಗಳಿಂದ ಕೇಳುವುದಕ್ಕೆ ಸ್ವಾರಸ್ಯ ಮಾತ್ರವಲ್ಲದೆ ಕಲಾವಿದರ ಪ್ರತಿಭೆಗೆ ಕನ್ನಡಿಯೂ ಹೌದು.<br />
ಜತಿಗಳ ಸಂಯೋಜನೆಯೂ ಆಕರ್ಷಕ. ಪಾತ್ರ ಜತಿ, ಮುಖ ಜತಿ, ಅಂತ್ಯ ಜತಿ, ಮುಕುಟ ಜತಿ, ನಿಲುಗಡೆ ಜತಿ, ಮೇಳ ಪ್ರಾಪ್ತಿ ಜತಿ, ಅಡವು ಜತಿ, ತ್ರಿಕಾಲ ಜತಿ ಹೀಗೆ ಹಲವು ವಿಧಗಳೂ ಮತ್ತು ಅವುಗಳ ನಿರೂಪಣಾ ವೈಶಿಷ್ಟ್ಯಗಳು, ನಿಯಮ ಬದ್ಧತೆಗಳೂ ಇವೆ. ಆದರೆ ಇತ್ತೀಚೆಗಿನ ಬಹಳಷ್ಟು ನೃತ್ಯಬಂಧ, ರೂಪಕಗಳಲ್ಲಿ ಜತಿಗಳ ವಿಶೇಷತೆ, ಕ್ರಮ-ಬದ್ಧತೆಗಳನ್ನರಿಯದೆ ಒಟ್ಟಾರೆ ಬಳಸುವುದು ಅಭ್ಯಾಸವೆಂಬಂತೆ ಆಗಿಹೋಗಿದೆ. ನೆರೆದವರ ಶಹಬ್ಭಾಸ್‌ಗಿರಿ ಗಿಟ್ಟಿಸುವ ನೆವದಲ್ಲಿ ಭಾವ ರಸಗಳಿಗೆ ತೊಂದರೆಯಾಗುವುದೆಂಬ ಪರಿಜ್ಞಾನವೂ ಇಲ್ಲದೆ ಅಳತೆ ಮೀರಿ ಜತಿಗಳನ್ನು ಅಳವಡಿಸುವುದೂ ಇದೆ.<br />
ವರ್ಣಗಳಲ್ಲಂತೂ ರಸ ನಿರ್ವಹಣೆಗೆ ಭಂಗ ಬರುವಷ್ಟರ ಮಟ್ಟಿಗೆ ಚ್ಯೂಯಿಂಗ್‌ಗಮ್‌ನಂತೆ ಪಾಠಾಕ್ಷರಗಳನ್ನು ಮನಬಂದಂತೆ ಎಳೆಯುವುದರಿಂದಾಗಿ ಕಡಲೆಯೊಂದಿಗೆ ಕಲ್ಲನ್ನೂ ಅಗಿದಂತಾಗುವುದಂತೂ ನಿಜ. ಇದರೊಂದಿಗೆ ಲಾಸ್ಯ ಭಾವ, ಗತಿಗಳಿಗೆ ಅಸಹಜವೆಂಬಂತೆ ತೋರುವ ತಾಂಡವ ಜಾತಿಯ ಜತಿಗಳನ್ನು ಸಂಯೋಜಿಸುವುದು, ವಿರಹೋತ್ಕಂಠಿತ ನಾಯಕಿ ಕ್ಷಣಮಾತ್ರದಲ್ಲೇ ಚಕ್ಕನೆ ನೆಗೆದು, ಕುಣಿದು ಮರುಕ್ಷಣಕ್ಕೆ ವಿರಹ, ದುಃಖವನ್ನು ನಟಿಸುವುದು..; ಅಭಿನಯದ ವ್ಯಾಖ್ಯಾನಗಳನ್ನೇ ತಿರುವುಮುರುವನ್ನಾಗಿಸಿದೆ.<br />
ಆದರೆ ಇವೆಲ್ಲವನ್ನೂ ‘ಸರಿ’ ಎಂಬರ್ಥದಲ್ಲಿ ಗುರುಗಳೆನಿಸಿಕೊಂಡವರು ಒಪ್ಪಿಕೊಂಡಿರುವುದು, ಪ್ರೇಕ್ಷಕರು ಮರುಮಾತಿಲ್ಲದೇ ಒಪ್ಪಿಕೊಳ್ಳುವಂತೆ ಮಾಡಿರುವುದು ದುರದೃಷ್ಟ. ತಕ್ಕಮಟ್ಟಿನ ಬದಲಾವಣೆ ತಂದರೆ ‘ಶಾಸ್ತ್ರದ್ರೋಹ’(ತಾವು ಅರಿಯದ)ವಾಗಿಬಿಡಬಹುದೋ ಎನ್ನುವ ಆತಂಕ ಮತ್ತು ಕಟ್ಟುನಿಟ್ಟಿನ ಅರ್ಥಹೀನ ಶಿಸ್ತು. ಹಾಗಾಗಿ ಯಥಾವತ್ತು ಸ್ಥಿತಿಯನ್ನು ಎಲ್ಲಾ ಕಾರ್ಯಕ್ರಮಗಳಲ್ಲೂ ಕಾಯ್ದುಕೊಂಡು ವಿದ್ವತ್ಪೂರ್ಣ ರಚನೆಗಳಾಗಬೇಕಿದ್ದ ವರ್ಣದಂತಹ ನೃತ್ಯಬಂಧವನ್ನು ಭಾವ-ರಸವಿಹೀನವಾಗಿಸಲಾಗುತ್ತಿದೆ. ಹಾಗೆಂದು ಬದಲಾವಣೆ ಬಯಸಿದಿರೋ ಕಂಡಕಂಡಲ್ಲೆಲ್ಲಾ ಹೊಸತೆಂದು ಕಂಡರೂ ಅಸಂಬದ್ಧ ಜತಿಗಳನ್ನು ತುರುಕಲಾಗುತ್ತಿದೆ. ಒಳ್ಳೆಯ ಜತಿ ನಿರೂಪಣೆ ಎಲ್ಲೋ ಒಂದೆರಡು ಬಾರಿ ; ಅದೂ ಅಪೂರ್ವಕ್ಕೆ ಎಂಬಂತೆ !<br />
ಪ್ರೇಕ್ಷಕರು ಮತ್ತು ನಟ ವರ್ಗದವರು ದೈಹಿಕವಾಗಿ ಮಾನಸಿಕವಾಗಿ ನರ್ತನದ ಪ್ರಧಾನ ಆಶಯಕ್ಕೆ ಸಿದ್ಧರಾಗುವುದು ಜತಿಯಿಂದಾಗಿ. ಅದು ನಿಯಮವೂ ಹೌದು. ಈ ನಿಟ್ಟಿನಲ್ಲಿ ಡಾ. ಪದ್ಮಾ ಸುಬ್ರಹ್ಮಣ್ಯಂ ಜತಿ ನಿರೂಪಣೆಯನ್ನು ಕರಣಗಳ ಸಮೇತ ಸವಾಲೆಂಬಂತೆ ಸಹಜವೆನಿಸುವಂತೆ ನರ್ತನದ ವಸ್ತುವಿನ ಭಾವದಲ್ಲಿಯೇ ಬಳಸುತ್ತಾರೆ. ಇಂತಹ ಜತಿ ನಿರೂಪಣೆ ಎಲ್ಲರಿಂದಲೂ ಅಸಾಧುವಾದರೂ ತಕ್ಕಮಟ್ಟಿನ ಸಮಯ-ಸಹಜಪ್ರಜ್ಞೆಯುಳ್ಳ ಜತಿಯ ಬಳಕೆ, ನೈಜ ಅಭಿವ್ಯಕ್ತಿ, ಪುಟ್ಟದಾದರೂ ಗಟ್ಟಿತನದ ಸ್ವತಂತ್ರ ಸಂಯೋಜನೆ ಕಲಾವಿದರ ನೃತ್ತ ಸಮಯವನ್ನು ಆರೋಗ್ಯವಾಗಿರಿಸುವುದಲ್ಲದೆ, ನೃತ್ಯವನ್ನು ಜೀವಂತವಾಗಿರಿಸುತ್ತದೆ ; ನರ್ತನದ ಆಯುಷ್ಯವನ್ನು ಹೆಚ್ಚಿಸುತ್ತದೆ.</p>
<p><strong>ಪ್ರೀತಿಯಿಂದ<br />
ಸಂಪಾದಕರು</strong></p>
]]></content:encoded>
			<wfw:commentRss>http://www.noopurabhramari.com/manjira/ashweeja-kartika-2010/feed</wfw:commentRss>
		<slash:comments>0</slash:comments>
		</item>
		<item>
		<title>ಜುಲೈ ಆಗಸ್ತ್ ೨೦೧೦</title>
		<link>http://www.noopurabhramari.com/manjira/manjeera-july-agust-2010</link>
		<comments>http://www.noopurabhramari.com/manjira/manjeera-july-agust-2010#comments</comments>
		<pubDate>Sun, 15 Aug 2010 05:52:41 +0000</pubDate>
		<dc:creator>ಸಂಪಾದಕಿ</dc:creator>
				<category><![CDATA[ಮಂಜೀರ]]></category>
		<category><![CDATA[ನರ್ತನ]]></category>
		<category><![CDATA[ನೃತ್ಯ]]></category>
		<category><![CDATA[ನೂಪುರಭ್ರಮರಿ]]></category>
		<category><![CDATA[Bharathanatyam]]></category>
		<category><![CDATA[bhramari]]></category>
		<category><![CDATA[Classical Dance]]></category>
		<category><![CDATA[creativity]]></category>
		<category><![CDATA[Cultural magazine]]></category>
		<category><![CDATA[Dance books]]></category>
		<category><![CDATA[journalism]]></category>
		<category><![CDATA[madikeri]]></category>
		<category><![CDATA[magazine]]></category>
		<category><![CDATA[mangalore]]></category>
		<category><![CDATA[manorama]]></category>
		<category><![CDATA[noopura]]></category>
		<category><![CDATA[noopura bhramari]]></category>
		<category><![CDATA[nrutya]]></category>
		<category><![CDATA[scholarisitc attitude]]></category>
		<category><![CDATA[talent in bahartahnatyam]]></category>
		<category><![CDATA[yakshagana]]></category>

		<guid isPermaLink="false">http://www.noopurabhramari.com/?p=1317</guid>
		<description><![CDATA[ನಮ್ಮಲ್ಲಿ ನಿರಂತರವಾಗಿ ಜಾಗೃತಗೊಳ್ಳುತ್ತಾ, ನಾವು ಬದುಕುವ ಬದುಕನ್ನು ಮತ್ತೊಮ್ಮೆ ನೋಡಿಕೊಳ್ಳಬೇಕು ಎಂದಾದಾಗ ನಮಗೆ ನೆರವಾಗುವುದೇ ಸಷ್ಟಿಶೀಲ ಮನಸ್ಥಿತಿ. ನಾವು ಕಾಣುತ್ತಿರುವ, ಅನುಭವಿಸುವ, ಆಲೋಚಿಸುವ ಒಂದು ಜಗತ್ತು ಅಥವಾ ವಸ್ತು ನಮ್ಮನ್ನು ಕಾಡುತ್ತದೆ ಎಂದಾದರೆ ಆ ವಸ್ತುವಿನೆಡೆಗೆ ಒಂದು ದೃಷ್ಟಿ, ಆಸಕ್ತಿ, ಸಂಬಂಧ ಬೆಳೆಯುತ್ತಾ ಹೋಗುತ್ತದೆ. ಅದನ್ನು ಹೇಳುವುದೇ ಸೃಷ್ಟಿಶೀಲತೆ ! ಅದು ಕೇವಲ ಹೊಸತೊಂದರ ಜನ್ಮವಷ್ಟೇ ಅಲ್ಲ, ಕಳಚಿಕೊಂಡುಹೋಗುವ ಕೊಂಡಿಯೊಂದರ ಮರುಜನ್ಮವೂ ಆಗಬಹುದು. 
ಅಂತಹ ಸೃಷ್ಟಿಶೀಲತೆ ಕಾರ್ಯೋನ್ಮುಖವಾಗಿ ರೂಪುಗೊಂಡರೆ ಕ್ರಾಂತಿಯೆನಿಸುವ ಕಲ್ಪನೆಗಳು, ಕಾಣ್ಕೆಗಳು ಹೊರಬೀಳುತ್ತವೆ. ಉದಾ : [...]]]></description>
			<content:encoded><![CDATA[<p>ನಮ್ಮಲ್ಲಿ ನಿರಂತರವಾಗಿ ಜಾಗೃತಗೊಳ್ಳುತ್ತಾ, ನಾವು ಬದುಕುವ ಬದುಕನ್ನು ಮತ್ತೊಮ್ಮೆ ನೋಡಿಕೊಳ್ಳಬೇಕು ಎಂದಾದಾಗ ನಮಗೆ ನೆರವಾಗುವುದೇ ಸಷ್ಟಿಶೀಲ ಮನಸ್ಥಿತಿ. ನಾವು ಕಾಣುತ್ತಿರುವ, ಅನುಭವಿಸುವ, ಆಲೋಚಿಸುವ ಒಂದು ಜಗತ್ತು ಅಥವಾ ವಸ್ತು ನಮ್ಮನ್ನು ಕಾಡುತ್ತದೆ ಎಂದಾದರೆ ಆ ವಸ್ತುವಿನೆಡೆಗೆ ಒಂದು ದೃಷ್ಟಿ, ಆಸಕ್ತಿ, ಸಂಬಂಧ ಬೆಳೆಯುತ್ತಾ ಹೋಗುತ್ತದೆ. ಅದನ್ನು ಹೇಳುವುದೇ ಸೃಷ್ಟಿಶೀಲತೆ ! ಅದು ಕೇವಲ ಹೊಸತೊಂದರ ಜನ್ಮವಷ್ಟೇ ಅಲ್ಲ, ಕಳಚಿಕೊಂಡುಹೋಗುವ ಕೊಂಡಿಯೊಂದರ ಮರುಜನ್ಮವೂ ಆಗಬಹುದು. </p>
<p>ಅಂತಹ ಸೃಷ್ಟಿಶೀಲತೆ ಕಾರ್ಯೋನ್ಮುಖವಾಗಿ ರೂಪುಗೊಂಡರೆ ಕ್ರಾಂತಿಯೆನಿಸುವ ಕಲ್ಪನೆಗಳು, ಕಾಣ್ಕೆಗಳು ಹೊರಬೀಳುತ್ತವೆ. ಉದಾ : ಯಾವುದೋ ಅನ್ಯಾಯವಾಗುತ್ತಿದೆ ಎಂದುಕೊಂಡಾಗ ಆ ಅನ್ಯಾಯದ ಬೆಂಕಿ ನಮ್ಮೊಳಗೇ ಕಾಟ ಕೊಟ್ಟು ಅದರ ಬಗ್ಗೆ ನಾವು ಬೇರೊಂದು ಅಭಿವ್ಯಕ್ತಿಯನ್ನು ತಾಳುತ್ತೀವಿ ಎಂದಾದರೆ ಅದು ಸೃಷ್ಟಿಶೀಲತೆ. ಆ ಅನ್ಯಾಯದ ವಿರುದ್ಧ ಕೆಲಸ ಮಾಡುತ್ತೀವಿ ಅಂತಾದರೆ ಅದು ಕ್ರಿಯಾಶೀಲತೆ, ಸೃಷ್ಟಿಶೀಲ ಮನಸ್ಥಿಯ ಉಗಮಕ್ಕೆ ಇಚ್ಛಾಶಕ್ತಿ, ಜ್ಞಾನಶಕ್ತಿಗಳ ಹರಿವು ಬೇಕು. ಅದೇ ಇಚ್ಛಾಶಕ್ತಿ, ಜ್ಞಾನಶಕ್ತಿ ಕ್ರಿಯಾಶಕ್ತಿಯಲ್ಲಿ ಸರಿಯಾದ ದಾರಿಯಲ್ಲಿ ಪ್ರತಿಫಲಿತವಾದರೆ ಮಾತ್ರ ಶಿಕ್ಷಣ. ಇವುಗಳೆಲ್ಲದರ ಒಟ್ಟು ದರ್ಶನವೇ ಪ್ರತಿಭೆ. ಅದರ ಕಾರ್ಯ ಕಲೆ. ಪ್ರತಿಭೆ ಸೃಷ್ಟಿಗೂ, ಸೃಷ್ಟಿಶೀಲತೆ ಪ್ರತಿಭೆಗೂ ಸಹಕಾರಿಯೂ, ಪೂರಕವೂ ಹೌದು. </p>
<p>ಈ ಪ್ರತಿಭೆಗೆ ವಿಶಿಷ್ಟವಾದ ಒಂದು ದೃಢತೆಯನ್ನೂ, ಪುಷ್ಟಿಯನ್ನೂ ನೀಡುವುದು ಪಾಂಡಿತ್ಯ. ಶತಾವಧಾನಿಗಳು ಹೇಳುವಂತೆ &#8216;ಶುದ್ಧಪ್ರತಿಭೆಯನ್ನು ಜೋಗದ ಜಲಪಾತವೆನ್ನಬಹುದಾದರೆ ಪಾಂಡಿತ್ಯವು ಈ ಜಲಶಕ್ತಿಯನ್ನು ವಿದ್ಯುತ್ತಾಗಿ ಪರಿವರ್ತಿಸುವ ಯಂತ್ರರಾಶಿವಿಶೇಷ&#8217;. ಹೀಗೆ ಯಾವುದೇ ಪರಿಚ್ಛೇದಕ್ಕೆ ಒಳಗಾಗದ ಪ್ರತಿಭೆ ಮತ್ತು ದೇಶ-ಕಾಲ-ವಸ್ತುಗಳಿಂದ ಪರಿಚ್ಛಿನ್ನವಾದ ಪಾಂಡಿತ್ಯ ಒಂದಾಗಿ ಕಲೆತಾಗ ಮಾತ್ರ ಆನಂದಮಯ ಕಲಾಸೃಷ್ಟಿ ಸಾಧ್ಯ. </p>
<p>ಅಂತಹ ಪಾಂಡಿತ್ಯಪೂರ್ಣ ದೃಷ್ಟಿ, ಸೃಷ್ಟಿಶೀಲತೆ ಮತ್ತು ಕ್ರಿಯಾಶೀಲತೆಗಳ ಸಾಂಗತ್ಯದ ನಿಲುವು, ಪ್ರತಿಭೆಯ ಅರಿವು ಇಂದಿನ ನೃತ್ಯಕ್ಷೇತ್ರಕ್ಕೆ ಅಗತ್ಯವಿದೆ. ಅದು ಕೇವಲ ನೃತ್ಯ ಸಂಯೋಜನೆ, ಕಾವ್ಯ ಸಮಯ, ನೃತ್ಯ ಪ್ರದರ್ಶನಗಳಿಗಷ್ಟೇ ಸೀಮಿತವಾಗಬೇಕಿಲ್ಲ ; ಜೊತೆಗೆ ನೃತ್ಯಕ್ಷೇತ್ರದ ಬಗ್ಗೆ ಪರಿಚಯಿಸುವ, ಅನುಭವ-ಆಲೋಚನೆಯನ್ನು ಕಟ್ಟಿಕೊಡುವ, ಸುದೀರ್ಘ-ಸರಳ-ಆಸಕ್ತಿಕರ ಓದಿಗೆ ನೆರವಾಗುವ, ತಲೆಮಾರುಗಳ ತಹತಹಿಕೆ-ಸಂಬಂಧಗಳನ್ನು ವಿವರಿಸುವ, ಪೂರ್ಣ ಸಾದೃಶ್ಯ ವಿವರಗಳನ್ನು ಒದಗಿಸುವ, ಸರ್ಜನಶೀಲ (ಸೃಜನಶೀಲ-ವ್ಯಾಪಕವಾಗಿ ಬಳಸುವ ತಪ್ಪು ಪದ) ನೋಟಗಳನ್ನು- ಕ್ರಿಯಾಶೀಲ ಮನಸ್ಸುಗಳನ್ನು ಹೆಚ್ಚಿಸುವ, ಕಾಡುವ ಸಂವೇದನಾಶೀಲ ಪುಸ್ತಕಗಳು-ಗ್ರಂಥ ನಿರೂಪಣೆಗಳು ಹೊರಬರಬೇಕಾಗಿವೆ. ಆಗ ಮತ್ತಷ್ಟು ಪ್ರತಿಭೆಗಳು ವಿಕಸಿತಗೊಳ್ಳಲು, ಪ್ರಕಾಶಗೊಳ್ಳಲು, ಪ್ರಯೋಗವಾಗಲು, ಪಸರಿಸಲು, ಪೂರ್ಣವೆನಿಸಲು ಸಾಧ್ಯ.</p>
<p>ಕನ್ನಡದಲ್ಲಿ ಪ್ರಕಾಶಿತವಾದ ಬಹಳಷ್ಟು ನೃತ್ಯ ಸಂಬಂಧೀ ಪುಸ್ತಕಗಳು ಕೇವಲ ಪರೀಕ್ಷಾ ಕ್ರಮಕ್ಕಷ್ಟೇ ಮೀಸಲಾಗಿವೆ ಎಂಬಂತಿದೆ. ಕೇವಲ ಬೆರಳೆಣಿಕೆಯಷ್ಟು ಪುಸ್ತಕಗಳು ನೈಜವೆನಿಸುವ ಸಂಶೋಧನೆಗಳನ್ನು, ಸ್ವಂತಿಕೆಯ ವಿವರಗಳನ್ನು ಒದಗಿಸುತ್ತವೆಯಾದರೂ, ಕಾರಣಂತರಗಳಿಂದ ಲಭ್ಯವಾಗುತ್ತಿಲ್ಲ. ಉಳಿದಂತೆ ಬಹಳಷ್ಟು ಕೃತಿಗಳು ಮತ್ತೊಬ್ಬರ ಜೇಬಿಗೆ ಕೈ ಇಳಿಬಿಟ್ಟಂತ ಚೌರ್ಯವೆನಿಸದ ಚೌರ್ಯಗಳೇ ಆಗಿವೆ. </p>
<p>ಪುಸ್ತಕಗಳ ಕೊರತೆಯಿದ್ದಷ್ಟು ಅರಿವಿನ ಬೆಳಕಿಂಡಿ ದೂರವಾಗುತ್ತಲೇ ಹೋಗುತ್ತದೆ ; ಚೈತನ್ಯದ ದೃಷ್ಟಿ, ಆಳವೆನಿಸುವ ಅಧ್ಯಯನ, ಮರುನೋಟದ ಅವಕಾಶವೂ ಕುಸಿಯುತ್ತದೆ. ವ್ಯಾಪ್ತಿಯ ಅನುಭವವೂ ಕಡಿಮೆಯಾಗುವುದಲ್ಲದೆ ಕ್ಷೇತ್ರವೊಂದರ ಅನುಕೂಲ-ಅನನುಕೂಲ, ಅವಶ್ಯಕತೆ-ಅವಸ್ಥೆ, ಗತಿ-ನೆಲೆ, ಕೊಂಕು-ಕೊಳಕು-ಕಳಂಕ-ತೊಡಕು, ಸಾಧ್ಯತೆ, ಪ್ರತಿಭೆ, ಪರಿಣಾಮಗಳು ಅಷ್ಟಾಗಿ ಲಕ್ಷ್ಯಕ್ಕೆ ಬರುವುದಿಲ್ಲ. ಇದರಿಂದ ಕಲೆಯ ಭೂತಕಾಲದಲ್ಲಿದ್ದ ಶಾಸ್ತ್ರ-ಸಂಪ್ರದಾಯ, ವರ್ತಮಾನಗಳಲ್ಲಿ ಅವುಗಳ ಪ್ರಸ್ತುತತೆ-ವಾಸ್ತವಗಳಷ್ಟೇ ಅಲ್ಲ ; ಭವಿಷ್ಯದ ವಿಮರ್ಶೆಗಳು, ಚಿಂತನೆಗಳ ಗುಣಮಟ್ಟ ಅರಿವಿಗೆ ಬರಲಾರದು. </p>
<p>ಪುಸ್ತಕಗಳು ಭವಿತವ್ಯಕ್ಕೆ ನಾವು ನೀಡುವ ಅತುತ್ತಮ ಕೊಡುಗೆ. ಈ ನಿಟ್ಟಿನಲ್ಲಿ ಅಧ್ಯಯನ ನಡೆಸುವವರ ಮತ್ತು ಅಧ್ಯಯನದ ಫಲಶ್ರುತಿಯನ್ನು ಸರಿಯಾದ ದಿಕ್ಕಿನಲ್ಲಿ ಕಾಣಿಸುವವರ ಶ್ರಮ ಹೆಚ್ಚಿನ ಬದಲಾವಣೆಗಳನ್ನು ತರಲು ಸಾಧ್ಯ. ವೈಯಕ್ತಿಕ ನೆಲೆಯಲ್ಲಿ, ಸಂಸ್ಥೆ-ಸಂಘಟನೆಗಳ ಪ್ರಯತ್ನದೊಂದಿಗೆ ಅಕಾಡೆಮಿಗಳ, ಸರ್ಕಾರ ಪ್ರಾಯೋಜಿತ ಸಂಸ್ಥೆ- ಇಲಾಖೆಗಳ ನೆರವು, ಮುಂದಾಳತ್ವ, ಮಾರ್ಗದರ್ಶನ ಮತ್ತು ಮುನ್ನಡೆ ಅಗತ್ಯ ಬೇಕು. ಇನ್ನಾದರೂ ಇಂತಹ ಪುನಶ್ಚೇತನಗಳಿಲ್ಲವಾದಲ್ಲಿ ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಇರುವ ಕೊಂಡಿಯು ಶಿಥಿಲವಾಗುತ್ತದೆ ; ಅರಿವಿನ ಕ್ಷಿತಿಜ ಬರಿದಾಗುತ್ತದೆ ; ಕೈಮರ ಕಾಣೆಯಾಗುತ್ತದೆ ; ಪ್ರಕ್ಷುಬ್ಧ ಪರಿಸ್ಥಿತಿ ಪುನರಾವರ್ತನೆಗೊಳ್ಳುತ್ತದೆ ; ನಿರ್ವಾತ ತುಂಬಿಕೊಳ್ಳುತ್ತದೆ. ಅರಿವಿನ ದೀವಟಿಗೆಗೆ ಪುಸ್ತಕಗಳ ಪ್ರಕಾಶನ, ಮತ್ತು ಅದರಿಂದ ಪ್ರಯೋಜನ ಪಡೆದುಕೊಳ್ಳಬೇಕಾದ ವಿವೇಕ ನಮ್ಮಲ್ಲಿ ಇದ್ದರೆ ಮಾತ್ರ ಕಲಾದಿಗಂತ ನಿರ್ಮಲವಾಗಿ, ಸಮೃದ್ಧವಾಗಿ ಶೋಭಿಸಬಹುದು. ಆ ದಿಕ್ಕಿಗೆ ನಮ್ಮ ಪ್ರಯತ್ನವಿರಲಿ.<br />
<strong><br />
ಪ್ರೀತಿಯಿಂದ</p>
<p>ಸಂಪಾದಕರು</strong></p>
]]></content:encoded>
			<wfw:commentRss>http://www.noopurabhramari.com/manjira/manjeera-july-agust-2010/feed</wfw:commentRss>
		<slash:comments>0</slash:comments>
		</item>
		<item>
		<title>ಜೇಷ್ಠ ಆಷಾಢ ೨೦೧೦</title>
		<link>http://www.noopurabhramari.com/manjira/manjeera-may-june-2010</link>
		<comments>http://www.noopurabhramari.com/manjira/manjeera-may-june-2010#comments</comments>
		<pubDate>Wed, 16 Jun 2010 06:27:33 +0000</pubDate>
		<dc:creator>ಸಂಪಾದಕಿ</dc:creator>
				<category><![CDATA[ಮಂಜೀರ]]></category>
		<category><![CDATA[ನರ್ತನ]]></category>
		<category><![CDATA[ನೃತ್ಯ]]></category>
		<category><![CDATA[ನೂಪುರಭ್ರಮರಿ]]></category>
		<category><![CDATA[Bharathanatyam]]></category>
		<category><![CDATA[bhramari]]></category>
		<category><![CDATA[Classical Dance]]></category>
		<category><![CDATA[cruel reality shows]]></category>
		<category><![CDATA[Cultural magazine]]></category>
		<category><![CDATA[Dance]]></category>
		<category><![CDATA[dooradarshana]]></category>
		<category><![CDATA[manorama]]></category>
		<category><![CDATA[music and dance reality shows]]></category>
		<category><![CDATA[natya]]></category>
		<category><![CDATA[noopura]]></category>
		<category><![CDATA[noopura bhramari]]></category>
		<category><![CDATA[nrutya]]></category>
		<category><![CDATA[Reality Shows]]></category>
		<category><![CDATA[sangeetha maha yuddha]]></category>

		<guid isPermaLink="false">http://www.noopurabhramari.com/?p=1261</guid>
		<description><![CDATA[ಸಂಗೀತ ನೃತ್ಯಗಳೆಂದರೆ ಯುದ್ಧವೇ ? ಎಂತೆಂತ ಕಲ್ಲು ಮನಸ್ಸುಗಳನ್ನು ಕರಗಿಸಿದ ಸಂಗೀತ  ನೃತ್ಯಸಂಸ್ಕಾರಗಳು ಇಂದಿಗೆ ಅಕ್ಷರಶಃ ಸಮರಾಂಗಣವೇ? ಖಂಡಿತಾ ಹೌದು ಎನ್ನದೆ ಬೇರೆ ನಿರ್ವಾಹವಿಲ್ಲ.  ಆಗ ತಾನೇ ಹುಟ್ಟಿದ ಎಳೆಕಂದಮ್ಮಗಳೂ ಈ ಸಮರಾಂಗಣಕ್ಕೆ ಸಜ್ಜಾಗುವ ಕಾಲ ಬಹುಶಃ ದೂರವಿಲ್ಲವೇನೋ  ಅನ್ನಿಸುತ್ತಿದೆ. ಕಾರಣ ಕೇಳುತ್ತೀರಾ? ಮಾಧ್ಯಮ. 
ಅಂದೊಂದು ಕಾಲದಿಂದಲೂ ದೂರದರ್ಶನ ಪ್ರಸಾರ ಮಾಡುತ್ತಾ ಬಂದಿರುವ ಸದಭಿರುಚಿಯ  ಶಾಸ್ತ್ರೀಯ, ಲಘು ಸಂಗೀತ ನೃತ್ಯಗಳು ಇಂದಿಗೂ ಬಹುಷಃ ಅದೊಂದೇ ವಾಹಿನಿಗೆ  ಸೀಮಿತವಿರಬೇಕೆನ್ನಿಸುವಷ್ಟರ ಮಟ್ಟಿಗೆ ಸಂಗೀತ- [...]]]></description>
			<content:encoded><![CDATA[<p><span style="font-family: Tunga; color: #000000;">ಸಂಗೀತ ನೃತ್ಯಗಳೆಂದರೆ ಯುದ್ಧವೇ ? ಎಂತೆಂತ ಕಲ್ಲು ಮನಸ್ಸುಗಳನ್ನು ಕರಗಿಸಿದ ಸಂಗೀತ  ನೃತ್ಯಸಂಸ್ಕಾರಗಳು ಇಂದಿಗೆ ಅಕ್ಷರಶಃ ಸಮರಾಂಗಣವೇ? ಖಂಡಿತಾ ಹೌದು ಎನ್ನದೆ ಬೇರೆ ನಿರ್ವಾಹವಿಲ್ಲ.  ಆಗ ತಾನೇ ಹುಟ್ಟಿದ ಎಳೆಕಂದಮ್ಮಗಳೂ ಈ ಸಮರಾಂಗಣಕ್ಕೆ ಸಜ್ಜಾಗುವ ಕಾಲ ಬಹುಶಃ ದೂರವಿಲ್ಲವೇನೋ  ಅನ್ನಿಸುತ್ತಿದೆ. ಕಾರಣ ಕೇಳುತ್ತೀರಾ? ಮಾಧ್ಯಮ. </span></p>
<p><span style="font-family: Tunga; color: #000000;">ಅಂದೊಂದು ಕಾಲದಿಂದಲೂ ದೂರದರ್ಶನ ಪ್ರಸಾರ ಮಾಡುತ್ತಾ ಬಂದಿರುವ ಸದಭಿರುಚಿಯ  ಶಾಸ್ತ್ರೀಯ, ಲಘು ಸಂಗೀತ ನೃತ್ಯಗಳು ಇಂದಿಗೂ ಬಹುಷಃ ಅದೊಂದೇ ವಾಹಿನಿಗೆ  ಸೀಮಿತವಿರಬೇಕೆನ್ನಿಸುವಷ್ಟರ ಮಟ್ಟಿಗೆ ಸಂಗೀತ- ನೃತ್ಯಗಳ ಅಪಭ್ರಂಶಗಳು &#8216;ರಿಯಾಲಿಟಿ&#8217; ಎನ್ನುವ  ಹೆಸರಲ್ಲಿ ತಯಾರಾಗಿವೆ. ಆ ಮೂಲಕ ಅಕ್ಷರಶಃ ಸಂಸ್ಕೃತಿಯ &#8216;ಶವಸಂಸ್ಕಾರ&#8217;ವನ್ನೇ ಮಾಡುತ್ತಲಿವೆ.  ಸಂಗೀತ-ನರ್ತನ ಕ್ಷೇತ್ರಕ್ಕೆ ಎಂತಹ ಪ್ರೋತ್ಸಾಹ ನೋಡಿ ! </span></p>
<p><span style="font-family: Tunga; color: #000000;">ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ಅಜ್ಜಂದಿರ ವರೆಗೂ ಹಾಡಿಸುವುದಕ್ಕೆ,  ಕುಣಿಸುವುದಕ್ಕೆ ಶುರು ಮಾಡಿ ವರುಷಗಳೇ ಕಳೆದಿವೆ. ಪರಿಣಾಮ, ಎಷ್ಟು ದಿನದಲ್ಲಿ ನನ್ನ ಮಗ/ಮಗಳು  ಸಂಗೀತ ಕಲಿತು ಟಿ.ವಿ.ಯಲ್ಲಿ ಹಾಡಬಹುದು?&#8221;ಎಂಬ ಪೋಷಕರ ನಿರೀಕ್ಷೆ ; ಜೊತೆಗೆ ಒಂದು-ಎರಡು ಹಾಡಿಗೆ  ಪ್ರಸಿದ್ಧಿ ಮಾಡಿಸಿ ಪ್ರೈಜ್ ಗಿಟ್ಟಿಸಿಕೊಳ್ಳಬೇಕೆಂಬ ದುರಾಸೆಗೆ ಶಿಕ್ಷಕರೇ ಒತ್ತಾಸೆ ! ಹಾಗಾಗಿಯೇ  ಬೀದಿ ಬೀದಿಗಳಲಿ ತರಗತಿಗಳು ತಲೆಯೆತ್ತಿವೆ ನೋಡಿ ! </span></p>
<p><span style="font-family: Tunga; color: #000000;">ಪ್ರಸಿದ್ಧಿ, ಪ್ರತಿಷ್ಠೆಯ ಆಸೆ ಯಾರಿಗಿರುವುದಿಲ್ಲ ಹೇಳಿ? ಹೊಟ್ಟೆ, ಬಟ್ಟೆ, ಮನೆಯ  ನಂತರ ಐಶ್ವರ್ಯದ ಆಸೆಯೊಂದಿಗೆ ಹಿಂಬಾಲಿಸುವುದಿದ್ದರೆ ಅದು ಈ ಪ್ರಸಿದ್ಧಿಯ ಭೂತ ! ಇಂದು  ಗಲ್ಲಿಗಳಲ್ಲಿ ರದ್ದಿ ಆಯ್ವ ಹುಡುಗನಿಂದ ಹಿಡಿದು ಕೋಟ್ಯಾಧಿಪತಿಗಳ ವರೆಗೂ ಹಣಿಕಿ ಹಾಕಿ ನಿಂತಿದೆ.  ಸಿದ್ಧಿಯೇ ಬೇಡ-ಪ್ರಸಿದ್ಧಿ ಮಾತ್ರ ಜೊತೆಗಿರಬೇಕು ಎಂದರೆ ಏನು ತಾನೇ ಮಾಡಲು ಸಾಧ್ಯ ? ! ತೇಜೋವಧೆ  ಮಾಡಿಕೊಂಡರೂ ಸರಿ, ತನ್ನ ಹೆಸರು ಮಾಧ್ಯಮಗಳಲ್ಲಿ ರಾಚಬೇಕು, ಯಶಸ್ಸು ಕಾಣಬೇಕು, ಅದೂ ತಕ್ಕುದಾದ  ಅರ್ಹತೆಗಳನ್ನು ಸಂಪಾದಿಸಿಕೊಳ್ಳುವ ಮೊದಲೇ, ದಿನ ಬೆಳಗಾಗುವುದರೊಳಗೆ &#8216;ಫೇಮಸ್&#8217; ಕೈಯ್ಯಲ್ಲಿರಬೇಕು.  ಹೊಸ ಅವಕಾಶಗಳನ್ನು ಬಾಚಿಕೊಳ್ಳುವುದರೊಂದಿಗೆ ಸರ್ವೋತ್ತಮನಾಗಿಬಿಡಬೇಕು. ಅಲ್ಪ ಅವಧಿಯಲ್ಲೇ  ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವ ಅವಕಾಶ, ಅಪಾರ ಹಣ ಸಂಪಾದಿಸಬೇಕು ; ಸಾರ್ವಜನಿಕ ವಲಯದಲ್ಲಿ  ಗುರುತಿಸಿಕೊಳ್ಳಬೇಕು ; ಅವಕಾಶವೂ ದಂಡಿಯಾಗಿ ಮನೆ ಬಾಗಿಲಿಗೆ ಬಂದು ಬೀಳಬೇಕು ! ಫಲ; ಅದನ್ನೇ  ಮಾರ್ಕೆಟ್ಟಾಗಿಸಿಕೊಂಡ ಮಾಧ್ಯಮಗಳು ಹೊಸ ಹೊಸ ಮಾರುಕಟ್ಟೆಗಳನ್ನು ಹುಟ್ಟುಹಾಕುತ್ತವೆ! ಟಿ‌ಆರ್‌ಪಿ  ಹೆಚ್ಚಸಿಕೊಳ್ಳುವತ್ತ ಕಣ್ಣು ನೆಡುತ್ತವೆ !</span></p>
<p><span style="font-family: Tunga; color: #000000;">ಹಾಡೂ, ನೃತ್ಯಗಳಿಗಿಂತಲೂ ಸ್ಪರ್ಧಿಗಳ ವಸ್ತ್ರಾಲಂಕಾರ, ಮನೆಯ ಆರ್ಥಿಕ ಸ್ಥಿತಿ, ಅವರ  ವೈಯಕ್ತಿಕ ಜೀವನ, ಹೆತ್ತವರ ಆತಂಕ, ಹಾರೈಕೆ, ಸ್ಪರ್ಧಿಗಳ ತುಮುಲ, ಸಂಗೀತಕ್ಕೆ-ಬೆಳಕಿನ ಅಬ್ಬರಕ್ಕೆ  ತಕ್ಕಂತೆ ಕುಣಿಯುವುದು, ತೀರ್ಪುಗಾರ-ಸ್ಪರ್ಧಿಗಳ ವಾಗ್ವಿವಾದ, ಪರದೆಯ ಹಿಂದಿನ ಅರಚಾಟ,  ಭಾವೋತ್ಕರ್ಷ, ಆಕಳಿಸಿ ತೂಕಡಿಸುವುದರ ಮೇಲೆ ಇದೆ ಇಂದಿನ ಕ್ಯಾಮೆರಾ ಕಣ್ಣು ! ನೇರವಾಗಿ  ರಿಕಾರ್ಡಿಂಗ್ ಆದಂತೆ ನೇರ ಸಂಕಲನ ಆಗಿರಬೇಕು ಎಂದು ಭಾವಿಸಿದ್ದಲ್ಲಿ ಅದು ತಪ್ಪು. ಕ್ಯಾಮೆರಾಗಳ  ಮುಂದೆ ನಿಂತಾಗ ಅವರ ವ್ಯಕ್ತಿತ್ವವನ್ನೇ ನಿರ್ವಹಿಸುವ ಸೂತ್ರಧಾರನಿರುತ್ತಾನೆ ; ಅಂತೆಯೇ ತಮಗೆ  ಬೇಕಾದಂತೆ ಕತ್ತರಿ ಪ್ರಯೋಗ ಮಾಡುವ ಸಂಪಾದಕನೂ ಇರುತ್ತಾನೆ. ಇದರೊಂದಿಗೆ ತೀರ್ಪುಗಾರರ ಪಕ್ಷಪಾತ  ಧೋರಣೆ ಮತ್ತು ವೈಯಕ್ತಿಕ ಇಷ್ಟಾನಿಷ್ಟಗಳೂ ಸೇರಿದರಂತೂ ಪ್ರತಿಭಾವಂತರು ಮಂಕಾಗುವುದರೊಂದಿಗೆ  ಮರ್ಯಾದೆ ಕಳೆದುಕೊಳ್ಳದೆ ವಿಧಿಯಿಲ್ಲ. </span></p>
<p><span style="font-family: Tunga; color: #000000;">ಆಶಾಭಾವನೆಯೇ ಕೊನೆಗೆ ಅಪರಾಧಿ ಸ್ಥಾನದಲ್ಲಿ ನಿಲ್ಲುವಂತೆ ಮಾಡುತ್ತಿದೆ ಎಂಬುದಕ್ಕೆ  ರಿಯಾಲಿಟಿ ಶೋ ಒಳ್ಳೆಯ ಉದಾಹರಣೆಯಾಗಿ ನಿಂತಿದೆ. ಒಂದು ಸುತ್ತಿನಲ್ಲಿ ಸೋತ ಸ್ಪರ್ಧಿಗಳನ್ನು  ಎಲಿಮಿನೇಷನ್ ರೌಂಡ್ ಮೂಲಕ ಉಚ್ಚಾಟಿಸುವ ಪ್ರಕ್ರಿಯೆ ನಾಟಕೀಯ ಮಾತ್ರವಲ್ಲ ಶೋಷಣೆಯೂ ಹೌದು. ಪೋಷಕರು  ಅಳುವುದು, ತೀರ್ಪುಗಾರರು ಸಂತೈಸುವುದು, ಅಪ್ಪಿ ಮುದ್ದಾಡುವುದು, ಅವರೊಂದಿಗೆ ತಾವೂ ಅಳುವುದು,  ಸೋತಿದ್ದಕ್ಕೆ ಸಹಜವಾಗಿ ಅಳು ಬಂದು ಮತ್ತೆ ಸಮಾಧಾನವಾದರೂ, ಅದನ್ನೆ ತಿರುಗಿಸಿ ಮುರುಗಿಸಿ ಮತ್ತೆ  ಮತ್ತೆ ಅಳಿಸಿ ರಿವೈಂಡ್ ಆಗುವ ವಿಷಾದಗೀತೆ.., ಒಟ್ಟಿನಲ್ಲಿ ಸೋಲಿನ ಭಾವನೆಗಳನ್ನು ವೈಭವೀಕರಿಸಿ,  ನೋಡುಗರನ್ನು ರಂಜಿಸುವುದು, ಗೆಲುವನ್ನು ಅತಿರಂಜಿತವನ್ನಾಗಿಸುವುದು. ಭಾವನೆಗಳನ್ನು ಬಿಕರಿ ಮಾಡುವ  ಮೂಲ ಪಾಠ. ಅನೇಕ ಬಾರಿ ಸ್ಪರ್ಧಿಗಳು ವೇದಿಕೆಯ ಮೇಲೆ ತಲೆ ಸುತ್ತಿ ಬಿದ್ದಿರುವ, ಮಾನಸಿಕವಾಗಿ  ನೊಂದು ಹೋದ, ವೈಕಲ್ಯಕ್ಕೆ ತುತ್ತಾದ ಪ್ರಕರಣಗಳೂ ನಡೆದಿವೆ. ಮಕ್ಕಳ ಬಾಲ್ಯವನ್ನೇ ಬೇಟೆಯಾಡಿ  ಭವಿಷ್ಯವನ್ನೇ ಬಲಿ ತೆಗೆದುಕೊಂಡಿವೆ ! </span></p>
<p><span style="font-family: Tunga; color: #000000;">ಇನ್ನೂ ಇದೆ ತಂತ್ರ ! : ಸಿನೆಮಾ, ಧಾರಾವಾಹಿ ಜಗತ್ತಿನ ನಟ/ನಟಿ/ನಿರ್ದೇಶಕ ಮಹಾಶಯರ  ಅತಿಥಿ ಗಣ್ಯರಾಗಿ ಆಗಮನ (ಸಂಗೀತ-ನೃತ್ಯದ ತಲೆಬುಡ, ಮಟ್ಟ ಗೊತ್ತಿಲ್ಲದಿದ್ದರೂ !) ಅಥವಾ ಈಗಾಗಲೇ  ಇಮೇಜ್ ಕಡಿಮೆಯಿರುವ, ಔಟ್‌ಡೇಟೆಡ್ ಸೆಲೆಬ್ರೆಟಿಗಳ ಮುಖದರ್ಶನ ! ಒಟ್ಟಿನಲ್ಲಿ ಚಿತ್ರತಾರೆಯರಿಗೂ,  ಚಿತ್ರಗಳಿಗೂ ಸುಲಭದ ಪ್ರಸಿದ್ಧಿ ಬೇಕು ! ಅದಕ್ಕೆ ಮಾಧ್ಯಮಗಳು ಈ ಬಗೆಯ ಜಾಹೀರಾತು ತಂತ್ರಗಳನ್ನು  ಮಾರಾಟ ಮಾಡಬೇಕು ! &#8216;ಶ್ರೋತೃಗಳ ವೋಟುಗಳು ಬಹಳ ಮುಖ್ಯ, ಕಾಪಾಡಿ, ಕಾಪಾಡಿ&#8217; ಎನ್ನುತ್ತಾ ಅಂಗಾಲಾಚಿ  ಎಂದು ಸ್ಪರ್ಧಿಗಳು ಭಿಕ್ಷೆ ಬೇಡಬೇಕು ! ಇದರಲ್ಲಿ ಪ್ರತಿಭೆಯ ಪಾತ್ರ ಎಷ್ಟಿದೆ, ದುಡ್ಡು ಮಾಡುವ  ಉಪಾಯ ಎಷ್ಟಿದೆ ಎಂಬುದು ಬುದ್ಧಿಯಿರುವ ಯಾವ ವ್ಯಕ್ತಿಗಾದರೂ ಅರ್ಥವಾಗುತ್ತದೆ !</span></p>
<p><span style="font-family: Tunga; color: #000000;">ಸ್ವಾರ್ಥ ತಪ್ಪಲ್ಲ. ಅಸ್ತಿತ್ವದ ಸಮಸ್ಯೆ ಬಂದಾಗ ಚೂರುಪಾರು ಸ್ವಾರ್ಥ  ಶಿಕ್ಷಾರ್ಹವೇನೂ ಅಲ್ಲ. ಆದರೆ ತಮ್ಮ ಜೊತೆಗೆ ನಂಬಿಕೊಂಡ ಕಲೆಗಳನ್ನು ಮಾರಿಕೊಳ್ಳುವ ಮಟ್ಟಿಗಿನ  ಸ್ವಾರ್ಥವೆಂದರೆ..? ಅದು ದ್ರೋಹವೆನ್ನದೆ ವಿಧಿಯಿಲ್ಲ! ಇಂತಹ ಅರೆಕ್ಷಣದ ಸುಖೋಪಭೋಗಕ್ಕೆ ನಾವು  ತೆರಬೇಕಾದದ್ದು ದಶಕಗಳ ತರುವಾಯವೂ ಸುಧಾರಿಸಿಕೊಳ್ಳಲಾಗದ ಹೊಡೆತವಿರಬಹುದೇ ಮುಂದೆ ! ಕಾಲವೇ  ಉತ್ತರಿಸಬೇಕು. </span></p>
<p><span style="font-family: Tunga; color: #000000;">ಅಂದಹಾಗೆ ಹೊಸ ನಿರೀಕ್ಷೆ, ಹೊಸ ಭಾವ, ಹೊಸ ಪರಿಸರ, ಹೊಸ ಬಗೆಯ ನೋಟ- ನೂಪುರ  ಹೊಂದಿಕೊಳ್ಳುತ್ತಲಿದೆ. ಚಲನೆಯೇ ಜಗದ ವಾಸ್ತವ ನಿಯಮ ಅನ್ನುವುದು ನೂಪುರ ಹುಟ್ಟಿಕೊಂಡಾಗಿನಿಂದ  ಅದರೊಂದಿಗಿನ ನಿರಂತರ ಒಡನಾಟದಲ್ಲಿ, ಹುಡುಕಾಟದಲ್ಲಿ ಕಂಡುಕೊಂಡ ನಿತ್ಯ ಸತ್ಯ. ಒಂದೊಂದು ಬಗೆಯ  ಅನುಭವವವನ್ನು ವರುಷ ವರುಷವೂ ಕಟ್ಟಿಕೊಡುವ ಉತ್ಸಾಹದಲ್ಲಿದೆ ನೂಪುರ. ಈ ಪಯಣದಲ್ಲಿ ಶ್ರದ್ಧೆಯಿಂದ  ಜೊತೆಯಾದ, ಜೊತೆಯಿರುವ, ಜೊತೆಯಾಗಲಿರುವ ಸಮಸ್ತ ಸಹೃದಯ ಬಾಂಧವರಿಗೂ ಹೃತ್ಪೂರ್ವಕ ಅಭಿವಂದನೆಗಳು. </span></p>
<p style="text-align: right;"><span style="font-family: Tunga; color: #000000;">ಪ್ರೀತಿಯಿಂದ</span></p>
<p style="text-align: right;"><span style="font-family: Tunga; color: #000000;">ಸಂಪಾದಕರು</span></p>
]]></content:encoded>
			<wfw:commentRss>http://www.noopurabhramari.com/manjira/manjeera-may-june-2010/feed</wfw:commentRss>
		<slash:comments>0</slash:comments>
		</item>
	</channel>
</rss>

