ಅಂಕಣಗಳು

ನೂಪುರ ಪತ್ರಿಕೆ

‘ಮುದ್ರಾರ್ಣವ’ದ ಮೋಹಕ ಮೇಘಮಲ್ಹಾರ… : ಅನಾವರಣದಲ್ಲರಳಿದ ಅಲೆಗಳು

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ನಾಟ್ಯವೆಂದಾಗ ಸಾಮಾನ್ಯ ವೀಕ್ಷಕ ಬಯಸುವುದೇನು? ಎಂಬ ಪ್ರಶ್ನೆಯಿಂದ ಮೊದಲ್ಗೊಂಡು ನೃತ್ಯದ ಹಲವು ಆಯಾಮಗಳತ್ತ ಹೊರಳಿಕೊಳ್ಳುವ ಅಗತ್ಯ ನಮ್ಮದುರಿಗೆ ಸದಾ ಇದೆ. ಇಂತಹ ಸಂವಾದಗಳ ಮೂಲಕ ನಮ್ಮ ಅರಿವಿನ ಕ್ಷಿತಿಜವನ್ನು ವಿಸ್ತರಿಸುವ ಗುರಿ ನೂಪುರ ಭ್ರಮರಿಯದ್ದು. ಯಾವುದೇ ಲೇಖನದ ಬಗೆಗಾದರೂ ಮುಕ್ತ ಸಂವಾದಕ್ಕೆ ಅವಕಾಶವಿದೆ. ಇಂತಹ ಸಂವಾದಗಳು ಹಲವು ಲೇಖನದ ಮೂಲಕವೂ ತೆರೆದುಕೊಂಡಿದೆ ; ಮುಂದಿನ ದಿನಗಳಲ್ಲೂ ತೆರೆದುಕೊಳ್ಳಲಿದೆ.
ಇದು ಚಿಂತನೆಗಳ ಚಾವಡಿ. ಕಲಾವಿದರು, ವಿದ್ವಾಂಸರು, ತಂದೆತಾಯಿಯರಾದಿಯಾಗಿ ಎಲ್ಲಾ ಆಸಕ್ತ ಓದುಗಬಂಧುಗಳು ಈ ಚರ್ಚೆಗಳಲ್ಲಿ ಪಾಲ್ಗೊಳ್ಳಬಹುದು. ಜೊತೆಗೆ ಈ ಹಿಂದಿನ ಮತ್ತು ಈ ಸಂಚಿಕೆಯಲ್ಲಿ ಪ್ರಸ್ತಾಪಿಸಲಾದ ಯಾವುದೇ ವಿಚಾರಗಳ ಕುರಿತೂ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಬಹುದು. ರಂಗ ಚಟುವಟಿಕೆಗಗಳ ಬಗೆಗಿನ ಎಲ್ಲಾ ಪ್ರಶ್ನೋತ್ತರ, ಸಂವಾದಗಳಿಗೂ ಇಲ್ಲಿ ಆದ್ಯತೆಯಿದೆ.

ಶಿಕ್ಷಣದಲ್ಲಿ ಯಕ್ಷಗಾನ ಪಾಠಪಟ್ಟಿ-ಚರ್ಚೆ ೩

Saturday, August 15th, 2009

(ಕಳೆದ ಸಲದ ಸಂಚಿಕೆಯಲ್ಲಿ ‘ಯಕ್ಷಗಾನ ಕಾರ್ಯಾಗಾರ ಮತ್ತು ಪಾಠ ಪಟ್ಟಿ’ ಎಂಬ ಶಿರೋನಾಮೆಯಲ್ಲಿ ಪ್ರಕಟವಾದ ತಿಂಗಳ ಚರ್ಚೆಯಲ್ಲಿ ಶಿಕ್ಷಕರ ಯಕ್ಷಗಾನ ಒಕ್ಕೂಟದವರು ನೀಡಿದ ಚರ್ಚೆಗೆ ಮರುಪ್ರತಿಕ್ರಿಯೆ)

ಸದ್ರಿ ಚರ್ಚೆಯಲ್ಲಿ ನನ್ನನ್ನು ಸಮಾಜಶಾಸ್ತ್ರ ಉಪನ್ಯಾಸಕ ಮತ್ತು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂದು ಮಾತ್ರ ಪರಿಚಯಿಸಿರುವುದು ಲೇಖಕರ ಸಂಕುಚಿತವಾದ ಹಾಗೂ ದುರುದ್ದೇಶದ ಮನಸ್ಸು ಎಂದು ಹೇಳದೆ ವಿಧಿಯಿಲ್ಲ. ನನ್ನನ್ನು ವೈಯಕ್ತಿಕವಾಗಿ ಖಂಡಿಸಿದ್ದಾರೆಯೇ ಹೊರತು ತಾತ್ವಿಕ ಉತ್ತರ ನೀಡಿಲ್ಲ ಎಂಬುದಕ್ಕೆ ಸ್ಪಷ್ಟೀಕರಣವಿದು. ಸುಳ್ಯದಲ್ಲಿ [...]

ಯಕ್ಷಗಾನ ಮತ್ತು ಪಾಠಪಟ್ಟಿ

Monday, June 8th, 2009

(ಯಕ್ಷಗಾನ ಅಕಾಡೆಮಿಯ ಸಾರಥ್ಯದಲ್ಲಿ ಪ್ರಾರಂಭಗೊಂಡಿರುವ ಯಕ್ಷಗಾನದ ಪಾಠಪಟ್ಟಿ ಮತ್ತು ಪರೀಕ್ಷೆಗಳ ರಚನೆಗೆ ಕುರಿತಂತೆ ನಡೆಯುತ್ತಿರುವ ಚರ್ಚೆಯ ಮುಂದುವರಿದ ಭಾಗ, ಕಾರ್ಯಾಗಾರದ ಪ್ರತಿಕ್ರಿಯೆಗೆ ಪ್ರತಿಕ್ರಿಯೆಗಳಿಲ್ಲಿವೆ.)

 ಈ ವಿಚಾರವು ತುಂಬಾ ಕ್ಲಿಷ್ಟಕರವಾಗಿದ್ದು ಇದನ್ನು ತಯಾರಿಸುವವರು ಲಯಬದ್ಧತೆ, ಅರ್ಥಜ್ಞಾನ, ಭಾವಕ್ಕೆ ಹೊಂದುವ, ರಾಗಜ್ಞಾನವಿರುವ ಭಾಗವತಿಕೆ, ಅದೇರೀತಿಯಲ್ಲಿ ಮದ್ದಳೆ, ಚಂಡೆ, ಕುಣಿತ, ವೇಷಭೂಷಣ, ಅರ್ಥಗಾರಿಕೆ ಮುಂತಾದ ಎಲ್ಲವನ್ನೂ ಬಲ್ಲವರಿಂದ ಮಾತ್ರ ರಚಿಸಲು ಸಾಧ್ಯವಾದೀತು. ಇಲ್ಲವಾದಲ್ಲಿ ಕಲಿಯುವ ವಿದ್ಯಾರ್ಥಿಗೆ ಕುಣಿತ, ವೇಷ, ಅರ್ಥ ಇವುಗಳಲ್ಲಿ ಹೊಂದಾಣಿಕೆಯಾಗದೆ ಗೊಂದಲವಾದೀತು. ಹಾಗೆ ನೋಡಿದಲ್ಲಿ ಪಾಠಪಟ್ಟಿಯನ್ನು ತಯಾರಿಸುವ ಯೋಗ್ಯರು ಯಕ್ಷಗಾನ [...]

ಯಕ್ಷಗಾನ ಶಿಕ್ಷಣ-ವಾದ ಸರಣಿ

Monday, June 8th, 2009

ಶಿಕ್ಷಣದಲ್ಲಿ ಯಕ್ಷಗಾನವನ್ನು ಸಂಯೋಜಿಸುವ ಸದುದ್ದೇಶದ ಪಠ್ಯ ವಿಷಯ ಕರಡುಪ್ರತಿ ತಯಾರಿ ಕಾರ್ಯಾಗಾರ ಎರಡು ಹಂತಗಳಲ್ಲಿ ಸುಳ್ಯದಲ್ಲಿ ನಡೆದದ್ದು ತೆರೆದಿಟ್ಟ ಪುಸ್ತಕದಷ್ಟೇ ಸತ್ಯ. ಈ ಪ್ರಕ್ರಿಯೆ ಒಂದೇ ಕಾರ್ಯಾಗಾರದಲ್ಲಿ ಮುಗಿದು ಹೋಗುತ್ತದೆಯೆಂದು ಯಕ್ಷಗಾನ ಅಕಾಡೆಮಿಯಾಗಲಿ ಅಥವಾ ಸಹಭಾಗಿತ್ವ ವಹಿಸಿದ್ದ ಸುಳ್ಯ ತಾಲೂಕು ಶಿಕ್ಷಕರ ಯಕ್ಷಗಾನ ಒಕ್ಕೂಟವಾಗಲಿ ಭಾವಿಸುವಷ್ಟು ಹುಂಬತನವನ್ನು ಹೊಂದಿಲ್ಲ. ಸದ್ಯಕ್ಕೆ ಪಠ್ಯ ವಿಷಯದ ಕರಡು ಪ್ರತಿ ಮಾತ್ರ ಸಿದ್ಧವಾಗಿದೆ. ಪಠ್ಯ ಪುಸ್ತಕ ರಚನೆಯಾಗಿಲ್ಲ. ಪಠ್ಯ ಪುಸ್ತಕ ರಚನಾ ಕಾರ್ಯಾಗಾರದ ವ್ಯಾಪ್ತಿ ವಿಸ್ತೃತವಾಗಿರುತ್ತದೆಯೆಂದು ನಮಗೂ ಗೊತ್ತಿದೆ.
ಸಮಾಜ ಶಾಸ್ತ್ರ ಉಪನ್ಯಾಸಕ [...]

ಯಕ್ಷಗಾನ ಕಾರ್ಯಗಾರ ಮತ್ತು ಪಾಠಪಟ್ಟಿ

Wednesday, April 15th, 2009

(ಕಳೆದ ಸಂಚಿಕೆಯಲ್ಲಿ ಸುಳ್ಯದಲ್ಲಿ ನಡೆದ ಯಕ್ಷಗಾನ ಕಾರ್ಯಾಗಾರದ ಬಗ್ಗೆ ವಿವರಣಾತ್ಮಕ ಲೇಖನ ಪ್ರಕಟಗೊಂಡಿತ್ತು. ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಮೂಲಕ ನಡೆಸಲಾಗುವ ಸಂಗೀತ, ನೃತ್ಯ ಪರೀಕ್ಷೆಗಳ ಮಾದರಿಯಲ್ಲೇ ಯಕ್ಷಗಾನದ ಏಳಿಗೆಗೂ ಪರೀಕ್ಷೆಗಳನ್ನು ನಡೆಸುವ ಮತ್ತು ಅದಕ್ಕೆ ಅಗತ್ಯವಿರುವ ಪರೀಕ್ಷಾ ಪಠ್ಯ ತಯಾರಿಕೆಯ ಕುರಿತಂತೆ ಚರ್ಚೆಗಳಿಗೆ ಆಹ್ವಾನ ನೀಡಲಾಗಿತ್ತು. ಆ ಪೈಕಿ ಬಂದ ಪ್ರತಿಕ್ರಿಯೆಗಳನ್ನು ಈ ಸಂಚಿಕೆಯಿಂದ ಪ್ರಕಟಿಸಲಾಗುತ್ತಿದೆ. ಭವಿಷ್ಯದ ಸಂಚಿಕೆಗಳಲ್ಲೂ ಈ ಕುರಿತಂತೆ ಮುಕ್ತ ಸಂವಾದಕ್ಕೆ, ವಾದ-ಪ್ರತಿವಾದಗಳಿಗೆ ಓದುಗರಿಗೆ ಅವಕಾಶವಿದೆ. ನಿಮ್ಮ ಅನಿಸಿಕೆ, ಅಭಿಪ್ರಾಯಗಳು [...]

ಚರ್ಚೆ

Monday, December 15th, 2008

ಸಂಚಿಕೆ ೫ , ಸಂಪುಟ ೧
ಹಿರಿಯ ನೃತ್ಯ ವಿದ್ವಾಂಸರೊಬ್ಬರು ತಮ್ಮ ಅಭಿಪ್ರಾಯವೊಂದನ್ನು ಮುಂದಿಟ್ಟು
ತಿಂಗಳ ಚರ್ಚೆಗಾಗಿ ಅಂಗಳಕ್ಕೆ ಆಹ್ವಾನ ನೀಡಿದ್ದಾರೆ. ಜನರು ಇದನ್ನು ಯೋಚಿಸಿ ಅವರದೇ
ಆದ ಅಭಿಪ್ರಾಯಗಳನ್ನಿತ್ತರೆ ಕಲೆಗೆ ಒಳ್ಳೆಯದು; ಯೋಚನೆಗೂ ಒಳ್ಳೆಯದು ಎಂಬುದು
ಅವರ ಅನಿಸಿಕೆ. ಕಲಾಗಾರರಲ್ಲಿಯೂ ತಮ್ಮತನವೆಂಬುದು ಈ ಮೂಲಕ
ಪ್ರಕಾಶವಾದೀತಲ್ಲವೇ ಎಂಬುದೂ ಅವರ ಪ್ರಶ್ನೆ ಮತ್ತು ಕಳಕಳಿ.
ಇಂತಹ ಸಂವಾದಗಳು, ಪಂಥಾಹ್ವಾನಗಳು ಮುಂದಿನ ದಿನಗಳಲ್ಲೂ ತೆರೆದುಕೊಳ್ಳಲಿದೆ.
ಕಲಾವಿದರು, ವಿದ್ವಾಂಸರು, ತಂದೆತಾಯಿಯರಾದಿಯಾಗಿ ಎಲ್ಲಾ ಆಸಕ್ತ ಓದುಗಬಂಧುಗಳು
ಈ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು. ಜೊತೆಗೆ ಈ ಹಿಂದಿನ ಮತ್ತು ಈ ಸಂಚಿಕೆಯಲ್ಲಿ
ಪ್ರಸ್ತಾಪಿಸಲಾದ ಯಾವುದೇ ವಿಚಾರಗಳ [...]

ನಿಡುವಜೆ ರಾಮ ಭಟ್

Monday, December 15th, 2008

ಅಶ್ವಯುಜ-ಕಾರ್ತಿಕ ಮಾಸದ ಸಂಚಿಕೆಯಲ್ಲಿನ ಸಂಪಾದಕೀಯ ಉತ್ತಮವಾಗಿ ಮೂಡಿಬಂದಿದೆ. ಇಂದು ಸಮೂಹ ಮಾಧ್ಯಮಗಳಲ್ಲಿ ಕಲೆಯ ಕುರಿತಾದ ವಿಚಾರಗಳಲ್ಲಿ ಸಿಗಬೇಕಾದ ಪ್ರಾಧಾನ್ಯತೆ ಸಿಗುತ್ತಿಲ್ಲ. ಬಹಳ ಮಂದಿ ಸಂಗೀತ, ಭರತನಾಟ್ಯ, ಯಕ್ಷಗಾನ, ನಾಟಕ, ಚಿತ್ರಕಲೆ, ಕ್ರೀಡೆ ಮೊದಲಾದ ಕಲಾ ಮಾಧ್ಯಮಗಳಲ್ಲಿ ತಮ್ಮ ಪ್ರತಿಭೆಗಳನ್ನು ತೋರುತ್ತಿದ್ದರೂ, ಅವರ ಪ್ರತಿಭೆಯ ವಿಕಾಸಕ್ಕೆ ಪೂರಕವಾಗುವಂತಹ [...]

ಸಂಚಿಕೆ ೬ , ಸಂಪುಟ ೨

Wednesday, December 10th, 2008

ಅಶ್ವಯುಜ-ಕಾರ್ತಿಕ ಮಾಸದ
ಸಂಚಿಕೆಯಲ್ಲಿನ ಸಂಪಾದಕೀಯ ಉತ್ತಮವಾಗಿ
ಮೂಡಿಬಂದಿದೆ. ಇಂದು ಸಮೂಹ
ಮಾಧ್ಯಮಗಳಲ್ಲಿ ಕಲೆಯ ಕುರಿತಾದ ವಿಚಾರಗಳಲ್ಲಿ
ಸಿಗಬೇಕಾದ ಪ್ರಾಧಾನ್ಯತೆ ಸಿಗುತ್ತಿಲ್ಲ. ಬಹಳ ಮಂದಿ ಸಂಗೀತ, ಭರತನಾಟ್ಯ,
ಯಕ್ಷಗಾನ, ನಾಟಕ, ಚಿತ್ರಕಲೆ, ಕ್ರೀಡೆ ಮೊದಲಾದ ಕಲಾ ಮಾಧ್ಯಮಗಳಲ್ಲಿ ತಮ್ಮ
ಪ್ರತಿಭೆಗಳನ್ನು ತೋರುತ್ತಿದ್ದರೂ, ಅವರ ಪ್ರತಿಭೆಯ ವಿಕಾಸಕ್ಕೆ ಪೂರಕವಾಗುವಂತಹ
ರೀತಿಯಲ್ಲಿ ವಿಮರ್ಶೆಗಳು ಪ್ರಕಟವಾಗುತ್ತಿಲ್ಲ. ಕಲಾ ಪ್ರತಿಭೆ ಇನ್ನಷ್ಟು ಬೆಳೆಯಲು
ಸಹಕಾರಿಯಾಗಬಲ್ಲ ಮಾಹಿತಿಗಳನ್ನು ಪತ್ರಿಕೆಗಳ ಕಲಾ ಪುಟಗಳಲ್ಲಿ ತಜ್ಞರಿಂದ
ನೀಡಬಹುದು. ಆದರೂ ಸಾಕಷ್ಟು ಮಾಹಿತಿಗಳು ಪ್ರಕಟಗೊಳ್ಳುತ್ತಿಲ್ಲ. ಅದಕ್ಕೆ
ಬದಲಾಗಿ ಸಮಾಜಕ್ಕೆ ಮಾರಕವಾಗಬಲ್ಲಂತಹ, ಕಲೆಗೆ ಅಪಚಾರವಾಗಬಲ್ಲಂತಹ
ಅಶ್ಲೀಲ ಚಿತ್ರಗಳು ಪ್ರಕಟವಾಗುತ್ತಿರುವುದು ವಿಷಾದನೀಯ.
ಓಶೋ ರಜನೀಶ್ ಅವರು ಪತ್ರಿಕೋದ್ಯಮದ ಕುರಿತು ಬರೆದ [...]

ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ

Thursday, October 16th, 2008

ಮಂಜೀರದಲ್ಲಿ ತಿಳಿಸಿದಂತೆ ಭಾರತಕ್ಕೆ ಲಲಿತಕಲೆಗಳ ಸಾಂಪ್ರದಾಯಿಕ ಗುರುಪರಂಪರೆ ಯೊಂದಿಗೆ ಕಾಲಘಟ್ಟದ ಡಿಗ್ರಿ, ಸರ್ಟಿಫಿಕೇಟುಗಳ ಮಾನ್ಯತೆಯೂ ಬೇಕು ಎಂಬುದು ನನ್ನ ಅಭಿಪ್ರಾಯ. ಚೂರ್ಣಿಕೆ ಸಂಸ್ಕೃತದಲ್ಲಿ ಮಾತ್ರವಲ್ಲ, ಪ್ರಾದೇಶಿಕ ಭಾಷೆಗಳಲ್ಲೂ ದೇವರ, ಆಶ್ರಯದಾತರ ಹೊಗಳಿಕೆಯಾಗಿ; ವೈಷ್ಣವಿ ಎನ್. ಅವರು ಹೇಳಿದ ಸಂದರ್ಭಗಳಲ್ಲಿಯೂ ರೂಢಿಯಲ್ಲಿವೆ. ವಚನಗಳೂ ಪದ್ಯಗಂಧಿ ಗದ್ಯ ಸಾಹಿತ್ಯ.

ಸಂಚಿಕೆ ೫, ಸಂಪುಟ ೨

Wednesday, October 15th, 2008

ಮಂಜೀರದಲ್ಲಿ ತಿಳಿಸಿದಂತೆ ಭಾರತಕ್ಕೆ
ಲಲಿತಕಲೆಗಳ ಸಾಂಪ್ರದಾಯಿಕ ಗುರುಪರಂಪರೆ ಯೊಂದಿಗೆ
ಕಾಲಘಟ್ಟದ ಡಿಗ್ರಿ, ಸರ್ಟಿಫಿಕೇಟುಗಳ
ಮಾನ್ಯತೆಯೂ ಬೇಕು ಎಂಬುದು ನನ್ನ ಅಭಿಪ್ರಾಯ.
ಚೂರ್ಣಿಕೆ ಸಂಸ್ಕೃತದಲ್ಲಿ ಮಾತ್ರವಲ್ಲ, ಪ್ರಾದೇಶಿಕ ಭಾಷೆಗಳಲ್ಲೂ ದೇವರ,
ಆಶ್ರಯದಾತರ ಹೊಗಳಿಕೆಯಾಗಿ; ವೈಷ್ಣವಿ ಎನ್. ಅವರು ಹೇಳಿದ ಸಂದರ್ಭಗಳಲ್ಲಿಯೂ
ರೂಢಿಯಲ್ಲಿವೆ. ವಚನಗಳೂ ಪದ್ಯಗಂಧಿ ಗದ್ಯ ಸಾಹಿತ್ಯ.
ರಾಗ, ತಾಳ, ಸಂಗೀತ ಅಳವಡಿಸಿ, ಜೀವನದ ಹಲವು ಅನುಭವ ಗಳನ್ನು
ನೃತ್ಯಗಾರರು ಅಭಿನಯಿಸುತ್ತಾರೆ. ಇದು ವೈಜಯಂತಿ ಕಾಶಿ ಅವರು
ಹೇಳಿದಂತೆ ಕಲಾವಿದರು ಬೆಳೆಸಿಕೊಳ್ಳುವ ಆಯಾಮಗಳು.
ಮುದ್ರೆಗಳ ಲಕ್ಷಣವನ್ನು ಬೇರೆಬೇರೆ ಕಡೆಗಳಿಂದ ಸಂಗ್ರಹಿಸಿ, ವಿಸ್ತರಿಸಿ ಹೆಚ್ಚಿನ
ಓದಿಗೆ-ತಿಳಿವಳಿಕೆಗೆ ದಾರಿಯಾಗುತ್ತದೆ ತಮ್ಮ ಕೊಡುಗೆ.
ಪುಂಡರೀಕ ವಿಠಲನ ಸಂಗೀತ ನೃತ್ಯಗ್ರಂಥಗಳನ್ನು ಸಂಸ್ಕೃತದಿಂದ [...]

ಸಂಚಿಕೆ ೪ , ಸಂಪುಟ ೨

Friday, August 15th, 2008

ಅಂಗಳದ ಮಾತು ತಿಂಗಳ ಚರ್ಚೆ
ಸಂಪಾದಕೀಯದಲ್ಲಿ ಪ್ರಸ್ತುತಪಡಿಸಿದ ನೃತ್ಯಾಭ್ಯಾಸ ಕಲೆಯ ಕಲಿಕಾಭ್ಯರ್ಥಿಗಳ ಹಾಗೂ ಪಾಲಕರ ಮನೋಸ್ಥಿತಿಯ ವಾಸ್ತವಿಕತೆಯ ಬಗ್ಗೆ ವ್ಯಕ್ತಪಡಿಸಿದ ಮುಕ್ತಕಗಳು ಇಂದಿನ ನವಕಲಾವಿದರ ನಿಜರೂಪವೇ ಆಗಿರುವುದು ಕಲೆಯ ಬೆಳವಣಿಗೆಯ ದೃಷ್ಟಿಯಿಂದ ಖೇದಕರವೇ ಹೌದು. ಸದಾಚಾರಕ್ಕೆ ನಿಧಾನದಲ್ಲಾದರೂ ಪ್ರಾಧಾನ್ಯತೆ ದೊರೆಯಬಹುದೆಂಬ ಆಶಾವಾದದ ದೃಢ ನಿಶ್ಚಯ ಮನೋಭಾವವೇ [...]