ಅಂಕಣಗಳು

ನೂಪುರ ಪತ್ರಿಕೆ

ಐದನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ  ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ ೨೦೧೧)

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಯಾವುದೇ ನೃತ್ಯ ಪ್ರಕಾರದ ವಿವಿಧ ನೃತ್ಯ ಬಂಧಗಳ ಸಮಗ್ರ ನೋಟ, ವಿಮರ್ಶೆಯನ್ನು ಒದಗಿಸುವುದು ನರ್ತನ ಸುರಭಿಯ ಉದ್ದೇಶ. ಈ ಹಿನ್ನಲೆಯಲ್ಲಿ ರಂಗದ ಮೇಲೆ ಕಾಣುವ ನೃತ್ಯ ಸೌಂದರ್ಯದ ವಿವಿಧ ಮಜಲುಗಳ ಪುಟ್ಟ ಅಧ್ಯಯನದ ರೂಪವನ್ನು ಸಂಕ್ಷಿಪ್ತವಾಗಿ, ಸಾಂಧರ್ಭಿಕವಾಗಿ, ವಿಶಿಷ್ಟವಾಗಿ ಮತ್ತು ವಿಮರ್ಶಾತ್ಮಕವಾಗಿ ನೃತ್ಯ ಬಂಧಗಳನ್ನು ಪರಿಚಯಿಸುವ ಬರಹಗಳಿಗೆ ಇಲ್ಲಿ ಆದ್ಯತೆ. ಈ ಕುರಿತಂತೆ ಇರುವ ನಿಮ್ಮ ಬರಹಗಳಿಗೆ ಈ ಅಂಕಣದಲ್ಲಿ ಸದಾ ಸ್ವಾಗತವಿದೆ.

ನೃತ್ಯ : ಅಂದು, ಇಂದು, ಮುಂದು (ಭಾಗ ೯)

Tuesday, February 15th, 2011

ನಮ್ಮ ಮನಸ್ಸಿನಲ್ಲೆದ್ದ ಸಾಮಾಜಿಕ ಬದಲಾವಣೆಗಳು ಕಲೆಯ ಸಾಮ್ರಾಜ್ಯದಲ್ಲಿ ಬದಲಾವಣೆ ಹೊಂದಿದ್ದಾವೆ. ಕಳೆದ ೫೦ ವರ್ಷಗಳಲ್ಲಿ ಭರತನಾಟ್ಯದ ಮೇಲೆ ಬೆಳಕು ಚೆಲ್ಲುವವರು ಇಂದು ಕಾಣೆಯಾಗಿದ್ದಾರೆ. ಹಿಂದಿನ ನಟ್ಟುವನ್ನಾರುಗಳೂ, ಅಂದಿನ ಭರತನಾಟ್ಯದ ಕುಲಾಚಾರರೂ ಇಂದಿಲ್ಲ. ಅವುಗಳ ಜಾಗವನ್ನು ತುಂಬಲು ಇಂದು ಅಲ್ಲಿ ಇಲ್ಲಿ ಕಲಾಕ್ಷೇತ್ರಕ್ಕೆ ಸಮಾನವಾದ ಸಂಸ್ಥೆಗಳು ಹುಟ್ಟಿಕೊಂಡಿವೆ.
ಬದಲಾದ ಈ ಕಾಲದಲ್ಲಿಯೇ ಹೊಸ ಸೋಗಿನಲ್ಲಿ ನಮ್ಮೆದುರು ಅತಿ ಬುದ್ಧಿವಂತರಾದ ಮಂದಿ ಮುಂದೆ ಬಂದಿದ್ದಾರೆ. ಹೊಸಮಾರ್ಗ ದರ್ಶನವೂ ಇದೆ. ಅವರು ತಿಳಿದುಕೊಂಡಿರುವುದು ಅಪಾರ ಹಾಗೂ ಸಮೃದ್ಧ ಎಂಬ ನಂಬಿಕೆ ಬಹಳ [...]

ನೃತ್ಯ- ಅಂದು, ಇಂದು, ಮುಂದು ( ಭಾಗ ೮)

Wednesday, December 15th, 2010

ಭರತನಾಟ್ಯವನ್ನು ಕಾಣುವ ಜನಸ್ತೋಮ ಹೆಚ್ಚಿದೆ. ಅದಕ್ಕೆ ತಕ್ಕಂತೆ ಕಲೆ ಇಂದು ಕುಲಗೆಟ್ಟು ನಡೆಯುತ್ತಿದೆ. ನಾಟ್ಯದ ರೂಪು ವಿನ್ಯಾಸಗಳೆಲ್ಲಾ ಜನರಲ್ಲಿ ನಾನಾ ಭಾವನೆಗಳನ್ನು ಕೆರಳಿಸಿದೆ. ಇದಕ್ಕೆ ಕಾರಣರು ಯಾರು? ಹಣವಂತರೇ? ನರ್ತಿಸುವ ಬಾಲಕಿಯರೇ? ದುಡ್ಡಿನ ಮದವೇ? ಗುರುಗಳೆನಿಸಿಕೊಂಡವರ ಲೋಭವೇ? ಹೊಸ ಸೋಗಿನಲ್ಲಿ ನಮ್ಮೆದುರು ಅತಿ ಬುದ್ಧಿವಂತರಾಗಿ ನಿಂತು ಅಪಾರ, ಸಮೃದ್ಧ ಅರಿವು ಪಡೆದುಕೊಂಡಂತಿರುವ ಮಂದಿಯೇ? ಅಥವಾ ವಿಮರ್ಶಿಸುವವರ ಧೈರ್ಯ ಸಾಲದ ಅವಸ್ಥೆಯೇ? ಕಲಿಯಲು ಬಂದ ಒಬ್ಬ ವಿದ್ಯಾರ್ಥಿಗೆ ಪ್ರಥಮವಾಗಿ ಹೇಳಿಕೊಡುವ ವಿದ್ಯೆ ಎಂದರೆ ‘ನಿನ್ನ ಅರಂಗೇಟ್ರಂ ಮಾಡಿಸುವುದು ನನ್ನ [...]

ನೃತ್ಯ : ಅಂದು, ಇಂದು, ಮುಂದು (ಭಾಗ ೭)

Friday, October 15th, 2010

ಒಂದು ಪ್ರದರ್ಶನ ಕಾಲದ ಸಂದಿಗ್ಧ ಸನ್ನಿವೇಶದಲ್ಲಿ ಏಕವ್ಯಕ್ತಿಯಿಂದ ನಡೆವ ಕ್ರಿಯೆಯಲ್ಲಿ ಜಾಗರೂಕ ಪ್ರಜ್ಞೆ ಮುಖ್ಯವಾಗಿದೆ. ಕಲಾಗಾರನಿಗೂ ಅವನಿದಿರು ಕುಳಿತ ಪ್ರೇಕ್ಷಕನಿಗೂ ಇರುವ ಬಾಂಧವ್ಯದಲ್ಲಿ, ಅವನ ವಿಚಾರದಲ್ಲೇ ಆಗಲಿ ಅಥವ ಕಲೆಯ ವಿಚಾರದಲ್ಲೇ ಆಗಲಿ ಒಂದು ತರದ ಅವಿನಾಭಾವ ಸಂಬಂಧ ಏರ್ಪಡುತ್ತದೆ. ಉದಾ : ಒಬ್ಬ ಕೊಲೆಗಡುಕನು ಕೆಲಬಾರಿ ಜೀವನದ ಸಿಹಿ ಅನುಭವವನ್ನು ಮನಸ್ಸಿಗೆ ತಂದು ತೃಪ್ತಿಪಡುತ್ತಾನೆ. ಕಾರಣ-ಇಂತಹ ಯೋಚನೆಗಳು ಅವನ ಮನಸ್ಸಿಗೆ ಬಂದಾಗ ಸ್ವಲ್ಪ ಮಟ್ಟಿಗೆ ಆತನನ್ನು ನಗುವಿನಲ್ಲಿ ಹೊಸ ರೂಪ ಕೊಟ್ಟಿರಲೂಬಹುದು. ಆದರೆ ಕಲಾವಿದನು ದೂರದಲ್ಲಿದ್ದರೆ [...]

ನೃತ್ಯ : ಅಂದು, ಇಂದು, ಮುಂದು – ಭಾಗ 6

Sunday, August 15th, 2010

ಕಲೆಯು ತನ್ನಲ್ಲಿರುವ ರೂಪಿನಲ್ಲಿ ಹಲವು ಹೆಚ್ಚು ಕಡಿಮೆ ಮಾಡಿರುವುದಕ್ಕೆ ಕಾರಣಗಳಿವೆ. ತನಗೆ ಎದುರಾಗಿರುವ ಸಾಮಾಜಿಕ ಅಂಶ, ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕ ಕಾರಣಗಳಿಂದ ಈ ಸಮಾಜದಲ್ಲಿ ತನ್ನ ಬದಲಾವಣೆ ಆಯಿತೆನ್ನುತ್ತದೆ. ಅದೂ ಸಾಲದೆ ಮಾನವನ ಮನಸ್ಸಿನ ರಸಾನುಭುತಿ ಕೂಡಾ ! ಜೀವನ ಕ್ರಮ ನಿಬಂಧನೆಯೇ ಹೆಚ್ಚು ಕಡಿಮೆಗಳನ್ನು ಕಲಾಭಿವ್ಯಕ್ತಿಯಲ್ಲಿ ಕಾಣಿಸುವುದು ನಿಜ. ಜೀವನದ ಸ್ಥಿತಿಯೂ ಅಂತಹ ಅವಸ್ಥೆಯನ್ನು ನಿರೀಕ್ಷಿಸುತ್ತಿದೆ. ಹರಿಕಥೆ ಮುಂತಾದ ಧಾರ್ಮಿಕ ಚರ್ಚಾ ವಿಷಯಗಳು, ಸಾಹಿತ್ಯ ಕುರಿತಾದ ನಿಯಮಗಳು, ತಮಿಳು, ತೆಲುಗು, ಕನ್ನಡ ಹಾಗೂ ಸಂಸ್ಕೃತದ [...]

ನೃತ್ಯ : ಅಂದು, ಇಂದು, ಮುಂದು

Thursday, June 17th, 2010

ನಮಗೆ ಆಗಾಗ ಎದುರಾಗುತ್ತಿರುವ ಪ್ರಶ್ನೆ ! -ಈ ನಮ್ಮ ಜಗತ್ತಿನಲ್ಲಿ ಎಂದರೆ ಸುಧಾರಣಾ ಪಕ್ಷದವರು ಮುಂದಿಟ್ಟ ಹೆಜ್ಜೆಯಲ್ಲಿ (ಅಂದರೆ ತೀವ್ರ ಸುಧಾರಣಾ ತತ್ತ್ವಗಳಿಗೆ ಅನುಸಾರ ಹೊಂದಿದ ಈ ಜಗತ್ತಿನಲ್ಲಿ) ಭರತನಾಟ್ಯವನ್ನೇ ಬದಿಗಿರಿಸಿ ನಮ್ಮ ಹೊಸ ಬುದ್ಧಿಶಕ್ತಿ ಸೃಜಿಸಿದ ಪ್ರತಿಭಾದೃಷ್ಟಿಯ ಬೆನ್ನತ್ತಿ ಹೋಗಲೋ ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಆದರೆ ಮನಸ್ಸು ‘ಬೇಡ’ ಅನ್ನುತ್ತದೆ. ತಾನು ಕಲಿತಿರುವ ಹಲವು ವಿದ್ಯೆಗಳಲ್ಲಿ ಭರತನಾಟ್ಯವನ್ನು ಬಿಟ್ಟು ಬೇರೊಂದರ ಸುಸ್ವರೂಪ ನಮಗೆ ಕಾಣಿಸಲಿಲ್ಲ. ನಮ್ಮ ಕಣ್ಣಿಗೆ ನಿಜವಾದ [...]

ನೃತ್ಯ : ಅಂದು, ಇಂದು, ಮುಂದು ( ಮಾರ್ಚ್ ಏಪ್ರಿಲ್ ೨೦೧೦)

Thursday, April 15th, 2010

ಭಾರತೀಯ ನೃತ್ಯದ ವಿಚಾರದ ಕುರಿತು ಇನ್ನೂ ಕೆಲವು ಅಭಿಪ್ರಾಯಗಳು ಪಾಶ್ಚಿಮಾತ್ಯರಿಂದ ಬಂದಿದೆ. ಯಾವಾಗಲೂ ಕಲೆಯನ್ನು ಒಂದು ಮತದ ಆದರ್ಶ, ಒಂದು ಆತ್ಮಾರ್ಪಣೆ ಎನ್ನುವ ಭಾವನೆ ಅದರಲ್ಲೊಂದು. ಆದರೆ ಆ ನರ್ತನದಲ್ಲಿ ಕಾಣುವುದು ಒಂದು ಮತದ ಅರ್ಪಣೆಯಲ್ಲ. ಅದು ಮನಸ್ಸಿನ ಒಂದು ಆಂತರಿಕತ್ವ ಅಂದರೆ ಸುಸಂಸ್ಕೃತ ಸೂಕ್ಷ್ಮಮನೋಭಾವ. ಇದರ ಉದ್ದೇಶವೇ ಬೇರೆ. ಇದನ್ನು ಸಮರಸವೆನ್ನಬಹುದು. ಸುಸಂಗತ, ವಿರಸವಿಲ್ಲದ ಅಲ್ಲದೆ ಕಷ್ಟವಿತ್ಯಾದಿ ದುಃಖಿತವಾದ ಮನಸ್ಸಿಗೆ ಅಥವಾ ಆತ್ಮಕ್ಕೆ ಸುಖಭಾವ ಕೊಡುವಿಕೆ. ಅಂತೆಯೇ ಲೋಕದಲ್ಲಿದು ದುಃಖಿತರಾದವರಿಗೆ ಒಂದು ಸುಖನೆಲೆಯನ್ನು ಕೊಡುವ, ಮನಸ್ಸನ್ನು [...]

ನೃತ್ಯ : ಅಂದು, ಇಂದು, ಮುಂದು

Monday, February 15th, 2010

ಅಭಿನಯಕ್ಕೆ ಪುರುಷ ಸಹಜವಾಗಿರುವ ಲಾಸ್ಯಪದ್ಧತಿ ಮೇಲಾಗಿದ್ದರೂ, ಪುರುಷರು ತಮ್ಮ ಅಭಿನಯದಲ್ಲಿ ತಾಂಡವಾಂಶ ಹಾಗೂ ಸಾತ್ವಿಕ ಭಾವಗಳನ್ನು ನಿವೇದಿಸಬಹುದು. ಈ ಸಂದರ್ಭಗಳಲ್ಲಿ ಏಕಾಹಾರ್ಯ ಮುಖ್ಯವಾದದ್ದು. ನೃತ್ಯನಾಟಕಗಳಲ್ಲಿ ಪುರುಷಪಾತ್ರಾಭಿನಯಕ್ಕೆ ಒತ್ತು ಇರುತ್ತದೆ. ಲಾಸ್ಯದ ಬದಲು ತಾಂಡವಾಂಶಗಳೇ ಸಾಹಿತ್ಯದಲ್ಲಿರುವಾಗ ಪುರುಷನು ಲಾಸ್ಯವನ್ನೇ ತಾಂಡವವನ್ನಾಗಿ ಪರಿವರ್ತಿಸುವ ಕಾರ್ಯ ಸುಲಭವಲ್ಲ. ಭಾವಗಳಲ್ಲಿಯೂ ಆತ ನಾಯಕಸಾಮಾನ್ಯ ಗುಣಗಳನ್ನು ತರಬೇಕಾಗಬಹುದು. ಹಾಗಂತ ಬರಿಯ ಸ್ತ್ರೀಯರಿಗಾಗಿ ಮಾತ್ರವೇ ಭರತನಾಟ್ಯ ಮೀಸಲಾಗಿದ್ದುದಲ್ಲ. ಆದರೆ ಭರತನಾಟ್ಯ ಪುರುಷವೇಷಧಾರಿಗಳಲ್ಲಿ ತಾವು ಮಾಡಬೇಕಾದ ಅಂಶಗಳಲ್ಲಿ ಶಿವನಿಗೆ [...]

ನೃತ್ಯ : ಅಂದು, ಇಂದು, ಮುಂದು( ಹೇಮಂತ ಋತು ಗಾನ ೨೦೦೯)

Tuesday, December 15th, 2009
ನೃತ್ಯ : ಅಂದು, ಇಂದು, ಮುಂದು( ಹೇಮಂತ ಋತು ಗಾನ ೨೦೦೯)

ಕಲೆಗಾಗಿ ಸಂಘ ಸ್ಥಾಪನೆ ! ಹತ್ತು ಜನರ ಒಕ್ಕೂಟ ಅದು. ಕೀರ್ತಿ-ಹಣ ಸುಲಭವಾಗಿ ದೊರೆಯುತ್ತದೆ. ಅದು ಕಲೆಯ ಒಳಿತಿಗಾಗಿಯೋ ಅಥವಾ ಸ್ವಂತ ಪ್ರಯೋಜನಕ್ಕಾಗಿಯೋ?
ಇಂದು ಪರೀಕ್ಷೆ, ಪಠ್ಯಪುಸ್ತಕಗಳು, ಅದರಲ್ಲಿರಬೇಕಾದ ವಿಷಯಗಳು- ಇವೆಲ್ಲಾ ನಮ್ಮ ಸ್ವಂತ ಪ್ರಯೋಜನಕ್ಕಾಗಿ ಇವೆ; ಕಲೆಗಾಗಿ ಅಲ್ಲ. ಪಠ್ಯಪುಸ್ತಕದಲ್ಲಿರುವುದನ್ನೇ ಹೇಳಿದರೆ ನೂರಕ್ಕೆ ನೂರು ಅಂಕ ಗಳಿಸಬಹುದು ! ಇದರಿಂದ ನಮ್ಮ ಮನಸ್ಸಿಗೆ, ದೇಹಕ್ಕೇನು ಲಾಭವಾಯಿತು, ಯಾವ ರೀತಿಯಲ್ಲಿ ಜನಮನ್ನಣೆ ಗಳಿಸುತ್ತೇವೆ- ಎಂಬ ವಿಚಾರಗಳು ಆ ಸಂಘ ಸಂಸ್ಥೆಗಳಲ್ಲಿಲ್ಲ.
ಭರತನಾಟ್ಯ [...]

ನರ್ತನ ಸುರಭಿ ಅಂಕಣ : ‘ನೃತ್ಯ- ಅಂದು, ಇಂದು, ಮುಂದು’

Saturday, October 17th, 2009
ನರ್ತನ ಸುರಭಿ ಅಂಕಣ :  ‘ನೃತ್ಯ- ಅಂದು, ಇಂದು, ಮುಂದು’

ನಾಟ್ಯಾಚಾರ್ಯ ಕೆ. ಮುರಲೀಧರರಾಯರ ‘ನೃತ್ಯಲೋಕ’ ಗ್ರಂಥವನ್ನು ಅರಿಯದ ನೃತ್ಯಾಸಕ್ತರು ಬಹಳ ಕಡಿಮೆ. ಹಾಗೆ ನೋಡಿದರೆ, ಜ್ಞಾನವೃದ್ಧರೂ, ವಯೋವೃದ್ಧರೂ ಆದ ರಾಯರು ನಮ್ಮ ನಡುವಿನ ನಡೆದಾಡುವ ಗ್ರಂಥವೇ ಹೌದು. ಎಂಭತ್ತನಾಲ್ಕನೇಯ ವಯಸ್ಸಿನಲ್ಲೂ ಅವರ ಉತ್ಸಾಹ ಇಪ್ಪತ್ತರ ತರುಣರನ್ನೂ ನಾಚಿಸುವಂತಹುದು. ನಿಸರ್ಗ, ಸಂಗೀತ, ಸಾಹಿತ್ಯ, ಚಿತ್ರಕಲೆ, ಛಾಯಾಚಿತ್ರ ಕಲೆ, ನರ್ತನ.., ಹೀಗೆ ಶ್ರೀಯುತರ ಬಹುಮುಖವೆನಿಸುವ ವಿದ್ವತ್ತು, ಅಗಾಧ ಪಾಂಡಿತ್ಯ, ಬೋಧನಾನುಭವ, ಜೀವನದರ್ಶನ.., ಎಂಥಹ ಸಾಧಕರಿಗೂ ಭವಿಷ್ಯ ಸಾಧ್ಯತೆಗಳ ಚಿಂತನಕ್ಕೆ ಒಂದು ಉತ್ತಮ ಆಕರ. ಅವರ ಚಿಂತನ-ಮಂಥನಗಳ ಸೌಹಾರ್ದ ಸಂಧಿಸುವಿಕೆ ನಮ್ಮೆಲ್ಲರ [...]

ಪಾರಿಭಾಷಿಕ ಪದ ಪರಿಚಯ

Sunday, February 15th, 2009

ನೃತ್ಯ, ನಾಟ್ಯದಲ್ಲಿ ಬಳಕೆಯಾಗುವ ಅದೆಷ್ಟೋ ಶಬ್ದಗಳ ಪರಿಚಯ ವಿದ್ಯಾರ್ಥಿಗಳಿಗೋ, ಪ್ರೇಕ್ಷಕರಿಗೋ ಇಲ್ಲದೆ ನೃತ್ಯ-ನಾಟ್ಯಗಳ ಆಮೂಲಾಗ್ರ ಸಂಗತಿಯನ್ನು, ಸಂದರ್ಭವನ್ನು ತಿಳಿಯುವಲ್ಲಿ ಅಸಮರ್ಥರಾಗುವುದಿದೆ. ನೃತ್ಯ ಪ್ರದರ್ಶನಗಳ ಸಂದರ್ಭದಲ್ಲೋ, ಅಥವಾ ವಿಮರ್ಶೆಯನ್ನು ಓದುವಾಗಲೋ ಇಂತಹ ಸಾಧ್ಯತೆಗಳು ಹೆಚ್ಚು. ಹೀಗಾಗಿ ಜನಸಾಮಾನ್ಯರ ನಾಡಿಮಿಡಿತವಾಗುವ ನೃತ್ಯವು ಕ್ರಮೇಣ ಹುಳಿ ದ್ರಾಕ್ಷಿಯೆನಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ದುಡಿಯುತ್ತಿರುವ ನೂಪುರಭ್ರಮರಿಯ ಪ್ರಯತ್ನಕ್ಕೆ ವೈಷ್ಣವಿಯವರು ಮತ್ತೊಮ್ಮೆ ಕೈಜೋಡಿಸಿದ್ದಾರೆ. ಈ ಸಂಚಿಕೆಯಿಂದ ಅವರ ಅಂಕಣ ನರ್ತನ ಸುರಭಿಯಲ್ಲಿ ಭರತನಾಟ್ಯದ ಕೆಲವು ಪಾರಿಭಾಷಿಕ ಶಬ್ದಗಳನ್ನು ಪರಿಚಯ ಮಾಡಿಕೊಳ್ಳೋಣವೇ?
(ಸೂಚಿಯನ್ನು ಕೊಡಲಾಗಿದ್ದು ವಿವರಿಸಲಾಗುವ ಶಬ್ದಗಳು ಗ್ರಂಥಗಳಿಂದ [...]