ಅಂಕಣಗಳು

ನೂಪುರ ಪತ್ರಿಕೆ

‘ಮುದ್ರಾರ್ಣವ’ದ ಮೋಹಕ ಮೇಘಮಲ್ಹಾರ… : ಅನಾವರಣದಲ್ಲರಳಿದ ಅಲೆಗಳು

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಯಾವುದೇ ನೃತ್ಯ ಪ್ರಕಾರದ ವಿವಿಧ ನೃತ್ಯ ಬಂಧಗಳ ಸಮಗ್ರ ನೋಟ, ವಿಮರ್ಶೆಯನ್ನು ಒದಗಿಸುವುದು ನರ್ತನ ಸುರಭಿಯ ಉದ್ದೇಶ. ಈ ಹಿನ್ನಲೆಯಲ್ಲಿ ರಂಗದ ಮೇಲೆ ಕಾಣುವ ನೃತ್ಯ ಸೌಂದರ್ಯದ ವಿವಿಧ ಮಜಲುಗಳ ಪುಟ್ಟ ಅಧ್ಯಯನದ ರೂಪವನ್ನು ಸಂಕ್ಷಿಪ್ತವಾಗಿ, ಸಾಂಧರ್ಭಿಕವಾಗಿ, ವಿಶಿಷ್ಟವಾಗಿ ಮತ್ತು ವಿಮರ್ಶಾತ್ಮಕವಾಗಿ ನೃತ್ಯ ಬಂಧಗಳನ್ನು ಪರಿಚಯಿಸುವ ಬರಹಗಳಿಗೆ ಇಲ್ಲಿ ಆದ್ಯತೆ. ಈ ಕುರಿತಂತೆ ಇರುವ ನಿಮ್ಮ ಬರಹಗಳಿಗೆ ಈ ಅಂಕಣದಲ್ಲಿ ಸದಾ ಸ್ವಾಗತವಿದೆ.

ನೃತ್ಯ : ಅಂದು, ಇಂದು, ಮುಂದು

Monday, February 15th, 2010

ಅಭಿನಯಕ್ಕೆ ಪುರುಷ ಸಹಜವಾಗಿರುವ ಲಾಸ್ಯಪದ್ಧತಿ ಮೇಲಾಗಿದ್ದರೂ, ಪುರುಷರು ತಮ್ಮ ಅಭಿನಯದಲ್ಲಿ ತಾಂಡವಾಂಶ ಹಾಗೂ ಸಾತ್ವಿಕ ಭಾವಗಳನ್ನು ನಿವೇದಿಸಬಹುದು. ಈ ಸಂದರ್ಭಗಳಲ್ಲಿ ಏಕಾಹಾರ್ಯ ಮುಖ್ಯವಾದದ್ದು. ನೃತ್ಯನಾಟಕಗಳಲ್ಲಿ ಪುರುಷಪಾತ್ರಾಭಿನಯಕ್ಕೆ ಒತ್ತು ಇರುತ್ತದೆ. ಲಾಸ್ಯದ ಬದಲು ತಾಂಡವಾಂಶಗಳೇ ಸಾಹಿತ್ಯದಲ್ಲಿರುವಾಗ ಪುರುಷನು ಲಾಸ್ಯವನ್ನೇ ತಾಂಡವವನ್ನಾಗಿ ಪರಿವರ್ತಿಸುವ ಕಾರ್ಯ ಸುಲಭವಲ್ಲ. ಭಾವಗಳಲ್ಲಿಯೂ ಆತ ನಾಯಕಸಾಮಾನ್ಯ ಗುಣಗಳನ್ನು ತರಬೇಕಾಗಬಹುದು. ಹಾಗಂತ ಬರಿಯ ಸ್ತ್ರೀಯರಿಗಾಗಿ ಮಾತ್ರವೇ ಭರತನಾಟ್ಯ ಮೀಸಲಾಗಿದ್ದುದಲ್ಲ. ಆದರೆ ಭರತನಾಟ್ಯ ಪುರುಷವೇಷಧಾರಿಗಳಲ್ಲಿ ತಾವು ಮಾಡಬೇಕಾದ ಅಂಶಗಳಲ್ಲಿ ಶಿವನಿಗೆ [...]

ನೃತ್ಯ : ಅಂದು, ಇಂದು, ಮುಂದು( ಹೇಮಂತ ಋತು ಗಾನ ೨೦೦೯)

Tuesday, December 15th, 2009
ನೃತ್ಯ : ಅಂದು, ಇಂದು, ಮುಂದು( ಹೇಮಂತ ಋತು ಗಾನ ೨೦೦೯)

ಕಲೆಗಾಗಿ ಸಂಘ ಸ್ಥಾಪನೆ ! ಹತ್ತು ಜನರ ಒಕ್ಕೂಟ ಅದು. ಕೀರ್ತಿ-ಹಣ ಸುಲಭವಾಗಿ ದೊರೆಯುತ್ತದೆ. ಅದು ಕಲೆಯ ಒಳಿತಿಗಾಗಿಯೋ ಅಥವಾ ಸ್ವಂತ ಪ್ರಯೋಜನಕ್ಕಾಗಿಯೋ?
ಇಂದು ಪರೀಕ್ಷೆ, ಪಠ್ಯಪುಸ್ತಕಗಳು, ಅದರಲ್ಲಿರಬೇಕಾದ ವಿಷಯಗಳು- ಇವೆಲ್ಲಾ ನಮ್ಮ ಸ್ವಂತ ಪ್ರಯೋಜನಕ್ಕಾಗಿ ಇವೆ; ಕಲೆಗಾಗಿ ಅಲ್ಲ. ಪಠ್ಯಪುಸ್ತಕದಲ್ಲಿರುವುದನ್ನೇ ಹೇಳಿದರೆ ನೂರಕ್ಕೆ ನೂರು ಅಂಕ ಗಳಿಸಬಹುದು ! ಇದರಿಂದ ನಮ್ಮ ಮನಸ್ಸಿಗೆ, ದೇಹಕ್ಕೇನು ಲಾಭವಾಯಿತು, ಯಾವ ರೀತಿಯಲ್ಲಿ ಜನಮನ್ನಣೆ ಗಳಿಸುತ್ತೇವೆ- ಎಂಬ ವಿಚಾರಗಳು ಆ ಸಂಘ ಸಂಸ್ಥೆಗಳಲ್ಲಿಲ್ಲ.
ಭರತನಾಟ್ಯ [...]

ನರ್ತನ ಸುರಭಿ ಅಂಕಣ : ‘ನೃತ್ಯ- ಅಂದು, ಇಂದು, ಮುಂದು’

Saturday, October 17th, 2009
ನರ್ತನ ಸುರಭಿ ಅಂಕಣ :  ‘ನೃತ್ಯ- ಅಂದು, ಇಂದು, ಮುಂದು’

ನಾಟ್ಯಾಚಾರ್ಯ ಕೆ. ಮುರಲೀಧರರಾಯರ ‘ನೃತ್ಯಲೋಕ’ ಗ್ರಂಥವನ್ನು ಅರಿಯದ ನೃತ್ಯಾಸಕ್ತರು ಬಹಳ ಕಡಿಮೆ. ಹಾಗೆ ನೋಡಿದರೆ, ಜ್ಞಾನವೃದ್ಧರೂ, ವಯೋವೃದ್ಧರೂ ಆದ ರಾಯರು ನಮ್ಮ ನಡುವಿನ ನಡೆದಾಡುವ ಗ್ರಂಥವೇ ಹೌದು. ಎಂಭತ್ತನಾಲ್ಕನೇಯ ವಯಸ್ಸಿನಲ್ಲೂ ಅವರ ಉತ್ಸಾಹ ಇಪ್ಪತ್ತರ ತರುಣರನ್ನೂ ನಾಚಿಸುವಂತಹುದು. ನಿಸರ್ಗ, ಸಂಗೀತ, ಸಾಹಿತ್ಯ, ಚಿತ್ರಕಲೆ, ಛಾಯಾಚಿತ್ರ ಕಲೆ, ನರ್ತನ.., ಹೀಗೆ ಶ್ರೀಯುತರ ಬಹುಮುಖವೆನಿಸುವ ವಿದ್ವತ್ತು, ಅಗಾಧ ಪಾಂಡಿತ್ಯ, ಬೋಧನಾನುಭವ, ಜೀವನದರ್ಶನ.., ಎಂಥಹ ಸಾಧಕರಿಗೂ ಭವಿಷ್ಯ ಸಾಧ್ಯತೆಗಳ ಚಿಂತನಕ್ಕೆ ಒಂದು ಉತ್ತಮ ಆಕರ. ಅವರ ಚಿಂತನ-ಮಂಥನಗಳ ಸೌಹಾರ್ದ ಸಂಧಿಸುವಿಕೆ ನಮ್ಮೆಲ್ಲರ [...]

ಪಾರಿಭಾಷಿಕ ಪದ ಪರಿಚಯ

Sunday, February 15th, 2009

ನೃತ್ಯ, ನಾಟ್ಯದಲ್ಲಿ ಬಳಕೆಯಾಗುವ ಅದೆಷ್ಟೋ ಶಬ್ದಗಳ ಪರಿಚಯ ವಿದ್ಯಾರ್ಥಿಗಳಿಗೋ, ಪ್ರೇಕ್ಷಕರಿಗೋ ಇಲ್ಲದೆ ನೃತ್ಯ-ನಾಟ್ಯಗಳ ಆಮೂಲಾಗ್ರ ಸಂಗತಿಯನ್ನು, ಸಂದರ್ಭವನ್ನು ತಿಳಿಯುವಲ್ಲಿ ಅಸಮರ್ಥರಾಗುವುದಿದೆ. ನೃತ್ಯ ಪ್ರದರ್ಶನಗಳ ಸಂದರ್ಭದಲ್ಲೋ, ಅಥವಾ ವಿಮರ್ಶೆಯನ್ನು ಓದುವಾಗಲೋ ಇಂತಹ ಸಾಧ್ಯತೆಗಳು ಹೆಚ್ಚು. ಹೀಗಾಗಿ ಜನಸಾಮಾನ್ಯರ ನಾಡಿಮಿಡಿತವಾಗುವ ನೃತ್ಯವು ಕ್ರಮೇಣ ಹುಳಿ ದ್ರಾಕ್ಷಿಯೆನಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ದುಡಿಯುತ್ತಿರುವ ನೂಪುರಭ್ರಮರಿಯ ಪ್ರಯತ್ನಕ್ಕೆ ವೈಷ್ಣವಿಯವರು ಮತ್ತೊಮ್ಮೆ ಕೈಜೋಡಿಸಿದ್ದಾರೆ. ಈ ಸಂಚಿಕೆಯಿಂದ ಅವರ ಅಂಕಣ ನರ್ತನ ಸುರಭಿಯಲ್ಲಿ ಭರತನಾಟ್ಯದ ಕೆಲವು ಪಾರಿಭಾಷಿಕ ಶಬ್ದಗಳನ್ನು ಪರಿಚಯ ಮಾಡಿಕೊಳ್ಳೋಣವೇ?
(ಸೂಚಿಯನ್ನು ಕೊಡಲಾಗಿದ್ದು ವಿವರಿಸಲಾಗುವ ಶಬ್ದಗಳು ಗ್ರಂಥಗಳಿಂದ [...]

ವರ್ಣ

Thursday, November 6th, 2008

- ವೈಷ್ಣವಿ . ಎನ್

ಯಾವುದೇ ನೃತ್ಯ ಪ್ರಕಾರದ ವಿವಿಧ ನೃತ್ಯ ಬಂಧಗಳ ಸಮಗ್ರ ನೋಟ, ವಿಮರ್ಶೆಯನ್ನು ಒದಗಿಸುವುದು ನರ್ತನ ಸುರಭಿಯ ಉದ್ದೇಶ. ಆ ಮೂಲಕ ನಾವು ರಂಗದ ಮೇಲೆ ಕಾಣುವ ನೃತ್ಯ ಸೌಂದರ್ಯದ ವಿವಿಧ ಮಜಲುಗಳ ಪುಟ್ಟ ಅಧ್ಯಯನದ ರೂಪ ನಿಮ್ಮೆದುರಿಗೆ..ಇದು ಸಂವಾದಗಳಿಗೆ ವೇದಿಕೆಯೂ ಆಗಬೇಕು. ಈಗಾಗಲೇ [...]

ಶ್ಲೋಕ

Thursday, November 6th, 2008

- ವೈಷ್ಣವಿ . ಎನ್

ನಾವ್ ಸಣ್ಣ ಮಕ್ಳಾಗಿದ್ದಾಗ ಬೆಳಿಗ್ಗೆ ಅಥ್ವಾ ಸಂಜೆ ದೇವರ ಪೀಠದ ಹತ್ರ ಕೂರಿಸಿ, ತುಪ್ಪದ ದೀಪ ಹಚ್ಚಿ ಅಪ್ಪನೋ, ಅಮ್ಮನೋ, ಅಥವಾ ಅಜ್ಜ ಅಜ್ಜಿಯೋ ಭಜನೆ, ಸ್ತೋತ್ರ, ಶ್ಲೋಕ, ಋತು-ಮಾಸ-ಸಂವತ್ಸರ-ನಕ್ಷತ್ರಗಳನ್ನು ಹೇಳಿಸಿ ಭಗವನ್ನಾಮ ಸ್ಮರಣೆ ಮಾಡ್ಸೋದು ರೂಢಿ. ಇವೆಲ್ಲಾ ಎಷ್ಟು ನೆನಪಲ್ಲಿದೆ ಅಂದ್ರೆ, ಮುಂದೆ ಶಾಲೆ-ಕಾಲೇಜಿನಲ್ಲಿ [...]

ಶಬ್ದ

Thursday, November 6th, 2008

- ವೈಷ್ಣವಿ . ಎನ್

ಜತಿಸ್ವರವಾದ ನಂತರ ಕ್ಲಿಷ್ಟವಾದ ವರ್ಣವನ್ನು ನರ್ತಿಸುವ ಮೊದಲು, ಕಲಾವಿದೆಯು ತನ್ನ ಅಭಿನಯ ಚಾತುರ್ಯ ಪ್ರಸ್ತುತಪಡಿಸಲು ಅನುವು ಮಾಡಿಕೊಡುವ ಮೂರನೇಯ ಅಂಗವೇ ಶಬ್ದಂ. ಇದು ಮೃದಂಗದ ನುಡಿಕಾರಗಳಿಗೆ ಹೆಣೆದ ಜತಿಗಳು ಮತ್ತು ಸಾಹಿತ್ಯಗಳ ಸಮ್ಮಿಶ್ರಣದಿಂದ ಕೂಡಿದ್ದು, ಜತಿಗಳಿರುವಲ್ಲಿ ನೃತ್ತವೂ, ವರ್ಣನಾತ್ಮಕವಾದ ಸಾಹಿತ್ಯದಲ್ಲಿ ಅಭಿನಯವೂ [...]

ಪದಂ

Thursday, November 6th, 2008

- ವೈಷ್ಣವಿ . ಎನ್

ಅಲರಿಪು, ಜತಿಸ್ವರ, ಶಬ್ದ ಮತ್ತು ವರ್ಣದ ಬಗೆಗಿನ ವಿಮರ್ಶೆಗಳನ್ನು ಈ ಹಿಂದಿನ ಸಂಚಿಕೆಗಳಲ್ಲಿ ಓದಿದ್ದೀರಿ. ಇವುಗಳು ಭರತನಾಟ್ಯ ಕಚೇರಿಯ ಪೂರ್ವಭಾಗವಾದರೆ, ನಂತರ ಕಾಣಲ್ಪಡುವ ಪದ, ಜಾವಳಿ, ದರು, ಅಷ್ಟಪದಿ, ಕೀರ್ತನೆ, ಶ್ಲೋಕ, ಜಾವಳಿ, ಚೂರ್ಣಿಕೆ, ಉಗಾಭೋಗ-ದೇವರನಾಮ, ವಚನ ಮುಂತಾದ ಲಾಸ್ಯಾಭಿನಯಕ್ಕೆ ಪ್ರಾಮುಖ್ಯತೆ ಕೊಡುವ ಸಂಗತಿಗಳು [...]

ಕೃತಿ-ಕೀರ್ತನೆ

Thursday, November 6th, 2008

-ವೈಷ್ಣವಿ ಎನ್.

ದೇವರನಾಮಗಳೆಂದರೆ ಯಾರಿಗೆ ತಾನೇ ತಿಳಿದಿಲ್ಲ? ದಾಸವರೇಣ್ಯರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ನೃತ್ಯಗಳಿಗೆ ನೀಡಲ್ಪಟ್ಟ ಈ ಕೊಡುಗೆಗಳು ಸೂರ್ಯ ಚಂದ್ರರಿರುವರೆಗೂ ಅಜರಾಮರ. ಒಂದು ನಿಟ್ಟಿನಲ್ಲಿ ಹೇಳುವುದಾದರೆ ಕನ್ನಡ ಭಾಷೆಯಿಂದ ಸಂಗೀತಕ್ಕೆ ಸಂದ ಅಪೂರ್ವ ರಚನೆಗಳಿವು. ಸಾಮಾನ್ಯ ಜನರಿಗೂ ಅರ್ಥವಾಗುವಂತಹ ಸುಲಭ ಭಾಷಾ ಪ್ರಯೋಗ ಇದರ [...]

ಜತಿಸ್ವರ

Thursday, November 6th, 2008

- ವೈಷ್ಣವಿ . ಎನ್

ಭರತನಾಟ್ಯ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ನೋಡುವ ಎರಡನೆಯ ಅಂಗವೇ ಜತಿಸ್ವರ. ಇದಕ್ಕೆ ಕರ್ಣಾಟಕ ಸಂಗೀತ ಸಂಪ್ರದಾಯದಲ್ಲಿ ಬರುವ ಸ್ವರಜತಿ ಎಂಬುದು ಆಧಾರ. ಸಂಗೀತ ವಿದ್ವಾಂಸರು ವಿದ್ಯಾರ್ಥಿಗಳಿಗೆ ಬೋಧನಾ ಸೌಕರ್ಯಕ್ಕಾಗಿ ರಚಿಸಿರುವ ಐದನೆಯ ಹಂತವೇ ಸ್ವರಜತಿ. ಇಲ್ಲಿ ಒಂದು ರಾಗದ ಆರೋಹಣ, ಅವರೋಹಣವನ್ನು ಅನುಸರಿಸಿ ಆ ರಾಗದ [...]