ಅಂಕಣಗಳು

ನೂಪುರ ಪತ್ರಿಕೆ

‘ಮುದ್ರಾರ್ಣವ’ದ ಮೋಹಕ ಮೇಘಮಲ್ಹಾರ… : ಅನಾವರಣದಲ್ಲರಳಿದ ಅಲೆಗಳು

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಇಂದಿನ ದಿನಗಳಲ್ಲಿ ಪತ್ರಿಕೆಯೊಂದನ್ನು, ಅದೂ ಯಾವುದೇ ಜಾಹೀರಾತಿನ ನೆರವಿಲ್ಲದ, ಭಾರೀ ಆರ್ಥಿಕ ಹಿನ್ನಲೆಯೂ ಇಲ್ಲದ ಪತ್ರಿಕೆಯೊಂದನ್ನು ಮುನ್ನಡೆಸುವುದು ಎಷ್ಟು ಕಷ್ಟ ಅನ್ನುವುದು ನಿಮಗೆ ತಿಳಿದಿದೆ. ಅದರಲ್ಲೂ ಯಾವುದೇ ಲಾಭದ ದೃಷ್ಠಿಯಿಲ್ಲದೆ ಸಮಷ್ಠಿಯ ಒಳಿತಿಗಾಗಿ, ಕಲೆಗೆ ಪುಟ್ಟ ಕಾಣಿಕೆ ನೀಡುವಲ್ಲಿ ಪತ್ರಿಕೆಯೊಂದು ರೂಪುಗೊಳ್ಳುತ್ತಿದೆ ಎಂದಾದಲ್ಲಿ ಅದರ ಹಿಂದಿನ ಸವಾಲುಗಳು ನಿಮಗರಿವಿರಬಹುದು. ರೂಪುಗೊಳ್ಳುತ್ತಿರುವುದರಿಂದ ಆದರೂ ಪುಟ್ಟ ಪುಟ್ಟ ಅಡಿಯಿಡುತ್ತಿರುವ ನೂಪುರ ಭ್ರಮರಿಯು ತನ್ನ ಲೇಖನಗಳ ಹಂಚಿಕೆ, ಮುದ್ರಣ, ವಿತರಣೆಗೆ ಬಹಳಷ್ಟು ಸಲ ಸ್ವಾವಲಂಬಿ ನೀತಿಯನ್ನು ಅಂದರೆ ಸ್ವಂತ ಖರ್ಚು-ಉಳಿತಾಯವನ್ನು ಅವಲಂಬಿಸಿದೆ. ಆದರೂ ಕಲಾಸಕ್ತರು ತಾವೇ ಮುಂದೆ ಬಂದು ತಮ್ಮಿಂದಾದಷ್ಟೂ ಸಹಕಾರ, ಪ್ರೋತ್ಸಾಹವನ್ನೀಯುತ್ತೀದ್ದಾರೆ. ಏಕೆಂದರೆ ನೂಪುರ ಭ್ರಮರಿಯು ನಮ್ಮೆಲ್ಲರ ಪತ್ರಿಕೆ, ಕಣ್ಬಿಡುತ್ತಿರುವ ಪುಟ್ಟ ಕೂಸು. ಇದರ ಬೆಳವಣಿಗೆಯಲ್ಲಿ ಪತ್ರಿಕೆಯ ಬಳಗದವರಷ್ಟೇ ಅಲ್ಲ; ಓದುಗ, ಕಲಾವಿದರ ಪಾತ್ರವೂ ಇದೆಯಲ್ಲವೇ?

ಗುಂಗ್ರು ಗುನುಗುನಿಸಲಿ

Monday, February 15th, 2010

ನೂಪುರದ ಗುಂಗ್ರು ಗುನುಗುನಿಸಲಿ
ಶುಭಾಶಯಗಳೊಂದಿಗೆ …
* ಶ್ರೀಮತಿ ಶ್ರೀ ಈಶ್ವರ ಭಟ್ ಎಳ್ಯಡ್ಕ, ಮಾಡಾವು, ಬೆಳ್ಳಾರೆ.
* ಬೋಳ ಕಮಲಾಕ್ಷ ಕಾಮತ್, ಮತ್ತು ಸುಗುಣಾ ಕಮಲಾಕ್ಷ ಕಾಮತ್,
ಸದ್ಗುರು ಛಾಯ,ಸುಧೀಂದ್ರ ನಗರದ ಹತ್ತಿರ, ದಹಿಸರ, ಮುಂಬೈ
* ಶ್ರೀಲಕ್ಷ್ಮಿ ಮತ್ತು ರಾಜ್ ಕುಮಾರ್,ಸಮಾಜ ಸೇವಕರ ಸಮಿತಿ, ಬೆಂಗಳೂರು.
*ಮಂಟಪ ಪ್ರಭಾಕರ ಉಪಾಧ್ಯಾಯ, ಏಕವ್ಯಕ್ತಿ ಯಕ್ಷಗಾನ ಸಾಮ್ರಾಟರು, ಬೆಂಗಳೂರು.
* ಸ್ವಾತಿ ರಾಮಕೃಷ್ಣ ಭಟ್, ಕುರುಂಬುಡೇಲು ಮನೆ, ಬೆಳ್ಳಾರೆ.
* ಡಾ. ಎಂ.ಜಿ. ಪಾಟ್ಕರ್ ,ಹಿರಿಯ ವೈದ್ಯರು, ‘ಶ್ರೀವಳ್ಳಿ’ ಶುಶ್ರೂಷಾ ಕೆಂದ್ರ, ಮಡಿಕೇರಿ.
*ಸೀತಾರಾಮ ಕುಮಾರ್ ಕಟೀಲು (  [...]

‘ಮುದ್ರಾರ್ಣವ’

Thursday, November 19th, 2009
‘ಮುದ್ರಾರ್ಣವ’

ಆತ್ಮೀಯರೇ,
ಸಂವಹನ ಮಾಧ್ಯಮವಾಗಿ, ಶಾಸ್ತ್ರೀಯ ಪರಿಭಾಷೆಯಾಗಿ ಹಸ್ತಮುದ್ರೆಗಳ ಪಾತ್ರ ಹಿರಿದಿದ್ದರೂ, ಇವುಗಳ ಕುರಿತಂತೆ ನಡೆದ ಅಧ್ಯಯನಗಳು ಬಹಳ ವಿರಳ. ಅದರಲ್ಲೂ ಸಂಹವನ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಕುರಿತಂತೆ ಆಳವಾದ ಪರಿಶೋಧನೆಗಳು ಜರುಗಿಲ್ಲ. ಸಾಮಾನ್ಯವಾಗಿ ಈ ಮುದ್ರೆಗಳನ್ನು ಸೌಂದರ್ಯ ಸೂಚಕಗಳಾಗಿ ಪರಿಗಣಿಸುತ್ತಾರೆಯೇ ವಿನಃ, ಸಾಮಾಜಿಕ ಅಥವಾ ಸಂವಹನದ ದೃಷ್ಟಿಯಲ್ಲಿ ಚಿಂತಿಸಲ್ಪಡುವುದಿಲ್ಲ. ಹಸ್ತವಿನ್ಯಾಸಗಳ ಬಗೆಗೆ ವಿವರಣೆಯಿರುವ ಪುಸ್ತಕಗಳಿವೆಯೇ ಹೊರತು ಸಂಶೋಧನಾತ್ಮಕ ಅಧ್ಯಯನಗಳು ನಡೆದಿಲ್ಲ. ಹಾಗಾಗಿ ಒಂದು ನೆಲೆಗಟ್ಟಿನಿಂದ ನೋಡಿದಾಗ `ಸಂವಹನ ಮಾಧ್ಯಮವಾಗಿ ಹಸ್ತಮುದ್ರೆಗಳು’ ಎಂಬ ವಿಷಯ ಸಂಶೋಧಕರ ಗಮನ ಸೆಳೆದಿಲ್ಲವೆಂದೇ ಹೇಳಬೇಕು. [...]

ಉಪನ್ಯಾಸ

Saturday, August 15th, 2009

ನೂಪುರ ಭ್ರಮರಿಯ ಬಳಗವು ಭರತನಾಟ್ಯ, ನೃತ್ಯಶೈಲಿಗಳಿಗೆ ಸಂಬಂಧಿಸಿದಂತೆ ಅರಿವಿನ ವಿಸ್ತರಣೆಗಾಗಿ
೧. ಭಾರತೀಯ ಶಾಸ್ತ್ರೀಯ ನೃತ್ಯಗಳು ಮತ್ತು ಜೀವನಾನುಸಂಧಾನ
೨. ಭರತನಾಟ್ಯದ ಆಂಗಿಕಾಭಿನಯ
೩. ನಾಯಿಕಾ-ನಾಯಕಾ ಭಾವ
೪. ಹಸ್ತಮುದ್ರಾ ವಿನ್ಯಾಸಗಳು ಮತ್ತು ಸಂಶೋಧನೆ
೫. ನೃತ್ಯ ಇತಿಹಾಸ ಮತ್ತು ಭರತನಾಟ್ಯದ ಪುನರುತ್ಥಾನ
೬. ನೃತ್ಯ ಗ್ರಂಥಗಳು ಮತ್ತು ಅವುಗಳೆಡೆಗೆ ಸಮಗ್ರ ದೃಷ್ಠಿ
ಮೇಲ್ಕಂಡ ವಿಚಾರಗಳನ್ನೂ ಒಳಗೊಂಡಂತೆ ವಿವಿಧ ವಿಷಯಗಳಲ್ಲಿ ಉಪನ್ಯಾಸಗಳನ್ನು ನೀಡುತ್ತಿದ್ದು, ಉಪನ್ಯಾಸ ಕಾರ್ಯಕ್ರಮಗಳಿಗಾಗಿ ಆಸಕ್ತರು ಪತ್ರಿಕೆಯ ಸಂಪಾದಕರನ್ನು ಸಂಪರ್ಕಿಸಬಹುದು. ದೂ : ೯೯೬೪೧೪೦೯೨೭

ನಿಮಗಿದೋ ಆತ್ಮೀಯ ಆಹ್ವಾನ

Friday, November 7th, 2008

ಆತ್ಮೀಯರೇ,
ನೂಪುರ ಭ್ರಮರಿಯು ಕಲೆ- ಸಂಸ್ಕೃತಿಗಳ ಪರಿಚಯಕ್ಕೆ, ಪರಸ್ಪರ ಮಿಲನಕ್ಕೆ, ಅದರಲ್ಲಿನ ನಮ್ಮ ಕರ್ತವ್ಯಕ್ಕೆ ಪೂರಕ ವಾತಾವರಣವನ್ನು ಕಲಿಸಿಕೊಡುವುದರೊಂದಿಗೆ ನಮ್ಮನ್ನು ನಾವು ಅರಿಯುವ ಪ್ರಯತ್ನದಲ್ಲಿ ಹೆಜ್ಜೆಯಿಡುತ್ತಿರುವುದು ನಿಮಗೆಲ್ಲರಿಗೂ ತಿಳಿದ ಅಂಶ. ಈ ನಿಟ್ಟಿನಲ್ಲಿ ಮತ್ತಷ್ಟು ಸದಭಿರುಚಿಯ ಪ್ರಯತ್ನಗಳಿಗೆ ನಿಮ್ಮ ಸಹಕಾರ ಬೇಕು. ಈಗಾಗಲೇ ಮಿತಿ-ಭೇಧಗಳನ್ನು ದಾಟಿ ಮುನುಗ್ಗುತ್ತಿರುವ ಲಾಭದ [...]