ಅಂಕಣಗಳು

ನೂಪುರ ಪತ್ರಿಕೆ

‘ಮುದ್ರಾರ್ಣವ’ದ ಮೋಹಕ ಮೇಘಮಲ್ಹಾರ… : ಅನಾವರಣದಲ್ಲರಳಿದ ಅಲೆಗಳು

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಕಲಾಜೀವನದಲ್ಲಿ ಅದ್ವೀತೀಯ ನೆನಪು-ಹೆಜ್ಜೆಗಳನ್ನು ಉಳಿಸಿಹೋದ,ಮಾದರಿಯೆನಿಸಿದ ಮಹಾನುಭಾವರಿಗೆ ಅಂಜಲಿ ಅರ್ಪಣೆಯಿದು.ಅವರ ನುಡಿ-ನೆನಪುಗಳೊಂದಿಗೆ ಅವರಿಗೆ ಭಾವಪೂರ್ಣ ನಮನ ಹಾಗು ಭಾಷ್ಪಾಂಜಲಿ, ಶ್ರದ್ಧಾಂಜಲಿ…

ಮರೆಯಾದ ಮಹಾಬಲ : ಕಳಚಿತು ಕೆರೆಮನೆಯ ಮತ್ತೊಂದು ಕೊಂಡಿ

Tuesday, December 15th, 2009
ಮರೆಯಾದ ಮಹಾಬಲ : ಕಳಚಿತು ಕೆರೆಮನೆಯ ಮತ್ತೊಂದು ಕೊಂಡಿ

ಕೆರೆಮನೆ ಎಂದಾಕ್ಷಣ ಮನಸ್ಸಿಗೆ ಹೊಳೆಯುವುದು ಯಕ್ಷಗಾನ. ಅಂಥ ಮನೆತನ ಮತ್ತು ಕಲೆಯ ಅನರ್ಘ್ಯ ಪರಂಪರೆಯ ಕೊಂಡಿಯಾಗಿದ್ದ ಮಹಾಬಲರ ಜ್ಯೋತಿ ಅಸ್ತಂಗತವಾಗಿದೆ.
ಇಡಗುಂಜಿಯ ದೇವರ ಸನ್ನಿಧಿಯಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸುತ್ತಿದ್ದಾಗಲೇ ಶಂಭು ಹೆಗಡೆ ಇಹಲೋಕದ ಯಾತ್ರೆ ಮುಗಿಸಿದ್ದರು. ಈ ದುಃಖ ಮಾಸುವ ಮುನ್ನವೇ ಅವರಣ್ಣ ಮಹಾಬಲರೂ ಹೊರಟು ಹೋಗಿರುವುದು ದೊಡ್ಡ ಆಘಾತ. ಕೆಲವು ತಿಂಗಳಿಂದ ವೃದ್ಧಾಪ್ಯ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮಹಾಬಲ ಹೆಗಡೆ ವಿಟ್ಲ ಸಮೀಪದ ಅಳಿಕೆಯಲ್ಲಿರುವ ಪುತ್ರ, ಪ್ರಾಧ್ಯಾಪಕ ಡಾ. ರಾಮ [...]

ಮುಕ್ತಾಯಕ್ಕೆ ಮುನ್ನ ನಿರ್ಗಮಿಸಿದ ನಾಟ್ಯತಪಸ್ವಿನಿ : ಶ್ರೀಮತಿ ಸುಂದರೀ ಸಂತಾನಂ

Saturday, October 17th, 2009
ಮುಕ್ತಾಯಕ್ಕೆ ಮುನ್ನ ನಿರ್ಗಮಿಸಿದ ನಾಟ್ಯತಪಸ್ವಿನಿ : ಶ್ರೀಮತಿ ಸುಂದರೀ ಸಂತಾನಂ

ಕಲೆ ಕೆಲವರಿಗೆ ಖಯಾಲಿ. ಕೆಲವರಿಗೆ ಗೀಳು. ಕೆಲವರಿಗೆ ಪ್ರತಿಷ್ಠೆ. ಕೆಲವರಿಗೆ ಐಡೆಂಟಿಟಿ. ಕೆಲವರಿಗೆ ಕಾಲಹರಣ. ಕೆಲವರಿಗೆ ಪ್ರದರ್ಶನ. ಕೆಲವರಿಗೆ ತಪಸ್ಸು. ಒಬ್ಬ ವ್ಯಕ್ತಿಯನ್ನು ಆವರಿಸಿಕೊಳ್ಳುವುದಕ್ಕೆ ಕಲೆಗೆ ಎಲ್ಲಾ ಚಹರೆ-ಚಪಲತೆಗಳೂ ಇರುತ್ತವೆ. ಆದರೆ ತನ್ನ ಆಯ್ಕೆ-ಆಶಯ-ಕಲಾಸ್ವರೂಪದ ಅನನ್ಯತೆಯ ಬಗ್ಗೆ ವಿಸ್ಮಯಗಳನ್ನು ಉಳಿಸಿಕೊಂಡು, ಸಾಧ್ಯತೆಯ ಆಳಕ್ಕೆ ಪಾತಾಳಗರಡಿ ಹಾಕಿ ಶೋಧಿಸುತ್ತಲೇ ಸಾಯುವ ಶ್ರದ್ಧಾವಂತರು ತಮ್ಮ ಜೀವಮಾನವಿಡೀ ಕಲಾಸೂಕ್ಷ್ಮದ ಸಿದ್ಧಿಗಾಗಿ ತಪಸ್ಸು ಮಾಡುತ್ತಲೇ ಇರುತ್ತಾರೆ. ಅಂತಹ ತಪೋಜೀವಿಕೆ ಶ್ರೀಮತೀ ಸುಂದರೀ ಸಂತಾನಂ ಅವರದು.

ಇತ್ತೀಚೆಗಷ್ಟೇ (೨೪ ಆಗಸ್ಟ್ ೨೦೦೯) ತಮ್ಮ ಜೀವನ-ನೃತ್ಯರಂಗದಲ್ಲಿ [...]

ಚೆಂಡೆ ಮದ್ದಳೆಗಳ ಹಿರಿಯಾಳು : ಚಿಪ್ಪಾರು ಕೃಷ್ಣಯ್ಯ ಬಲ್ಲಾಳ

Wednesday, June 3rd, 2009
ಚೆಂಡೆ ಮದ್ದಳೆಗಳ ಹಿರಿಯಾಳು : ಚಿಪ್ಪಾರು ಕೃಷ್ಣಯ್ಯ ಬಲ್ಲಾಳ

ಇತ್ತೀಚೆಗೆ ತಾನೇ ಯಕ್ಷರಂಗದ ದಿಗ್ಗಜ ಶಂಭು ಹೆಗಡೆ ರಂಗದಿಂದ ಗೆಜ್ಜೆ ಕಟ್ಟಿಕೊಂಡೇ ವಿದಾಯ ಹೇಳಿದ ಘಟನೆ ಇನ್ನೂ ಮಾಸಿಲ್ಲ. ಅದಾಗಲೇ ಹಿಮ್ಮೇಳದ ಕಲಾವಿದರ ಪೈಕಿ ಅದ್ವಿತೀಯರೆನಿಸಿಕೊಂಡಿದ್ದ ಮತ್ತೊಬ್ಬ ಚೇತನ ಅವರ ಹಾದಿಯನ್ನೇ ಹಿಡಿದಿದ್ದಾರೆ. ಅಂತೂ ವರುಷಾರ್ಧಕ್ಕೆ ರಂಗದ ಜೊತೆ ಅವಿನಾಭವ ಸಂಬಂಧ ಹೊಂದಿದ ಈರ್ವರು ಯಕ್ಷಗಾರುಡಿಗರನ್ನು ಕಳೆದುಕೊಂಡಂತಾಗಿದೆ. ಅವರೇ ಚೆಂಡೆ ಮದ್ದಳೆ ಮಾಂತ್ರಿಕರಾಗಿ, ಯಕ್ಷಗಾನ ಪ್ರತಿಭೆಗಳನ್ನೂ ರೂಪಿಸಿದ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು.
ಏಪ್ರಿಲ್ ೨೭, ೨೦೦೯. ಸೋಮವಾರ ಬೆಂಗಳೂರಿನ ಕೋರಮಂಗಲದಲ್ಲಿ ಯಡನೀರು ಮೇಳವು ಯಕ್ಷಗಾನ ಆಟವನ್ನು ಆಯೋಜಿಸಿತ್ತು. [...]

ಕೆರೆಮನೆ ಶಂಭು ಹೆಗಡೆ-ನುಡಿ ನಮನ ಅಂಜಲಿ

Monday, February 16th, 2009
ಕೆರೆಮನೆ ಶಂಭು ಹೆಗಡೆ-ನುಡಿ ನಮನ ಅಂಜಲಿ

ಜನನ  : ಅಕ್ಟೋಬರ್ ೬, ೧೯೩೮
ಮರಣ : ಫೆಬ್ರವರಿ ೩, ೨೦೦೯
ಕೆರೆಮನೆ ಶಿವರಾಮ ಹೆಗಡೆ ಹಾಗು ಮುಕಾಂಬೆ ದಂಪತಿಯ ಪುತ್ರ
ಪತ್ನಿ ಗೌರಿ, ಮಗ ಶಿವಾನಂದ ಹೆಗಡೆ, ಸೊಸೆ ರಾಜೇಶ್ವರಿ, ಮಗಳು ಶಾರದಾ, ಮೊಮ್ಮಕ್ಕಳು ಶ್ರೀಧರ, ಶಶಿಧರ, ಪ್ರಸನ್ನ
ದೇಶ ವಿದೇಶಗಳಲ್ಲಿ ೫೦೦೦ಕ್ಕೂ ಮಿಕ್ಕಿ ಯಕ್ಷ ಪ್ರದರ್ಶನ
ಪುರುಷ, ಸ್ತ್ರೀ ವೇಷ ಸೇರಿ ೧೭೫ ಪಾತ್ರಗಳ ನಿರ್ವಹಣೆ
ಖ್ಯಾತ ನೃತ್ಯ ಕಲಾವಿದೆ ಮಾಯಾರಾವ್ ಅವರಲ್ಲಿ ಕೊರಿಯೋಗ್ರಫಿಯ ತಂತ್ರಗಳ ಕಲಿಕೆ
ಅರ್ಧ ಚಂದ್ರಾಕೃತಿಯ ರಂಗಮಂಚವನ್ನು ಪರಿಚಯಿಸಿ ಅದರ ಮೇಲೆ ಸಧಬಿರುಚಿಯ ಪ್ರಸಂಗಗಳನ್ನು ಪ್ರದರ್ಶನ.
ಗುಣವಂತೆಯಲ್ಲಿ ತಂದೆ ಶಿವರಾಮ [...]