ಮರೆಯಾದ ಮಹಾಬಲ : ಕಳಚಿತು ಕೆರೆಮನೆಯ ಮತ್ತೊಂದು ಕೊಂಡಿ
Tuesday, December 15th, 2009
ಕೆರೆಮನೆ ಎಂದಾಕ್ಷಣ ಮನಸ್ಸಿಗೆ ಹೊಳೆಯುವುದು ಯಕ್ಷಗಾನ. ಅಂಥ ಮನೆತನ ಮತ್ತು ಕಲೆಯ ಅನರ್ಘ್ಯ ಪರಂಪರೆಯ ಕೊಂಡಿಯಾಗಿದ್ದ ಮಹಾಬಲರ ಜ್ಯೋತಿ ಅಸ್ತಂಗತವಾಗಿದೆ.
ಇಡಗುಂಜಿಯ ದೇವರ ಸನ್ನಿಧಿಯಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸುತ್ತಿದ್ದಾಗಲೇ ಶಂಭು ಹೆಗಡೆ ಇಹಲೋಕದ ಯಾತ್ರೆ ಮುಗಿಸಿದ್ದರು. ಈ ದುಃಖ ಮಾಸುವ ಮುನ್ನವೇ ಅವರಣ್ಣ ಮಹಾಬಲರೂ ಹೊರಟು ಹೋಗಿರುವುದು ದೊಡ್ಡ ಆಘಾತ. ಕೆಲವು ತಿಂಗಳಿಂದ ವೃದ್ಧಾಪ್ಯ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮಹಾಬಲ ಹೆಗಡೆ ವಿಟ್ಲ ಸಮೀಪದ ಅಳಿಕೆಯಲ್ಲಿರುವ ಪುತ್ರ, ಪ್ರಾಧ್ಯಾಪಕ ಡಾ. ರಾಮ [...]





