ಅಂಕಣಗಳು

ನೂಪುರ ಪತ್ರಿಕೆ

‘ಮುದ್ರಾರ್ಣವ’ದ ಮೋಹಕ ಮೇಘಮಲ್ಹಾರ… : ಅನಾವರಣದಲ್ಲರಳಿದ ಅಲೆಗಳು

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ನರ್ತನ ಜಗತ್ತಿನ ಒಳನೋಟಗಳನ್ನು ಕಟ್ಟಿಕೊಡುವ ಕೆಲಸದಲ್ಲಿ, ಅದರ ಆಳ ವಿಸ್ತಾರಗಳನ್ನು ಅರಿಯುವಲ್ಲಿ ಕಾರ್ಯಕ್ರಮ, ಪ್ರಯತ್ನಗಳೂ ಬಹುಮುಖ್ಯ. ಇದು ನಮ್ಮನ್ನು ಸಮಕಾಲೀನ ಜಗತ್ತಿನೊಂದಿಗೆ ಸ್ಪಂದಿಸುವಂತೆ ಮಾಡುತ್ತದೆ, ಜೊತೆಗೆ ನಮ್ಮ ನಡುವಿನ ಗುರು-ಕಲಾವಿದ-ಕಲಾಪ್ರೇಮಿಗಳನ್ನು ಅವರ ಪ್ರಯತ್ನ-ಪ್ರತಿಭೆಗಳನ್ನು ಅರಿಯಲೂ ಸಹಕಾರಿಯಾಗುತ್ತದೆ. ಇದೊಂದು ನಿಟ್ಟಿನಲ್ಲಿ ಪ್ರೋತ್ಸಾಹವೂ ಹೌದು. ಅದಕ್ಕಾಗಿಯೇ ಹಿನ್ನೋಟ-ಮುನ್ನೋಟಗಳ ಈ ‘ಒಳನೋಟ’.

ಆದ್ದರಿಂದ ಓದುಗರ ಅನಿಸಿಕೆಯಂತೆ ಪತ್ರಿಕೆ ಹೊರಬರುವ ಹೊತ್ತಿಗೆ ಆ ವರೆಗಿನ ಪ್ರತೀ ಎರಡು ತಿಂಗಳುಗಳ ಕಾರ್ಯಕ್ರಮ ಪರಿವಿಡಿಯನ್ನು ಇನ್ನು ಮುಂದೆ ನೀಡಲಾಗುವುದು. ವಿವರಗಳನ್ನು ಕಳಿಸಿ ಕೊಡುವವರು ಪತ್ರಿಕೆಯ ನಿಷ್ಠ ಓದುಗರೂ, ಸದಸ್ಯರೂ ಆಗಿದ್ದು, ಸ್ಪಂದಿಸುವವರಾಗಿದ್ದರೆ ಒಳ್ಳೆಯದು. ನಿಮ್ಮ ಸಂಸ್ಥೆಯ ಅಥವಾ ಪ್ರದೇಶದ ಕಾರ್ಯಕ್ರಮದ ವಿವರಗಳನ್ನು ಪ್ರತೀ ತಿಂಗಳ ಮೊದಲ ವಾರದ ಒಳಗಾಗಿ ಕಳಿಸಿಕೊಡಬಹುದು. ವಿಶಿಷ್ಟ ಕಾರ್ಯಕ್ರಮಗಳೆನಿಸಿದರೆ ಅದನ್ನು ದೀವಟಿಗೆ ಅಂಕಣಕ್ಕೆ ಬಳಸಿಕೊಳ್ಳಲಾಗುವುದು.

ಒಳನೋಟ-ಶಿಶಿರ ಶೃಂಗಾರ ೨೦೧೦

Monday, February 15th, 2010

೧೯ ಡಿಸೆಂಬರ್ : ಸೌರಭ ಸಂಗೀತ ನೃತ್ಯಕಲಾ ಪರಿಷತ್‌ನ ಶಿಷ್ಯೆ ಶಿಬಾನಿ ಅಶೋಕ್ ಅವರ ನೃತ್ಯಾರ್ಚನೆ. ಸ್ಥಳ : ಕಾವೇರಿ ಕಲಾಕ್ಷೇತ್ರ, ಮಂಗಳೂರು.
೨೫ ಡಿಸೆಂಬರ್ : ಮಂಗಳೂರಿನ ಭರತ ನೃತ್ಯ ಸಭಾ ಆಯೋಜಿಸುವ ಡಾ. ವಸುಂಧರಾ ದೊರೆಸ್ವಾಮಿ ಅಭಿನಯಿಸುವ ‘ಪಾಂಚಾಲಿ’-ಏಕವ್ಯಕ್ತಿ ಯಕ್ಷಭರತ ಸಂಗಮ. ಸ್ಥಳ : ಪುರಭವನ, ಮಂಗಳೂರು.
೨೫ ಡಿಸೆಂಬರ್ : ಮೈಸೂರಿನ ಭೂಷಣ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಆಂಡ್ ವಿಶುವಲ್ ಪ್ರೆಸೆಂಟೆಶನ್‌ನ ಗುರುಗಳಾದ ಭೂಷಣ್ ಮತ್ತು ಅಂಜನಾ ಭೂಷಣ್ ಅವರ ನೃತ್ಯ [...]

ಒಳನೋಟ- 2009 -ನವೆಂಬರ್-ಡಿಸೆಂಬರ್

Tuesday, December 15th, 2009

ನವಂಬರ್ ೯ : ಶ್ರೀದೇವೀ ನೃತ್ಯ ಕೇಂದ್ರ, ಮಂಗಳೂರು ಪ್ರಾಯೋಜಿಸುವ ನೃತ್ಯೋತ್ಸವ. ಖ್ಯಾತ ಚಲನಚಿತ್ರ ನಟಿ, ನೃತ್ಯ ಕಲಾವಿದೆ ವೈಜಯಂತಿ ಮಾಲಾ ಬಾಲಿ ಅವರಿಗೆ ‘ನಾಟ್ಯಕಲಾ ತಪಸ್ವಿನೀ’ ಬಿರುದು ಪ್ರದಾನ. ದಂಡಾಯುಧ ಪಾಣಿ ಪಿಳ್ಳೈ ಸಂಯೋಜನೆಯ ‘ಚಿತ್ರಾಂಬಲ ಕೊರವಂಜಿ’ ನೃತ್ಯ ನಾಟಕ ಪ್ರದರ್ಶನ. ಸ್ಥಳ : ಪುರಭವನ, ಮಂಗಳೂರು.
ನವಂಬರ್ ೨ ಮತ್ತು ೩ : ಪ್ರಥಮ ಬಾರಿಗೆ ಕರ್ನಾಟಕದ ಪ್ರತಿಭಾವಂತ ಹನ್ನೊಂದು ಯುವ ನೃತ್ಯಕಲಾವಿದರ ಪ್ರತ್ಯೇಕ ನೃತ್ಯ ಪ್ರದರ್ಶನ. ಸ್ಥಳ : [...]

‘ಮುದ್ರಾರ್ಣವ’

Thursday, November 19th, 2009
‘ಮುದ್ರಾರ್ಣವ’

ಆತ್ಮೀಯರೇ,
ಸಂವಹನ ಮಾಧ್ಯಮವಾಗಿ, ಶಾಸ್ತ್ರೀಯ ಪರಿಭಾಷೆಯಾಗಿ ಹಸ್ತಮುದ್ರೆಗಳ ಪಾತ್ರ ಹಿರಿದಿದ್ದರೂ, ಇವುಗಳ ಕುರಿತಂತೆ ನಡೆದ ಅಧ್ಯಯನಗಳು ಬಹಳ ವಿರಳ. ಅದರಲ್ಲೂ ಸಂಹವನ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಕುರಿತಂತೆ ಆಳವಾದ ಪರಿಶೋಧನೆಗಳು ಜರುಗಿಲ್ಲ. ಸಾಮಾನ್ಯವಾಗಿ ಈ ಮುದ್ರೆಗಳನ್ನು ಸೌಂದರ್ಯ ಸೂಚಕಗಳಾಗಿ ಪರಿಗಣಿಸುತ್ತಾರೆಯೇ ವಿನಃ, ಸಾಮಾಜಿಕ ಅಥವಾ ಸಂವಹನದ ದೃಷ್ಟಿಯಲ್ಲಿ ಚಿಂತಿಸಲ್ಪಡುವುದಿಲ್ಲ. ಹಸ್ತವಿನ್ಯಾಸಗಳ ಬಗೆಗೆ ವಿವರಣೆಯಿರುವ ಪುಸ್ತಕಗಳಿವೆಯೇ ಹೊರತು ಸಂಶೋಧನಾತ್ಮಕ ಅಧ್ಯಯನಗಳು ನಡೆದಿಲ್ಲ. ಹಾಗಾಗಿ ಒಂದು ನೆಲೆಗಟ್ಟಿನಿಂದ ನೋಡಿದಾಗ `ಸಂವಹನ ಮಾಧ್ಯಮವಾಗಿ ಹಸ್ತಮುದ್ರೆಗಳು’ ಎಂಬ ವಿಷಯ ಸಂಶೋಧಕರ ಗಮನ ಸೆಳೆದಿಲ್ಲವೆಂದೇ ಹೇಳಬೇಕು. [...]

ಶರದ್ ಸಂಭ್ರಮದ ಒಳನೋಟ-09

Saturday, October 10th, 2009

ಆಗಸ್ಟ್ ೩೦ : ೧. ಸಾಧನಾ ಸಂಗಮ ಟ್ರಸ್ಟ್‌ನ ಗುರು ವಿದುಷಿ ಜ್ಯೋತಿ ಪಟ್ಟಾಭಿರಾಮ್ ಅವರ ಶಿಷ್ಯೆ ತನುಜಾ ಅವರ ‘ನೃತ್ಯ ನೀರಾಜನ’ ಭರತನಾಟ್ಯ ರಂಗಪ್ರವೇಶ. ಸ್ಥಳ : ಭಾರತೀಯ ವಿದ್ಯಾಭವನ.

೨. ಶ್ರೀಧರ್ ಮತ್ತು ಅನುರಾಧಾ ಶ್ರೀಧರ್ ಅವರಿಂದ ‘ಮಹಾವೀರ ಕರ್ಣ’ ರೂಪಕ. ಸ್ಥಳ : ನಾರದಾ ಗಾನಸಭಾ, ಚೆನ್ನೈ.

ಸೆಪ್ಟೆಂಬರ್ ೦೯ : ಮೈಸೂರಿನ ನಾಟ್ಯಾಚಾರ್ಯ ಪ್ರೊ. ಕೆ. ರಾಮಮೂರ್ತಿ ರಾವ್ ಅವರ ಕಲಾಚಿಂತನ ಹಾಗು ಮಾಸದ ಮಾತು ಪುಸ್ತಕಗಳ ಅನಾವರಣ. ಸ್ಥಳ : ಸಂಗೀತ [...]

ಒಳನೋಟ- ಜುಲೈಆಗಸ್ಟ್- ವರ್ಷ ವೈಭವ

Thursday, August 13th, 2009

೭ ಜೂನ್: ೧. ಅಮೇರಿಕಾದ ನ್ಯೂ ಜೆರ್ಸಿಯಲ್ಲಿರುವ ಬ್ರಿಡ್ಜ್‌ವಾಟರ್ ಶ್ರೀ ವೆಂಕಟೇಶ್ವರ ಸನ್ನಿಧಿಯ ಸಭಾಂಗಣದಲ್ಲಿ ವಿದುಷಿ ಭ್ರಮರಿ ಶಿವಪ್ರಕಾಶ್ ಮತ್ತು ಶಿಷ್ಯ ವೃಂದದಿಂದ ಶಾಸ್ತ್ರೀಯ ನೃತ್ಯಪದ್ಧತಿಯಲ್ಲಿ ಕಾಣಸಿಗುವ ನೃತ್ತ ನೃತ್ಯ ನಾಟ್ಯ ವೈವಿಧ್ಯದ Dances and a Dance Drama” ಸಂಯೋಜನೆಯ ನಾದ ನೃತ್ಯ ದಿನ.
೨. ನೃತ್ಯಗುರು ಡಿ. ಕೇಶವ ನೇತೃತ್ವದ ಕಲಾಶ್ರೀ ಸಂಸ್ಥೆಯ ವಿದ್ಯಾರ್ಥಿಗಳಿಂದ ಸ್ವಿರ್ಟ್ಜಲ್ಯಾಂಡ್‌ನ ಬಾಸೆಲ್‌ನಲ್ಲಿ ನೃತ್ಯ ಪ್ರದರ್ಶನ.
* ೧೨ ಜೂನ್: ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ [...]

ಒಳನೋಟ ಮೇ-ಜೂನ್ 2009

Wednesday, June 3rd, 2009

ನೂಪುರ ಭ್ರಮರಿ ಬಳಗದ ಹಿತೈಷಿ ಶ್ರೀ ರಾಮಚಂದ್ರಾಪುರ ಮೇಳದ ಹಾಸ್ಯ ಪಾತ್ರ ಕಲಾವಿದ, ಸೀತಾರಾಮ್ ಕುಮಾರ್ ಕಟೀಲ್ ಅವರಿಗೆ ಈ ಸಾಲಿನ ಪ್ರತಿಷ್ಠಿತ ಆಯಭಟ ಪ್ರಶಸ್ತಿ ದೊರಕಿದೆ. ಪತ್ರಿಕೆಯ ಬಳಗ ಮತ್ತು ಓದುಗರ ವತಿಯಿಂದ ಅವರಿಗೆ ಹಾರ್ದಿಕ ಅಭಿನಂದನೆಗಳು.
ಏಪ್ರಿಲ್ ೧೩-೧೬: ಮಂಗಳೂರಿನ ಪುರಭವನದಲ್ಲಿ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಮತ್ತು ನಿಟ್ಟೆ ಎಜುಕೇಶನ್ ಇನ್ಸ್ಟಿಟ್ಯೂಟ್ ಸಹಭಾಗಿತ್ವದಲ್ಲಿ ೪ ದಿನಗಳ ಕಾಲ ಸಂಸ್ಕೃತಿ ಸಿಂಚನ ಉತ್ಸವ ನಡೆಯಿತು. ಈ ಸಂದರ್ಭ ಹಲವು ಪ್ರತಿಷ್ಠಿತ ಕಲಾವಿದರಿಂದ ಸಂಗೀತ, ಜುಗಲ್‌ಬಂದಿ, ಭರತನಾಟ್ಯ, ತೈಯ್ಯಂ, [...]

ಮಾರ್ಚ್-ಏಪ್ರಿಲ್ 2009

Sunday, March 1st, 2009

ಮಾರ್ಚ್ ೩ – ಸನಾತನ ನಾಟ್ಯಾಲಯದಲ್ಲಿ ಮಂಟಪ ಪ್ರಭಾಕರ ಉಪಾಧ್ಯಾಯರ ಏಕವ್ಯಕ್ತಿ ಯಕ್ಷಗಾನ ‘ಜಾನಕೀ ಜೀವನ’ ; ಜೂನ್-ಜುಲೈ ೨೦೦೯ ತಿಂಗಳಿನಲ್ಲಿ ಮಂಗಳೂರಿನ ಕಲಾಸಕ್ತರ ಮನೆಗಳಲ್ಲಿ ನಡುಮನೆ ಏಕವ್ಯಕ್ತಿ ಯಕ್ಷಗಾನ ಸರಣಿ ಕಾರ್ಯಕ್ರಮ ನಡೆಯಲಿದೆ. ಅಪೇಕ್ಷಿತರು ಸನಾತನ ನಾಟ್ಯಾಲಯದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಯವರನ್ನು ಸಂಪರ್ಕಿಸಬಹುದು.

ಮಾರ್ಚ್ ೧ರಿಂದ ೧೧ : ಕೇರಳ ರಾಜ್ಯದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ರಾಷ್ಟ್ರೀಯ ನಾಟಕ-ರಂಗೋತ್ಸವ ತಿರುವನಂತಪುರದಲ್ಲಿ

ಮಾರ್ಚ್ ೩ :  ವಿಶ್ವಪ್ರಸಿದ್ಧ ಖಜುರಾಹೋ ಉತ್ಸವದಲ್ಲಿ ವೈಜಯಂತಿ [...]

ಒಳನೋಟ : ಜನವರಿ-ಫೆಬ್ರವರಿ 2009

Monday, February 16th, 2009

ಜನವರಿ-ಫೆಬ್ರವರಿ

* ದಿನಾಂಕ ೨೯ ಡಿಸೆಂಬರ್- ದರ್ಶಿನಿ ಮಂಜುನಾಥ್ ಅವರ `ನೃತ್ಯದಿಶಾ’ ಸಂಸ್ಥೆಯ ಉದ್ಘಾಟನೆ ಮತ್ತು ಸಂಸ್ಥೆಯ ವಿದ್ಯಾರ್ಥಿ ಗಳಿಂದ ‘ನೃತ್ಯ ವಂದನ’ ಕಾರ್ಯಕ್ರಮ ಗುರು ಪದ್ಮಿನಿ ರಾವ್ ಅವರಿಗೆ ಅರ್ಪಣೆ- ಬೆಂಗಳೂರಿನ ನಯನಾ ಸಭಾಂಗಣದಲ್ಲಿ.

* ೭ ಜನವರಿ- ಚೆನ್ನೈಯ ಸಂಗೀತ ಅಕಾಡೆಮಿಯಲ್ಲಿ,  ೧೫ ಜನವರಿಯಂದು ಬೆಂಗಳೂರಿನ ಕಿಂಕಿಣಿ ನೃತ್ಯೋತ್ಸವದಲ್ಲಿ, ೩೧ ಜನವರಿಯಂದು ಬೆಂಗಳೂರಿನ ದೇವಗಿರಿ ಶ್ರೀನಿವಾಸ ದೇವಸ್ಥಾನದಲ್ಲಿ ಇತ್ತೀಚೆಗಷ್ಟೇ ಚೆನ್ನೈಯ ಶ್ರೀಕೃಷ್ಣ ಗಾನಸಭಾದ ನೃತ್ಯೋತ್ಸವದಲ್ಲಿ ಪುರಸ್ಕೃತ ರಾದ ಖ್ಯಾತ ನೃತ್ಯ ದಂಪತಿ ಶ್ರೀಧರ್ ಮತ್ತು [...]