ಅಂಕಣಗಳು

ನೂಪುರ ಪತ್ರಿಕೆ

ಆರನೇ ವರ್ಷೋತ್ಸವದ ವಿಶೇಷ ಸಂಚಿಕೆ : ಮಾಘ ಫಾಲ್ಗುಣ (ಜನವರಿ -ಫೆಬ್ರವರಿ ೨೦೧೨) -ಶಿಶಿರ ಶೃಂಗಾರ

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ನರ್ತನ ಜಗತ್ತಿನ ಒಳನೋಟಗಳನ್ನು ಕಟ್ಟಿಕೊಡುವ ಕೆಲಸದಲ್ಲಿ, ಅದರ ಆಳ ವಿಸ್ತಾರಗಳನ್ನು ಅರಿಯುವಲ್ಲಿ ಕಾರ್ಯಕ್ರಮ, ಪ್ರಯತ್ನಗಳೂ ಬಹುಮುಖ್ಯ. ಇದು ನಮ್ಮನ್ನು ಸಮಕಾಲೀನ ಜಗತ್ತಿನೊಂದಿಗೆ ಸ್ಪಂದಿಸುವಂತೆ ಮಾಡುತ್ತದೆ, ಜೊತೆಗೆ ನಮ್ಮ ನಡುವಿನ ಗುರು-ಕಲಾವಿದ-ಕಲಾಪ್ರೇಮಿಗಳನ್ನು ಅವರ ಪ್ರಯತ್ನ-ಪ್ರತಿಭೆಗಳನ್ನು ಅರಿಯಲೂ ಸಹಕಾರಿಯಾಗುತ್ತದೆ. ಇದೊಂದು ನಿಟ್ಟಿನಲ್ಲಿ ಪ್ರೋತ್ಸಾಹವೂ ಹೌದು. ಅದಕ್ಕಾಗಿಯೇ ಹಿನ್ನೋಟ-ಮುನ್ನೋಟಗಳ ಈ ‘ಒಳನೋಟ’.

ಆದ್ದರಿಂದ ಓದುಗರ ಅನಿಸಿಕೆಯಂತೆ ಪತ್ರಿಕೆ ಹೊರಬರುವ ಹೊತ್ತಿಗೆ ಆ ವರೆಗಿನ ಪ್ರತೀ ಎರಡು ತಿಂಗಳುಗಳ ಕಾರ್ಯಕ್ರಮ ಪರಿವಿಡಿಯನ್ನು ಇನ್ನು ಮುಂದೆ ನೀಡಲಾಗುವುದು. ವಿವರಗಳನ್ನು ಕಳಿಸಿ ಕೊಡುವವರು ಪತ್ರಿಕೆಯ ನಿಷ್ಠ ಓದುಗರೂ, ಸದಸ್ಯರೂ ಆಗಿದ್ದು, ಸ್ಪಂದಿಸುವವರಾಗಿದ್ದರೆ ಒಳ್ಳೆಯದು. ನಿಮ್ಮ ಸಂಸ್ಥೆಯ ಅಥವಾ ಪ್ರದೇಶದ ಕಾರ್ಯಕ್ರಮದ ವಿವರಗಳನ್ನು ಪ್ರತೀ ತಿಂಗಳ ಮೊದಲ ವಾರದ ಒಳಗಾಗಿ ಕಳಿಸಿಕೊಡಬಹುದು. ವಿಶಿಷ್ಟ ಕಾರ್ಯಕ್ರಮಗಳೆನಿಸಿದರೆ ಅದನ್ನು ದೀವಟಿಗೆ ಅಂಕಣಕ್ಕೆ ಬಳಸಿಕೊಳ್ಳಲಾಗುವುದು.

ಒಳನೋಟ ಮೇ-ಜೂನ್ 2009

Wednesday, June 3rd, 2009

ನೂಪುರ ಭ್ರಮರಿ ಬಳಗದ ಹಿತೈಷಿ ಶ್ರೀ ರಾಮಚಂದ್ರಾಪುರ ಮೇಳದ ಹಾಸ್ಯ ಪಾತ್ರ ಕಲಾವಿದ, ಸೀತಾರಾಮ್ ಕುಮಾರ್ ಕಟೀಲ್ ಅವರಿಗೆ ಈ ಸಾಲಿನ ಪ್ರತಿಷ್ಠಿತ ಆಯಭಟ ಪ್ರಶಸ್ತಿ ದೊರಕಿದೆ. ಪತ್ರಿಕೆಯ ಬಳಗ ಮತ್ತು ಓದುಗರ ವತಿಯಿಂದ ಅವರಿಗೆ ಹಾರ್ದಿಕ ಅಭಿನಂದನೆಗಳು.
ಏಪ್ರಿಲ್ ೧೩-೧೬: ಮಂಗಳೂರಿನ ಪುರಭವನದಲ್ಲಿ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಮತ್ತು ನಿಟ್ಟೆ ಎಜುಕೇಶನ್ ಇನ್ಸ್ಟಿಟ್ಯೂಟ್ ಸಹಭಾಗಿತ್ವದಲ್ಲಿ ೪ ದಿನಗಳ ಕಾಲ ಸಂಸ್ಕೃತಿ ಸಿಂಚನ ಉತ್ಸವ ನಡೆಯಿತು. ಈ ಸಂದರ್ಭ ಹಲವು ಪ್ರತಿಷ್ಠಿತ ಕಲಾವಿದರಿಂದ ಸಂಗೀತ, ಜುಗಲ್‌ಬಂದಿ, ಭರತನಾಟ್ಯ, ತೈಯ್ಯಂ, [...]

ಮಾರ್ಚ್-ಏಪ್ರಿಲ್ 2009

Sunday, March 1st, 2009

ಮಾರ್ಚ್ ೩ – ಸನಾತನ ನಾಟ್ಯಾಲಯದಲ್ಲಿ ಮಂಟಪ ಪ್ರಭಾಕರ ಉಪಾಧ್ಯಾಯರ ಏಕವ್ಯಕ್ತಿ ಯಕ್ಷಗಾನ ‘ಜಾನಕೀ ಜೀವನ’ ; ಜೂನ್-ಜುಲೈ ೨೦೦೯ ತಿಂಗಳಿನಲ್ಲಿ ಮಂಗಳೂರಿನ ಕಲಾಸಕ್ತರ ಮನೆಗಳಲ್ಲಿ ನಡುಮನೆ ಏಕವ್ಯಕ್ತಿ ಯಕ್ಷಗಾನ ಸರಣಿ ಕಾರ್ಯಕ್ರಮ ನಡೆಯಲಿದೆ. ಅಪೇಕ್ಷಿತರು ಸನಾತನ ನಾಟ್ಯಾಲಯದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಯವರನ್ನು ಸಂಪರ್ಕಿಸಬಹುದು.

ಮಾರ್ಚ್ ೧ರಿಂದ ೧೧ : ಕೇರಳ ರಾಜ್ಯದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ರಾಷ್ಟ್ರೀಯ ನಾಟಕ-ರಂಗೋತ್ಸವ ತಿರುವನಂತಪುರದಲ್ಲಿ

ಮಾರ್ಚ್ ೩ :  ವಿಶ್ವಪ್ರಸಿದ್ಧ ಖಜುರಾಹೋ ಉತ್ಸವದಲ್ಲಿ ವೈಜಯಂತಿ [...]

ಒಳನೋಟ : ಜನವರಿ-ಫೆಬ್ರವರಿ 2009

Monday, February 16th, 2009

ಜನವರಿ-ಫೆಬ್ರವರಿ

* ದಿನಾಂಕ ೨೯ ಡಿಸೆಂಬರ್- ದರ್ಶಿನಿ ಮಂಜುನಾಥ್ ಅವರ `ನೃತ್ಯದಿಶಾ’ ಸಂಸ್ಥೆಯ ಉದ್ಘಾಟನೆ ಮತ್ತು ಸಂಸ್ಥೆಯ ವಿದ್ಯಾರ್ಥಿ ಗಳಿಂದ ‘ನೃತ್ಯ ವಂದನ’ ಕಾರ್ಯಕ್ರಮ ಗುರು ಪದ್ಮಿನಿ ರಾವ್ ಅವರಿಗೆ ಅರ್ಪಣೆ- ಬೆಂಗಳೂರಿನ ನಯನಾ ಸಭಾಂಗಣದಲ್ಲಿ.

* ೭ ಜನವರಿ- ಚೆನ್ನೈಯ ಸಂಗೀತ ಅಕಾಡೆಮಿಯಲ್ಲಿ,  ೧೫ ಜನವರಿಯಂದು ಬೆಂಗಳೂರಿನ ಕಿಂಕಿಣಿ ನೃತ್ಯೋತ್ಸವದಲ್ಲಿ, ೩೧ ಜನವರಿಯಂದು ಬೆಂಗಳೂರಿನ ದೇವಗಿರಿ ಶ್ರೀನಿವಾಸ ದೇವಸ್ಥಾನದಲ್ಲಿ ಇತ್ತೀಚೆಗಷ್ಟೇ ಚೆನ್ನೈಯ ಶ್ರೀಕೃಷ್ಣ ಗಾನಸಭಾದ ನೃತ್ಯೋತ್ಸವದಲ್ಲಿ ಪುರಸ್ಕೃತ ರಾದ ಖ್ಯಾತ ನೃತ್ಯ ದಂಪತಿ ಶ್ರೀಧರ್ ಮತ್ತು [...]