ಅಂಕಣಗಳು

ನೂಪುರ ಪತ್ರಿಕೆ

‘ಮುದ್ರಾರ್ಣವ’ದ ಮೋಹಕ ಮೇಘಮಲ್ಹಾರ… : ಅನಾವರಣದಲ್ಲರಳಿದ ಅಲೆಗಳು

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ನೂಪುರದ ದನಿಗೆ ಕಿವಿಯಾಗುವವರಲ್ಲಿ ಯುವ ಪತ್ರಕರ್ತ, ಭರವಸೆಯ ಬರಹಗಾರ ದಕ್ಷಿಣ ಕನ್ನಡದ ರಾಕೇಶ್ ಕುಮಾರ್ ಕಮ್ಮಜೆ ಅವರೂ ಒಬ್ಬರು. ಕಲೆ ಅದರಲ್ಲೂ ಯಕ್ಷಗಾನದ ಅಚ್ಚರಿಯ ಕಥೆಗಳಿಗೆ ಸಾಕ್ಷಿಯಾಗಬಲ್ಲ ಕಲಾಪ್ರೇಮಿ. ಈ ಬಾರಿಯ ಸಂಚಿಕೆ(ಸಂಚಿಕೆ ೨, ಸಂಪುಟ ೩)ಯಿಂದ ರಂಗಸ್ಥಳದ ಅಚ್ಚರಿಯ ಕಥೆಗಳನ್ನು ಹಂಚಿಕೊಳ್ಳಲಿದ್ದಾರೆ ತಮ್ಮ ರಂಗಸ್ಥಳದಲ್ಲಿ. ಓವರ್ ಟು ರಾಕೇಶ್…!

ರಷ್ಯಾ ಅಧ್ಯಕ್ಷನ ಮುಂದೆ ಕುಣಿದವರು ನಮ್ಮ ವಿಠಲ ಶಾಸ್ತ್ರಿಗಳು!

Monday, February 15th, 2010

‘ಕುರಿಯ ವಿಠಲ ಶಾಸ್ತ್ರಿ’ – ತೆಂಕುತಿಟ್ಟಿನ ಯಕ್ಷಲೋಕದ ಗತ‌ಇತಿಹಾಸ ಗೊತ್ತಿರುವ ಅಷ್ಟೂ ಮಂದಿಗೆ ಈ ಹೆಸರು ಕೇಳಿದಾಗ ರೋಮಾಂಚನವಾಗದಿರದು. ಸಹಸ್ರ ಸಹಸ್ರ ಯಕ್ಷಕಲಾಭಿಮಾನಿಗಳ ಪಾಲಿಗೆ ಅದ್ಭುತ, ಅನನ್ಯ, ಅಬ್ಬರದ ಅಮೋಘ ರಸರಾತ್ರಿಗಳನ್ನು ಉಣಿಸಿದ ಮಹಾನ್ ಕಲಾವಿದ ಅವರು. ವೈಭವೋಪೇತವಾದ ನಡುರಾತ್ರಿಗಳಿಗೆ ಕಾರಣೀಭೂತನಾದ ದೈತ್ಯ ಪ್ರತಿಭೆ! ‘ವೇಷ ಅಂದರೆ ಇದು’ ಅಂತ ಮಹಾಮಹಾ ಯಕ್ಷವಿಮರ್ಶಕರಿಂದ ಹೇಳಿಸಿಕೊಂಡ ವಿಶಿಷ್ಟ ವ್ಯಕ್ತಿ. ಇವರು ಹುಟ್ಟಿದ್ದೇ ಯಕ್ಷಗಾನಕ್ಕಾಗಿ ಅನ್ನುವಂತೆ ರಂಗಸ್ಥಳದಲ್ಲಿ ಮಿಂಚಿದವರು. ಈ ತಲೆಮಾರಿನ ಮಂದಿಗೆ [...]

ಎಚ್ಚರ ತಪ್ಪಿದರೆ ರಾವಣನೂ ಹಾಸ್ಯಗಾರನಾಗುತ್ತಾನೆ!

Tuesday, December 15th, 2009

ಯಕ್ಷಗಾನ ಕರಾವಳಿಯ ಜನರ ಮುಖ್ಯ ಮನರಂಜನೆಗಳಲ್ಲೊಂದು. ಈಗೀಗ ಬಹುಮಾಧ್ಯಮಗಳ ಎಡೆಬಿಡದ ದಾಳಿಗಳಿಂದ ಯಕ್ಷಗಾನ ಸೊರಗುತ್ತಿರುವಂತೆ ಕಂಡರೂ ಅದರ ರುಚಿ ಇನ್ನೂ ಬತ್ತಿಹೋಗಿಲ್ಲ. ಈಗಲೂ ಯಕ್ಷಗಾನ ಈ ಹಿಂದಿನಷ್ಟೇ ಚಾಲ್ತಿಯಲ್ಲಿದೆ. ಆದರೆ ಒಂದೇ ಒಂದು ಬೇಸರವೆಂದರೆ ಈಗ ಹಿಂದಿನಂತೆ ತಂಡೋಪಾದಿಯಲ್ಲಿ ಹೊಸ ಹೊಸ ಕಲಾವಿದರು ಹುಟ್ಟಿಕೊಳ್ಳುತ್ತಿಲ್ಲ ಅನ್ನುವುದು.
ಒಂದೆರಡು ದಶಕಗಳ ಹಿಂದಕ್ಕೆ ಪ್ರಯಾಣಿಸಿ ಸುತ್ತ ಒಮ್ಮೆ ಕಣ್ಣು ಹಾಯಿಸಿದರೆ ಕರಾವಳಿಯ ಮನೆ ಮನೆಗಳಲ್ಲೂ ನೂತನ ಯಕ್ಷಗಾನ ಕಲಾವಿದನೊಬ್ಬನನ್ನು ಕಾಣಬಹುದಿತ್ತು. ಪೂರ್ಣ ಪ್ರಮಾಣದಲ್ಲಿ [...]

ಚಿಟ್ಟಾಣಿ ಅಭಿನಯ ನೋಡಿ ಅದ್ಭುತ ಎಂದಿದ್ದರು ಡಾ.ರಾಜ್ !

Saturday, October 17th, 2009
ಚಿಟ್ಟಾಣಿ  ಅಭಿನಯ ನೋಡಿ ಅದ್ಭುತ ಎಂದಿದ್ದರು ಡಾ.ರಾಜ್ !

ಯಾವುದಾದರೂ ಒಂದು ಕ್ಷೇತ್ರದಲ್ಲಿ ಅಗಾಧವಾದದ್ದನ್ನು ಸಾಧಿಸಿದವನು ತನ್ನ ಬಾಲ್ಯದಲ್ಲೇ ಆ ಕುರಿತಾದ ಕುರುಹುಗಳನ್ನು  ನೀಡಿರುತ್ತಾನೆ. ಬೇರೆ ಮಕ್ಕಳಿಗೆ ಕ್ರಿಕೆಟ್  ಎಂದರೇನೆಂದೇ ಅರ್ಥವಾಗದ ತೀರಾ ಎಳೆ ವಯಸ್ಸಿನಲ್ಲಿ  ಸಚಿನ್ ತೆಂಡೂಲ್ಕರ್ ಬ್ಯಾಟ್ ಹಿಡಿದು ನಿಂತಿರುವ ಫೋಟೋವನ್ನು ನೀವು ಪತ್ರಿಕೆಗಳಲ್ಲಿ ನೋಡಿರಬಹುದು. ಪ್ರಾಯಶಃ ಭವಿಷ್ಯದ ಇತಿಹಾಸಕ್ಕೆ ಅದು ಮುನ್ನುಡಿಯಿರಬೇಕು! ಕಳೆದ ಬಾರಿ ಇದೇ ‘ರಂಗಸ್ಥಳ’ದಲ್ಲಿ ಕಾಣಿಸಿಕೊಂಡ ಚಿಟ್ಟಾಣಿ ರಾಮಚಂದ್ರ ಹೆಗಡೆಯೂ ಹಾಗೆಯೇ, ತಾನು ಒಂದನೇ ತರಗತಿಗೆ ಹೋಗುತ್ತಿದ್ದಾಗಲೇ ಯಕ್ಷಗಾನದ ಕುರಿತಾಗಿ ಕುತೂಹಲ ಇಟ್ಟುಕೊಂಡವರು! ಮಾತ್ರವಲ್ಲ, ಮನೆಯಲ್ಲಿ ಶಾಲೆಗೆಂದು ಕಳುಹಿಸಿದರೆ ಗುಡ್ಡದಲ್ಲಿ [...]

ಭಸ್ಮಾಸುರನಿಗೊಂದು ರೂಪ ಕೊಟ್ಟವರೇ ಚಿಟ್ಟಾಣಿ!

Saturday, August 15th, 2009
ಭಸ್ಮಾಸುರನಿಗೊಂದು ರೂಪ ಕೊಟ್ಟವರೇ ಚಿಟ್ಟಾಣಿ!

ರಂಗದಲ್ಲಿ ಇದ್ದಷ್ಟು ಹೊತ್ತೂ ಪ್ರೇಕ್ಷಕರ ಎರಡೂ ಕಣ್ಣುಗಳನ್ನು ಸೆಳೆಯುವವನೊಬ್ಬನಿದ್ದರೆ ಅದು ಚಿಟ್ಟಾಣಿ ರಾಮಚಂದ್ರ ಹೆಗಡೆ ಮಾತ್ರ ಅಂತ ಹೇಳಿದವರು ರಾಷ್ಟ್ರಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ ಕೆರೆಮನೆ ಶಿವರಾಮ ಹೆಗಡೆ. ಅದು ನಿಜ ಅನ್ನುವುದು ಚಿಟ್ಟಾಣಿಯವರ ಯಕ್ಷಗಾನವನ್ನು ನೋಡಿದ ಯಾರಿಗೇ ಆದರೂ ಅನಿಸಿಬಿಡುತ್ತದೆ. ಚಿಟ್ಟಾಣಿಯವರ ವಯಸ್ಸು ಎಪ್ಪತ್ತಾರಕ್ಕೆ ಬಂದು ನಿಂತಿದ್ದರೂ ರಂಗದ ಮೇಲೆ ಇನ್ನೂ ಇಪ್ಪತ್ತಾರೇ!
ಪ್ರಾಯಶಃ ಈ ಕುರಿಯ ವಿಠಲ ಶಾಸ್ತ್ರಿ, ಶೇಣಿ, ಕಾಳಿಂಗ ನಾವಡ, ಚಿಟ್ಟಾಣಿ,… ಇಂತಹವರೆಲ್ಲಾ ಶತಮಾನಕ್ಕೊಬ್ಬರು [...]

ಶೇಣಿಯೆಂದರೆ ವಾಲಿಯ ಹಾಗೆ!

Monday, June 8th, 2009
ಶೇಣಿಯೆಂದರೆ ವಾಲಿಯ ಹಾಗೆ!

ಯಕ್ಷರಂಗದಲ್ಲಿ ಒಂದು ಸಂಚಲನ ಮೂಡಿಸುವ ಹೆಸರೆಂದರೆ ಅದು ಶೇಣಿ ಗೋಪಾಲಕೃಷ್ಣ ಭಟ್. ಶೇಣಿಯವರು ರಂಗದಲ್ಲಿದ್ದ ಕಾಲವನ್ನು ‘ಶೇಣಿ ಯುಗ’ವೆಂದೇ ಕರೆಯುವುದಿದೆ. ಆಗೆಲ್ಲಾ ಜನ ತಾಳಮದ್ದಳೆಗಳಿಗೆ ಹೋಗುತ್ತಿದ್ದುದೇ ಶೇಣಿಯವರ ಅರ್ಥವೈಭವಕ್ಕಾಗಿ. ಅಷ್ಟರಮಟ್ಟಿಗೆ ಶೇಣಿ ಯಕ್ಷರಂಗವನ್ನು ಆವರಿಸಿದ್ದರು. ಕಲಾಸಕ್ತರು ಅವರ ಅರ್ಥ ಕೇಳುವುದಕ್ಕಿಂತ ಹೆಚ್ಚಾಗಿ ಅನುಭವಿಸುತ್ತಿದ್ದರೆಂದರೆ ತಪ್ಪಲ್ಲ.
ಶೇಣಿಯವರ ವಿಶೇಷವೆಂದರೆ ಅವರ ಅರ್ಥಗಳಲ್ಲಿ ಒಂದು ಹೊಸ ನೋಟ ಜನರಿಗೆ ಸಿಗುತ್ತಿತ್ತು. ಒಂದು ಪಾತ್ರಕ್ಕೆ ಅದರಲ್ಲೂ ಮುಖ್ಯವಾಗಿ ಖಳಪಾತ್ರಕ್ಕೆ ಹೀಗೂ ಒಂದು ಆಯಾಮ ಕಲ್ಪಿಸಬಹುದು ಅಥವಾ ಈ ರೀತಿಯೂ ಆ ಪಾತ್ರವನ್ನು ಚಿತ್ರಿಸಬಹುದು [...]

ಕೆಂಡ ತಂದಿಟ್ಟರೂ ‘ಕೆಂಡ’ವಾಗದ ನರಸಿಂಹ ಭಟ್

Wednesday, April 15th, 2009

ಇಂದಿನ ತಲೆಮಾರಿನ ಯಕ್ಷಗಾನ ಆಸಕ್ತರಿಗೆ ನೆಡ್ಲೆ ನರಸಿಂಹ ಭಟ್ ಅನ್ನುವ ಅದ್ಭುತ ಚೆಂಡೆವಾದಕನ ಬಗ್ಗೆ ಹೆಚ್ಚಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಮನೆಯಲ್ಲಿ ಅಪ್ಪನೋ ಅಜ್ಜನೋ ಯಕ್ಷಗಾನದ ಬಗ್ಗೆ ಹೇಳುತ್ತಿದ್ದರೆ ನೆಡ್ಲೆ ನರಸಿಂಹ ಭಟ್ ಅವರ ಹೆಸರು ಖಂಡಿತವಾಗಿಯೂ ಮಧ್ಯದಲ್ಲಿ ಬಂದು ಹಾದು ಹೋಗದಿರಲಿಕ್ಕಿಲ್ಲ. ಯಾಕೆಂದರೆ ಅವರ ಹೊರತಾಗಿ ಚೆಂಡೆ ಮದ್ದಳೆಗಳ ಕುರಿತಾಗಿ ಮಾತಾಡುವುದು ಕಷ್ಟ! ಅಷ್ಟರ ಮಟ್ಟಿಗೆ ನರಸಿಂಹ ಭಟ್ ಮತ್ತು ಚೆಂಡೆ ಮದ್ದಳೆಗಳು ಅನ್ಯೋನ್ಯ.
ನರಸಿಂಹ ಭಟ್ ಎಷ್ಟು ಸಜ್ಜನರಾಗಿದ್ದರೆಂದರೆ ಅವರು ಯಾರನ್ನೂ ನೋಯಿಸಲು ಇಷ್ಟಪಡುತ್ತಿರಲಿಲ್ಲ. ತಾನು ಮಹಾನ್ [...]