ಅಂಕಣಗಳು

ನೂಪುರ ಪತ್ರಿಕೆ

ಐದನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ  ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ ೨೦೧೧)

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ನೂಪುರದ ದನಿಗೆ ಕಿವಿಯಾಗುವವರಲ್ಲಿ ಯುವ ಪತ್ರಕರ್ತ, ಭರವಸೆಯ ಬರಹಗಾರ ದಕ್ಷಿಣ ಕನ್ನಡದ ರಾಕೇಶ್ ಕುಮಾರ್ ಕಮ್ಮಜೆ ಅವರೂ ಒಬ್ಬರು. ಕಲೆ ಅದರಲ್ಲೂ ಯಕ್ಷಗಾನದ ಅಚ್ಚರಿಯ ಕಥೆಗಳಿಗೆ ಸಾಕ್ಷಿಯಾಗಬಲ್ಲ ಕಲಾಪ್ರೇಮಿ. ಈ ಬಾರಿಯ ಸಂಚಿಕೆ(ಸಂಚಿಕೆ ೨, ಸಂಪುಟ ೩)ಯಿಂದ ರಂಗಸ್ಥಳದ ಅಚ್ಚರಿಯ ಕಥೆಗಳನ್ನು ಹಂಚಿಕೊಳ್ಳಲಿದ್ದಾರೆ ತಮ್ಮ ರಂಗಸ್ಥಳದಲ್ಲಿ. ಓವರ್ ಟು ರಾಕೇಶ್…!

ಆ ಬಾಲಕನ ಉತ್ತರಕ್ಕೆ ಚಿಟ್ಟಾಣಿ ತಬ್ಬಿಬ್ಬಾಗಿದ್ದರು!

Thursday, December 15th, 2011

ಪ್ರಾಯಃ ಯಕ್ಷಗಾನದ ಅಭಿಮಾನಿಗಳಿಗೆ ಯಕ್ಷಗಾನ ಕೊಡುವಷ್ಟು ಮನರಂಜನೆಯನ್ನು ಇನ್ನಾವ ಮಾಧ್ಯಮವೂ ಕೊಡಲಾರದೇನೋ. ಈಗೀಗ ಸಂಜೆ ಆರರಿಂದ ಒಂಭತ್ತರ ವರೆಗಿನ ಯಕ್ಷಗಾನಗಳು ಹೆಚ್ಚೆಚ್ಚು ಚಾಲ್ತಿಗೆ ಬರುತ್ತಿರುವುದು ಹೌದಾದರೂ ರಾತ್ರಿಯಿಡೀ ಆಡುವ ಯಕ್ಷಗಾನಗಳು ನಶಿಸಿ ಹೋಗುವಂತೇನೂ ಕಾಣುತ್ತಿಲ್ಲ. ಹಾಗಾಗಿಯೇ ಈಗಲೂ ಇಡೀ ರಾತ್ರಿ ನಡೆಯುವ ಯಕ್ಷಗಾನಗಳು ಭರ್ಜರಿ ಪ್ರದರ್ಶನಗಳನ್ನೇ ಕಾಣುತ್ತಿವೆ. ಇಡೀ ರಾತ್ರಿ ನಿದ್ದೆ ಬಿಟ್ಟು ಒಬ್ಬಾತ ವ್ಯಕ್ತಿ ಯಕ್ಷಗಾನ ವೀಕ್ಷಿಸುತ್ತಾನೆಂದರೆ ಅದು ಅವನಿಗೆ ಅದೆಷ್ಟು ಮನರಂಜನೆ ನೀಡಲಿಕ್ಕಿಲ್ಲ ಯೋಚಿಸಿ. ಅದರಲ್ಲೂ ನೀವು ಕೆಲವು ಮಕ್ಕಳನ್ನು ನೋಡಬೇಕು. ತೀರಾ ಮಧ್ಯರಾತ್ರಿಯ [...]

ಮರೆಯಾದ ಪ್ರತಿಭೆ ಹೊಸಹಿತ್ಲು ಮಹಾಲಿಂಗ ಭಟ್

Saturday, October 15th, 2011
ಮರೆಯಾದ ಪ್ರತಿಭೆ ಹೊಸಹಿತ್ಲು ಮಹಾಲಿಂಗ ಭಟ್

ಕಳೆದ ಬಾರಿ ಶ್ರೀಧರ ಭಂಡಾರಿಗಳ ಬಗೆಗೆ ಹೇಳಿ ಮುಗಿಸುವ ಹೊತ್ತಿಗೆ ಅಭಿಮನ್ಯು ಎಂದಾಕ್ಷಣ ಮೀಯಪದವು ಹೊಸಹಿತ್ಲು ಮಹಾಲಿಂಗ ಭಟ್ಟರೂ ನೆನಪಾಗುತ್ತಾರೆ, ಅವರ ಬಗೆಗೆ ಇನ್ನೊಮ್ಮೆ ಹೇಳಿಯೇನು ಎಂದಿದ್ದೆ. ಆದರೆ ಇಷ್ಟು ಬೇಗ ಹಾಗೂ ಇಂಥಾದ್ದೊಂದು ಸಂದರ್ಭದಲ್ಲಿ ಹೇಳಬೇಕಾಗಿ ಬರುತ್ತದೆ ಅಂದುಕೊಂಡಿರಲಿಲ್ಲ. ಅವರನ್ನು ನಾನು ಅನೇಕ ಬಾರಿ ಭೇಟಿ ಮಾಡಿದ್ದೆ. ಯಕ್ಷಗಾನದ ಬಗೆಗೆ ಮಾತಾಡುವಾಗ ಅವರ ಕಂಗಳ ಹೊಳಪನ್ನು ಗಮನಿಸಿಯೂ ಇದ್ದೆ. ಹಾಗಾಗಿಯೇ ಕೆಲವೊಮ್ಮೆ ಅವರ ಉತ್ಸಾಹದ ಮಾತುಗಳನ್ನು ಕೇಳಿಸಿಕೊಳ್ಳುವುದಕ್ಕಾಗಿಯೇ ವಿನಾಕಾರಣ ಯಕ್ಷಗಾನದ ಸಂಗತಿಗಳನ್ನು ಎತ್ತುತ್ತಿದ್ದೆ. ಅವರೂ ಹಾಗೆಯೇ; [...]

ಅರವತ್ತಾರರಲ್ಲೂ ಅಬ್ಬರಿಸುತ್ತಿರುವ ಅಭಿಮನ್ಯು!

Monday, August 15th, 2011
ಅರವತ್ತಾರರಲ್ಲೂ ಅಬ್ಬರಿಸುತ್ತಿರುವ ಅಭಿಮನ್ಯು!

ಪುತ್ತೂರು ಶ್ರೀಧರ ಭಂಡಾರಿ ಎಂದರೆ ರಂಗಸ್ಥಳವೂ ಒಮ್ಮೆ ಜಿಗಿಯುತ್ತದೆ! ಅವರೊಮ್ಮೆ ರಂಗಕ್ಕೆ ಬಂದರೆ ಸಾಕು ರಂಗವೇ ಉನ್ಮಾದಗೊಳ್ಳುತ್ತದೆ. ಸುಸ್ತೇ ಅರಿಯದ ಕಲಾವಿದ ಅವರು. ಹಾಗಾಗಿಯೇ ಸಿಡಿಲ ಮರಿ, ಪುಂಡುವೇಷದ ಗಂಡುಗಲಿ ಎಂಬೆಲ್ಲಾ ಬಿರುದುಗಳು ಅವರಿಗೆ ಸಂದಾಯವಾಗಿವೆ. ಇಂದಿಗೂ ಸಕ್ರಿಯವಾಗಿ ರಂಗದಲ್ಲಿ ತೊಡಗಿಸಿಕೊಳ್ಳುತ್ತಿರುವ ಭಂಡಾರಿಯವರ ವಯಸ್ಸು ನಾಡಿದ್ದು ಅಕ್ಟೋಬರ್ ಒಂದಕ್ಕೆ ಅರವತ್ತಾರು!
ಬೇರೆಲ್ಲಾ ಪಾತ್ರಗಳಲ್ಲಿ ಸಾಕಷ್ಟು ಮಿಂಚಿರುವುದು ಹೌದಾದರೂ ಭಂಡಾರಿಯವರ ಹೆಸರು ಕೇಳಿದಾಕ್ಷಣ ನೆನಪಾಗುವುದು ಅಭಿಮನ್ಯು. ಜೊತೆಜೊತೆಗೇ ಬಬ್ರುವಾಹನ, ಪರಶುರಾಮ, ಚಂಡ ಮುಂಡ, ಬಾಲಲೀಲೆಯ ಕೃಷ್ಣ ಇತ್ಯಾದಿ [...]

ಅರ್ಜುನ ಐರಾವತ ತಂದದ್ದು ವಿಶೇಷವೇನೂ ಅಲ್ಲ!!

Wednesday, June 15th, 2011

ಯಾವುದೇ ಯಕ್ಷಗಾನ ಪ್ರಸಂಗವನ್ನು ರಾತ್ರಿಯಿಡೀ ಕುಳಿತು ನೋಡಿ, ತಾಳಮದ್ದಳೆಯನ್ನು ಸಾಧ್ಯಂತವಾಗಿ ಗಮನಿಸಿ. ಜನ ಹೆಚ್ಚು ಪ್ರತಿಕ್ರಿಯಿಸುವುದು ಹಾಗೂ ಖುಷಿಪಡುವುದು ಹಾಸ್ಯ ಪಾತ್ರಕ್ಕೆ! ಹಾಸ್ಯ ಅನ್ನುವುದು ಯಕ್ಷಗಾನಗಳಲ್ಲಿ ಊಟದೊಂದಿಗಿನ ಉಪ್ಪಿನಕಾಯಿಯಂತಿರುವುದು ಮತ್ತು ಹಾಗೆಯೇ ಇರಬೇಕಾದದ್ದು ಹೌದಾದರೂ ಉಪ್ಪಿನಕಾಯಿಯೇ ಇಲ್ಲದಿದ್ದರೆ ಊಟ ರುಚಿಸುವುದಿಲ್ಲ ಅನ್ನುವುದನ್ನೂ ಅಲ್ಲಗಳೆಯುವಂತಿಲ್ಲ. ಹಾಗಾಗಿಯೇ ಹಾಸ್ಯ ಕಲಾವಿದರಿಗೆ ಸಾಕಷ್ಟು ಗೌರವವಿದೆ. ಅದರಲ್ಲೂ ಕೆಲವೊಂದು ನಗರಗಳಲ್ಲಿ ನಗುವುದಕ್ಕಂತಲೇ ಒಂದೊಂದು ಕ್ಲಬ್ ಸ್ಥಾಪನೆಯಾಗಿರುವುದನ್ನು ಎಣಿಸುವಾಗ ಯಾರಿಗೇ ಆದರೂ ನಗು ಬರದಿರದು! ಹೀಗಾಗಿಯೇ ಎಲ್ಲರನ್ನೂ ಸಹಜವಾಗಿ ನಕ್ಕು ನಗಿಸುವ ಹಾಸ್ಯ ಕಲಾವಿದರನ್ನು [...]

ಭಟ್ಟರ ಬದುಕಿನ ರೋಚಕ ಕಥೆಗಳು!

Friday, April 15th, 2011

ಹಳೆಯ ಕಲಾವಿದರ ಕತೆಗಳನ್ನು ಕೆದಕುತ್ತಾ ಹೋದಂತೆ ಹೊಸ ಹೊಸ ಸಂಗತಿಗಳು ಅನಾವರಣಗೊಳ್ಳುತ್ತಲೇ ಇರುತ್ತವೆ. ಹಾಗಾಗಿ ಹಿಂದಿನ ಕಲಾವಿದರ ಕಥೆ ಬರಿದಾಗುವುದೇ ಇಲ್ಲ. ಈ ಹಿಂದೆ ಇದೇ ಅಂಕಣದಲ್ಲಿ ಮುಳಿಯಾಲ ಕೇಶವ ಭಟ್ ಅನ್ನುವ ವಿಶಿಷ್ಟ ವೇಷಧಾರಿಯೊಬ್ಬರ ಬಗೆಗೆ ಬರೆದದ್ದು ನಿಮ್ಮ ಮನಸಿನ ರಂಗಸ್ಥಳದಿಂದ ಮಾಸಿರಲಿಕ್ಕಿಲ್ಲ. ಯಾಕೋ ನನಗೆ ಸಾಕೆನಿಸಲಿಲ್ಲ. ಅವರ ಮತ್ತು ಅವರ ಕುರಿತಾದ ರೋಚಕ ಕಥೆಗಳ ಬಗೆಗೆ ಇನ್ನೂ ತಿಳಿದುಕೊಳ್ಳಬೇಕೆನಿಸಿತು. ಹಾಗೆ ಅವರ ಬಗೆಗೆ ಮಾಹಿತಿ ಸಂಗ್ರಹಿಸಬೇಕೆಂಬ ನಿಟ್ಟಿನಲ್ಲಿ ಹುಡುಕುತ್ತಾ ಹುಡುಕುತ್ತಾ ಹೋಗಿ ನಿಂತದ್ದು [...]

ಯಕ್ಷಲೋಕದ ಸುತ್ತಲೆಲ್ಲಾ ಗಟ್ಟಿ ‘ಗೋಡೆ’ಗಳ ಭದ್ರತೆ!

Tuesday, February 15th, 2011
ಯಕ್ಷಲೋಕದ ಸುತ್ತಲೆಲ್ಲಾ ಗಟ್ಟಿ ‘ಗೋಡೆ’ಗಳ ಭದ್ರತೆ!

ಅದು ಯಾವುದೇ ರಂಗ ಇರಬಹುದು ; ಅಲ್ಲಿ ಎರಡು ರೀತಿಯ ವ್ಯಕ್ತಿತ್ವವನ್ನು ನಾವು ಗಮನಿಸಬಹುದು. ಮೊದಲನೆಯದಾಗಿ ರಂಗದಲ್ಲಿ ಇರುವಾಗ ಮಾತ್ರ ‘ಜೀವಂತ’ವಾಗಿರುವವರು. ಎರಡನೆಯವರು ರಂಗದಿಂದ ನಿವೃತ್ತರಾಗಿಯೂ, ಇಹಲೋಕ ತ್ಯಜಿಸಿಯೂ ಜನಮಾನಸದಲ್ಲಿ ಸಜೀವವಾಗಿರುವವರು. ಆದರೆ ಇಂಥವರು ಕಾಣಸಿಕ್ಕುವುದು ಯಾವತ್ತೂ ಕಡಿಮೆಯೇ!. ಈ ಕಡಿಮೆ ವ್ಯಕ್ತಿಗಳ ಸಾಲಿಗೆ ನಮ್ಮ ಕುರಿಯ ವಿಠಲ ಶಾಸ್ತ್ರಿ, ಶೇಣಿ ಗೋಪಾಲಕೃಷ್ಣ ಭಟ್, ಕೆರೆಮನೆ ಶಿವರಾಮ ಹೆಗಡೆ ಮೊದಲಾದ ಮಹಾ ಮಹಿಮರು ಸೇರಿಕೊಳ್ಳುತ್ತಾರೆ. ಹಾಗೆಯೇ ಈ ಪಟ್ಟಿಗೆ ಸೇರಲೇಬೇಕಾದ ಇನ್ನೊಂದು ಹೆಸರು ಭಾಗವತ ಗುಂಡ್ಮಿ ಕಾಳಿಂಗ [...]

ಹಳೆ ಕಲಾವಿದರುಗಳೆಂದರೆ ರೋಚಕ ಕಥೆಗಳ ತಾಣ!

Tuesday, December 14th, 2010

ತಿಟ್ಟು ಲೆಕ್ಕಾಚಾರವನ್ನು ಬದಿಗಿಟ್ಟು, ಒಟ್ಟೂ ಯಕ್ಷಗಾನದ ಗತ ಇತಿಹಾಸವನ್ನು ಕೆದಕಿ, ಯಕ್ಷಲೋಕದ ರಂಗಸ್ಥಳವನ್ನು ಪ್ರವೇಶಿಸಿ ನಿಂತರೆ ಅಸಂಖ್ಯ ಮೇರುಕಲಾವಿದರು ಧೀಂಗಿಣ ಹಾಕುತ್ತಿರುತ್ತಾರೆ. ಒಬ್ಬೊಬ್ಬ ಕಲಾವಿದನೂ ಅಚ್ಚರಿಯ ತಾಣ. ಕಳೆದ ಕೆಲವಾರು ದಿನಗಳಿಂದ ದಶಕಗಳ ಹಿಂದೆಯೇ ಸಂದು ಹೋದ ಕಲಾವಿದರ ರೋಚಕ ಕಥೆಗಳನ್ನು ಕೇಳಿಸಿಕೊಳ್ಳುತ್ತಿದ್ದೇನೆ. ಅವರ ಆಟದ ಆ ಕಥೆಗಳನ್ನು ಹಗಲಿನಲ್ಲಿ ಕೇಳಿ, ರಾತ್ರಿ ಮಲಗಿದಾಗ ಮನಸಿನ ಅಂಗಳದಲ್ಲಿ ಅವರದೇ ಕುಣಿತ, ಅವರದೇ ಎನಿಸುವ ಅರ್ಥಗಾರಿಕೆ! ಫಕ್ಕನೆ ಎಚ್ಚರಾದರೆ ಬರೀ ನಿರಾಸೆ! ಎಂಥೆಂಥ ಕಲಾವಿದರುಗಳನ್ನು ಯಕ್ಷಭೂಮಿಗೆ ಕೊಟ್ಟಿದ್ದಾಳೆ [...]

ಋತುಪರ್ಣನನ್ನು ಕಾಣುವಾಗ ನೆನಪಾಗುವುದು ರೈಗಳು!

Friday, October 15th, 2010
ಋತುಪರ್ಣನನ್ನು ಕಾಣುವಾಗ ನೆನಪಾಗುವುದು ರೈಗಳು!

ನಮ್ಮ ರಾಜ್ಯದಲ್ಲಿ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡಗಳೆಂಬ ಎರಡು ಜಿಲ್ಲೆಗಳಿವೆಯಲ್ಲ ನಿಜಕ್ಕೂ ಇವು ಕಲಾಮಾತೆಯ ರಂಗಭೂಮಿಯೇ ಹೌದು. ನೀವು ಬೇಕಾದರೆ ಯೋಚಿಸಿ ನೋಡಿ. ನೃತ್ಯ, ನಾಟಕ, ಸಂಗೀತ…ಹೀಗೆ ಎಲ್ಲವೂ ಇಲ್ಲೇ ಮನೆಮಾಡಿವೆ. ಯಕ್ಷಗಾನವಂತೂ ಇಲ್ಲಿ ಅಬ್ಬರಿಸಿ ಕುಣಿಯುತ್ತದೆ. ಈಗ ಯಕ್ಷಗಾನ ತುಸು ಕಳೆಗುಂದಿದಂತೆ ಕಾಣುತ್ತಿರುವುದು ಹೌದಾದರೂ ಒಂದು ಕಾಲದಲ್ಲಿ ಈ ಎರಡೂ ಕನ್ನಡಗಳ ಯಾವುದೇ ಮನೆಯ ಮುಂದೆ ಹೋಗಿ ಚೆಂಡೆ ಬಾರಿಸಿದರೂ ಅಲ್ಲೊಬ್ಬ ಕಲಾವಿದನ ಪ್ರವೇಶವಾಗುತ್ತಿತ್ತು! ಅಂಥ ಸಮೃದ್ಧ ಸಿರಿಯ ಬೀಡು ಈ ಎರಡು ಕನ್ನಡಗಳು! [...]

ನಾವಡರ ಕಂಠಸಿರಿ ಮುಂಬಯಿಯಲ್ಲೂ ಮೋಡಿ ಮಾಡಿತ್ತು!

Sunday, August 15th, 2010

ಕ್ರಿಕೆಟ್ ಬಗೆಗೆ ಆಸಕ್ತಿಯಿದ್ದವರ ಮುಂದೆ ನೀವೊಮ್ಮೆ ತೆಂಡೂಲ್ಕರ್ ಹೆಸರೆತ್ತಿ ನೋಡಿ. ಮತ್ತೆ ಅನಾಮತ್ತು ಒಂದು-ಒಂದೂವರೆ ಗಂಟೆ ಅವರೇ ಮಾತನಾಡುತ್ತಾರೆ! ಮೊನ್ನೆ ಮುರಳಿಗೆ ಎಂಟುನೂರು ವಿಕೆಟ್ ಸಿಕ್ತಂತೆ ಅನ್ನಿ, ನಿಮ್ಮ ಕಥೆ ಗೋವಿಂದ! ಅವ ಹೇಗೆ ವಿಕೆಟ್ ಪಡೆದ, ಅವನ ತಾಕತ್ತೇನು?, ಅವನಿಗೆ ಇದೆಲ್ಲಾ ಹೇಗೆ ಸಾಧ್ಯವಾಯಿತು?, ಅವನ ಎಂಟುನೂರನ್ನು ತಪ್ಪಿಸಲು ಭಾರತಕ್ಕೆ ಸಾಧ್ಯವಿತ್ತೇ?… ಹೀಗೆ ಅವರ ವಿಷಯ ಮುಗಿಯುವುದೇ ಇಲ್ಲ. ಬೆಳ್ಳಂಬೆಳಗ್ಗೇ ಎದ್ದು ಉದಯ ಮೂವೀಸ್ ಹಾಕಿ ಕೂರುವವರ ಮಂದೆ ರಾಜ್ ಕುಮಾರ್ ಅನ್ನಿ. ಹುಟ್ಟಿನಿಂದ ಸಾವಿನವರೆಗಿನ [...]

ಮತ್ತೆ ಮತ್ತೆ ಕಾಡುವ ನಾವಡರು

Thursday, June 17th, 2010
ಮತ್ತೆ ಮತ್ತೆ ಕಾಡುವ ನಾವಡರು

ನಿಜ ಹೇಳಬೇಕೆಂದರೆ ಕಳೆದೆರಡು ಬಾರಿ ಈ ರಂಗಸ್ಥಳದಲ್ಲಿ ಕಾಣಿಸಿಕೊಂಡಿದ್ದ ವಿಠಲ ಶಾಸ್ತ್ರಿಯವರ ರೋಚಕ ಕಥೆಗಳ ಬಗೆಗೆ ಇನ್ನೂ ಹೇಳುವುದಿತ್ತು. ಕಳೆದ ಬಾರಿಯ ಲೇಖನ ಮುಗಿಸುವ ಹೊತ್ತಿಗೆ ಪುನಃ ವಿಠಲ ಶಾಸ್ತ್ರಿಗಳ ಬಗೆಗೇ ಬರೆಯುವುದೆಂದು ತೀರ್ಮಾನಿಸಿಯೂ ಆಗಿತ್ತು. ಹಾಗಾಗಿ ಅದೇ ಗುಂಗಿನಲ್ಲಿದ್ದ ನನ್ನನ್ನು ಎಚ್ಚರಿಸಿದ್ದು ಮೊನ್ನೆ ಕಳೆದುಹೋದ ದಿನಾಂಕ ಮೇ ೨೭. ಬರೋಬ್ಬರಿ ಇಪ್ಪತ್ತು ವರ್ಷಗಳ ಹಿಂದೆ ಅದೇ ದಿನ ನಡೆದುಹೋದ ದುರಂತವೊಂದು ಯಕ್ಷಲೋಕಕ್ಕೆ ಮರ್ಮಾಘಾತವನ್ನೇ ನೀಡಿತ್ತೆಂದು ಹೇಳಿದರೆ ಖಂಡಿತಾ ಅತಿಶಯೋಕ್ತಿಯಲ್ಲ. [...]