<?xml version="1.0" encoding="UTF-8"?><!-- generator="WordPress/2.9.1" -->
<rss version="0.92">
<channel>
	<title>: Noopura bhramari &#124; ನೂಪುರ ಭ್ರಮರಿ : ನರ್ತನ ಜಗತ್ತಿಗೊಂದು ಪರಿಭ್ರಮಣ &#124; Bharatanatyam Magazine ::</title>
	<link>http://www.noopurabhramari.com</link>
	<description>:ನರ್ತನ ಜಗತ್ತಿಗೊಂದು ಪರಿಭ್ರಮಣ &#124; Bharatanatyam Magazine</description>
	<lastBuildDate>Sat, 06 Mar 2010 15:32:34 +0000</lastBuildDate>
	<docs>http://backend.userland.com/rss092</docs>
	<language>en</language>
	
	<item>
		<title>ಕನ್ನಡತಿಯಾಗಿ ಕರಾವಳಿಯಲ್ಲಿ ನೆಲೆಸಿದ ನೃತ್ಯಸರಸ್ವತಿ : ಶ್ರೀಮತಿ ಜಯಲಕ್ಷ್ಮಿ ಆಳ್ವ</title>
		<description><![CDATA[ 
ಸ್ವತಃ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರಿಂದಲೇ &#8216;ನೃತ್ಯ ಸರಸ್ವತಿ&#8217; ಎಂದು  ಹೊಗಳಿಸಿಕೊಂಡು ಗೌರವಕ್ಕೆ ಪಾತ್ರರಾದವರು ಶ್ರೀಮತಿ ಜಯಲಕ್ಷ್ಮಿ ಆಳ್ವ.. ಅವರಿಗೀಗ ೭೭ರ ಹರೆಯ.  ತವರೂರು ಕುಂಭಕೋಣಂ. ೧೯೩೩ರಲ್ಲಿ ಜನನ. ಭರತನಾಟ್ಯದ ಪಂದನಲ್ಲೂರು ಪದ್ಧತಿಯ ಮೇರು ಗುರುಗಳಾದ  ಕಲಾಕ್ಷೇತ್ರದಲ್ಲಿ ಅರುಂಡೇಲ್ ಅವರೊಂದಿಗೆ ಸೇವೆ ಸಲ್ಲಿಸಿದ ಗುರು ಕೆ.ಎನ್. ದಂಡಾಯುಧ ಪಾಣಿ  ಪಿಳ್ಳೈ ಅವರ ಪಟ್ಟ ಶಿಷ್ಯೆ. ಹಿರಿಯ ನೃತ್ಯದಿಗ್ಗಜರಾದ ಸ್ವರ್ಣಂ ಸರಸ್ವತಿ, ಗೌರಿ ಅಮ್ಮಾಳ್,  ಕರುಣಾಕರ್ ಪಣಿಕ್ಕರ್ ಅವರಲ್ಲಿ ಅಭಿನಯ [...]]]></description>
		<link>http://www.noopurabhramari.com/darshanabhramari/jayalakshmi-alwa</link>
			</item>
	<item>
		<title>ರಷ್ಯಾ ಅಧ್ಯಕ್ಷನ ಮುಂದೆ ಕುಣಿದವರು ನಮ್ಮ ವಿಠಲ ಶಾಸ್ತ್ರಿಗಳು!</title>
		<description><![CDATA[&#8216;ಕುರಿಯ ವಿಠಲ ಶಾಸ್ತ್ರಿ&#8217; &#8211; ತೆಂಕುತಿಟ್ಟಿನ ಯಕ್ಷಲೋಕದ ಗತ‌ಇತಿಹಾಸ ಗೊತ್ತಿರುವ  ಅಷ್ಟೂ ಮಂದಿಗೆ ಈ ಹೆಸರು ಕೇಳಿದಾಗ ರೋಮಾಂಚನವಾಗದಿರದು. ಸಹಸ್ರ ಸಹಸ್ರ ಯಕ್ಷಕಲಾಭಿಮಾನಿಗಳ ಪಾಲಿಗೆ  ಅದ್ಭುತ, ಅನನ್ಯ, ಅಬ್ಬರದ ಅಮೋಘ ರಸರಾತ್ರಿಗಳನ್ನು ಉಣಿಸಿದ ಮಹಾನ್ ಕಲಾವಿದ ಅವರು. ವೈಭವೋಪೇತವಾದ  ನಡುರಾತ್ರಿಗಳಿಗೆ ಕಾರಣೀಭೂತನಾದ ದೈತ್ಯ ಪ್ರತಿಭೆ! &#8216;ವೇಷ ಅಂದರೆ ಇದು&#8217; ಅಂತ ಮಹಾಮಹಾ  ಯಕ್ಷವಿಮರ್ಶಕರಿಂದ ಹೇಳಿಸಿಕೊಂಡ ವಿಶಿಷ್ಟ ವ್ಯಕ್ತಿ. ಇವರು ಹುಟ್ಟಿದ್ದೇ ಯಕ್ಷಗಾನಕ್ಕಾಗಿ  ಅನ್ನುವಂತೆ ರಂಗಸ್ಥಳದಲ್ಲಿ ಮಿಂಚಿದವರು. ಈ ತಲೆಮಾರಿನ ಮಂದಿಗೆ [...]]]></description>
		<link>http://www.noopurabhramari.com/rangasthla/kuriya</link>
			</item>
	<item>
		<title>ರೂಪಕ, ರಸಪ್ರಕರಣಗಳ ಅವಲೋಕ : ದಶರೂಪಕ</title>
		<description><![CDATA[ಸಂಸ್ಕೃತದ ನಾಟ್ಯಶಾಸ್ತ್ರಗ್ರಂಥಗಳಲ್ಲಿ ರೂಪಕ, ರಸಪ್ರಕರಣಗಳ ಬಗ್ಗೆ ವಿಷದವಾಗಿ  ನಿರೂಪಣೆ ನೀಡಿರುವ ಶ್ರೇಷ್ಟವೆನಿಸುವ ಗ್ರಂಥಗಳ ಪೈಕಿ ದಶರೂಪಕವೂ ಒಂದು. ೧೦-೧೧ ಶತಮಾನದಲ್ಲಿ  ಜೀವಿಸಿದ್ದೆನ್ನಲಾದ ಧನಂಜಯನೆಂಬ ಕವಿಯಿಂದ ರಚಿತಗೊಂಡ ಈ ಗ್ರಂಥ ಧನಿಕ ಎಂಬ ಧನಂಜಯನ ಸಹೋದರನೆಂದು  ಕರೆಯಲಾದವನಿಂದ ಬರೆಯಲ್ಪಟ್ಟ ದಶರೂಪಾವಲೋಕವ್ಯಾಖ್ಯೆಯನ್ನು ಹೊಂದಿದೆ.
ಮುಂಜರಾಜ ಎಂಬ ರಾಜನ ಆಸ್ಥಾನದಲ್ಲಿದ್ದ ಧನಂಜಯನು ವೈದಿಕ  ಸಂಪ್ರದಾಯವನ್ನಿಟ್ಟ್ಟುಕೊಂಡಿದ್ದ ವಿಷ್ಣು ಎಂಬವನ ಪುತ್ರನೆಂದು ಹೇಳಿಕೊಂಡಿದ್ದಾನೆ. ಧನಿಕನು ಈ  ರಾಜನನ್ನು ವಾಕ್ಪತಿರಾಜನೆಂದು ಉಲ್ಲೇಖಿಸಿದ್ದಾನೆ. ಈ ರಾಜನು ಮಾಳವ ದೇಶದಲ್ಲಿ ಆಳುತ್ತಿದ್ದ  [...]]]></description>
		<link>http://www.noopurabhramari.com/aksharabhramari/akshara-bhramari</link>
			</item>
	<item>
		<title>ನೃತ್ಯ : ಅಂದು, ಇಂದು, ಮುಂದು</title>
		<description><![CDATA[ಅಭಿನಯಕ್ಕೆ ಪುರುಷ ಸಹಜವಾಗಿರುವ ಲಾಸ್ಯಪದ್ಧತಿ ಮೇಲಾಗಿದ್ದರೂ, ಪುರುಷರು ತಮ್ಮ  ಅಭಿನಯದಲ್ಲಿ ತಾಂಡವಾಂಶ ಹಾಗೂ ಸಾತ್ವಿಕ ಭಾವಗಳನ್ನು ನಿವೇದಿಸಬಹುದು. ಈ ಸಂದರ್ಭಗಳಲ್ಲಿ ಏಕಾಹಾರ್ಯ  ಮುಖ್ಯವಾದದ್ದು. ನೃತ್ಯನಾಟಕಗಳಲ್ಲಿ ಪುರುಷಪಾತ್ರಾಭಿನಯಕ್ಕೆ ಒತ್ತು ಇರುತ್ತದೆ. ಲಾಸ್ಯದ ಬದಲು  ತಾಂಡವಾಂಶಗಳೇ ಸಾಹಿತ್ಯದಲ್ಲಿರುವಾಗ ಪುರುಷನು ಲಾಸ್ಯವನ್ನೇ ತಾಂಡವವನ್ನಾಗಿ ಪರಿವರ್ತಿಸುವ ಕಾರ್ಯ  ಸುಲಭವಲ್ಲ. ಭಾವಗಳಲ್ಲಿಯೂ ಆತ ನಾಯಕಸಾಮಾನ್ಯ ಗುಣಗಳನ್ನು ತರಬೇಕಾಗಬಹುದು. ಹಾಗಂತ ಬರಿಯ  ಸ್ತ್ರೀಯರಿಗಾಗಿ ಮಾತ್ರವೇ ಭರತನಾಟ್ಯ ಮೀಸಲಾಗಿದ್ದುದಲ್ಲ. ಆದರೆ ಭರತನಾಟ್ಯ ಪುರುಷವೇಷಧಾರಿಗಳಲ್ಲಿ  ತಾವು ಮಾಡಬೇಕಾದ ಅಂಶಗಳಲ್ಲಿ ಶಿವನಿಗೆ [...]]]></description>
		<link>http://www.noopurabhramari.com/nartanasurabhi/nrutya-andu-indu-mundu</link>
			</item>
	<item>
		<title>ಶಿಶಿರ ಶೃಂಗಾರ-೨೦೧೦ ರ ಜೊತೆಗೆ ಮತ್ಶಷ್ಟು ಮಂದಿ</title>
		<description><![CDATA[
ಸಿಬಂತಿ ಪದ್ಮನಾಭ, ಪತ್ರಕರ್ತರು, ಡೆಕ್ಕನ್ ಹೆರಾಲ್ಡ್, ಮಂಗಳೂರು.


ಅರ್ಚನಾ ಭಟ್, ಸಂಗೀತ ಶಿಕ್ಷಕರು, ಬೆಂಗಳೂರು.


ಪ್ರಿಯಾ ಗಣೇಶ್, ಬೆಂಗಳೂರು.


]]></description>
		<link>http://www.noopurabhramari.com/aboutus/namma-bagge-3</link>
			</item>
	<item>
		<title>ಒಳನೋಟ-ಶಿಶಿರ ಶೃಂಗಾರ ೨೦೧೦</title>
		<description><![CDATA[೧೯ ಡಿಸೆಂಬರ್ : ಸೌರಭ ಸಂಗೀತ ನೃತ್ಯಕಲಾ ಪರಿಷತ್‌ನ ಶಿಷ್ಯೆ ಶಿಬಾನಿ ಅಶೋಕ್ ಅವರ  ನೃತ್ಯಾರ್ಚನೆ. ಸ್ಥಳ : ಕಾವೇರಿ ಕಲಾಕ್ಷೇತ್ರ, ಮಂಗಳೂರು.
೨೫ ಡಿಸೆಂಬರ್ : ಮಂಗಳೂರಿನ ಭರತ ನೃತ್ಯ ಸಭಾ ಆಯೋಜಿಸುವ ಡಾ. ವಸುಂಧರಾ ದೊರೆಸ್ವಾಮಿ  ಅಭಿನಯಿಸುವ &#8216;ಪಾಂಚಾಲಿ&#8217;-ಏಕವ್ಯಕ್ತಿ ಯಕ್ಷಭರತ ಸಂಗಮ. ಸ್ಥಳ : ಪುರಭವನ, ಮಂಗಳೂರು.
೨೫ ಡಿಸೆಂಬರ್ : ಮೈಸೂರಿನ ಭೂಷಣ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಆಂಡ್ ವಿಶುವಲ್  ಪ್ರೆಸೆಂಟೆಶನ್‌ನ ಗುರುಗಳಾದ ಭೂಷಣ್ ಮತ್ತು ಅಂಜನಾ ಭೂಷಣ್ ಅವರ ನೃತ್ಯ [...]]]></description>
		<link>http://www.noopurabhramari.com/ola-nota/olanota-2010</link>
			</item>
	<item>
		<title>ಕಾಂಗೂಲ ಹಸ್ತ</title>
		<description><![CDATA[ಲಕ್ಷಣ: ಪದ್ಮಕೋಶಹಸ್ತದಲ್ಲಿನ ತೋರುಬೆರಳನ್ನು ಬಾಗಿಸಿದರೆ ಕಾಂಗೂಲ ಅಥವಾ ಲಾಂಗೂಲ  ಅಥವಾ ಅಂಗುಲ ಹಸ್ತವೆನಿಸುತ್ತದೆ. ಲಾಂಗೂಲ ಎಂದರೆ-ಬಾಲ ಎಂದರ್ಥ. ಹಸ್ತ ಮುಕ್ತಾವಳಿಯಲ್ಲಿ  ಕಾಂಗೂಲವೆಂದರೆ ಚೇಳು ಎಂದರ್ಥ. ಈ ಹಸ್ತಕ್ಕೆ ಬಿಡಾಲಪದವೆಂಬ ಇನ್ನೊಂದು ಹೆಸರೂ ಇದೆ. ಇದೊಂದು  ಸ್ತ್ರೀಜಾತಿ ಹಸ್ತ. ಹಸ್ತ ಮುಕ್ತಾವಳಿ ಮತ್ತು ನಾಟ್ಯಶಾಸ್ತ್ರದಲ್ಲಿ ಹೆಬ್ಬೆರಳು, ತೋರು ಮತ್ತು  ಮಧ್ಯ ಬೆರಳನ್ನು ಮುಟ್ಟುವಂತೆ ಸಮೀಪವಾಗಿ ಹತ್ತಿರ ಬಗ್ಗಿಸಿ ತಂದು, ಉಂಗುರ ಬೆರಳನ್ನು ವಕ್ರವಾಗಿ  ಬಗ್ಗಿಸಿ, ಕಿರು ಬೆರಳನ್ನು ನಿಡಿದಾಗಿರಿಸಬೇಕು. ಮೊದಲ ಮೂರು [...]]]></description>
		<link>http://www.noopurabhramari.com/hastamayuri/kangula-hasta</link>
			</item>
	<item>
		<title>ಶಿಶಿರ ಶೃಂಗಾರ ೨೦೧೦</title>
		<description><![CDATA[ಲೇಖಕ ಈಶ್ವರ ಭಟ್ ಎಳ್ಯಡ್ಕ, ಉಡುಪಿಯ ಸಿರಿಮನೆ, ಸಂಪಾಜೆಯ ಕೊಂದಲಕಾಡು ನಾರಾಯಣ ಭಟ್  ಶುಭ ಹಾರೈಸಿ ಪತ್ರಿಸಿದ್ದಾರೆ. ಕಲಾವಿದರಾದ ಶಿವಾನಂದ ಹೆಗಡೆ, ಬೆಂಗಳೂರಿನ ಸಂಗೀತ ವಿದುಷಿ ಆರ್ಯಭಟ  ಪ್ರಶಸ್ತಿ ವಿಜೇತೆ ಅರ್ಚನಾ ಭಟ್, ನೃತ್ಯ ಕಲಾವಿದರಾದ ಪ್ರಿಯಾ ಗಣೇಶ್, ಸೀತಾ ಗುರುಪ್ರಸಾದ್,  ನಟರಾಜ ನೃತ್ಯಶಾಲೆಯ ಜಿ.ವಿ.ರಾಜು, ಕಲಾಸ್ಪಂದನ ಪತ್ರಿಕೆಯ ಉದಯಕುಮಾರ್ ಶೆಟ್ಟಿ, ಪ್ರಜ್ಞಾ  ಆಚಾರ್ಯ, ರಾಮಕೃಷ್ಣ ಮೆಡಿಕಲ್ ಕಾಲೇಜಿನ ಪಾಂಡು ಈ ಸಂಚಿಕೆಯಿಂದ ವರ್ಷದ ಸದಸ್ಯರಾಗಿದ್ದಾರೆ. 
ಸಂಚಿಕೆ ಉತ್ತಮವಾಗಿ ಮೂಡಿ ಬರುತ್ತಿದೆ. [...]]]></description>
		<link>http://www.noopurabhramari.com/nimmabareha/2010-jan-feb</link>
			</item>
	<item>
		<title>ಗಿರಿಜಾ ಕಲ್ಯಾಣ- 2</title>
		<description><![CDATA[ಕಳೆದ ಸಂಚಿಕೆಯಿಂದ ಮುಂದುವರಿದ ಭಾಗ ಇಲ್ಲಿದೆ.
ರತಿ-ಪಾರ್ವತಿ : ಪತಿ ವಿರಹಿತ ರತಿ ಗತಿರಹಿತಳು ಸತಿ &#124;
ವ್ಯಥಿತ ಮನೋಗತಿ ನತಮಸ್ತಕ ಸ್ಥಿತಿ &#124;
ಅತಿಗೆಳೆಯದ ಮಿತಿ ಧೃತಿಗೆಟ್ಟಿತು ಮತಿ &#124;
ಶತಸಂಕಟ ತತಿ ಸತತ ಪತಿತ ಗತಿ &#124;
-೪-
ಸುಟು ಹೋದನೆನ್ನ ನಲ್ಲ ದಿಟ್ಟಿಸಿದರೆ ಕಾಣನಲ್ಲ &#124;
ಬಿಟ್ಟ ಬಾಣ ನೆಟ್ಟಿತಲ್ಲ ಕಟ್ಟಿ ಕನಸ ಕೆಟ್ಟೆನಲ್ಲ &#124;&#124;
ರತಿ : ಮುಗುಳಂಬನ ಬೆಂಬಲಿಸಿದೆನೆನ್ನನು ನಂಬಿಸಿ ಕೈ ಬಿಟ್ಟ !
ಅಗಜೆಯ ಹಂಬಲ ಶಂಕರಗಿಲ್ಲವೆ ಅಂಗಜನನು ಸುಟ್ಟ ?
ಪಾರ್ವತಿ : ಅಂಜದಿರಬಲೆಯೆ ನಂಜುಗೊರಳನಾ ಭಸ್ಮವ ಬಳಿದಾತ &#124;
ಅಂಗಜನಂಗವ ಭಂಗಿಸಿ [...]]]></description>
		<link>http://www.noopurabhramari.com/lalitalahari/girija-kalyana</link>
			</item>
	<item>
		<title>&#8216;ರಮ್ಯ-ಅಗಮ್ಯ&#8217;</title>
		<description><![CDATA[ 
&#8230;&#8230;&#8230;&#8230;. 
ಇನಿಸು ಉಳಿದು ಇನಿಸು ಬೆಳೆದು 
ಅಳಿವುದಿನಿಸು ರೂಪವು
ಸೃಷ್ಟಿಲೀಲೆಗಿದು ಸ್ವಭಾವ
ರೂಪಗಳ ಸ್ವರೂಪವು 
ಹುಟ್ಟು ಸಾವು ಎರಡು ಮೆಟ್ಟು 
ಜೀವನಟನ ಆಟಕೆ 
ಜೀವನವಿದು ನಾಟ್ಯರಂಗ 
ಭಾವ ರಸದ ಮಾಟಕೆ&#8230;&#8230;&#8230;. 
 &#8211; ದ. ರಾ. ಬೇಂದ್ರೆ, (ಅರಳು ಮರುಳು)
]]></description>
		<link>http://www.noopurabhramari.com/lalitalahari/ramya-agamya</link>
			</item>
</channel>
</rss>
