ಅಂಕಣಗಳು

ನೂಪುರ ಪತ್ರಿಕೆ

ಐದನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ  ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ ೨೦೧೧)

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಆತ್ಮೀಯ………..

ನೂಪುರ ಭ್ರಮರಿಯನ್ನು ವರುಷದಿಂದಲೂ ತಾವೆಲ್ಲರೂ ಅವಲೋಕನ ಮಾಡುತ್ತಿದ್ದೀರಿ. ಆಶೀರ್ವದಿಸುತ್ತಿದ್ದೀರಿ. ಪ್ರತೀ ಸಂಚಿಕೆಯ ಯಶಸ್ಸಿನ ಹಿಂದೆಯೂ ತಮ್ಮ ಹರಕೆ ಹಾರೈಕೆಗಳಿವೆ ಎಂಬುದು ನಮ್ಮ ಸಂತೋಷ. ತಮ್ಮೆಲ್ಲರ ಪ್ರೋತ್ಸಾಹ, ಸಹಕಾರ ನಮಗೆ ನಿರಂತರ ಬೇಕು.

ಒಂದು ಪತ್ರಿಕೆಯನ್ನು ರೂಪಿಸುವುದರ ಹಿಂದಿನ ಕಷ್ಟಗಳು ನಿಮಗೆ ಗೊತ್ತಿದೆ. ಅದರಲ್ಲೂ ಪ್ರಕಟಿತ ಪತ್ರಿಕೆಯು ಒಮ್ಮೊಮ್ಮೆ ಆಸಕ್ತ ಓದುಗರನ್ನು ಮುಟ್ಟುವಲ್ಲಿ ಅಡಚಣೆಗಳು ಉಂಟಾಗುತ್ತಿವೆ. ಎಷ್ಟೋ ಬಾರಿ ವಿಳಾಸ ಅದಲು ಬದಲಾಗುವುದೋ ಅಥವಾ, ಬದಲಾಗುವುದೋ, ಅಥವಾ ಅಂಚೆದೋಷಗಳಿಂದಾಗಿ ಸಂಚಿಕೆಗಳು ತಲುಪುವಲ್ಲಿ ವಿಳಂಬವಾಗುತ್ತಿದೆ, ಕ್ಲಪ್ತ ಸಮಯಕ್ಕೆ ತಲುಪುತ್ತಿಲ್ಲ. ಹಲವು ಬಾರಿ ತಲುಪದ ಸಂದರ್ಭಗಳೂ ಇವೆ ಎಂದು ಆಸಕ್ತ ಓದುಗರು ತಿಳಿಸಿದ್ದಿದೆ. ಮಾತ್ರವಲ್ಲ, ಕೆಲವು ಓದುಗರು ಪತ್ರಿಕೆಯನ್ನು ತರಿಸಿಕೊಳ್ಳುವ ನಿಟ್ಟಿನಲ್ಲೂ ನೂಪುರ ಭ್ರಮರಿಯ ಬಳಗಕ್ಕೆ ಸ್ಪಷ್ಟ ಮಾಹಿತಿಗಳು ಲಭ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ತಮ್ಮಲ್ಲೊಂದು ವಿನಂತಿ.

ಕೊನೆಯ ಪುಟದಲ್ಲಿ ಲಭ್ಯವಿರುವ ಬಾಕ್ಸ್‌ನ್ನು ಕತ್ತರಿಸಿ ನಿಮ್ಮ ಹೆಸರು, ವಿಳಾಸ, ಅಭಿಪ್ರಾಯಗಳೊಂದಿಗೆ ನಮಗೆ ಬರೆಯಿರಿ. ಇದು ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ, ಸ್ಫೂರ್ತಿ ನೀಡುತ್ತದೆ. ತಮ್ಮ ಅಭಿಪ್ರಾಯಗಳನ್ನು ಈ-ಮೈಲ್ ಮೂಲಕವೂ ನಮಗೆ ತಿಳಿಸಬಹುದು. ಪತ್ರಿಕೆ ತಲುಪುತ್ತಿರುವ ಮತ್ತು ಅದರ ವಿಷಯಗಳ ಕುರಿತು ಆಗಾಗ ನಿಮ್ಮಿಂದ ಅನಿಸಿಕೆಗಳನ್ನು ನಾವು ಪ್ರೀತಿಯಿಂದ ಎದುರು ನೋಡುತ್ತಿರುತ್ತೇವೆ.

ಅಷ್ಟೇ ಅಲ್ಲ, ಸಂಗೀತ-ನೃತ್ಯ-ಲಲಿತಕಲೆಗಳಿಗೆ ಸಂಬಂಧಿಸಿದಂತೆ ನಿಮ್ಮ ಚಿಂತನೆಗಳನ್ನು, ಲೇಖನಗಳನ್ನು ಭ್ರಮರಿಯ ವಿವಿಧ ವಿಭಾಗಕ್ಕೆ ಕಳುಹಿಸಿ ಈ ಜ್ಞಾನಯಜ್ಞಕ್ಕೆ ಕೈಜೋಡಿಸಬಹುದು. ಇದಕ್ಕೆ ಹಿರಿ-ಕಿರಿಯರ ಭೇಧವಿಲ್ಲ. ಗುರು-ಕಲಾವಿದ-ವೀಕ್ಷಕ-ಪ್ರೇಕ್ಷಕ-ಪೋಷಕ-ವಿದ್ಯಾರ್ಥಿ..ಹೀಗೆ ಆಸಕ್ತರು ನೃತ್ಯಕ್ಕೆ ಸಂಬಂಧಿಸಿದಂತೆ ತಮಗನಿಸಿದ ಎಲ್ಲ ಅನಿಸಿಕೆ, ಅಭಿಪ್ರಾಯಗಳನ್ನು ಕಳಿಸಬಹುದು.

ಅಂದಹಾಗೆ ಆಸಕ್ತ ಓದುಗರು ಬಹಳಷ್ಟು ಮಂದಿ ಚಂದಾವಿವರಗಳನ್ನು ಕೇಳಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವಂತೆ ನೂಪುರ ಭ್ರಮರಿಯ ಉದ್ದೇಶ ಲಾಭ ಲೆಕ್ಕಾಚಾರವಲ್ಲ. ಕಲೆಯ ಮೇಲಿನ ಆಸಕ್ತಿಯಿಂದ ಹುಟ್ಟಿಕೊಂಡ ಪುಟ್ಟ ಪ್ರಯತ್ನವಿದು. ಹಾಗಾಗಿ ಓದುಗಬಂದುಗಳು ಪತ್ರಿಕೆಯ ಮೌಲ್ಯವನ್ನು ಅರಿತು ತಮಗನಿಸಿದ ಮೊತ್ತವನ್ನು ಕಳುಹಿಸುತ್ತಿದ್ದಾರೆ, ಜೊತೆಗೆ ಸಂಚಿಕೆಯ ಪ್ರಾಯೋಜಕತ್ವವನ್ನು ವಹಿಸಿಕೊಳ್ಳುತ್ತಿದ್ದಾರೆ. ಅವರೆಲ್ಲರಿಗೂ ವಂದನೆಗಳು, ಕೃತಜ್ಞತೆಗಳು.

…ಎದೆ ಎದೆಗೂ ನಡುವಿದೆ ಹಿರಿಗಡಲು
ಮುಟ್ಟಲಾರೆವೇನೋ..ಸೇತುವೆ ಕಟ್ಟಲಾರೆವೇನೋ…?
ಪ್ರೀತಿಯಿರಲಿ,..ನಮ್ಮ ನಿಮ್ಮ ನಡುವೆ…

‘ ರಾಜ್ಯಮಟ್ಟದ ವರ್ಷದ ಶ್ರೇಷ್ಠ ನೃತ್ಯ ವಿಮರ್ಶಕ ಪ್ರಶಸ್ತಿ ಶ್ರೀಮತಿ ಪ್ರತಿಭಾ ಸಾಮಗ’ ಇವರಿಗೆ

Tuesday, January 31st, 2012
‘ ರಾಜ್ಯಮಟ್ಟದ ವರ್ಷದ ಶ್ರೇಷ್ಠ ನೃತ್ಯ ವಿಮರ್ಶಕ ಪ್ರಶಸ್ತಿ   ಶ್ರೀಮತಿ ಪ್ರತಿಭಾ ಸಾಮಗ’ ಇವರಿಗೆ

ನೂಪುರ ಭ್ರಮರಿ’ ದ್ವೈಮಾಸಿಕ ಮತ್ತು ಪ್ರತಿಷ್ಠಾನ(ರಿ.) ನೃತ್ಯಕ್ಷೇತ್ರದ ವಿಮರ್ಶಕರನ್ನು ಗುರುತಿಸಿ, ಗೌರವಿಸುವ ಮತ್ತು ವಿಮರ್ಶಾ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯಮಟ್ಟದ ‘ವರ್ಷದ ಶ್ರೇಷ್ಠ ನೃತ್ಯ ವಿಮರ್ಶಕ’ ಪ್ರಶಸ್ತಿಯನ್ನು ೨೦೧೦ರಲ್ಲಿ ಆರಂಭಿಸಿದ್ದು ತಮಗೆ ತಿಳಿದಿರುವ ವಿಷಯ. ಈ ನಿಟ್ಟಿನಲ್ಲಿ ೨೦೧೧ನೇ ಸಾಲಿನ ಪ್ರಶಸ್ತಿಗೆ ಡಾ. ಶತಾವಧಾನಿ ಗಣೇಶ್ ಅವರ ಅಧ್ಯಕ್ಷತೆಯ ಪ್ರಶಸ್ತಿ ನಿರ್ಣಾಯಕ ಸಮಿತಿಯು ವಿಮರ್ಶೆಗಳ ಮೌಲ್ಯ, ಉದ್ದೇಶ, ಸ್ವರೂಪ, ಗುಣಮಟ್ಟವನ್ನಾಧರಿಸಿ ಮತ್ತು ನೃತ್ಯಕ್ಷೇತ್ರದ ವಿಮರ್ಶೆಗೆ ಈವರೆಗೆ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ಉಡುಪಿಯ ವಿದುಷಿ [...]

Karnataka State level one day Dance Research Workshop/paper presentation

Saturday, December 3rd, 2011

Karnataka State level one day Dance Research Workshop/Seminar
Topic : “Dance research : Process and challenges”
English version- workshop and paper presentation details
ಕಮ್ಮಟದ ಕುರಿತ ವಿವರಣೆಗಳ ಕನ್ನಡ ಪ್ರತಿ

A one day dance research workshop/seminar will be organised by Noopura Bhramari Research Foundation (R.) and Bi-Monthly dance magazine in collaboration with Karnataka Research Association and Karnataka Developmental Board [...]

ಸಂಶೋಧನಾ ಸಂಗ್ರಹ ವೇದಿಕೆ

Tuesday, May 31st, 2011

Noopura Bhramari, a dance magazine, is planning to bring out an information book of dance researchers. Those who have completed/ongoing Ph.D, fellowship, M. Phil or dissertations under different universities related to dance can send their resume along with relevant details to the Editor, Noopura Bhramari, Sannidhya Printers and publishers, Dechoor Road, near Ashwatthakatte, Madikeri, Kodagu [...]

“ನೃತ್ಯ ಮಾರ್ಗ ಮುಕುರ” ಕೃತಿ

Tuesday, May 17th, 2011

ಮನೋರಮಾ ಬಿ. ಎನ್ ಅವರ ನೃತ್ಯಸಂವೇದನೆಯ ‘ಮುದ್ರಾರ್ಣವ’- ಹಸ್ತಮುದ್ರೆಗಳ ಸಂಶೋಧನಾ ಕೃತಿಯ ತರುವಾಯ ‘ಶ್ರೀ ಸಾನಿಧ್ಯ ಪ್ರಕಾಶನ’ದಿಂದ ಅನಾವರಣಗೊಂಡ ಮತ್ತೊಂದು ನೃತ್ಯ ಸಂವೇದನೆಯ ಕೃತಿ ‘ನೃತ್ಯಮಾರ್ಗ ಮುಕುರ’. ಭರತನಾಟ್ಯದ ಮಾರ್ಗಪದ್ಧತಿಯ ಮಜಲುಗಳನ್ನು, ನೃತ್ಯಾಂಗಗಳನ್ನು ದಾಖಲಿಸುವ, ಸಮಗ್ರ ಸಂಕ್ಷಿಪ್ತ ವಿವರವನ್ನೀಯುವ ೧೨೫ ಪುಟಗಳ ಈ ಕೃತಿ, ಆಸಕ್ತ ಸಹೃದಯರ ಪಾಲಿಗೆ ಸಾಕಲ್ಯ ದೃಷ್ಟಿಯ ಅಧ್ಯಯನಸಾಮಗ್ರಿ. ಪುಸ್ತಕದ ಬೆಲೆ: ೧೨೫ರೂ.
ಭರತನಾಟ್ಯ-ಭರತನ ನಾಟ್ಯಶಾಸ್ತ್ರ ಪ್ರಸ್ತುತ ಸಂದರ್ಭದಲ್ಲಿ ಗೊಂದಲವನ್ನು ಸೃಷ್ಟಿಸಿಕೊಂಡ ಪಾರಿಭಾಷಿಕ ಪದಗಳಾಗಿ ಮಾರ್ಪಟ್ಟಿವೆ. ‘ಇಂದಿನ’ ಭರತನಾಟ್ಯ ಎಂಬ ನೃತ್ಯಪದ್ಧತಿಗೂ‘ಅಂದಿನ’ ಭರತನ ನಾಟ್ಯಶಾಸ್ತ್ರಗ್ರಂಥಕ್ಕೂ [...]

ವಿಮರ್ಶೆಯ ಪ್ರತ್ಯೇಕ ಅಂಕಣ-ನೃತ್ಯ/ನಾಟ್ಯ ಸಂಬಂಧೀ ಫೋಟೋ ಆಹ್ವಾನ

Thursday, March 17th, 2011

ವಿಮರ್ಶೆಯ ಕುರಿತಾಗಿ ಪ್ರತ್ಯೇಕ ಅಂಕಣವು ನೂಪುರ ಭ್ರಮರಿಯ ವೆಬ್‌ಸೈಟ್‌ನಲ್ಲಿ ಅನಾವರಣಗೊಂಡಿದ್ದು ೨೦೧೧ನೇ ಸಾಲಿನ ವಿಮರ್ಶೆಗಳನ್ನು( ಯಾವುದೇ ಪತ್ರಿಕೆ-ನಿಯತಕಾಲಿಕ-ವೆಬ್ ಪತ್ರಿಕೆ ಇತ್ಯಾದಿಗಳಲ್ಲಿ ಪ್ರಕಟಿತ ಅಥವಾ ಅಪ್ರಕಟಿತ ವಿಮರ್ಶೆ, ವರದಿ)ಲೇಖಕರು ಕಳಿಸಬಹುದಾಗಿದೆ. ಈ ಮೂಲಕ ವಿಮರ್ಶಾ ಕ್ಷೇತ್ರಕ್ಕೆ ಮತ್ತು ಅದರ ಪ್ರಶಸ್ತಿಗೆ ಹೆಚ್ಚಿನ ಉತ್ತೇಜನ ಮತ್ತು ಪಾರದರ್ಶಕತೆಯು ಒದಗಲಿದ್ದು ಮುಂದಿನ ಸಾಲಿನ ಪ್ರಶಸ್ತಿಯನ್ನು ಆಯ್ಕೆ ಮಾಡುವಲ್ಲಿ ಓದುಗರೂ ನಮ್ಮೊಂದಿಗೆ ಜೊತೆಯಾಗಲಿದ್ದಾರೆ. ಅದಕ್ಕೆ ಈಗಲಿಂದಲೇ ವೇದಿಕೆಯು ರೂಪುಗೊಳ್ಳುತ್ತಿದ್ದು; ಆಸಕ್ತರು ನ್ನು ಸಂಪರ್ಕಿಸಬಹುದು.
ಅಂತೆಯೇ ಆಸಕ್ತರು ಉತ್ತಮ ನೃತ್ಯ/ನಾಟ್ಯ ಸಂಬಂಧೀ ಫೋಟೋಗಳಿದ್ದರೆ ಮುಖಪುಟವಿನ್ಯಾಸಕ್ಕಾಗಿ [...]

ಸಂವತ್ಸರಾಭಿನಂದನ-ಪಂಚಮದ ಪಲುಕಿಗೆ ಶ್ರುತಿಯಾಗಿ… ಮಾರ್ಗಕ್ಕೆ ಮುಕುರವಾಗಿ..

Monday, February 14th, 2011
ಸಂವತ್ಸರಾಭಿನಂದನ-ಪಂಚಮದ ಪಲುಕಿಗೆ ಶ್ರುತಿಯಾಗಿ…  ಮಾರ್ಗಕ್ಕೆ ಮುಕುರವಾಗಿ..

೧೩ ಫೆಬ್ರವರಿ ೨೦೧೧ ರಂದು ‘ನಯನ ಸಭಾಂಗಣ’ , ಕನ್ನಡ ಭವನ, ಜೆ.ಸಿ ರಸ್ತೆ , ಬೆಂಗಳೂರು.
ನೂಪುರ ಭ್ರಮರಿ ಐದರ ಹೆಜ್ಜೆಗಳಿಗೆ ಅಡಿಯಿಡುವ ಸಂವತ್ಸರಾಭಿನಂದನ ಸಂಭ್ರಮ ನಿಜಕ್ಕೂ ಒಂದು ಆಪ್ತ ಮತ್ತು ಅಷ್ಟೇ ಆಕಸ್ಮಿಕವೂ ಕೂಡಾ. ಹಾಗೆ ನೊಡಿದರೆ ಬೆಂಗಳೂರಿನಂತಹ ಮಹಾ ಸಮುದ್ರದಲ್ಲಿ ಕಾರ್ಯಕ್ರಮ ಸಂಘಟಿಸುವ ಇರಾದೆ, ಧೈರ್ಯ ಮೊದಲು ಅಷ್ಟಾಗಿ ಇರಲಿಲ್ಲ. ಆದರೆ ಮನದೊಳಡಗಿದ್ದ ಸಂಭ್ರಮವನ್ನು ಹಂಚಿಕೊಳ್ಳುವ ಕಂಡೂ ಕಾಣದಂತಿದ್ದ ಅಭೀಪ್ಸೆಗೆ ಇಂಬನ್ನಿತ್ತವರು ದೈವಬಲ, ಹಿರಿಯರ ಆಶೀರ್ವಾದ, ನಿಕಟವರ್ತಿ ಗೆಳೆಯರು. ಜೊತೆಗೆ ನೃತ್ಯ ಸಂವೇದನೆಗಳಿಗೆ [...]

ನೂಪುರ ಭ್ರಮರಿ ಐದನೇ ಸಂವತ್ಸರಾಭಿನಂದನ

Friday, February 4th, 2011
ನೂಪುರ ಭ್ರಮರಿ ಐದನೇ ಸಂವತ್ಸರಾಭಿನಂದನ

ನಮಸ್ತೆ
ಆತ್ಮೀಯರೇ,
ನೂಪುರ ಭ್ರಮರಿ ವಿಶೇಷ ಸಂಚಿಕೆ, ಕಥಾ ಸಂಕಲನ, ನೃತ್ಯಮಾರ್ಗ ಮುಕುರ-ನೃತ್ಯ ಕೃತಿ ಬಿಡುಗಡೆ, ವರ್ಷದ ಶ್ರೇಷ್ಟ ನೃತ್ಯ ವಿಮರ್ಶೆ ಪ್ರಶಸ್ತಿ ಪ್ರದಾನ, ಗೌರವಾರ್ಪಣೆ.ಭರತನಾಟ್ಯ ಕಾರ್ಯಕ್ರಮ
ಸ್ಥಳ: ನಯನ ಸಭಾಂಗಣ, ಜೆ.ಸಿ.ರಸ್ತೆ, ಕನಡ ಭವನ, ಬೆಂಗಳೂರು
ದಿನಾಂಕ: 13 ಫೆಬ್ರವರಿ, 2011, ಸಂಜೆ ೪ ಗಂಟೆ.
ನೃತ್ಯ ಮಾರ್ಗ ಮುಕುರ’ – ಭರತನಾಟ್ಯದ ಐತಿಹಾಸಿಕ ಬೆಳವಣಿಗೆಗಳ ದಾಖಲೆಯುಳ್ಳ ಅಧ್ಯಯನ ಕೃತಿ ಅನಾವರಣ
ನೂಪುರ ಭ್ರಮರಿಯ ಸಂಪಾದಕಿ, ಕಲಾವಿದೆ ಮನೋರಮಾ ಬಿ. ಎನ್ ಅವರ ನೃತ್ಯಸಂವೇದನೆಯ ‘ಮುದ್ರಾರ್ಣವ’-ಹಸ್ತಮುದ್ರೆಗಳ ಸಂಶೋಧನಾ ಕೃತಿಯ ತರುವಾಯ ಶ್ರೀ ಸಾನಿಧ್ಯ ಪ್ರಕಾಶನದಿಂದ [...]

‘ಮುದ್ರಾರ್ಣವ’ದ ಮೋಹಕ ಮೇಘಮಲ್ಹಾರ… : ಅನಾವರಣದಲ್ಲರಳಿದ ಅಲೆಗಳು

Wednesday, February 3rd, 2010
‘ಮುದ್ರಾರ್ಣವ’ದ ಮೋಹಕ ಮೇಘಮಲ್ಹಾರ… : ಅನಾವರಣದಲ್ಲರಳಿದ ಅಲೆಗಳು

ನೂಪುರದ ಬಳಗಕ್ಕೆ ಅಂದು ಕಣ್ತುಂಬಿಕೊಳ್ಳುವ ಹಬ್ಬ. ಇನ್ನೇನು ವಾರ್ಷಿಕ ಸಂಭ್ರಮಕ್ಕೆ ಎರಡು ತಿಂಗಳಿರುವಾಗಲೇ, ಮೂರನೇ ವರ್ಷಾಂತ್ಯವಾಗುವುದರೊಳಗೆ ಸಂತಸದ ಸಂದರ್ಭಗಳಿಗೆ ಮುನ್ಸೂಚನೆಯೇನೋ ಎಂಬಂತೆ ವಿದ್ವತ್ಪೂರ್ಣ ಕ್ಷಣಗಳನ್ನು ಬರಮಾಡಿಕೊಂಡ ಸಾಂಗತ್ಯ. ನವೆಂಬರ್ ೨೨. ಸಂಜೆ ೪.೩೦. ವಿಮರ್ಶಕ, ಲೇಖಕ ವಿ.ಬಿ. ಅರ್ತಿಕಜೆ, ಹಾಸ್ಯ ಸಾಹಿತಿ ಕು.ಗೋ, ನಾಟ್ಯಾಚಾರ್ಯರುಗಳಾದ ಕಮಲಾಕ್ಷಾಚಾರ್, ದೀಪಕ್ ಕುಮಾರ್, ಉಜಿರೆ ಕಾಲೇಜಿನ ಕಲಾಸಕ್ತ ಉಪನ್ಯಾಸಕರು, ಕಲಾರಸಿಕ ವಿದ್ಯಾರ್ಥಿಗಳು, ಊರಿನ ಹೆಮ್ಮೆಯ ನಾಗರಿಕರು ಮುಂತಾಗಿ; ಕೆಲವೇ ಕ್ಷಣಗಳ ಅವಧಿಯಲ್ಲಿ ಉಜಿರೆಯ ಶ್ರೀ [...]

‘ಮುದ್ರಾರ್ಣವ’

Thursday, November 19th, 2009
‘ಮುದ್ರಾರ್ಣವ’

ಆತ್ಮೀಯರೇ,
ಸಂವಹನ ಮಾಧ್ಯಮವಾಗಿ, ಶಾಸ್ತ್ರೀಯ ಪರಿಭಾಷೆಯಾಗಿ ಹಸ್ತಮುದ್ರೆಗಳ ಪಾತ್ರ ಹಿರಿದಿದ್ದರೂ, ಇವುಗಳ ಕುರಿತಂತೆ ನಡೆದ ಅಧ್ಯಯನಗಳು ಬಹಳ ವಿರಳ. ಅದರಲ್ಲೂ ಸಂಹವನ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಕುರಿತಂತೆ ಆಳವಾದ ಪರಿಶೋಧನೆಗಳು ಜರುಗಿಲ್ಲ. ಸಾಮಾನ್ಯವಾಗಿ ಈ ಮುದ್ರೆಗಳನ್ನು ಸೌಂದರ್ಯ ಸೂಚಕಗಳಾಗಿ ಪರಿಗಣಿಸುತ್ತಾರೆಯೇ ವಿನಃ, ಸಾಮಾಜಿಕ ಅಥವಾ ಸಂವಹನದ ದೃಷ್ಟಿಯಲ್ಲಿ ಚಿಂತಿಸಲ್ಪಡುವುದಿಲ್ಲ. ಹಸ್ತವಿನ್ಯಾಸಗಳ ಬಗೆಗೆ ವಿವರಣೆಯಿರುವ ಪುಸ್ತಕಗಳಿವೆಯೇ ಹೊರತು ಸಂಶೋಧನಾತ್ಮಕ ಅಧ್ಯಯನಗಳು ನಡೆದಿಲ್ಲ. ಹಾಗಾಗಿ ಒಂದು ನೆಲೆಗಟ್ಟಿನಿಂದ ನೋಡಿದಾಗ `ಸಂವಹನ ಮಾಧ್ಯಮವಾಗಿ ಹಸ್ತಮುದ್ರೆಗಳು’ ಎಂಬ ವಿಷಯ ಸಂಶೋಧಕರ ಗಮನ ಸೆಳೆದಿಲ್ಲವೆಂದೇ ಹೇಳಬೇಕು. [...]

ಉಪನ್ಯಾಸ

Saturday, August 15th, 2009

ನೂಪುರ ಭ್ರಮರಿಯ ಬಳಗವು ಭರತನಾಟ್ಯ, ನೃತ್ಯಶೈಲಿಗಳಿಗೆ ಸಂಬಂಧಿಸಿದಂತೆ ಅರಿವಿನ ವಿಸ್ತರಣೆಗಾಗಿ
೧. ಭಾರತೀಯ ಶಾಸ್ತ್ರೀಯ ನೃತ್ಯಗಳು ಮತ್ತು ಜೀವನಾನುಸಂಧಾನ
೨. ಭರತನಾಟ್ಯದ ಆಂಗಿಕಾಭಿನಯ
೩. ನಾಯಿಕಾ-ನಾಯಕಾ ಭಾವ
೪. ಹಸ್ತಮುದ್ರಾ ವಿನ್ಯಾಸಗಳು ಮತ್ತು ಸಂಶೋಧನೆ
೫. ನೃತ್ಯ ಇತಿಹಾಸ ಮತ್ತು ಭರತನಾಟ್ಯದ ಪುನರುತ್ಥಾನ
೬. ನೃತ್ಯ ಗ್ರಂಥಗಳು ಮತ್ತು ಅವುಗಳೆಡೆಗೆ ಸಮಗ್ರ ದೃಷ್ಠಿ
ಮೇಲ್ಕಂಡ ವಿಚಾರಗಳನ್ನೂ ಒಳಗೊಂಡಂತೆ ವಿವಿಧ ವಿಷಯಗಳಲ್ಲಿ ಉಪನ್ಯಾಸಗಳನ್ನು ನೀಡುತ್ತಿದ್ದು, ಉಪನ್ಯಾಸ ಕಾರ್ಯಕ್ರಮಗಳಿಗಾಗಿ ಆಸಕ್ತರು ಪತ್ರಿಕೆಯ ಸಂಪಾದಕರನ್ನು ಸಂಪರ್ಕಿಸಬಹುದು. ದೂ : ೯೯೬೪೧೪೦೯೨೭