ಅಂಕಣಗಳು

ನೂಪುರ ಪತ್ರಿಕೆ

‘ಮುದ್ರಾರ್ಣವ’ದ ಮೋಹಕ ಮೇಘಮಲ್ಹಾರ… : ಅನಾವರಣದಲ್ಲರಳಿದ ಅಲೆಗಳು

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ಆತ್ಮೀಯ………..

ನೂಪುರ ಭ್ರಮರಿಯನ್ನು ವರುಷದಿಂದಲೂ ತಾವೆಲ್ಲರೂ ಅವಲೋಕನ ಮಾಡುತ್ತಿದ್ದೀರಿ. ಆಶೀರ್ವದಿಸುತ್ತಿದ್ದೀರಿ. ಪ್ರತೀ ಸಂಚಿಕೆಯ ಯಶಸ್ಸಿನ ಹಿಂದೆಯೂ ತಮ್ಮ ಹರಕೆ ಹಾರೈಕೆಗಳಿವೆ ಎಂಬುದು ನಮ್ಮ ಸಂತೋಷ. ತಮ್ಮೆಲ್ಲರ ಪ್ರೋತ್ಸಾಹ, ಸಹಕಾರ ನಮಗೆ ನಿರಂತರ ಬೇಕು.

ಒಂದು ಪತ್ರಿಕೆಯನ್ನು ರೂಪಿಸುವುದರ ಹಿಂದಿನ ಕಷ್ಟಗಳು ನಿಮಗೆ ಗೊತ್ತಿದೆ. ಅದರಲ್ಲೂ ಪ್ರಕಟಿತ ಪತ್ರಿಕೆಯು ಒಮ್ಮೊಮ್ಮೆ ಆಸಕ್ತ ಓದುಗರನ್ನು ಮುಟ್ಟುವಲ್ಲಿ ಅಡಚಣೆಗಳು ಉಂಟಾಗುತ್ತಿವೆ. ಎಷ್ಟೋ ಬಾರಿ ವಿಳಾಸ ಅದಲು ಬದಲಾಗುವುದೋ ಅಥವಾ, ಬದಲಾಗುವುದೋ, ಅಥವಾ ಅಂಚೆದೋಷಗಳಿಂದಾಗಿ ಸಂಚಿಕೆಗಳು ತಲುಪುವಲ್ಲಿ ವಿಳಂಬವಾಗುತ್ತಿದೆ, ಕ್ಲಪ್ತ ಸಮಯಕ್ಕೆ ತಲುಪುತ್ತಿಲ್ಲ. ಹಲವು ಬಾರಿ ತಲುಪದ ಸಂದರ್ಭಗಳೂ ಇವೆ ಎಂದು ಆಸಕ್ತ ಓದುಗರು ತಿಳಿಸಿದ್ದಿದೆ. ಮಾತ್ರವಲ್ಲ, ಕೆಲವು ಓದುಗರು ಪತ್ರಿಕೆಯನ್ನು ತರಿಸಿಕೊಳ್ಳುವ ನಿಟ್ಟಿನಲ್ಲೂ ನೂಪುರ ಭ್ರಮರಿಯ ಬಳಗಕ್ಕೆ ಸ್ಪಷ್ಟ ಮಾಹಿತಿಗಳು ಲಭ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ತಮ್ಮಲ್ಲೊಂದು ವಿನಂತಿ.

ಕೊನೆಯ ಪುಟದಲ್ಲಿ ಲಭ್ಯವಿರುವ ಬಾಕ್ಸ್‌ನ್ನು ಕತ್ತರಿಸಿ ನಿಮ್ಮ ಹೆಸರು, ವಿಳಾಸ, ಅಭಿಪ್ರಾಯಗಳೊಂದಿಗೆ ನಮಗೆ ಬರೆಯಿರಿ. ಇದು ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ, ಸ್ಫೂರ್ತಿ ನೀಡುತ್ತದೆ. ತಮ್ಮ ಅಭಿಪ್ರಾಯಗಳನ್ನು ಈ-ಮೈಲ್ ಮೂಲಕವೂ ನಮಗೆ ತಿಳಿಸಬಹುದು. ಪತ್ರಿಕೆ ತಲುಪುತ್ತಿರುವ ಮತ್ತು ಅದರ ವಿಷಯಗಳ ಕುರಿತು ಆಗಾಗ ನಿಮ್ಮಿಂದ ಅನಿಸಿಕೆಗಳನ್ನು ನಾವು ಪ್ರೀತಿಯಿಂದ ಎದುರು ನೋಡುತ್ತಿರುತ್ತೇವೆ.

ಅಷ್ಟೇ ಅಲ್ಲ, ಸಂಗೀತ-ನೃತ್ಯ-ಲಲಿತಕಲೆಗಳಿಗೆ ಸಂಬಂಧಿಸಿದಂತೆ ನಿಮ್ಮ ಚಿಂತನೆಗಳನ್ನು, ಲೇಖನಗಳನ್ನು ಭ್ರಮರಿಯ ವಿವಿಧ ವಿಭಾಗಕ್ಕೆ ಕಳುಹಿಸಿ ಈ ಜ್ಞಾನಯಜ್ಞಕ್ಕೆ ಕೈಜೋಡಿಸಬಹುದು. ಇದಕ್ಕೆ ಹಿರಿ-ಕಿರಿಯರ ಭೇಧವಿಲ್ಲ. ಗುರು-ಕಲಾವಿದ-ವೀಕ್ಷಕ-ಪ್ರೇಕ್ಷಕ-ಪೋಷಕ-ವಿದ್ಯಾರ್ಥಿ..ಹೀಗೆ ಆಸಕ್ತರು ನೃತ್ಯಕ್ಕೆ ಸಂಬಂಧಿಸಿದಂತೆ ತಮಗನಿಸಿದ ಎಲ್ಲ ಅನಿಸಿಕೆ, ಅಭಿಪ್ರಾಯಗಳನ್ನು ಕಳಿಸಬಹುದು.

ಅಂದಹಾಗೆ ಆಸಕ್ತ ಓದುಗರು ಬಹಳಷ್ಟು ಮಂದಿ ಚಂದಾವಿವರಗಳನ್ನು ಕೇಳಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವಂತೆ ನೂಪುರ ಭ್ರಮರಿಯ ಉದ್ದೇಶ ಲಾಭ ಲೆಕ್ಕಾಚಾರವಲ್ಲ. ಕಲೆಯ ಮೇಲಿನ ಆಸಕ್ತಿಯಿಂದ ಹುಟ್ಟಿಕೊಂಡ ಪುಟ್ಟ ಪ್ರಯತ್ನವಿದು. ಹಾಗಾಗಿ ಓದುಗಬಂದುಗಳು ಪತ್ರಿಕೆಯ ಮೌಲ್ಯವನ್ನು ಅರಿತು ತಮಗನಿಸಿದ ಮೊತ್ತವನ್ನು ಕಳುಹಿಸುತ್ತಿದ್ದಾರೆ, ಜೊತೆಗೆ ಸಂಚಿಕೆಯ ಪ್ರಾಯೋಜಕತ್ವವನ್ನು ವಹಿಸಿಕೊಳ್ಳುತ್ತಿದ್ದಾರೆ. ಅವರೆಲ್ಲರಿಗೂ ವಂದನೆಗಳು, ಕೃತಜ್ಞತೆಗಳು.

…ಎದೆ ಎದೆಗೂ ನಡುವಿದೆ ಹಿರಿಗಡಲು
ಮುಟ್ಟಲಾರೆವೇನೋ..ಸೇತುವೆ ಕಟ್ಟಲಾರೆವೇನೋ…?
ಪ್ರೀತಿಯಿರಲಿ,..ನಮ್ಮ ನಿಮ್ಮ ನಡುವೆ…

‘ಮುದ್ರಾರ್ಣವ’ದ ಮೋಹಕ ಮೇಘಮಲ್ಹಾರ… : ಅನಾವರಣದಲ್ಲರಳಿದ ಅಲೆಗಳು

Wednesday, February 3rd, 2010
‘ಮುದ್ರಾರ್ಣವ’ದ ಮೋಹಕ ಮೇಘಮಲ್ಹಾರ… : ಅನಾವರಣದಲ್ಲರಳಿದ ಅಲೆಗಳು

ನೂಪುರದ ಬಳಗಕ್ಕೆ ಅಂದು ಕಣ್ತುಂಬಿಕೊಳ್ಳುವ ಹಬ್ಬ. ಇನ್ನೇನು ವಾರ್ಷಿಕ ಸಂಭ್ರಮಕ್ಕೆ ಎರಡು ತಿಂಗಳಿರುವಾಗಲೇ, ಮೂರನೇ ವರ್ಷಾಂತ್ಯವಾಗುವುದರೊಳಗೆ ಸಂತಸದ ಸಂದರ್ಭಗಳಿಗೆ ಮುನ್ಸೂಚನೆಯೇನೋ ಎಂಬಂತೆ ವಿದ್ವತ್ಪೂರ್ಣ ಕ್ಷಣಗಳನ್ನು ಬರಮಾಡಿಕೊಂಡ ಸಾಂಗತ್ಯ. ನವೆಂಬರ್ ೨೨. ಸಂಜೆ ೪.೩೦. ವಿಮರ್ಶಕ, ಲೇಖಕ ವಿ.ಬಿ. ಅರ್ತಿಕಜೆ, ಹಾಸ್ಯ ಸಾಹಿತಿ ಕು.ಗೋ, ನಾಟ್ಯಾಚಾರ್ಯರುಗಳಾದ ಕಮಲಾಕ್ಷಾಚಾರ್, ದೀಪಕ್ ಕುಮಾರ್, ಉಜಿರೆ ಕಾಲೇಜಿನ ಕಲಾಸಕ್ತ ಉಪನ್ಯಾಸಕರು, ಕಲಾರಸಿಕ ವಿದ್ಯಾರ್ಥಿಗಳು, ಊರಿನ ಹೆಮ್ಮೆಯ ನಾಗರಿಕರು ಮುಂತಾಗಿ; ಕೆಲವೇ ಕ್ಷಣಗಳ ಅವಧಿಯಲ್ಲಿ ಉಜಿರೆಯ ಶ್ರೀ [...]

‘ಮುದ್ರಾರ್ಣವ’

Thursday, November 19th, 2009
‘ಮುದ್ರಾರ್ಣವ’

ಆತ್ಮೀಯರೇ,
ಸಂವಹನ ಮಾಧ್ಯಮವಾಗಿ, ಶಾಸ್ತ್ರೀಯ ಪರಿಭಾಷೆಯಾಗಿ ಹಸ್ತಮುದ್ರೆಗಳ ಪಾತ್ರ ಹಿರಿದಿದ್ದರೂ, ಇವುಗಳ ಕುರಿತಂತೆ ನಡೆದ ಅಧ್ಯಯನಗಳು ಬಹಳ ವಿರಳ. ಅದರಲ್ಲೂ ಸಂಹವನ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಕುರಿತಂತೆ ಆಳವಾದ ಪರಿಶೋಧನೆಗಳು ಜರುಗಿಲ್ಲ. ಸಾಮಾನ್ಯವಾಗಿ ಈ ಮುದ್ರೆಗಳನ್ನು ಸೌಂದರ್ಯ ಸೂಚಕಗಳಾಗಿ ಪರಿಗಣಿಸುತ್ತಾರೆಯೇ ವಿನಃ, ಸಾಮಾಜಿಕ ಅಥವಾ ಸಂವಹನದ ದೃಷ್ಟಿಯಲ್ಲಿ ಚಿಂತಿಸಲ್ಪಡುವುದಿಲ್ಲ. ಹಸ್ತವಿನ್ಯಾಸಗಳ ಬಗೆಗೆ ವಿವರಣೆಯಿರುವ ಪುಸ್ತಕಗಳಿವೆಯೇ ಹೊರತು ಸಂಶೋಧನಾತ್ಮಕ ಅಧ್ಯಯನಗಳು ನಡೆದಿಲ್ಲ. ಹಾಗಾಗಿ ಒಂದು ನೆಲೆಗಟ್ಟಿನಿಂದ ನೋಡಿದಾಗ `ಸಂವಹನ ಮಾಧ್ಯಮವಾಗಿ ಹಸ್ತಮುದ್ರೆಗಳು’ ಎಂಬ ವಿಷಯ ಸಂಶೋಧಕರ ಗಮನ ಸೆಳೆದಿಲ್ಲವೆಂದೇ ಹೇಳಬೇಕು. [...]

ಉಪನ್ಯಾಸ

Saturday, August 15th, 2009

ನೂಪುರ ಭ್ರಮರಿಯ ಬಳಗವು ಭರತನಾಟ್ಯ, ನೃತ್ಯಶೈಲಿಗಳಿಗೆ ಸಂಬಂಧಿಸಿದಂತೆ ಅರಿವಿನ ವಿಸ್ತರಣೆಗಾಗಿ
೧. ಭಾರತೀಯ ಶಾಸ್ತ್ರೀಯ ನೃತ್ಯಗಳು ಮತ್ತು ಜೀವನಾನುಸಂಧಾನ
೨. ಭರತನಾಟ್ಯದ ಆಂಗಿಕಾಭಿನಯ
೩. ನಾಯಿಕಾ-ನಾಯಕಾ ಭಾವ
೪. ಹಸ್ತಮುದ್ರಾ ವಿನ್ಯಾಸಗಳು ಮತ್ತು ಸಂಶೋಧನೆ
೫. ನೃತ್ಯ ಇತಿಹಾಸ ಮತ್ತು ಭರತನಾಟ್ಯದ ಪುನರುತ್ಥಾನ
೬. ನೃತ್ಯ ಗ್ರಂಥಗಳು ಮತ್ತು ಅವುಗಳೆಡೆಗೆ ಸಮಗ್ರ ದೃಷ್ಠಿ
ಮೇಲ್ಕಂಡ ವಿಚಾರಗಳನ್ನೂ ಒಳಗೊಂಡಂತೆ ವಿವಿಧ ವಿಷಯಗಳಲ್ಲಿ ಉಪನ್ಯಾಸಗಳನ್ನು ನೀಡುತ್ತಿದ್ದು, ಉಪನ್ಯಾಸ ಕಾರ್ಯಕ್ರಮಗಳಿಗಾಗಿ ಆಸಕ್ತರು ಪತ್ರಿಕೆಯ ಸಂಪಾದಕರನ್ನು ಸಂಪರ್ಕಿಸಬಹುದು. ದೂ : ೯೯೬೪೧೪೦೯೨೭

‘ವರುಷವೆರಡು ಕಳೆದಿದೆ… ಶಿಶಿರ ಶೃಂಗಾರದಲ್ಲಿ ವಸಂತ ವಿಹರಿಸಿದೆ…’

Sunday, March 15th, 2009

ಅದೊಂದು ರೀತಿಯಲ್ಲಿ ಬಯಸದೇ ಒಲಿದು ಬಂದ ಭಾಗ್ಯ !!!
ಎರಡು ವಸಂತಗಳನ್ನು ಪೂರೈಸಿ ಮೂರನೇ ಸಂವತ್ಸರಕ್ಕೆ ಕಾಲಿಡುವ ಹೊತ್ತಿಗೆ ಅಂತಹುದೊಂದು ಶುಭಾರಂಭ ಒದಗೀತು ಎಂಬುದನ್ನು ನೂಪುರ ಭ್ರಮರಿಯ ಬಳಗದ ಯಾವ ಮಿತ್ರರೂ ಕಲ್ಪಿಸಿಯೂ ಇರಲಿಲ್ಲ. ಏಕೆಂದರೆ ಕಳೆದ ವರ್ಷದಂತೆ ಒಂದು ವರ್ಷ ಪೂರೈಸಿದ ಪ್ರಯುಕ್ತ ಮಿತ್ರರೆಲ್ಲಾ ಒಟ್ಟಾಗಿ ವಾರ್ಷಿಕ ಸಂಭ್ರಮವನ್ನು ಆಚರಿಸಿಕೊಂಡು, ವೆಬ್‌ಸೈಟ್ ಅನಾವರಣಗೊಳಿಸಿದಂತ ಯಾವುದೇ ನೆವವೂ ಈ ವರ್ಷದ ಪ್ರಾರಂಭಕ್ಕೆ ಇರಲಿಲ್ಲ. ಬಳಗದ ಕುಟುಂಬ ಸಾಕಷ್ಟು ಹಿರಿದಾಗುತ್ತಿದ್ದರೂ ಈ ವರ್ಷಕ್ಕೆ ಅಂತಹ ಸಮಾರಂಭ ಮಾಡುವ ಇರಾದೆ ಯಾರಿಗೂ [...]

ಆತ್ಮೀಯ………..

Friday, November 7th, 2008

ನೂಪುರ ಭ್ರಮರಿಯನ್ನು ವರುಷದಿಂದಲೂ ತಾವೆಲ್ಲರೂ ಅವಲೋಕನ ಮಾಡುತ್ತಿದ್ದೀರಿ. ಆಶೀರ್ವದಿಸುತ್ತಿದ್ದೀರಿ. ಪ್ರತೀ ಸಂಚಿಕೆಯ ಯಶಸ್ಸಿನ ಹಿಂದೆಯೂ ತಮ್ಮ ಹರಕೆ ಹಾರೈಕೆಗಳಿವೆ ಎಂಬುದು ನಮ್ಮ ಸಂತೋಷ. ತಮ್ಮೆಲ್ಲರ ಪ್ರೋತ್ಸಾಹ, ಸಹಕಾರ ನಮಗೆ ನಿರಂತರ ಬೇಕು.
ಒಂದು ಪತ್ರಿಕೆಯನ್ನು ರೂಪಿಸುವುದರ ಹಿಂದಿನ ಕಷ್ಟಗಳು ನಿಮಗೆ ಗೊತ್ತಿದೆ. ಅದರಲ್ಲೂ ಪ್ರಕಟಿತ [...]

ಆಮಂತ್ರಣ ಪತ್ರಿಕೆ

Friday, November 7th, 2008
ಆಮಂತ್ರಣ ಪತ್ರಿಕೆ

ನೂಪುರಭ್ರಮರಿ: ವಾರ್ಷಿಕ ಸಂಭ್ರಮದ ಕಾರ್ಯಕ್ರಮ ವಿವರ

Friday, November 7th, 2008

ವರದಿ: ಮಹೇಶ್ ಚೇವಾರ್

ಮುಖ್ಯ ಅತಿಥಿ -ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಸಾಹಿತಿ, ವಿಮರ್ಶಕ, ನ್ಯಾಯವಾದಿ _ಇವರಿಂದ ವೆಬ್ ಸೈಟ್ ಅನಾವರಣ ನೃತ್ಯ ಕಲೆಯ ಮಾಹಿತಿಯನ್ನೊದಗಿಸುವ ವೆಬ್‌ಸೈಟ್ ಆರಂಭಿಸುವುದು ಸಣ್ಣ ಸಾಧನೆಯೇನಲ್ಲ. ಹಾಗೆಯೇ ಸಿದ್ಧಿಯೂ ಅಲ್ಲ. ಅದನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಬಹಳಷ್ಟಿದೆ. ಸಾಧನೆಯ ಮೂಲಕ ಎತ್ತರೆತ್ತರಕ್ಕೆ ಏರಬೇಕು.
ವೈಯಕ್ತಿಕವಾಗಿ ನಮಗೆ ನಮ್ಮ [...]

ನೂಪುರಭ್ರಮರಿ: ವಾರ್ಷಿಕ ಸಂಭ್ರಮದ ವರದಿ:

Friday, November 7th, 2008
ನೂಪುರಭ್ರಮರಿ: ವಾರ್ಷಿಕ ಸಂಭ್ರಮದ ವರದಿ:

ಅಂದು ಫೆಬ್ರವರಿ ೧೦..,ಮಡಿಕೇರಿಯ ಭಾರತೀಯ ವಿದ್ಯಾಭವನದ ತುಂಬೆಲ್ಲಾ ಹರುಷ, ನಗುವಿನ ವಾತಾವರಣ. ಸಮಾಧಾನದ ತಯಾರಿಗಳ ನಡುವೆಯೇ ಗಡಿಬಿಡಿಯ ಓಡಾಟ-ಭರಾಟೆಗಳು, ಕೊನೆಯ ಕ್ಷಣದ ಕನವರಿಕೆ-ನಿರೀಕ್ಷೆಗಳು, ಎದೆ ಅವಲಕ್ಕಿ ಕುಟ್ಟುತ್ತಿತ್ತು.
…ಆತಂಕಗಳಿಗೆ ಸಮಾಧಾನ ಹೇಳಿದರು.., ಸಂಭ್ರಮದ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಮಡಿಕೇರಿ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ಸರ್ಪಂಗಳ [...]

ನಿಮಗಿದೋ ಆತ್ಮೀಯ ಆಹ್ವಾನ

Friday, November 7th, 2008

ಆತ್ಮೀಯರೇ,
ನೂಪುರ ಭ್ರಮರಿಯು ಕಲೆ- ಸಂಸ್ಕೃತಿಗಳ ಪರಿಚಯಕ್ಕೆ, ಪರಸ್ಪರ ಮಿಲನಕ್ಕೆ, ಅದರಲ್ಲಿನ ನಮ್ಮ ಕರ್ತವ್ಯಕ್ಕೆ ಪೂರಕ ವಾತಾವರಣವನ್ನು ಕಲಿಸಿಕೊಡುವುದರೊಂದಿಗೆ ನಮ್ಮನ್ನು ನಾವು ಅರಿಯುವ ಪ್ರಯತ್ನದಲ್ಲಿ ಹೆಜ್ಜೆಯಿಡುತ್ತಿರುವುದು ನಿಮಗೆಲ್ಲರಿಗೂ ತಿಳಿದ ಅಂಶ. ಈ ನಿಟ್ಟಿನಲ್ಲಿ ಮತ್ತಷ್ಟು ಸದಭಿರುಚಿಯ ಪ್ರಯತ್ನಗಳಿಗೆ ನಿಮ್ಮ ಸಹಕಾರ ಬೇಕು. ಈಗಾಗಲೇ ಮಿತಿ-ಭೇಧಗಳನ್ನು ದಾಟಿ ಮುನುಗ್ಗುತ್ತಿರುವ ಲಾಭದ [...]