ಅಂಕಣಗಳು

ನೂಪುರ ಪತ್ರಿಕೆ

ಐದನೇ ಸಂಪುಟದ ಆರನೇ ಸಂಚಿಕೆ ಮಾರ್ಗಶಿರ  ಪುಷ್ಯ ’ಹೇಮಂತಋತುಗಾನ’(ನವೆಂಬರ್-ಡಿಸೆಂಬರ್ ೨೦೧೧)

ಬಿಂಬ ಭ್ರಮರಿ

ನಿಮ್ಮ ಸಹಕಾರ

ನ್ಯೂಸ್ ಲೆಟರ್

Your email:

 

ನರ್ತನ ಜಗತ್ತಿನ ಆಗುಹೋಗುಗಳು, ಒಳನೋಟಗಳು, ಪಂಥಾಹ್ವಾನಗಳು, ಅವಶ್ಯಕತೆಯ ಚರ್ಚೆಗಳು ತೆರೆದುಕೊಳ್ಳುವ ರಂಗವೇ ರಂಗ ಭ್ರಮರಿಯದ್ದು. ಈ ಮೂಲಕವಾಗಿ ಸಮಕಾಲೀನ, ಸಾಂದರ್ಭಿಕ ವಿಶೇಷ-ವಿಚಾರಗಳನ್ನು ಹಂಚಿಕೊಳ್ಳಬೇಕು ಎನ್ನುವ ಆಶಯ ನಮ್ಮದು. ರಂಗದ ಇಣುಕುನೋಟವನ್ನು ನೀಡುವ ಈ ಅಂಗಳಕ್ಕೆ ಎಲ್ಲರಿಗೂ ಸ್ವಾಗತವಿದೆ..

ಮಹಾತ್ಮಾಗಾಂಧಿ ಮತ್ತು ನೃತ್ಯಕಲೆ

Friday, December 16th, 2011
ಮಹಾತ್ಮಾಗಾಂಧಿ ಮತ್ತು ನೃತ್ಯಕಲೆ

ಆಗಿನ್ನೂ ನೃತ್ಯವು ತನ್ನ ಕತ್ತಲೆಯ ಯುಗದಿಂದ ಬಿಡುಗಡೆ ಪಡೆದುಕೊಳ್ಳುವ ಹಾದಿಯಲ್ಲಿತ್ತು. ನೃತ್ಯಕ್ಕೆ ಮುಕ್ತಸ್ವಾತಂತ್ರ್ಯ ಒದಗುತ್ತಲಿತ್ತಷ್ಟೇ ! ಮಹಾತ್ಮಾಗಂಧೀಜಿ ೧೯೩೫ರಲ್ಲಿ ತಮ್ಮ ವಾರ್ಧಾ ಆಶ್ರಮದಲ್ಲಿದ್ದಾಗ ಒಬ್ಬ ಅಸ್ಸಾಮಿನ ನೃತ್ಯಾಚಾರ್ಯರು ಆಗಮಿಸಿ ಅಲ್ಲಿನ ವಿದ್ಯಾರ್ಥಿನಿಲಯದ ಆವರಣದಲ್ಲಿ ನೃತ್ಯವನ್ನು ಪ್ರದರ್ಶಿಸಿದರು. ಗಾಂಧಿಯೂ ಸೇರಿದಂತೆ ಆಶ್ರಮದಲ್ಲಿದ್ದವರೆಲ್ಲರೂ ಆ ನೃತ್ಯವನ್ನು ವೀಕ್ಷಿಸಿದರು. ಅಂದು ಗಾಂಧಿಯವರ ಮೌನದಿನವಾದ್ದರಿಂದ( ಸೋಮವಾರ) ನೃತ್ಯ ಕಾರ್ಯಕ್ರಮದ ತರುವಾಯ ಏನೂ ಮಾತನಾಡಲಿಲ್ಲ. ಮರುದಿನ ಒಬ್ಬ ಆಶ್ರಮವಾಸಿಯು ಸಂಜೆ ಪ್ರಾರ್ಥನೆಯಾದ ನಂತರ ಮಹಾತ್ಮರ ಬಳಿ ಹೋಗಿ ‘ನಿನ್ನೆ ಆಶ್ರಮದಲ್ಲಿ ನೃತ್ಯ ಪ್ರದರ್ಶನ ನಡೆಯಿತಲ್ಲ, [...]

ನೃತ್ಯ ನಾಟಕಗಳಾಗಿ ಕನ್ನಡ ಕಾವ್ಯ : ಒಂದು ಅವಲೋಕನ

Wednesday, June 15th, 2011

ನೃತ್ಯವನ್ನು ಪ್ರಧಾನವಾಗಿರಿಸಿಕೊಂಡು ಸಂಗೀತ, ನಾಟಕ, ಪರಿಕರಗಳೊಂದಿಗೆ ಒಂದು ಕತೆಯನ್ನು ರಂಗದಮೇಲೆ ಪ್ರಯೋಗಿಸುವ ಕಲಾಪ್ರಕಾರವನ್ನು ನೃತ್ಯನಾಟಕವೆಂದು ಕರೆಯಬಹುದು. ಸಂಗೀತವೇ ಪ್ರಧಾನವಾದಾಗ ಅದನ್ನು ಗೀತನಾಟಕ ಅಥವಾ ಗೇಯನಾಟಕವೆಂದು ಕರೆಯುತ್ತಾರೆ. ಪಾಶ್ಚಿಮಾತ್ಯರು ಈ ಗೀತನಾಟಕಗಳನ್ನು ಒಪೇರಾಗಳೆಂದು ಕರೆಯುತ್ತಾರೆ. ಭಾರತದಲ್ಲಿ ಗೀತನಾಟಕಗಳು ಹಾಗೂ ನೃತ್ಯ ನಾಟಕಗಳಲ್ಲಿನ ವ್ಯತ್ಯಾಸ ‘ತೀರ ಅಲ್ಪವಾಗಿದ್ದು ಒಂದು ಕಲಾರೂಪ ಇನ್ನೊಂದು ಕಲಾರೂಪಕ್ಕೆ ಸುಲಭವಾಗಿ ಹೊರಳಬಹುದಾಗಿದೆ’*(೧). ಭಾರತದಲ್ಲಿ ಗೀತನಾಟಕ ಮತ್ತು ಗೇಯನಾಟಕಗಳು ಒಂದೇ ನಾಣ್ಯದ ಎರಡುಮುಖದಂತೆ ಪ್ರಯೋಗಿಸಲ್ಪಡುತ್ತಿದೆ. ‘ಗೇಯನಾಟಕದ ಮೂಲ ಜನಪದ’*(೨)ಆಗಿದ್ದು ಇದರ ಪ್ರಾಚೀನತೆಯನ್ನು ಖಚಿತವಾಗಿ ನಿರ್ಧರಿಸುವುದು ಕಷ್ಟ.
ಸುಮಾರು [...]

ನೃತ್ಯ ಮತ್ತು ದಲಿತರು : ಒಂದು ವಿಶ್ಲೇಷಣೆ

Wednesday, June 15th, 2011

ನೃತ್ಯಕಲೆಯ ಶ್ರೀಮಂತಿಕೆ ಶೂನ್ಯದಿಂದ ಹುಟ್ಟುವುದಿಲ್ಲ ಅದಕ್ಕೆ ಯಾವುದಾದರೊಂದು ಹಿನ್ನೆಲೆಯಿರಬೇಕು. ನೃತ್ಯಕಲೆಗೆ ದಲಿತ ಕಲಾವಿದರ ಕೊಡುಗೆ ಪ್ರತ್ಯಕ್ಷವಾಗಿ ಬಹಳ ಕಡಿಮೆ ಎಂದೆನಿಸಿದರೂ ಪರೋಕ್ಷವಾಗಿ ನೃತ್ಯಕಲೆಯಲ್ಲಿ ದಲಿತರ ಪೂರ್ವ ಚರಿತ್ರೆ ಅತ್ಯಂತ ಘನವಾದುದು. ಆದರೆ ಮರೆಗೆ ಸಂದುಹೋಗಿದೆ. ಈ ಜನಾಂಗ ಒಂದು ಕಾಲದಲ್ಲಿ ನೃತ್ಯಕ್ಕೆ ತಮ್ಮ ಜೀವನವನ್ನು ಅರ್ಪಿಸಿಕೊಂಡಿದ್ದು ಕಾಲಕ್ರಮೇಣದ ಬೆಳವಣಿಗೆಯಲ್ಲಿ ನೃತ್ಯ ಕಲೆಯ ಪ್ರಯೋಜನವನ್ನು ಪಡೆದುಕೊಳ್ಳುವಲ್ಲಿ ವಿಫಲರಾಗಿರುವುದಕ್ಕೆ ಕಾರಣವೇನು? ಅಲ್ಲದೇ ಎಷ್ಟರ ಮಟ್ಟಿಗೆ ನೃತ್ಯಕಲೆ ದಲಿತರಿಗೆ ಲಭಿಸಿದೆ, ಇದಕ್ಕೊಂದು ಹಿನ್ನೆಲೆಯಿದೆಯೇ?
ವೇದಗಳ ಕಾಲದಲ್ಲಿ ನಾಟ್ಯಕಲೆಯ ಪ್ರಸ್ತಾವನೆ ನಮಗೆ ಪ್ರಥಮ ಬಾರಿ [...]

ಯಕ್ಷಗಾನ ರಂಗಭಾಷೆ

Friday, April 15th, 2011

ರಂಗಭಾಷೆಯೆಂದರೆ ರಂಗಕ್ಕೆ ಕಲಾವಿದರ ಪ್ರವೇಶ, ರಂಗಕ್ರಮಗಳು, ರಂಗ ಚಲನೆ, ರಂಗದಲ್ಲಿ ಪಾತ್ರಗಳ ಮುಖಾ-ಮುಖೀ ನಿಲುವುಗಳು, ರಂಗ ಸಮತೋಲನ, ರಂಗಸ್ಥಳದ ಪೂರ್ಣ ಉಪಯೋಗ ಮುಂತಾಗಿ ನಾಟ್ಯಾಭಿನಯದ ಮೂಲಕ ಪ್ರೇಕ್ಷಕನಿಗೆ ಕಥಾನುಭವವನ್ನು ನೀಡುವ ರಂಗ ತಂತ್ರವಾಗಿದೆ. ರಂಗಭಾಷೆಯು ಪ್ರತಿಯೊಂದು ನಾಟ್ಯ ಪ್ರಕಾರಕ್ಕೂ ಅದರದ್ದೇ ಆದ ಐಡೆಂಟಿಟಿಯನ್ನು ನೀಡುತ್ತದೆ. ಈ ಭಾಷೆ ಗೊತ್ತಿರುವವರೇ ಒಳ್ಳೆಯ ಪ್ರೇಕ್ಷಕರಾಗಬಲ್ಲರು. ಸಾಮಾನ್ಯವಾಗಿ ರಂಗಭಾಷೆಯ ಪರಿಚಯವಿರುವವರೇ ಪ್ರದರ್ಶನಗಳಿಗೆ ಬರುತ್ತಾರೆ ಹಾಗೂ ಕಲಾಸ್ವಾದನೆಯನ್ನು ಮಾಡುತ್ತಾರೆ.
ಕಲಾಪ್ರಕಾರಗಳ ವಿಭಿನ್ನತೆಯ ಪರಿಚಯವಾಗುವುದೇ ಅದರ ರಂಗಭಾಷೆಯಲ್ಲಿ. ಭರತನಾಟ್ಯ, ಕೂಚಿಪುಡಿ, ಕಥಕ್, ಕಥಕ್ಕಳಿ, ಯಕ್ಷಗಾನ [...]

ವಿದೇಶಗಳಲ್ಲಿ ಭರತನಾಟ್ಯ

Tuesday, February 15th, 2011

ಇಂದಿಗೆ ಹಲವು ದೇಶಗಳಲ್ಲಿ ಸಂಸ್ಥೆ- ಸಮಾರಂಭ- ಆಚರಣೆಗಳಲ್ಲಿ ಭರತನಾಟ್ಯದ ಘಲಿರು ಸದಾ ಕೇಳುತ್ತಲಿದೆ. ಹಿರಿಯ ನಾಟ್ಯಗುರುಗಳಿಂದ ಮತ್ತು ಅವರ ವಲಸೆ ಹೋದ ಶಿಷ್ಯವರ್ಗದಿಂದ ವಿದೇಶಗಳಲ್ಲಿ ಭರತನಾಟ್ಯದ ಪ್ರಸಾರ ಅನೂಚಾನವಾಗಿ ನಡೆದು ಬಂದಿದೆ. ಭಾರತದ ಅದೆಷ್ಟೋ ಸುಪ್ರಸಿದ್ಧ ಕಲಾವಿದರ ಪ್ರದರ್ಶನಗಳು, ಕಾರ್ಯಾಗಾರಗಳು, ಉಪನ್ಯಾಸಗಳು, ತರಗತಿಗಳು, ವಿಸ್ತರಣಾ ಶಾಲೆಗಳು ಮತ್ತಷ್ಟು ರಸಿಕರನ್ನು, ವಿದ್ಯಾರ್ಥಿಗಳನ್ನು ಹೆಚ್ಚಿಸುತ್ತಲಿದೆ. ವಲಸೆ ಹೋದ ಹಲವು ಭಾರತೀಯರು ಭರತನಾಟ್ಯದ ಕಂಪನ್ನು ಪಸರಿಸಿದ್ದಾರೆ. ಇದರೊಂದಿಗೆ ಅದೆಷ್ಟೋ ಕಲಾವಿದರು ಭಾರತೀಯ ಸಂಸ್ಕೃತಿ, ಭರತನಾಟ್ಯದೆಡೆಗೆ ಆಸಕ್ತಿ ಮೂಡಿಸಿಕೊಂಡ ಅಲ್ಲಲ್ಲಿನ ಜನಾಂಗದವರನ್ನು ವಿವಾಹವಾಗಿ [...]

ಮುರಳೀ ರವಳೀ…

Tuesday, December 15th, 2009

ಹವ್ಯಕ ಭಾಷೆ ಯಾರಿಗೆ ತಾನೇ ಗೊತ್ತಿಲ್ಲ. ಅದು ಕೇವಲ ಸೀಮಿತ ವರ್ಗದ ಭಾಷೆಯಾಗಿ, ಕನ್ನಡದ ಉಪಭಾಷೆಯಾಗಿ ಮಾತ್ರ ಉಳಿಯದೆ ; ತನ್ನ ಭಾಷೆಯೊಳಗೂ ಹತ್ತು ಹಲವು ಸ್ತರದ ವೈವಿಧ್ಯತೆಗಳನ್ನು ಚಾಚಿಗೊಂಡ ದಕ್ಷಿಣ ಮತ್ತು ಉತ್ತರ ಕನ್ನಡದಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿರುವ ಭಾಷೆ. ಬಹುಷಃ ಪ್ರತಿಯೋರ್ವ ಯಕ್ಷಗಾನ ಕಲಾವಿದನಿಗೂ ಈ ಭಾಷೆ ಮೊದಲಿನಿಂದಲೂ ಬಹಳ ಆಪ್ತ. ‘ಒಪ್ಪಣ್ಣ’ನೆಂಬ (www.oppanna.com) ಕಾವ್ಯನಾಮದಲ್ಲಿ ಬರೆಯುವ ; ವಿಶಿಷ್ಟ ಬರೆವಣಿಗೆಯ ಶೈಲಿಯುಳ್ಳ ಮಹೇಶ್ ಎಳ್ಯಡ್ಕ ಅವರ ಹವ್ಯಕ [...]

ಶಾಸ್ತ್ರೀಯ ನೃತ್ಯದ ಮಹತ್ವ ಮರೆಯಾಗುತಿಹುದೇ?

Saturday, August 15th, 2009

..ವರ್ಷ ಇನ್ನೂ ಹತ್ತು ತುಂಬಿಲ್ಲ. ಬಾಲ್ಯದ ಆ ಹೊಳಪೇ ಇಲ್ಲದ ಕಂಗಳಲ್ಲಿ, ಹಿರಿಯರೆಲ್ಲ ‘ನೈಜ expression’ ಬರಬೇಕು ಅಂತ ಒತ್ತಾಯಿಸುತ್ತಾರೆ. ಬಾಗಿ, ಬಳುಕಿ, ಪಲ್ಟಿಹೊಡೆದು ಕುಣಿಯಬೇಕು. ‘ಅದ್ಭುತ’ ಸಿನಿಮಾ ತಾರೆಯಂತೆ ತುಂಡು ಬಟ್ಟೆ ಹಾಕಿ ಆ ಪುಟಾಣಿ ಹೆಜ್ಜೆಹಾಕುತ್ತಿದ್ದರೆ, ಹಲ್ಲುಗಿಂಜುತ್ತಾ ಚಪ್ಪಾಳೆ ತಟ್ಟುತ್ತಾ ‘ಪ್ರೋತ್ಸಾಹಿಸು’ವ ಹೆತ್ತವರು. ಸರಿಯಾಗಿ ಮಾತನಾಡಲೂ ಬರದಿದ್ದ ಮಗು, ಹಾಡಿನ ಸಾಲುಗಳಿಗೆ ಸ್ಪಷ್ಟವಾಗಿ ‘lip movement’ ಕೊಡಬೇಕು. ಇದನ್ನೆಲ್ಲ ತೂಗಿ, ಸುರಿದು, ಅಳೆಯುವುದಕ್ಕೆ ಮತ್ತೊಂದೆರಡು ‘ಜಡ್ಜ್ ಗಳು’. [...]

‘ಥಾಟ್’: ಒಂದು ಪರಿಚಯ

Wednesday, April 15th, 2009

ಗಾಯನದ ಅಧೀನ ವಾದನ. ವಾದನದ ಅಧೀನ ನರ್ತನವಾಗಿದೆ. ಆದ್ದರಿಂದ ಈ ಕಲೆಗಳಲ್ಲಿ ಗಾಯನಕ್ಕೇ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ.
ಗಾಯನಕ್ಕೆ ಸಪ್ತ ಸ್ವರಗಳೇ ಆಧಾರ. ಸ,ರಿ,ಗ,ಮ,ಪ,ದ,ನಿ. ಅವುಗಳಲ್ಲಿ ರೆ,ಗ,ಮ,ದ,ನಿ ಸ್ವರಗಳು ಸ್ಥಾನ ಪಲ್ಲಟಗೊಳ್ಳುವದರಿಂದ ಈ ಸ್ವರಗಳನ್ನು ವಿಕೃತ ಸ್ವರಗಳೆನ್ನುವರು. ಸ ಮತ್ತು ಪ ಅಂದರೆ ಷಡ್ಜ, ಪಂಚಮಗಳು ಅಚಲ ಸ್ವರಗಳು. ಅವು ಪ್ರಕೃತಿ ಸ್ವರಗಳು.
ಹಿಂದೂಸ್ತಾನೀ ಸಂಗೀತ ಪದ್ಧತಿಯಲ್ಲಿ ಸ್ವರಗಳಾದ ರೆ,ಗ,ದ,ನಿ ತನ್ನ ಸ್ಥಾನದಿಂದ ಕೊಂಚ ಕೆಳಗಿಳಿದಾಗ ‘ಕೋಮಲ’ ಸ್ವರಗಳೆನಿಸಿಕೊಳ್ಳುತ್ತವೆ. (ಕರ್ನಾಟಕ ಸಂಗೀತದ ಸ್ವರ ‘ರಿ’ ಇದ್ದದ್ದು ಹಿಂದೂಸ್ಥಾನಿಯಲ್ಲಿ ‘ರೆ’ ಎಂದು [...]

ಹೀಗೊಂದು ಸ್ವಗತ… ಹೆಜ್ಜೆಯ ಅನುರಣಿಸುವ ಗೆಜ್ಜೆ ನಾ…

Sunday, February 15th, 2009

ನೂಪುರ ಭ್ರಮರಿಯ ನಲ್ಮೆಯ ಓದುಗರಿಗೆಲ್ಲಾ ಆತ್ಮೀಯ ನಮಸ್ಕಾರ.
ನಾನ್ಯಾರೆಂದು ತಿಳೀತಾ?
ನನ್ನ ಹೆಸರು ಕೇಳಿದಾಕ್ಷಣ ಆ ನನ್ನ ಚಿತ್ರ ನಿಮ್ಮ ಕಣ್ಣಮುಂದೆ ಬರುವುದು ನಿಶ್ಚಿತ. ನಾಟ್ಯದ ಒಂದು ಪ್ರಮುಖ ಅಂಗವೇ ಆಗಿರುವ ಈ ನಿಮ್ಮ ‘ಗೆಜ್ಜೆ’ಯ ಪ್ರತ್ಯೇಕ ಪರಿಚಯ ಬೇಕಿಲ್ಲ ತಾನೇ? ಆದರೂ ನನ್ನ ಬಗೆಗೊಂದಿಷ್ಟು ಅಂತರಾಳದ ಮಾತುಗಳು…
ನಿಜಕ್ಕೂ ಹೆಮ್ಮೆಯೆನಿಸುತ್ತದೆ ನೃತ್ಯಗಾರರು ಲಯಬದ್ಧವಾಗಿ ಹೆಜ್ಜೆ ಹಾಕುತಿರೆ ನಾನು ಅದಕ್ಕೆ ಧ್ವನಿಯಾಗುವೆ. ನಾನಿದ್ದರೇ ತಾನೇ ನೃತ್ಯವದು ಸೊಗ ‘ಸಾಗುವುದು”..? ನೃತ್ಯದ ಆ ಸಾರ್ಥಕತೆಗೆ ಕಾರಣವಾದಾಗ ನಾನು ಧನ್ಯ!
ಭರತನಾಟ್ಯದ ರಂಗಪ್ರವೇಶವಾಗುವ ಮೊದಲಿಗೇ ನನ್ನ [...]

ಪರಂಪರೆ ಮತ್ತು ಕಲಾತ್ಮಕ ಮೌಲ್ಯಗಳ ಸಂಕಲನ : ಶ್ರೀರಾಮಸೇತು

Thursday, November 6th, 2008

- ‘ಮನೂ’ ಬನ

ಪೌರಾಣಿಕ ಪ್ರಸಂಗಗಳಿಗೆ ಜೀವ ಕೊಡುವುದರೊಂದಿಗೆ ಸಮಕಾಲೀನ ನಿಲುವುಗಳಿಗೆ ಒತ್ತುಕೊಡುತ್ತಾ ಪ್ರಯೋಗಗಳಿಗೆ ಹರಿಕಾರನಾಗುತ್ತಾ, ಜಾನಪದ ಮತ್ತು ಶಾಸ್ತ್ರೀಯ ನೃತ್ಯ ಪರಂಪರೆಯನ್ನು ಏಕಕಾಲಕ್ಕೇ ನಮ್ಮೆದುರು ತಂದಿರಿಸುವ ನಮ್ಮ ನಾಡಿನದ್ದೇ ಆದ ಕಲೆ ಎಂಬುದಿದ್ದರೆ ಅದು ಯಕ್ಷಗಾನವೇ ಸೈ !

ಕಲಾಭಿವ್ಯಕ್ತಿಗಾಗಿ ಕೆಲವು ಯಕ್ಷಗಾನ ಕೂಟಗಳು, ಮೇಳಗಳು ಹಲವು ತೆರೆಮರೆಗೆ [...]