ಅಂಕಣಗಳು

Subscribe


 

ದೇವಾಲಯವೆಂಬ ಮಹಾನ್ ಕಲೆಯೊಳಗೆ ಶಿಲ್ಪಿಯ ಕಥನಕಲೆ

Posted On: Sunday, June 5th, 2022
1 Star2 Stars3 Stars4 Stars5 Stars (No Ratings Yet)
Loading...

Author: - ರೋಹಿಣಿ ಮಂಜುನಾಥ್, ಬೆಂಗಳೂರು.

 

ನೂಪುರ ಭ್ರಮರಿ (ರಿ.)  IKS Centre– ನೃತ್ಯಶಿಲ್ಪಯಾತ್ರೆಯ ಅಂಗಭಾಗವಾದ  ಪ್ರಕಟವಾದ ಲೇಖನ. 

ಹಲಸೂರಿನ ಸೋಮೇಶ್ವರ ದೇವಾಲಯದ ಕುರಿತ ವಿಸ್ತಾರವಾದ ಪರಿಚಯ ಛಾಯಾಚಿತ್ರ ನುಡಿಚಿತ್ರ.

ಪೂರ್ಣ ಓದಿಗೆ ಈ ಲಿಂಕ್ ಗೆ ಭೇಟಿ ಕೊಡಿರಿ.

Devalayavemba mahan Kaleyolage Shilpiya kathanakale. Published by Noopura Bhramari (2022 May-June)

 

ಲೇಖಿಕೆಯ ಪರಿಚಯ :

ಭರತನಾಟ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಶ್ರೀಮತಿ ರೋಹಿಣಿ ಮಂಜುನಾಥ್ ಚಿಕ್ಕಂದಿನಿಂದಲೇ  ಗುರು ಡಾ. ಹೇಮಾ ಗೋವಿಂದರಾಜನ್  ಬಳಿ ನೃತ್ಯಾಭ್ಯಾಸವನ್ನು ಪ್ರಾರಂಭಿಸಿ ಅವರ ಸಮರ್ಥ ಮಾರ್ಗದರ್ಶನದಲ್ಲಿ ಭರತನಾಟ್ಯ ಜೂನಿಯರ್ ಮತ್ತು ಸೀನಿಯರ್ ನೃತ್ಯ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ತಮ್ಮ 15ನೇ ವಯಸ್ಸಿನಲ್ಲಿಯೇ ರಂಗಪ್ರವೇಶವನ್ನು ಪೂರೈಸಿದ್ದಾರೆ. ನಂತರ ಕರ್ನಾಟಕ ಕಲಾಶ್ರೀ, ಶಾಂತಲಾ ಪ್ರಶಸ್ತಿ ಪುರಸ್ಕೃತ ಗುರು ಬಿ. ಭಾನುಮತಿ ಅವರ ಬಳಿ ಭರತನಾಟ್ಯದಲ್ಲಿ ಹೆಚ್ಚಿನ ತರಬೇತಿಯನ್ನು ಪಡೆದು ಪ್ರಸ್ತುತ ಗುರು ಶ್ರೀಮತಿ ಶೀಲಾ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಅಭಿನಯ ಮತ್ತು ಶಾಸ್ತ್ರದ ಅಂಶಗಳಲ್ಲಿ ತರಬೇತಿಯನ್ನು ಪಡೆಯುತ್ತಾ ತಮ್ಮ ನೃತ್ಯ ಪಯಣವನ್ನು ಮುಂದುವರೆಸಿದ್ದಾರೆ. ಬಿ.ಕಾ೦ ಪದವಿಯ ನಂತರ  ಚಿದಂಬರಂನ  ಅಣ್ಣಾಮಲೈ ವಿಶ್ವವಿದ್ಯಾನಿಲಯದಿಂದ ಭರತನಾಟ್ಯದಲ್ಲಿ ಮಾಸ್ಟರ್ ಆಫ್ ಫೈನ್ ಆರ್ಟ್ಸ್ ಪದವಿಯನ್ನು ಪಡೆದಿದ್ದಾರೆ.

ಬೆಂಗಳೂರಿನಲ್ಲಿ ತಮ್ಮದೇ ನೃತ್ಯ ಶಾಲೆಯಲ್ಲಿ    ಹಲವಾರು ಪ್ರತಿಭಾವಂತ ಯುವ ಕಲಾವಿದರಿಗೆ ಭರತನಾಟ್ಯ ತರಬೇತಿಯನ್ನು ಸಹಾ ನೀಡುತ್ತಿದ್ದಾರೆ. ಇವರು  ಗುರು ವಿದುಷಿ ಎಚ್ ಗೀತಾ ಅವರ ಹಿರಿಯ ವಿದ್ಯಾರ್ಥಿನಿಯಾಗಿ ಶಾಸ್ಟ್ರೀಯ ಸಂಗೀತವನ್ನು ಅಭ್ಯಾಸಮಾಡುತಿದ್ದಾರೆ. ವಿದ್ವಾನ್ ಏನ್ ನಾರಾಯಣಸ್ವಾಮಿ ಅವರ ಬಳಿ ನಟ್ಟುವಾಂಗ ಅಭ್ಯಾಸ ಮಾಡುತಿದ್ದಾರೆ. ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಇವರು ಭರತನಾಟ್ಯ ಪ್ರದರ್ಶನವನ್ನು ನೀಡಿದ್ದಾರೆ. ಪ್ರಸ್ತುತ ಇವರು ನೂಪುರಭ್ರಮರಿ ಸಂಸ್ಥೆಯ ’ನೃತ್ಯಶಿಲ್ಪಯಾತ್ರೆ’ ಅಧ್ಯಯನ ತರಬೇತಿಯನ್ನು (ಇಂಟರ್ನ್ ಶಿಪ್) ಪಡೆಯುತ್ತಿದ್ದಾರೆ.

1 Response to ದೇವಾಲಯವೆಂಬ ಮಹಾನ್ ಕಲೆಯೊಳಗೆ ಶಿಲ್ಪಿಯ ಕಥನಕಲೆ

  1. Sharada Arcot

    Good job Mrs Rohini Manjunath such an inspiration .

Leave a Reply

*

code