ಅಂಕಣಗಳು

Subscribe


 

ಕಂಬ ರಾಮಾಯಣ.. – ಇದು ಕಾವ್ಯವಲ್ಲ !!

Posted On: Monday, November 7th, 2022
1 Star2 Stars3 Stars4 Stars5 Stars (No Ratings Yet)
Loading...

Author: ಡಾ. ಲಕ್ಷ್ಮೀ ರೇಖಾ ಅರುಣ್, ಬೆಂಗಳೂರು.

ನೂಪುರ ಭ್ರಮರಿ (ರಿ.)  IKS Centre– ನೃತ್ಯಶಿಲ್ಪಯಾತ್ರೆಯ ಅಂಗಭಾಗವಾಗಿ  ಪ್ರಕಟವಾದ ನುಡಿಚಿತ್ರ ಲೇಖನ – 43:

ಪೂರ್ಣ ಓದಿಗೆ ಈ ಕೆಳಗಿನ ಲಿಂಕ್ ಗೆ ಭೇಟಿ ಕೊಡಿರಿ.

ಕಂಬ ರಾಮಾಯಣ.. – ಇದು ಕಾವ್ಯವಲ್ಲ !!

 

ಲೇಖಿಕೆಯ ಪರಿಚಯ : ಡಾ. ಲಕ್ಷ್ಮೀ ರೇಖಾ ಅರುಣ್ ಅವರು ಲಾಸ್ಯ ಅಕಾಡೆಮಿ ಆಫ್ ಡಾನ್ಸ್, ಬೆಂಗಳೂರು ಇದರ ಸಂಸ್ಥಾಪಕ ನಿರ್ದೇಶಕಿ,  ಗುರು ಡಾ. ವಸುಂಧರಾ ದೊರೆಸ್ವಾಮಿ ಅವರ ಹಿರಿಯ ಶಿಷ್ಯೆ . ಕಲಾವಿದೆ, ನೃತ್ಯ ಸಂಯೋಜಕಿ, ನಟ್ಟುವನಾರ್ ಹಾಗೂ ಯೋಗಾಧಾರಿತ ಭರತನಾಟ್ಯ ಶಿಕ್ಷಕಿ. ದಂತ ವೈದ್ಯದಲ್ಲಿ ರಜತ ಪದಕವನ್ನು ಗಳಿಸಿರುವ ಇವರು, ಕರ್ನಾಟಕ ಶಾಸ್ತ್ರೀಯ ಸಂಗೀತದ್ಲಲೂ ಮೈಸೂರಿನ ವಿದುಷಿ ಸರಸ್ವತಿ, ಟಿ.ವಿ. ಮಾಲಿನಿ ಹಾಗೂ ಬೆಂಗಳೂರಿನ ಶ್ರೀ. ಎಂ. ಆರ್. ಪ್ರಭಾಕರ್ ಮತ್ತು ಚಿಂತಲಪಲ್ಲಿ ಡಾ. ಆರ್. ರಮೇಶ್ ಅವರಲ್ಲಿ ತರಬೇತಿ ಪಡೆದಿದ್ದಾರೆ. ಇವರು ದೂರದರ್ಶನದ ಗ್ರೇಡೆಡ್ ಕಲಾವಿದೆಯಾಗಿದ್ದು, ಭರತನಾಟ್ಯದ ಮಾಸ್ಟರ್ಸ್ ಪದವಿಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಚೆನ್ನೈನ ‘ಪ್ರಯತ್ನಂ’ ಸಂಸ್ಥೆಯ ಅಡಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವಿಚಾರ ಸಂಕೀರ್ಣದಲ್ಲಿ ತಮ್ಮ ಸಂಶೋಧನಾ ಲೇಖನವನ್ನು ಮಂಡಿಸಿದ್ದಾರೆ. ದೇಶದಾದ್ಯಂತ ಪ್ರದರ್ಶನ ನೀಡಿರುವ ಇವರಿಗೆ ನೃತ್ಯ ಶಿರೋಮಣಿ, ನೃತ್ಯ ಉಪಾಸಕಿ ಹಾಗೂ ವಸುಂಧರಾ ಪ್ರದರ್ಶಕ ಕಲೆಗಳ ಪ್ರಶಸ್ತಿ ಸಂದಿದೆ.    ೨೦೦೮ ರಲ್ಲಿ ತಮ್ಮದೇ ಸಂಸ್ಥೆಯಾದ ಲಾಸ್ಯ ಅಕಾಡೆಮಿ ಆಫ್ ಡಾನ್ಸ್ ಅನ್ನು ಸಂಸ್ಥಾಪಿಸಿ, ನೂರಾರು ಮಕ್ಕಳಿಗೆ ಭರತನಾಟ್ಯ, ಯೋಗ ಹಾಗೂ ಕರ್ನಾಟಕ ಸಂಗೀತ ಕಲೆಯನ್ನು ಕಲಿಸಿಕೊಡುತ್ತಿದ್ದಾರೆ. ತಮ್ಮ ಸಂಸ್ಥೆಯ ಪರವಾಗಿ ‘ಲಾಸ್ಯ ಸಂಭ್ರಮ’ ಎಂಬ ಮೂರು ದಿನದ ರಾಷ್ತ್ರೀಯ ಮಟ್ಟದ ಕಲಾ ಉತ್ಸವವನ್ನು ವರ್ಷಕೊಮ್ಮೆ ನಡೆಸುತ್ತಾ ಅದರಲ್ಲಿ ವಿಶಿಷ್ಟ ಚೈತನ್ಯ ಮಕ್ಕಳಿಗೆಂದೇ ಒಂದು ಸಂಜೆಯನ್ನು ಮೀಸಲಿಡುತ್ತಾ ಬಂದಿದ್ದಾರೆ. ‘ಲಾಸ್ಯ ಸಾಧಕಿ’ ಎಂಬ ಬಿರುದು, ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದ್ದಾರೆ. ಇದಲ್ಲದೆ, ತಮ್ಮ ಪತಿ ಶ್ರೀ. ಅರುಣ್. ಟಿ.ಆರ್ ಮತ್ತು ಮಕ್ಕಳಾದ ಅನಿರುದ್ಧ ಹಾಗೂ ಅಭಿರಾಮ್ ಅವರ ನೆರವಿನಿಂದ, ಹಳ್ಳಿಯ ಮಕ್ಕಳಿಗೆ ವಿವಿಧ ಅವಕಾಶಗಳನ್ನು ಕಲ್ಪಿಸುವುದಕ್ಕಾಗಿ ‘ಹಳ್ಳಿಯೆಡೆಗೆ ಲಾಸ್ಯ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಆಸಕ್ತ ಮಕ್ಕಳಿಗೆ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಗಣಿತ, ವಿಜ್ಞಾನ, ಆಂಗ್ಲ ಹಾಗೂ ವ್ಯಕ್ತಿತ್ವ ಅಭಿವೃದ್ಧಿ ತರಗತಿಗಳನ್ನು ನಡೆಸುತ್ತಿದ್ದಾರೆ. ಇವರು ನೂಪುರ ಭ್ರಮರಿ ಯೋಜಿಸಿದ ನೃತ್ಯಶಿಲ್ಪಯಾತ್ರೆಯ ಅಧ್ಯಯನ ವಿದ್ಯಾರ್ಥಿಯೂ ಹೌದು.

 

 

 

Leave a Reply

*

code